ಆ್ಯಪ್ನಗರ

ಟೊಕಿಯೋ: ದಿಗ್ಬಂಧನವಾಗಿರುವ ಹಡಗಿನಲ್ಲಿ ಹೆಚ್ಚುತ್ತಿರುವ ಕೊರೊನಾ ಪೀಡಿತರು, ಕಾಪಾಡುವಂತೆ ಮೋದಿಗೆ ಭಾರತೀಯರ ಮನವಿ

ಟೋಕಿಯೊ: ಕೊರೊನಾ ದಾಳಿಗೆ ತುತ್ತಾಗಿರುವ ಕಾರಣ ಜಪಾನ್‌ನ ಯೊಕೊಹಾಮ ಬಂದರಿನಲ್ಲಿ ಪ್ರತ್ಯೇಕವಾಗಿ ನಿಲ್ಲಿಸಲಾಗಿರುವ ಐಷಾರಾಮಿ 'ಡೈಮಂಡ್‌ ಪ್ರಿನ್ಸೆಸ್‌' ಹಡಗಿನಲ್ಲಿ ಸಿಲುಕಿರುವವರ ಪೈಕಿ 135 ಮಂದಿಗೆ ವೈರಾಣು ಸೋಂಕು ತಗುಲಿರುವುದು ದೃಢಪಟ್ಟಿದೆ. ಫೆ.5ರಿಂದ ಪ್ರತ್ಯೇಕವಾಗಿ ನಿಲ್ಲಿಸಿ ನಿಗಾದಲ್ಲಿಇರಿಸಲಾಗಿರುವ ಹಡಗಿನಲ್ಲಿ 103 ಮಂದಿಯ ರಕ್ತದ ಮಾದರಿಯನ್ನು ಪರೀಕ್ಷೆಗೆ ಒಳಪಡಿಸಲಾಗಿತ್ತು. 65 ಮಂದಿಗೆ ಕೊರೊನಾ ತಗುಲಿರುವುದು ದೃಢಪಟ್ಟಿದೆ. ಮಂಗಳವಾರ ಕೊರೊನಾ ಸೋಂಕು ಪೀಡಿತರ ಸಂಖ್ಯೆ ಏರಿಕೆಯಾಗಿದೆ. ಇವರೆಲ್ಲರೂ ಜಪಾನ್‌ ನಾಗರಿಕರೇ ಆಗಿದ್ದಾರೆ ಎಂದು ಸ್ಥಳೀಯ ಮಾಧ್ಯಮಗಳು ವರದಿ ಮಾಡಿವೆ. ಭಾರತೀಯರು ಸೇರಿದಂತೆ ಹಡಗಿನಲ್ಲಿ ಆಸ್ಪ್ರೇಲಿಯಾ, ಫೀಲಿಪ್ಪೀನ್ಸ್‌, ಕೆನಡಾ, ಉಕ್ರೇನ್‌ ನಾಗರಿಕರಿದ್ದಾರೆ.

Vijaya Karnataka Web 11 Feb 2020, 5:39 pm
ಟೋಕಿಯೊ: ಕೊರೊನಾ ದಾಳಿಗೆ ತುತ್ತಾಗಿರುವ ಕಾರಣ ಜಪಾನ್‌ನ ಯೊಕೊಹಾಮ ಬಂದರಿನಲ್ಲಿ ಪ್ರತ್ಯೇಕವಾಗಿ ನಿಲ್ಲಿಸಲಾಗಿರುವ ಐಷಾರಾಮಿ 'ಡೈಮಂಡ್‌ ಪ್ರಿನ್ಸೆಸ್‌' ಹಡಗಿನಲ್ಲಿ ಸಿಲುಕಿರುವವರ ಪೈಕಿ 135 ಮಂದಿಗೆ ವೈರಾಣು ಸೋಂಕು ತಗುಲಿರುವುದು ದೃಢಪಟ್ಟಿದೆ. ಫೆ.5ರಿಂದ ಪ್ರತ್ಯೇಕವಾಗಿ ನಿಲ್ಲಿಸಿ ನಿಗಾದಲ್ಲಿಇರಿಸಲಾಗಿರುವ ಹಡಗಿನಲ್ಲಿ 103 ಮಂದಿಯ ರಕ್ತದ ಮಾದರಿಯನ್ನು ಪರೀಕ್ಷೆಗೆ ಒಳಪಡಿಸಲಾಗಿತ್ತು. 65 ಮಂದಿಗೆ ಕೊರೊನಾ ತಗುಲಿರುವುದು ದೃಢಪಟ್ಟಿದೆ. ಮಂಗಳವಾರ ಕೊರೊನಾ ಸೋಂಕು ಪೀಡಿತರ ಸಂಖ್ಯೆ ಏರಿಕೆಯಾಗಿದೆ. ಇವರೆಲ್ಲರೂ ಜಪಾನ್‌ ನಾಗರಿಕರೇ ಆಗಿದ್ದಾರೆ ಎಂದು ಸ್ಥಳೀಯ ಮಾಧ್ಯಮಗಳು ವರದಿ ಮಾಡಿವೆ. ಭಾರತೀಯರು ಸೇರಿದಂತೆ ಹಡಗಿನಲ್ಲಿ ಆಸ್ಪ್ರೇಲಿಯಾ, ಫೀಲಿಪ್ಪೀನ್ಸ್‌, ಕೆನಡಾ, ಉಕ್ರೇನ್‌ ನಾಗರಿಕರಿದ್ದಾರೆ.
Vijaya Karnataka Web coronavirus updates diamond princess cruise ship virus attack number reached to 135
ಟೊಕಿಯೋ: ದಿಗ್ಬಂಧನವಾಗಿರುವ ಹಡಗಿನಲ್ಲಿ ಹೆಚ್ಚುತ್ತಿರುವ ಕೊರೊನಾ ಪೀಡಿತರು, ಕಾಪಾಡುವಂತೆ ಮೋದಿಗೆ ಭಾರತೀಯರ ಮನವಿ



ಫೆ. 19ರವರೆಗೆ ಹಡಗಿಗೆ ದಿಗ್ಭಂಧನ

ಕಳೆದ ವಾರ ಜಪಾನ್‌ ಬಂದರಿಗೆ ಹಡಗು ಆಗಮಿಸಿದಾಗ ಅದರಲ್ಲಿದ್ದ 3,711 ಮಂದಿಯ ಪೈಕಿ 300 ಜನರನ್ನು ಕೊರೊನಾ ಸೋಂಕಿನ ಶಂಕೆ ಮೇರೆಗೆ ಹಡಗಿನಲ್ಲಿಉಳಿಸಿಕೊಂಡು ಉಳಿದವರನ್ನು ನಿಗಾ ಕೇಂದ್ರಕ್ಕೆ ಸ್ಥಳಾಂತರಿಸಲಾಗಿತ್ತು. ಕೊರೊನಾಗೆ 14 ದಿನಗಳ ತೀವ್ರ ನಿಗಾ ಅವಧಿಯಿದ್ದು, ಅದರಂತೆ ಹಡಗಿನಲ್ಲಿರುವ ಸೋಂಕಿತರನ್ನು ಫೆ. 19ರವರೆಗೆ ಅಲ್ಲಿಯೇ ಇರಿಸಿ ಚಿಕಿತ್ಸೆ ನೀಡಲಾಗುವುದು ಎಂದು ಜಪಾನ್‌ನ ವೈದ್ಯಾಧಿಕಾರಿಗಳು ಹೇಳಿದ್ದಾರೆ. ಹಡಗಿನಲ್ಲಿರುವವರ ಹೊರತಾಗಿ ಜಪಾನ್‌ನಲ್ಲಿ 26 ಮಂದಿಗೆ ಕೊರೊನಾ ಸೋಂಕಿರುವುದು ದೃಢಪಟ್ಟಿದೆ. ಈ ಪೈಕಿ ಹೆಚ್ಚು ಮಂದಿ ಚೀನಾದ ವುಹಾನ್‌ ನಗರಕ್ಕೆ ಭೇಟಿ ನೀಡಿದ್ದವರಾಗಿದ್ದಾರೆ.

​ಬಾಣಸಿಗನಿಂದ ನೆರವಿಗೆ ಕೋರಿಕೆ :

ಡೈಮಂಡ್‌ ಪ್ರಿನ್ಸೆಸ್‌ನಲ್ಲಿ ಸಿಲುಕಿರುವ ಭಾರತೀಯರ ಪೈಕಿ ಒಬ್ಬರಾದ ಪಶ್ಚಿಮ ಬಂಗಾಳದ ಉತ್ತರ ದಿನಜ್‌ಪುರ ಜಿಲ್ಲೆಯ 31 ವರ್ಷದ ಬಿನಯನ್‌ ಕುಮಾರ್‌ ಸರ್ಕಾರ್‌ ಅವರು ವಿಡಿಯೊವೊಂದನ್ನು ಸಾಮಾಜಿಕ ಜಾಲತಾಣದಲ್ಲಿ ಪೋಸ್ಟ್‌ ಮಾಡಿದ್ದಾರೆ. ''ಹೇಗಾದರೂ ಮಾಡಿ ನಮ್ಮನ್ನು ಇಲ್ಲಿಂದ ರಕ್ಷಿಸಿ, ಕುಟುಂಬದೊಂದಿಗೆ ಸೇರಿಸಿ,'' ಎಂದು ಅವರು ಪ್ರಧಾನಿ ನರೇಂದ್ರ ಮೋದಿ ಅವರಲ್ಲಿ ಮನವಿ ಮಾಡಿದ್ದಾರೆ. ಅವರ ಸಹಚರರು ಕೂಡ ವಿಡಿಯೊದಲ್ಲಿ ಜತೆಯಲ್ಲಿ ನಿಂತಿದ್ದು, ಎಲ್ಲರೂ ಮಾಸ್ಕ್‌ ಧರಿಸಿಕೊಂಡು ಕೈ ಮುಗಿದು ಮನವಿ ಸಲ್ಲಿಸುತ್ತಿರುವುದನ್ನು ಕಾಣಬಹುದು.

​​ಆಸ್ಪತ್ರೆಗಳಿಗೆ ಜಿನ್‌ಪಿಂಗ್‌ ಭೇಟಿ


ಚೀನಾದಲ್ಲಿಅಧ್ಯಕ್ಷ ಕ್ಸಿ ಜಿನ್‌ಪಿಂಗ್‌ ಅವರು ದೇಶಾದ್ಯಂತ ಸೋಂಕಿತರ ಚಿಕಿತ್ಸಾ ಸೌಲಭ್ಯಗಳ ಕುರಿತು ಖುದ್ದಾಗಿ ಪರಿಶೀಲಿಸಲು ಮುಂದಾಗಿದ್ದಾರೆ. ಬೀಜಿಂಗ್‌ನಲ್ಲಿನ ಸ್ಥಳೀಯ ಆಸ್ಪತ್ರೆಗಳು, ವಿಶೇಷ ನಿಗಾ ಕೇಂದ್ರಗಳಿಗೆ ಸೋಮವಾರ ಭೇಟಿ ನೀಡಿ ವೈದ್ಯರಿಂದ ಪರಿಸ್ಥಿತಿಯ ಮಾಹಿತಿ ಪಡೆದಿದ್ದಾರೆ. ಇನ್ನೊಂದೆಡೆ, ಚೀನಾದಲ್ಲಿ ಮಂಗಳವಾರದ ವರದಿಯಂತೆ 1000ಕ್ಕೂ ಹೆಚ್ಚು ಮಂದಿಗೆ ಕೊರೋನಾಗೆ ಸಾವನ್ನಪ್ಪಿದ್ದು, ಹೊಸದಾಗಿ 3,000ಕ್ಕೂ ಹೆಚ್ಚು ಮಂದಿಗೆ ಕೊರೊನಾ ಸೋಂಕು ತಗುಲಿದೆ. ಈ ಮೂಲಕ ಒಟ್ಟಾರೆ ಸೋಂಕಿತರ ಸಂಖ್ಯೆ 40,000 ಮೀರಿ ಏರಿಕೆಯಾಗುತ್ತಲೇ ಇದೆ.

​ದೇಶದ ಮೊದಲ ಕೊರೊನಾ ಸೋಂಕಿತೆ ಗುಣಮುಖ


ಭಾರತದಲ್ಲಿ ಪತ್ತೆಯಾದ ಮೊದಲ ಕೊರೊನಾ ವೈರಾಣು ಸೋಂಕಿತೆ , ತ್ರಿಶ್ಶೂರಿನ ವೈದ್ಯಕೀಯ ವಿದ್ಯಾರ್ಥಿನಿ ಆರೋಗ್ಯದಲ್ಲಿ ಗಣನೀಯ ಚೇತರಿಕೆ ಕಂಡುಬಂದಿದೆ. ಆಕೆಯ ರಕ್ತದ ಮಾದರಿಯ ಅಂತಿಮ ಪರೀಕ್ಷೆಗಾಗಿ ಪುಣೆಯ ಸಂಶೋಧನಾ ಕೇಂದ್ರದಿಂದ ವರದಿಗಾಗಿ ಕಾಯಲಾಗುತ್ತಿದೆ. ತದನಂತರ ಮನೆಗೆ ಕಳುಹಿಸಲಾಗುವುದು ಎಂದು ತ್ರಿಶ್ಶೂರ್‌ ಮೆಡಿಕಲ್‌ ಕಾಲೇಜು ವೈದ್ಯರು ಹೇಳಿದ್ದಾರೆ. ಉಳಿದಂತೆ ವುಹಾನ್‌ನಿಂದ ಹಿಂದಿರುಗಿದ ಆಲಪ್ಪುಳ ಮತ್ತು ಕಾಸರಗೋಡಿನ ಕನ್ಹಾನ್‌ಗಡ ಮೂಲದ ಇನ್ನಿಬ್ಬರು ಸೋಂಕಿತರಿಗೆ ಚಿಕಿತ್ಸೆ ಮುಂದುವರಿಸಲಾಗಿದೆ.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ