ಆ್ಯಪ್ನಗರ

ಭಯೋತ್ಪಾದನೆ ವಿಷಯದಲ್ಲಿ ನೀವಲ್ಲ ಬಲಿಪಶು..! ಪಾಕಿಸ್ತಾನ‌ ವಿರುದ್ಧ ವಿಶ್ವಸಂಸ್ಥೆಯಲ್ಲಿ ಭಾರತ ಕಿಡಿ

ಅಂತರಾಷ್ಟ್ರೀಯ ಮಟ್ಟದಲ್ಲಿ ಪಾಕಿಸ್ತಾನದ ವಿರುದ್ಧ ಭಾರತ ತನ್ನ ಹೋರಾಟವನ್ನು ಮುಂದುವರೆಸಿದ್ದು, ಗುರುವಾರ ವಿಶ್ವಸಂಸ್ಥೆಯಲ್ಲಿ ಪಾಕಿಸ್ತಾನದ ವಿರುದ್ಧ ಕಿಡಿಕಾರಿರುವ ಭಾರತ, ಭಯೋತ್ಪಾದನೆಯ ವಿಷಯದಲ್ಲಿ ಇಸ್ಲಾಮಾಬಾದ್‌ ತನ್ನನ್ನು ಬಲಿಪಶು ಎಂದು ಹೇಳಿಕೊಳ್ಳುತ್ತಿದೆ ಎಂದು ಹೇಳಿದೆ.

Agencies 1 Oct 2020, 8:00 pm
ಹೊಸದಿಲ್ಲಿ: ಅಂತರಾಷ್ಟ್ರೀಯ ಮಟ್ಟದಲ್ಲಿ ಪಾಕಿಸ್ತಾನದ ವಿರುದ್ಧ ಭಾರತ ತನ್ನ ಹೋರಾಟವನ್ನು ಮುಂದುವರೆಸಿದೆ. ಗುರುವಾರ ವಿಶ್ವಸಂಸ್ಥೆಯ ಮಾನವ ಹಕ್ಕುಗಳ ಮಂಡಳಿಯಲ್ಲಿ (ಯುಎನ್‌ಹೆಚ್‌ಆರ್‌ಸಿ) ಪಾಕಿಸ್ತಾನದ ವಿರುದ್ಧ ಕಿಡಿಕಾರಿರುವ ಭಾರತ, ಭಯೋತ್ಪಾದನೆಯ ವಿಷಯದಲ್ಲಿ ಅಂತರರಾಷ್ಟ್ರೀಯ ಸಮುದಾಯವನ್ನು ಬೇರೆಡೆಗೆ ಸೆಳೆಯಲು ಇಸ್ಲಾಮಾಬಾದ್‌ ತನ್ನನ್ನು ಬಲಿಪಶು ಎಂದು ಹೇಳಿಕೊಳ್ಳುತ್ತಿದೆ ಎಂದು ಹೇಳಿದೆ.
Vijaya Karnataka Web dont play victim card india hits out at pakistan on issue of terrorism
ಭಯೋತ್ಪಾದನೆ ವಿಷಯದಲ್ಲಿ ನೀವಲ್ಲ ಬಲಿಪಶು..! ಪಾಕಿಸ್ತಾನ‌ ವಿರುದ್ಧ ವಿಶ್ವಸಂಸ್ಥೆಯಲ್ಲಿ ಭಾರತ ಕಿಡಿ


ವಿಶ್ವಸಂಸ್ಥೆಯಲ್ಲಿ ಭಯೋತ್ಪಾದನೆ ಬಗ್ಗೆ ಚರ್ಚೆ ನಡೆದಾಗಲೆಲ್ಲಾ ಪಾಕಿಸ್ತಾನದ ವಿಫಲ ಸರಕಾರ ತನ್ನನ್ನು ಬಲಿಪಶುವನ್ನಾಗಿ ಬಿಂಬಿಸಿಕೊಳ್ಳುತ್ತದೆ ಎಂದು ವಿಶ್ವಸಂಸ್ಥೆಯ ಭಾರತದ ಮೊದಲ ಕಾರ್ಯದರ್ಶಿ ವಿಮರ್ಶ್ ಆರ್ಯನ್ ಹೇಳಿದ್ದಾರೆ. ವಿಶ್ವಸಂಸ್ಥೆ ನಿಷೇಧಿಸಿದ ಭಯೋತ್ಪಾದಕರು ಮತ್ತು ಭಯೋತ್ಪಾದಕ ಸಂಘಟನೆಗಳಿಗೆ ಪಾಕಿಸ್ತಾನ ಆಶ್ರಯವನ್ನು ನೀಡುತ್ತದೆ. ಆದರೆ, ಅಂತರಾಷ್ಟ್ರೀಯ ಸಮುದಾಯದ ಗಮನವನ್ನು ಬೇರೆಡೆ ಸೆಳೆಯಲು ತನ್ನನ್ನು ತಾನು ಸಂತ್ರಸ್ತ ಎಂದು ಬಿಂಬಿಸಿಕೊಳ್ಳುತ್ತದೆ ಎಂದು ಕಿಡಿಕಾರಿದ್ದಾರೆ.

ಯುಎನ್‌ಎಚ್‌ಆರ್‌ಸಿಯಲ್ಲಿ ಪಾಯಿಂಟ್‌ ಟು ಪಾಯಿಂಟ್‌ ವಿವರಿಸಿದ ಆರ್ಯನ್‌, ಪಾಕಿಸ್ತಾನದಲ್ಲಿನ ಅಲ್ಪಸಂಖ್ಯಾತರು, ಮಹಿಳೆಯರು, ಮಕ್ಕಳು ಮತ್ತು ಪತ್ರಕರ್ತರ ಸ್ಥಿತಿಯನ್ನು ಬಹಿರಂಗಪಡಿಸಿದರು. ಪಾಕಿಸ್ತಾನ ತನ್ನ ಜನರನ್ನು ರಕ್ಷಿಸುವುದು ಜವಾಬ್ದಾರಿ ಎಂದು ಅರಿತುಕೊಳ್ಳದೆ ಭಾರತದ ಅಲ್ಪಸಂಖ್ಯಾತರ ಹಕ್ಕುಗಳ ಬಗ್ಗೆ ಮಾತನಾಡಲು ಧೈರ್ಯಮಾಡುತ್ತದೆ ಎಂದು ಅವರು ಹೇಳಿದರು.

ಸೇನೆ ಮತ್ತು ಇಮ್ರಾನ್ ಖಾನ್ ವಿರುದ್ಧ ಒಗ್ಗೂಡಿದ ಪಾಕ್ ವಿಪಕ್ಷಗಳು: ಜನಾಂದೋಲನಕ್ಕೆ ಕರೆ!

ಸೆಪ್ಟೆಂಬರ್ 30ರಂದು ವಿಶ್ವಸಂಸ್ಥೆಯ ಮಾನವ ಹಕ್ಕುಗಳ ಮಂಡಳಿಯಲ್ಲಿ (ಯುಎನ್‌ಎಚ್‌ಆರ್‌ಸಿ) ಪಾಕಿಸ್ತಾನದ ದ್ವೇಷ ಭಾಷಣ ಮತ್ತು ಅಲ್ಲಿನ ಅಲ್ಪಸಂಖ್ಯಾತರ ಪರಿಸ್ಥಿತಿಯನ್ನು ಭಾರತ ಎತ್ತಿ ತೋರಿಸಿದೆ. ಧಾರ್ಮಿಕ ಅಲ್ಪಸಂಖ್ಯಾತರ ವಿರುದ್ಧ ಪ್ರಚೋದನೆ ಮತ್ತು ಭಾರತದ ನಾಯಕತ್ವದ ಮೇಲೆ ದ್ವೇಷದ ಭಾಷಣವನ್ನು ಪಾಕಿಸ್ತಾನ ಉತ್ತಮವಾಗಿ ಮಾಡುತ್ತದೆ ಎಂದು ನಮಗೆ ಗೊತ್ತಿದೆ ಎಂದು ಜಿನೀವಾದಲ್ಲಿ ವಿಶ್ವಸಂಸ್ಥೆಯ ಭಾರತದ ಮೊದಲ ಕಾರ್ಯದರ್ಶಿ ಪವನ್ ಬಾಧೆ ಹೇಳಿದರು.

ಸೊರಗುತ್ತಿದೆ ಇಮ್ರಾನ್ ಖಾನ್ ಜನಪ್ರಿಯತೆ: ಪಾಕಿಸ್ತಾನದಲ್ಲಿ ಮತ್ತೆ ಪ್ರಬಲವಾಗುತ್ತಿದೆ ಸೇನೆ!

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ