ಆ್ಯಪ್ನಗರ

ಪಾಕ್‌ ವೈದ್ಯಕೀಯ ಪದವಿಗೆ ಭಾರತದಲ್ಲಿ ಮಾನ್ಯತೆ ಇಲ್ಲ ಎಂದ ಎಂಸಿಐ!

ಕಾಶ್ಮೀರಿ ವಿದ್ಯಾರ್ಥಿಗಳಿಗೆ ಪಾಕಿಸ್ತಾನ ಆಕ್ರಮಿತ ಕಾಶ್ಮೀರ (ಪಿಒಕೆ)ದಲ್ಲಿರುವ ವಿಶ್ವವಿದ್ಯಾಲಯಗಳು ನೀಡಿರುವ ವೈದ್ಯಕೀಯ ಕೋರ್ಸ್‌ಗಳ ಪದವಿಗೆ ಮಾನ್ಯತೆ ಇಲ್ಲ ಮತ್ತು ಅದನ್ನು ಪರಿಗಣಿಸುವುದೂ ಇಲ್ಲಎಂದು ಭಾರತೀಯ ವೈದ್ಯಕೀಯ ಪರಿಷತ್ತು (ಎಂಸಿಐ) ಸ್ಪಷ್ಟಪಡಿಸಿದೆ.

Vijaya Karnataka Web 13 Aug 2020, 9:55 pm
ಶ್ರೀನಗರ: ಕಾಶ್ಮೀರಿ ವಿದ್ಯಾರ್ಥಿಗಳಿಗೆ ಪಾಕಿಸ್ತಾನ ಆಕ್ರಮಿತ ಕಾಶ್ಮೀರ (ಪಿಒಕೆ)ದಲ್ಲಿರುವ ವಿಶ್ವವಿದ್ಯಾಲಯಗಳು ನೀಡಿರುವ ವೈದ್ಯಕೀಯ ಕೋರ್ಸ್‌ಗಳ ಪದವಿಗೆ ಮಾನ್ಯತೆ ಇಲ್ಲ ಮತ್ತು ಅದನ್ನು ಪರಿಗಣಿಸುವುದೂ ಇಲ್ಲಎಂದು ಭಾರತೀಯ ವೈದ್ಯಕೀಯ ಪರಿಷತ್ತು (ಎಂಸಿಐ) ಸ್ಪಷ್ಟಪಡಿಸಿದೆ.
Vijaya Karnataka Web docter


ಎಂಸಿಐನ ಈ ಕ್ರಮದಿಂದಾಗಿ, ಪ್ರತಿ ವರ್ಷ ಕಾಶ್ಮೀರದ 1600 ವಿದ್ಯಾರ್ಥಿಗಳಿಗೆ ವಿದ್ಯಾರ್ಥಿವೇತನದ ಆಮಿಷವೊಡ್ಡಿದ್ದ ಪಾಕಿಸ್ತಾನ ಪ್ರಧಾನಿ ಇಮ್ರಾನ್‌ ಖಾನ್‌ ಸರಕಾರದ ಯೋಜನೆಗೆ ಪೆಟ್ಟು ಕೊಟ್ಟಂತಾಗಿದೆ. ಭವಿಷ್ಯದಲ್ಲಿ ಪಾಕಿಸ್ತಾನದ ವಿವಿಗಳಲ್ಲಿ ವ್ಯಾಸಂಗ ಮಾಡಿ ಪಡೆದ ಪದವಿಗಳ ಕೂಲಂಕಷ ಪರಿಶೀಲನೆ ಅಥವಾ ರದ್ದತಿ ಬಗ್ಗೆಯೂ ಚಿಂತಿಸಲಾಗುವುದು ಎಂದು ಹಿರಿಯ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.

ಪ್ರತ್ಯೇಕತಾವಾದಿಗಳ ಕುಟುಂಬಸ್ಥರಿಗೆ, ಕಾಶ್ಮೀರಿ ಯುವಕರಿಗೆ ವಿದ್ಯಾರ್ಥಿವೇತನ ಹೆಸರಲ್ಲಿ ಅಗ್ಗದ ಶಿಕ್ಷಣ ನೀಡಿ ಅವರನ್ನು ತನ್ನ ಹಿತಾಸಕ್ತಿಗೆ ಪಾಕ್‌ನ ಗುಪ್ತಚರ ಸಂಸ್ಥೆ ಐಎಸ್‌ಐ ಬಹಳ ಹಿಂದಿನಿಂದಲೂ ಬಳಸಿಕೊಳ್ಳುತ್ತಿದೆ. ಅಧಿಕೃತ ವೀಸಾದೊಂದಿಗೆ ಪಾಕ್‌ಗೆ ಶಿಕ್ಷಣಕ್ಕಾಗಿ ತೆರಳಿದ್ದ ಹಲವು ಕಾಶ್ಮೀರಿ ಯುವಕರು ಪಿಒಕೆಯಲ್ಲಿನ ಉಗ್ರರ ತರಬೇತಿ ಶಿಬಿರಗಳಿಗೆ ಸೇರಿಕೊಂಡು ಭಾರತದಲ್ಲಿ ವಿಧ್ವಂಸಕ ಕೃತ್ಯಗಳನ್ನು ಎಸಗಲು ಎಲ್‌ಒಸಿಗಳಲ್ಲಿ ಅಕ್ರಮವಾಗಿ ನುಸುಳಿ ಕಾಶ್ಮೀರ ಸೇರಿದ ಹಲವು ಪ್ರಕರಣಗಳಿವೆ.

ಏನಿದು ಪಾರದರ್ಶಕ ತೆರಿಗೆ ನೀತಿ? ಹೇಗಿರಲಿದೆ ಹೊಸ ತೆರಿಗೆ ವಿಧಾನ?

ತಿರುಗೇಟು: ಜಮ್ಮು ಮತ್ತು ಕಾಶ್ಮೀರ ಭಾರತದ ಅವಿಭಾಜ್ಯ ಅಂಗವಾಗಿದೆ. ಪಾಕಿಸ್ತಾನ ಮಾತ್ರವಲ್ಲ, ಬೇರೆ ಯಾವ ದೇಶಕ್ಕೂ ಈ ಭೂಪ್ರದೇಶದ ಮೇಲೆ ಹಕ್ಕಿಲ್ಲಎಂದು ಭಾರತ ಹೇಳಿದೆ. ಚೀನಾದ ಕಮ್ಯುನಿಸ್ಟ್‌ ಪಕ್ಷದ ಮುಖವಾಣಿ 'ಗ್ಲೋಬಲ್‌ ಟೈಮ್ಸ್‌'ನಲ್ಲಿಪಾಕ್‌ ರಾಯಭಾರಿ ಅವರಿಂದ ಅಂಕಣ ಬರೆಸುವ ಮೂಲಕ ಜಮ್ಮು-ಕಾಶ್ಮೀರದ ಮೇಲೆ ತನಗೆ ಹಕ್ಕು ಇದೆ ಎಂದು ಮತ್ತೆ ಮಂಡಿಸಲು ಯತ್ನಿಸಿದ ಪಾಕಿಸ್ತಾನಕ್ಕೆ ಈ ಮೂಲಕ ತಿರುಗೇಟು ನೀಡಿದೆ.

'ಗ್ಲೋಬಲ್‌ ಟೈಮ್ಸ್‌ನಲ್ಲಿ ಜಮ್ಮು, ಕಾಶ್ಮೀರದಲ್ಲಿಅಗತ್ಯ ತುರ್ತು ಕ್ರಮಗಳು' ಎಂದು ಅಂಕಣ ಬರೆದಿರುವ ಚೀನಾದಲ್ಲಿನ ಪಾಕ್‌ ರಾಯಭಾರಿ ಮೊಯಿನ್‌ ಉಲ್‌ ಹೇಗ್‌ ಮೊದಲು ತಮ್ಮ ಮುಖಕ್ಕೆ ಕನ್ನಡಿ ಹಿಡಿದುಕೊಂಡು ನೋಡಲಿ. ಬಳಿಕ ಭಾರತದ ಮೇಲೆ ಆರೋಪಗಳನ್ನು ಹೊರಿಸಲಿ. ಮಹಿಳೆಯರು, ಮಕ್ಕಳು, ಹಿಂದುಳಿದವರ ಕಲ್ಯಾಣಕ್ಕಾಗಿ ಕಳೆದ ಒಂದು ವರ್ಷದಿಂದ ಭಾರತ ಸರಕಾರ ಹಲವಾರು ಅಭಿವೃದ್ಧಿ ಕಾರ್ಯಕ್ರಮಗಳನ್ನು ಜಮ್ಮು ಮತ್ತು ಕಾಶ್ಮೀರ ಕೇಂದ್ರಾಡಳಿತ ಪ್ರದೇಶಗಳಲ್ಲಿ ಜಾರಿ ಮಾಡಿದೆ.

ಸೂಳೆಕೆರೆಯಲ್ಲಿ ₹1347 ಕೋಟಿಯ ಜಲವಿದ್ಯುತ್‌ ಯೋಜನೆಗೆ ಶಾಸಕರಿಂದಲೇ ವಿರೋಧ!

ಸೇತುವೆ ನಿರ್ಮಾಣ, ಶಿಕ್ಷಣ ಸುಧಾರಣೆ, ಹಿಂಸೆ-ಗಲಭೆ ನಿಯಂತ್ರಣಕ್ಕೆ ಸಾಕಷ್ಟು ದಾಖಲೆಗಳಿವೆ. ಸ್ಥಳೀಯ ಸಂಸ್ಥೆ ಚುನಾವಣೆಗಳಲ್ಲಿ ಕಾಶ್ಮೀರಿಗರು ತಮ್ಮ ಮತದಾನದ ಹಕ್ಕು ಚಲಾಯಿಸಿದ್ದಾರೆ. 10 ಸಾವಿರ ಉದ್ಯೋಗಗಳ ಸೃಷ್ಟಿಯಾಗಿದ್ದಲ್ಲದೆ, 3 ಲಕ್ಷ ಮನೆಗಳಿಗೆ ನೀರು , ವಿದ್ಯುತ್‌ ಸಂಪರ್ಕ ಕಲ್ಪಿಸಲಾಗಿದೆ. ಆದರೆ ಪಾಕಿಸ್ತಾನವು ತನ್ನ ಉಗ್ರರನ್ನು ಎಲ್‌ಒಸಿಯಲ್ಲಿ ನುಸುಳಿಸಿ ಹಿಂಸೆಗೆ ಮುಂದಾಗುತ್ತಿದೆ. ಕದನವಿರಾಮವನ್ನು ಅಪ್ರಚೋದಿತವಾಗಿ ಉಲ್ಲಂಘಿಸಿ ಆತಂಕದ ವಾತಾವರಣ ಸೃಷ್ಟಿಸಲು ಯತ್ನಿಸುತ್ತಿದೆ ಎಂದು ವಿದೇಶಾಗ ವ್ಯವಹಾರಗಳ ಸಚಿವಾಲಯವು ತಿರುಗೇಟು ನೀಡಿದೆ.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ