ಲಾಹೋರ್: ಇಸ್ಲಾಂ ಮೂಲಭೂತವಾದಿಗಳ ಪಕ್ಷ 'ತೆಹ್ರೀಕ್-ಇ-ಲಬಾಯಿಕ್' (ಟಿಎಲ್ಪಿ) ಕಾರ್ಯಕರ್ತರು ಮತ್ತು ಬೆಂಬಲಿಗರು ಕಳೆದೊಂದು ವಾರದಿಂದ ತೀವ್ರ ಹಿಂಸಾಚಾರ ನಡೆಸುತ್ತಿದ್ದು, ಭಾನುವಾರ ಪಾಕಿಸ್ತಾನದ ಆರು ಪೊಲೀಸ್ ಸಿಬ್ಬಂದಿಯನ್ನು ಒತ್ತೆಯಾಳಾಗಿ ಇರಿಸಿಕೊಂಡಿದ್ದಾರೆ. ತಮ್ಮ ಬೇಡಿಕೆಗಳನ್ನು ಈಡೇರಿಸುವವರೆಗೂ ಪೊಲೀಸರನ್ನು ಬಿಡುಗಡೆ ಮಾಡಲ್ಲ ಎಂದು ಉಗ್ರರರಂತೆ ಸರಕಾರಕ್ಕೆ ಧಮ್ಕಿ ಹಾಕಿದ್ದಾರೆ. ಟಿಎಲ್ಪಿ ಮುಖ್ಯಸ್ಥ ಸಾದ್ ರಿಜ್ವಿಯ ಬಂಧನದ ಹಿನ್ನೆಲೆಯಲ್ಲಿ ಸ್ಫೋಟಗೊಂಡಿರುವ ಈ ಹಿಂಸಾಚಾರ ಹತ್ತಿಕ್ಕಲು ಅರೆಸೈನಿಕ ಪಡೆಯನ್ನು ಪೊಲೀಸರೊಂದಿಗೆ ನಿಯೋಜಿಸಲಾಗಿತ್ತು.
ಎರಡು ಇಂಧನ ಟ್ಯಾಂಕರ್ಗಳನ್ನು ಕೂಡ ವಶಕ್ಕೆ ಪಡೆದಿರುವ ಟಿಎಲ್ಪಿ ಸದಸ್ಯರು ಕಂಡಕಂಡಲ್ಲಿ ಪೆಟ್ರೋಲ್ ಬಾಂಬ್ಗಳನ್ನು ಎಸೆಯುತ್ತಿದ್ದಾರೆ. ಪೊಲೀಸರ ಮೇಲೆ ತೀವ್ರ ಕಲ್ಲುತೂರಾಟ ನಡೆಸಿ, ಗುಂಡುಗಳನ್ನು ಹಾರಿಸಿದ್ದಾರೆ. ನಾಲ್ವರು ಸ್ಥಳೀಯರು ಹಿಂಸಾಚಾರದಲ್ಲಿ ಮೃತಪಟ್ಟಿದ್ದು 15ಕ್ಕೂ ಅಧಿಕ ಪೊಲೀಸ್ ಸಿಬ್ಬಂದಿ ಗಂಭೀರವಾಗಿ ಗಾಯಗೊಂಡಿದ್ದಾರೆ ಎಂದು ಲಾಹೋರ್ ಪೊಲೀಸ್ ವಕ್ತಾರ ಆರಿಫ್ ರಾಣಾ ತಿಳಿಸಿದ್ದಾರೆ.
ಅಮೆರಿಕದಲ್ಲಿ ಗುಂಡಿನ ದಾಳಿ: ಭಾರತೀಯ ಮೂಲದ ನಾಲ್ವರು ಸಿಖ್ಖರು ದುರ್ಮರಣ, ಮಾಜಿ ಉದ್ಯೋಗಿಯಿಂದ ಕೃತ್ಯ!
ಕಳೆದ ವಾರವೇ ಪಾಕ್ ಸರಕಾರ ಟಿಎಲ್ಪಿ ಮೇಲೆ ನಿರ್ಬಂಧ ವಿಧಿಸಿದೆ. ಅದರ ಸದಸ್ಯರ ಯಾವುದೇ ಕೃತ್ಯಗಳನ್ನು ಪ್ರಸಾರ ಮಾಡದಂತೆ ಕೂಡ ಸ್ಥಳೀಯ ಮಾಧ್ಯಮಗಳಿಗೆ ಸೂಚಿಸಲಾಗಿದೆ. ಹಿಂಸಾಚಾರ ಹತ್ತಿಕ್ಕಲು ಮತ್ತು ವಶದಲ್ಲಿರುವ ಪೊಲೀಸ್ ಸಿಬ್ಬಂದಿಯನ್ನು ಬಿಡುಗಡೆಗೊಳಿಸಲು ಯತ್ನಿಸುತ್ತಿರುವ ಲಾಹೋರ್ ಪೊಲೀಸ್ ಇಲಾಖೆ ಟಿಎಲ್ಪಿಯ ಕೇಂದ್ರ ಕಚೇರಿ ಇರುವ ಲಾಹೋರ್ ಚೌಕ್ ಯಾತೀಮ್ಕಹಾನ್ ಪ್ರದೇಶದಲ್ಲಿಮೊಬೈಲ್, ಇಂಟರ್ನೆಟ್ ಸೇವೆ ಸ್ಥಗಿತಗೊಳಿಸಿದೆ. ಜತೆಗೆ ನಿಷೇಧಾಜ್ಞೆ ಕೂಡ ಹೇರಿದೆ.
ಹಾಗಿದ್ದು ಟಿಎಲ್ಪಿ ಬೆಂಬಲಿಗರು ತಮ್ಮ ಹೋರಾಟದ ವಿಡಿಂಯೊಗಳನ್ನು ಸಾಮಾಜಿಕ ಜಾಲತಾಣಗಳಲ್ಲಿ ಹರಿಬಿಟ್ಟು , ಹೆಚ್ಚೆಚ್ಚು ಜನರನ್ನು ಜತೆ ಸೇರುವಂತೆ ಕರೆ ನೀಡುತ್ತಲೇ ಇದ್ದಾರೆ.
ಫ್ರಾನ್ಸ್ ವಿರುದ್ಧ ಆಕ್ರೋಶ!
ಪ್ರವಾದಿಯ ವ್ಯಂಗ್ಯಚಿತ್ರವನ್ನು ಫ್ರಾನ್ಸ್ನಲ್ಲಿ ಪ್ರಕಟಿಸಲಾಗಿದ್ದಕ್ಕೆ ಟಿಎಲ್ಪಿ ನಾಯಕ ರಿಜ್ವಿ ಭಾರಿ ಆಕ್ರೋಶ ಹೊರಹಾಕಿ , ಹಿಂಸಾಚಾರಕ್ಕೆ ಕರೆ ನೀಡಿದ್ದ. ಸದ್ಯ ಫ್ರಾನ್ಸ್ ರಾಯಭಾರಿಯನ್ನು ಕೂಡ ಹಿಂದಕ್ಕೆ ಕರೆಸಿಕೊಳ್ಳುವಂತೆ ಟಿಎಲ್ಪಿಯ ಸದಸ್ಯರು ಆಗ್ರಹಿಸುತ್ತಿದ್ದಾರೆ. ಹಿಂಸಾಚಾರ ನಿಯಂತ್ರಣಕ್ಕಾಗಿ ಖಡಕ್ ಕಾನೂನು ಕ್ರಮ ಜರುಗಿಸುವಂತೆ ಈಗಾಗಲೇ ಪ್ರಧಾನಿ ಇಮ್ರಾನ್ ಖಾನ್ ಆದೇಶಿಸಿದ್ದಾರೆ. ಫ್ರಾನ್ಸ್ ಸರಕಾರ ತನ್ನ ಪ್ರಜೆಗಳಿಗೆ ಪಾಕಿಸ್ತಾನ ತೊರೆಯುವಂತೆ ಎಚ್ಚರಿಕೆಯನ್ನೂ ನೀಡಿದೆ.
ಎರಡು ಇಂಧನ ಟ್ಯಾಂಕರ್ಗಳನ್ನು ಕೂಡ ವಶಕ್ಕೆ ಪಡೆದಿರುವ ಟಿಎಲ್ಪಿ ಸದಸ್ಯರು ಕಂಡಕಂಡಲ್ಲಿ ಪೆಟ್ರೋಲ್ ಬಾಂಬ್ಗಳನ್ನು ಎಸೆಯುತ್ತಿದ್ದಾರೆ. ಪೊಲೀಸರ ಮೇಲೆ ತೀವ್ರ ಕಲ್ಲುತೂರಾಟ ನಡೆಸಿ, ಗುಂಡುಗಳನ್ನು ಹಾರಿಸಿದ್ದಾರೆ. ನಾಲ್ವರು ಸ್ಥಳೀಯರು ಹಿಂಸಾಚಾರದಲ್ಲಿ ಮೃತಪಟ್ಟಿದ್ದು 15ಕ್ಕೂ ಅಧಿಕ ಪೊಲೀಸ್ ಸಿಬ್ಬಂದಿ ಗಂಭೀರವಾಗಿ ಗಾಯಗೊಂಡಿದ್ದಾರೆ ಎಂದು ಲಾಹೋರ್ ಪೊಲೀಸ್ ವಕ್ತಾರ ಆರಿಫ್ ರಾಣಾ ತಿಳಿಸಿದ್ದಾರೆ.
ಅಮೆರಿಕದಲ್ಲಿ ಗುಂಡಿನ ದಾಳಿ: ಭಾರತೀಯ ಮೂಲದ ನಾಲ್ವರು ಸಿಖ್ಖರು ದುರ್ಮರಣ, ಮಾಜಿ ಉದ್ಯೋಗಿಯಿಂದ ಕೃತ್ಯ!
ಕಳೆದ ವಾರವೇ ಪಾಕ್ ಸರಕಾರ ಟಿಎಲ್ಪಿ ಮೇಲೆ ನಿರ್ಬಂಧ ವಿಧಿಸಿದೆ. ಅದರ ಸದಸ್ಯರ ಯಾವುದೇ ಕೃತ್ಯಗಳನ್ನು ಪ್ರಸಾರ ಮಾಡದಂತೆ ಕೂಡ ಸ್ಥಳೀಯ ಮಾಧ್ಯಮಗಳಿಗೆ ಸೂಚಿಸಲಾಗಿದೆ. ಹಿಂಸಾಚಾರ ಹತ್ತಿಕ್ಕಲು ಮತ್ತು ವಶದಲ್ಲಿರುವ ಪೊಲೀಸ್ ಸಿಬ್ಬಂದಿಯನ್ನು ಬಿಡುಗಡೆಗೊಳಿಸಲು ಯತ್ನಿಸುತ್ತಿರುವ ಲಾಹೋರ್ ಪೊಲೀಸ್ ಇಲಾಖೆ ಟಿಎಲ್ಪಿಯ ಕೇಂದ್ರ ಕಚೇರಿ ಇರುವ ಲಾಹೋರ್ ಚೌಕ್ ಯಾತೀಮ್ಕಹಾನ್ ಪ್ರದೇಶದಲ್ಲಿಮೊಬೈಲ್, ಇಂಟರ್ನೆಟ್ ಸೇವೆ ಸ್ಥಗಿತಗೊಳಿಸಿದೆ. ಜತೆಗೆ ನಿಷೇಧಾಜ್ಞೆ ಕೂಡ ಹೇರಿದೆ.
ಹಾಗಿದ್ದು ಟಿಎಲ್ಪಿ ಬೆಂಬಲಿಗರು ತಮ್ಮ ಹೋರಾಟದ ವಿಡಿಂಯೊಗಳನ್ನು ಸಾಮಾಜಿಕ ಜಾಲತಾಣಗಳಲ್ಲಿ ಹರಿಬಿಟ್ಟು , ಹೆಚ್ಚೆಚ್ಚು ಜನರನ್ನು ಜತೆ ಸೇರುವಂತೆ ಕರೆ ನೀಡುತ್ತಲೇ ಇದ್ದಾರೆ.
ಫ್ರಾನ್ಸ್ ವಿರುದ್ಧ ಆಕ್ರೋಶ!
ಪ್ರವಾದಿಯ ವ್ಯಂಗ್ಯಚಿತ್ರವನ್ನು ಫ್ರಾನ್ಸ್ನಲ್ಲಿ ಪ್ರಕಟಿಸಲಾಗಿದ್ದಕ್ಕೆ ಟಿಎಲ್ಪಿ ನಾಯಕ ರಿಜ್ವಿ ಭಾರಿ ಆಕ್ರೋಶ ಹೊರಹಾಕಿ , ಹಿಂಸಾಚಾರಕ್ಕೆ ಕರೆ ನೀಡಿದ್ದ. ಸದ್ಯ ಫ್ರಾನ್ಸ್ ರಾಯಭಾರಿಯನ್ನು ಕೂಡ ಹಿಂದಕ್ಕೆ ಕರೆಸಿಕೊಳ್ಳುವಂತೆ ಟಿಎಲ್ಪಿಯ ಸದಸ್ಯರು ಆಗ್ರಹಿಸುತ್ತಿದ್ದಾರೆ. ಹಿಂಸಾಚಾರ ನಿಯಂತ್ರಣಕ್ಕಾಗಿ ಖಡಕ್ ಕಾನೂನು ಕ್ರಮ ಜರುಗಿಸುವಂತೆ ಈಗಾಗಲೇ ಪ್ರಧಾನಿ ಇಮ್ರಾನ್ ಖಾನ್ ಆದೇಶಿಸಿದ್ದಾರೆ. ಫ್ರಾನ್ಸ್ ಸರಕಾರ ತನ್ನ ಪ್ರಜೆಗಳಿಗೆ ಪಾಕಿಸ್ತಾನ ತೊರೆಯುವಂತೆ ಎಚ್ಚರಿಕೆಯನ್ನೂ ನೀಡಿದೆ.