ಆ್ಯಪ್ನಗರ

ಕೊರೊನಾ ವೈರಸ್ ಭಯದಿಂದ ನಿರ್ಬಂಧಿತ ಪ್ರದೇಶಕ್ಕೆ ತಂದೆ ವರ್ಗಾವಣೆ: ಹಸಿವಿನಿಂದ ಜೀವಬಿಟ್ಟ ಮಗ..!

ನಿರ್ಬಂಧಿತ ಪ್ರದೇಶದಲ್ಲಿ ಇದ್ದರೂ ಕೂಡಾ ಬಾಲಕನ ತಂದೆ ಸಾಮಾಜಿಕ ಜಾಲತಾಣಗಳಲ್ಲಿ ತಮ್ಮ ಮಗನ ಬಗ್ಗೆ ಪೋಸ್ಟ್‌ ಹಾಕುತ್ತಲೇ ಇದ್ದರು. ನನ್ನ ಮಗ ವಿಕಲಾಂಗ, ಮನೆಯಲ್ಲಿ ಒಂಟಿಯಾಗಿದ್ದಾನೆ. ಆತನಿಗೆ ಆಹಾರ, ನೀರು ಕೊಡಿ ಎಂದು ಗೋಗರೆಯುತ್ತಿದ್ದರು.

TIMESOFINDIA.COM 4 Feb 2020, 4:44 pm
ಬೀಜಿಂಗ್ (ಚೀನಾ): ಕೊರೊನಾ ವೈರಸ್ ಭೀತಿಯಿಂದ ನಡುಗುತ್ತಿರುವ ಚೀನಾದಲ್ಲಿ ಒಂದರ ಮೇಲೊಂದು ಅನಾಹುತಗಳು ಸಂಭವಿಸುತ್ತಿವೆ. ತಂದೆಯ ಆರೈಕೆ ಇಲ್ಲದೆ ವಿಶೇಷ ಚೇತನ ಬಾಲಕನೊಬ್ಬ ಹಸಿವಿನಿಂದ ನರಳಿ ಜೀವಬಿಟ್ಟ ಆಘಾತಕಾರಿ ವರದಿ, ಇಡೀ ವಿಶ್ವವನ್ನೇ ತಲ್ಲಣಗೊಳಿಸಿದೆ.
Vijaya Karnataka Web mask boy
ಕೊರೊನಾ ವೈರಸ್ ಭಯದಿಂದ ನಿರ್ಬಂಧಿತ ಪ್ರದೇಶಕ್ಕೆ ತಂದೆ ವರ್ಗಾವಣೆ: ಹಸಿವಿನಿಂದ ಜೀವಬಿಟ್ಟ ಮಗ..!


16 ವರ್ಷದ ಯೆನ್ ಚೆಂಗ್‌ ಎಂಬ ಬಾಲಕನೇ ಹಸಿವಿನಿಂದ ಜೀವಬಿಟ್ಟ ನತದೃಷ್ಟ. ಚೀನಾದ ಕೇಂದ್ರ ಭಾಗವಾದ ಹುಬಿ ಪ್ರಾಂತ್ಯದಲ್ಲಿ ಈತ ತನ್ನ ತಂದೆ ಹಾಗೂ ಅಣ್ಣನ ಜೊತೆ ಇದ್ದ. ಈ ಭಾಗದಲ್ಲಿ ಕರೋನಾ ವೈರಸ್ ಅಬ್ಬರ ಹೆಚ್ಚಾಗಿದ್ದ ಕಾರಣ, ಯೆನ್‌ ಚೆಂಗ್‌ನ ತಂದೆ ಹಾಗೂ ಅಣ್ಣನನ್ನು ಸೋಂಕು ನಿರ್ಬಂಧಿತ ಪ್ರದೇಶಕ್ಕೆ ವರ್ಗಾಯಿಸಲಾಗಿತ್ತು. ಆದ್ರೆ, ತಮ್ಮ ಮತ್ತೊಬ್ಬ ಮಗ ವಿಕಲಾಂಗನಾಗಿದ್ದು, ಆತನಿಗೆ ಯಾರಾದರೂ ಒಬ್ಬರು ಸಹಾಯಕ್ಕೆ ಬೇಕು ಎಂದು ಬಾಲಕನ ತಂದೆ ಗೋಗರೆದರು. ಆದ್ರೆ, ಅವರ ಮಾತನ್ನು ಯಾರೂ ಗಣನೆಗೆ ತೆಗೆದುಕೊಳ್ಳಲೇ ಇಲ್ಲ. ವಿಕಲಾಂಗ ಬಾಲಕನನ್ನು ಸರ್ಕಾರ ಪೋಷಿಸುತ್ತದೆ ಎಂದಷ್ಟೇ ಹೇಳಿ ಅವರನ್ನು ನಿರ್ಬಂಧಿತ ಪ್ರದೇಶಕ್ಕೆ ವರ್ಗಾಯಿಸಿಬಿಟ್ಟರು.

ನಿರ್ಬಂಧಿತ ಪ್ರದೇಶದಲ್ಲಿ ಇದ್ದರೂ ಕೂಡಾ ಬಾಲಕನ ತಂದೆ ಸಾಮಾಜಿಕ ಜಾಲತಾಣಗಳಲ್ಲಿ ತಮ್ಮ ಮಗನ ಬಗ್ಗೆ ಪೋಸ್ಟ್‌ ಹಾಕುತ್ತಲೇ ಇದ್ದರು. ನನ್ನ ಮಗ ವಿಕಲಾಂಗ, ಮನೆಯಲ್ಲಿ ಒಂಟಿಯಾಗಿದ್ದಾನೆ. ಆತನಿಗೆ ಆಹಾರ, ನೀರು ಕೊಡಿ ಎಂದು ಗೋಗರೆಯುತ್ತಿದ್ದರು.

ಜ್ವರ, ಎಚ್‌ಐವಿ ಔಷಧಗಳನ್ನು 'ಮಿಕ್ಸ್‌' ಮಾಡಿ ಕೊಟ್ಟಿದ್ದಕ್ಕೆ ಕರೋನಾ ವೈರಸ್ ಮಂಗಮಾಯ..!

ಮೆದುಳಿನ ಸಮಸ್ಯೆಯಿಂದ ಬಳಲುತ್ತಿದ್ದ ಯೆನ್‌ ಚೆಂಗ್, ಬಾಲ್ಯದಿಂದಲೇ ದೈಹಿಕ ಹಾಗೂ ಮಾನಸಿಕ ಸಮಸ್ಯೆಗೆ ತುತ್ತಾಗಿದ್ದ. ಆತನಿಗೆ ನಡೆದಾಡಲು ಸಾಧ್ಯವಾಗುತ್ತಿರಲಿಲ್ಲ. ಆಗಾಗ ಮೈ ನಡುಗುತ್ತಿತ್ತು. ಮಾಂಸ ಖಂಡಗಳು ಬಿಗಿಯಾಗುತ್ತಿದ್ದವು. ಆಹಾರ ನುಂಗಲು ಆಗುತ್ತಿರಲಿಲ್ಲ. ದೃಷ್ಟಿಯೂ ಮಂದವಾಗಿತ್ತು. ಮಾತನಾಡಲು ಹಾಗೂ ಕೇಳಿಸಿಕೊಳ್ಳಲು ಕಷ್ಟವಾಗುತ್ತಿತ್ತು. ಇಷ್ಟೊಂದು ಸಮಸ್ಯೆಗಳಿರುವ ಬಾಲಕನನ್ನು ಮನೆಯಲ್ಲೇ ಒಂಟಿಯಾಗಿ ಬಿಟ್ಟು ಬಂದಿದ್ದರು.

ತಂದೆ ಹಾಗೂ ಅಣ್ಣ ಮನೆಯಲ್ಲಿ ಇಲ್ಲದೆ ಏಕಾಂಗಿಯಾಗಿದ್ದ ಬಾಲಕ, ಒಂದು ವಾರಗಳ ಕಾಲ ಹಸಿವಿನಿಂದ ನರಳಿ, ನರಳಿ ಜೀವಬಿಟ್ಟಿದ್ದಾನೆ. ಈ ಸುದ್ದಿ ಹೊರಬೀಳುತ್ತಲೇ ಚೀನಾದಾದ್ಯಂತ ಕೋಲಾಹಲವೆದ್ದಿದೆ. ಸರ್ಕಾರದ ವಿರುದ್ಧ ಆಕ್ರೋಶ ವ್ಯಕ್ತವಾಗಿದೆ. ಈ ಸಂಬಂಧ ಕಠಿಣ ಕ್ರಮ ಕೈಗೊಂಡಿರುವ ಚೀಆ ಸರ್ಕಾರ, ಸ್ಥಳೀಯ ಕಮ್ಯುನಿಸ್ಟ್‌ ಪಕ್ಷದ ಕಾರ್ಯದರ್ಶಿ ಹಾಗೂ ಈ ಪ್ರಾಂತ್ಯದ ಮೇಯರ್‌ನನ್ನು ಸೇವೆಯಿಂದ ವಜಾಗೊಳಿಸಿದೆ.

ವಿಡಿಯೋ: ರಾಜ್ಯದಲ್ಲಿ ಕೊರೊನಾ ವೈರಸ್ ಸೋಂಕು ಪತ್ತೆಯಾಗಿಲ್ಲ: ಶ್ರೀರಾಮುಲು

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ