ಆ್ಯಪ್ನಗರ

ಅಧ್ಯಕ್ಷೀಯ ಅಭ್ಯರ್ಥಿ ಜೋ ಬಿಡೆನ್‌ಗಿದೆ ಭಾರತದ ನಂಟು: ಯಾರು ಈ ಬಿಡೆನ್ ಫ್ರಾಮ್ ಮುಂಬೈ?

ಅಮೆರಿಕದ ಅಧ್ಯಕ್ಷೀಯ ಚುನಾವನೆ ಡೆಮಾಕ್ರೆಟಿಕ್ ಪಕ್ಷದ ಅಭ್ಯರ್ಥಿ ಜೋ ಬಿಡೆನ್ ​ಹಾಗೂ ಭಾರತದ ವಾಣಿಜ್ಯ ರಾಜಧಾನಿ ಮುಂಬೈಗೂ ಅವಿನಾಭಾವ ನಂಟಿದೆ. ಇಲ್ಲಿರುವ ಬಿಡೆನ್ ಎಂಬ ಕುಟುಂಬಕ್ಕೂ ಜೋ ಬಿಡೆನ್‌ಗೂ ರಕ್ತ ಸಂಬಂಧ ಇರುವುದು ಬಹುತೇಕರಿಗೆ ತಿಳಿದಿರದ ಸಂಗತಿ.

Vijaya Karnataka Web 21 Aug 2020, 3:21 pm
ವಾಷಿಂಗ್ಟನ್: ಅಮೆರಿಕದ ಉಪಾಧ್ಯಕ್ಷೀಯ ಚುನಾವಣೆಯ ಡೆಮಾಕ್ರೆಟಿಕ್ ಅಭ್ಯರ್ಥಿ ಕಮಲಾ ಹ್ಯಾರಿಸ್ ಭಾರತೀಯ ಮೂಲದವರು ಎಂಬುದು ಎಲ್ಲರಿಗೂ ಗೊತ್ತಿರುವ ಸಂಗತಿ. ಹ್ಯಾರಿಸ್ ತಾಯಿ ತಮಿಳುನಾಡಿನವರು ಎಂಬುದು ಭಾರತೀಯರಿಗೆ ಹೆಮ್ಮೆಯ ವಿಷಯ.
Vijaya Karnataka Web Joe Biden
ಸಂಗ್ರಹ ಚಿತ್ರ


ಆದರೆ ಡೆಮಾಕ್ರೆಟಿಕ್ ಪಕ್ಷದ ಅಧ್ಯಕ್ಷೀಯ ಅಭ್ಯರ್ಥಿ ಜೋ ಬಿಡೆನ್‌ ಅವರಿಗೂ ಭಾರತದ ನಂಟಿದೆ ಎಂದರೆ ನಂಬಲು ತುಸು ಕಷ್ಟವಾದೀತು. ಆದರೆ ಇದು ಆಶ್ಚರ್ಯವಾದರೂ ಸತ್ಯ.

ಅಮೆರಿಕ ಉಪಾಧ್ಯಕ್ಷ ಚುನಾವಣೆಗೆ ಭಾರತೀಯ ಮೂಲದ ಕಮಲಾ ಹ್ಯಾರಿಸ್ ಆಯ್ಕೆ: ಡೆಮಾಕ್ರಾಟ್ಸ್ ಜಾಣ ನಡೆ!

ಹೌದು, ಜೋ ಬಿಡೆನ್ ಹಾಗೂ ಭಾರತದ ವಾಣಿಜ್ಯ ರಾಜಧಾನಿ ಮುಂಬೈಗೂ ಅವಿನಾಭಾವ ನಂಟಿದೆ. ಇಲ್ಲಿರುವ ಬಿಡೆನ್ ಎಂಬ ಕುಟುಂಬಕ್ಕೂ ಜೋ ಬಿಡೆನ್‌ಗೂ ರಕ್ತ ಸಂಬಂಧ ಇರುವುದು ಬಹುತೇಕರಿಗೆ ತಿಳಿದಿರದ ಸಂಗತಿ.

1972 ರಲ್ಲಿ ತಮ್ಮ 29ನೇ ವಯಸ್ಸಿನಲ್ಲಿ ಜೋ ಬಿಡೆನ್ ಅಮೆರಿಕದ ಸೆನೆಟರ್ ಆಗಿ ನೇಮಕಗೊಂಡರು. ಆಗ ಬಿಡೆನ್ ಅಮೆರಿಕದ ಅತ್ಯಂತ ಕಿರಿಯ ಸೆನೆಟರ್ ಎಂಬ ಹೆಗ್ಗಳಿಕೆಗೆ ಪಾತ್ರರಾಗಿದ್ದರು.

ಕಮಲಾ ಹ್ಯಾರಿಸ್‌ಗೂ ಮುನ್ನ ಭಾರತದ ನಮ್ಮ ತಾಯಿ ಬಗ್ಗೆ ತಿಳಿಯಿರಿ: ಸಹೋದರಿ ಮಾಯಾ ಭಾವನಾತ್ಮಕ ಟ್ವೀಟ್‌

ಆಗ ಬಿಡೆನ್ ಫ್ರಾಮ್ ಮುಂಬೈ ಎಂಬ ಹೆಸರಲ್ಲಿ ಜೋ ಬಿಡೆನ್ ಅವರಿಗೆ ಅಭಿನಂದನಾ ಪತ್ರವೊಂದು ಬಂದು ತಲುಪಿತ್ತು. ಆ ಪತ್ರ ಬರೆದ ವ್ಯಕ್ತಿ ತಮ್ಮಿಬ್ಬರ ನಡುವೆ ರಕ್ತ ಸಂಬಂಧವಿದೆ ಎಂಬುದುನ್ನು ಉಲ್ಲೇಖಿಸಿದ್ದ.

1848ರಲ್ಲಿ ಬ್ರಿಟಿಷ್ ಈಸ್ಟ್ ಇಂಡಿಯಾ ಕಂಪನಿಯಲ್ಲಿ ಕ್ಯಾಪ್ಟನ್ ಆಗಿದ್ದ ಜೋ ಬಿಡೆನ್ ಅವರ ಪೂರ್ವಿಕರೊಬ್ಬರು ಭಾರತೀಯ ಮೂಲದ ಮಹಿಳೆಯನ್ನು ಮದುವೆಯಾಗಿ ಮುಂಬೈನಲ್ಲೇ ನೆಲೆಸಿದರು. ಅವರ ಸಂತತಿ ಇದೀಗ ಮುಂಬೈನಲ್ಲಿ ನೆಲೆಸಿದ್ದು, ಅವರೇ ಜೋ ಬಿಡೆನ್ ಅವರಿಗೆ ಪತ್ರ ಬರೆದು ತಮ್ಮ ನಡುವಿನ ರಕ್ತ ಸಂಬಂಧದವನ್ನು ಉಲ್ಲೇಖಿಸಿದ್ದರು ಎನ್ನಲಾಗಿದೆ.

ಮೊದಲ ಭಾಷಣದಲ್ಲಿಯೇ ಭಾರತಕ್ಕೆ ಕಮಲಾ ಜೈಹೋ..! ತಾಯ್ನಾಡಿನ ನಂಟು ಸ್ಮರಿಸಿದ ಹ್ಯಾರಿಸ್

ಮುಂದೆ ಜುಲೈ 24, 2013ರಂದು ಜೋ ಬಿಡೆನ್ ಅಮೆರಿಕದ ಉಪಾಧ್ಯಕ್ಷರಾಗಿ ಮುಂಬೈನ ಷೇರು ಮಾರುಲಕಟ್ಟೆಗೆ ಭೇಟಿ ನೀಡಿದ್ದರು. ಆಗ ಬಿಡೆನ್ ತಮಗೆ ಬಂದ ಪತ್ರದ ಕುರಿತು ಉಲ್ಲೇಖಿಸಿದ್ದಲ್ಲದೇ, ತಮಗೂ ಭಾರತದ ನಂಟಿರುವುದು ಖುಷಿಯ ಸಂಗತಿ ಎಂದು ಹೇಳಿದ್ದರು.

ಈ ಕುರಿತು ವಾಷಿಂಗ್ಟನ್ ಡಿಸಿಯಲ್ಲಿ ಇಂಡಿಯನ್ ಬಿಸಿನೆಸ್ ಕೌನ್ಸಿಲ್ ಆಯೋಜಿಸಿದ್ದ ಸಭೆಯಲ್ಲಿ ಮಾತನಾಡಿರುವ ಜೋ ಬಿಡೆನ್, ತಮ್ಮ ರಕ್ತ ಸಂಬಂಧಿಕರೊಬ್ಬರು ಮುಂಬೈನಲ್ಲಿರುವುದರ ಕುರಿತು ನಾನು ಅಷ್ಟು ಸಂಶೋಧನೆ ಕೈಗೊಂಡಿಲ್ಲ. ಆದರೆ ನನ್ನ ಆ ಸಂಬಂಧಿಯನ್ನು ನಾನು ಭೇಟಿಯಾಗಲು ಬಹಳ ಉತ್ಸುಕನಾಗಿದ್ದೇನೆ ಎಂದು ಹೇಳಿದ್ದಾರೆ.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ