ಆ್ಯಪ್ನಗರ

Tajikistan Earthquake: ಚೀನಾ-ತಜಿಕಿಸ್ತಾನ ಗಡಿಯಲ್ಲಿ ನಡುಗಿದ ಭೂಮಿ: 6.8 ತೀವ್ರತೆಯ ಭೂಕಂಪನ

Tajikistan-China Earthquake: ಟರ್ಕಿ ಮತ್ತು ಸಿರಿಯಾ ದೇಶಗಳು ಭೂಕಂಪನದ ಹೊಡೆತಕ್ಕೆ ತತ್ತರಿಸಿರುವ ಸಂದರ್ಭದಲ್ಲಿ, ಇನ್ನಷ್ಟು ಭೂಕಂಪನ ಘಟನೆಗಳು ವರದಿಯಾಗುತ್ತಿವೆ. ತಜಿಕಿಸ್ತಾನ್- ಚೀನಾ ಗಡಿಯಲ್ಲಿ ಗುರುವಾರ ಮುಂಜಾನೆ ಭೂಮಿ ನಡುಗಿದೆ. 6.8 ತೀವ್ರತೆಯಲ್ಲಿ ಭೂಮಿ ನಡುಗಿದೆ.

Authored byಅಮಿತ್ ಎಂ.ಎಸ್ | Vijaya Karnataka Web 23 Feb 2023, 1:53 pm
ಕ್ಸಿಂಜಿಯಾಂಗ್: ತಜಿಕಿಸ್ತಾನ- ಚೀನಾ ಗಡಿಯಲ್ಲಿ ಗುರುವಾರ ಮುಂಜಾನೆ ರಿಕ್ಟರ್ ಮಾಪನದಲ್ಲಿ 6.8 ತೀವ್ರತೆಯ ಪ್ರಬಲ ಭೂಕಂಪನ ಸಂಭವಿಸಿದೆ. ತಜಿಕಿಸ್ತಾನದಲ್ಲಿ ಇದರ ಪರಿಣಾಮ ಹೆಚ್ಚಾಗಿದೆ. ಚೀನಾದ ಪಶ್ಚಿಮ ಕ್ಸಿಂಜಿಯಾಂಗ್ ಪ್ರದೇಶದಲ್ಲಿ ಭೂಕಂಪನ ಸಂಭವಿಸಿದೆ. ತಜಿಕಿಸ್ತಾನದ ಪಶ್ಚಿಮದ ಮುರ್ಘೋಬ್‌ನಿಂದ 67 ಕಿಮೀ ದೂರ ಹಾಗೂ 20 ಕಿಮೀ ಆಳದಲ್ಲಿ ಕಂಪನ ಉಂಟಾಗಿದೆ ಎಂದು ಅಮೆರಿಕದ ಜಿಯಾಲಾಜಿಕಲ್ ಸರ್ವೆ ಕೇಂದ್ರ ತಿಳಿಸಿದೆ.
Vijaya Karnataka Web 6.8 magnitude earthquake shakes Tajikistan near China border


ಇದು ಬಹಳ ಕುಗ್ರಾಮದ ಪ್ರದೇಶವಾಗಿದ್ದು, ಇಲ್ಲಿ ಜನಸಂಖ್ಯೆಯೂ ವಿರಳವಾಗಿದೆ. ಚೀನಾದ ಭೂಕಂಪನ ನೆಟ್‌ವರ್ಕ್ ಕೇಂದ್ರವು ರಿಕ್ಟರ್ ಮಾಪನದಲ್ಲಿ ಭೂಕಂಪನದ ತೀವ್ರತೆಯು 7.2ರಷ್ಟು ದಾಖಲಾಗಿದೆ ಮತ್ತು 10 ಕಿಮೀ ಆಳದಲ್ಲಿ ಇದು ಸಂಭವಿಸಿದೆ ಎಂದು ಹೇಳಿದೆ. ಆದರೆ ವಿಭಿನ್ನ ಸಂಸ್ಥೆಗಳು ವಿಭಿನ್ನ ಮಾಪನದ ದಾಖಲೆಗಳನ್ನು ನೀಡಿವೆ.
Earthquake again in Turkey: ಸೋಮವಾರ ರಾತ್ರಿ ಟರ್ಕಿ ಮತ್ತು ಸಿರಿಯಾ ಗಡಿಯಲ್ಲಿ ಮತ್ತೆ ಭೂಕಂಪನ, ರಿಕ್ಟರ್‌ ಮಾಪಕದಲ್ಲಿ ದಾಖಲಾಯ್ತು 6.3 ತೀವ್ರತೆ

ಸ್ಥಳೀಯ ಕಾಲಮಾನ ನಸುಕಿನ 5.37ರ ವೇಳೆಗೆ ಕೆಲವು ಸೆಕೆಂಡುಗಳ ಕಾಲ ಭೂಮಿ ನಡುಗಿನ ಅನುಭವವಾಗಿದೆ. ತಜಿಕಿಸ್ತಾನ ಮತ್ತು ಚೀನಾ ಗಡಿಗಳಿರುವ ಅರೆ- ಸ್ವಾಯತ್ತ ಪ್ರದೇಶವಾದ ಗೊರ್ನೊ- ಬಡಾಕ್ಷಾನ್‌ನಲ್ಲಿ ಭೂಕಂಪನದ ಕೇಂದ್ರಬಿಂದು ದಾಖಲಾಗಿರುವ ಸಾಧ್ಯತೆ ಇದೆ. ಆರಂಭದಲ್ಲಿ 5.0 ತೀವ್ರತೆಯಲ್ಲಿ ಭೂಮಿ ಕಂಪಿಸಿತ್ತು. ಸುಮಾರು 20 ನಿಮಿಷಗಳ ನಂತರ ಮತ್ತೊಂದು ಭೂಕಂಪನ ಸಂಭವಿಸಿದೆ.


ತಜಿಕಿಸ್ತಾನದ ಅತ್ಯಂತ ಬೃಹತ್ ಸರೋವರಗಳಲ್ಲಿ ಒಂದಾದ ಲೇಕ್ ಸಾರೆಜ್, ಬೃಹತ್ ಪಾಮಿರ್ ಪರ್ವತಗಳಿರುವ ಪ್ರದೇಶದಲ್ಲಿ ಭೂಮಿ ಅದುರಿದೆ. 1991ರಲ್ಲಿ ಸಂಭವಿಸಿದ್ದ ಪ್ರಬಲ ಭೂಕಂಪನದಿಂದಾಗಿ ಸಾರೆಜ್ ಸರೋವರ ಸೃಷ್ಟಿಯಾಗಿತ್ತು. ಸರೋವರದ ಹಿಂಭಾಗದಲ್ಲಿನ ಪಾಮಿರ್ ಪರ್ವತದಲ್ಲಿ ನೈಸರ್ಗಿಕ ಅಣೆಕಟ್ಟು ಕೂಡ ಇದೆ. ಒಂದು ವೇಳೆ ಈ ಅಣೆಕಟ್ಟಿಗೆ ಹಾನಿಯಾದರೆ, ಭಾರಿ ಅನಾಹುತ ಸಂಭವಿಸಲಿದೆ ಎಂದು ಪರಿಣತರು ಎಚ್ಚರಿಕೆ ನೀಡಿದ್ದಾರೆ.
New Zealand Earthquake: ನ್ಯೂಜಿಲ್ಯಾಂಡ್‌ನಲ್ಲಿ ಪ್ರಬಲ ಭೂಕಂಪನ: 6.1 ರಿಕ್ಟರ್ ಮಾಪನದಲ್ಲಿ ತೀವ್ರತೆ ದಾಖಲು

ಕೇಂದ್ರ ಏಷ್ಯಾದ ಭಾಗದಂತೆ ತಜಿಕಿಸ್ತಾನವು ಪ್ರವಾಹ, ಭೂಕಂಪನ, ಭೂಕುಸಿತ, ಹಿಮಪಾತ ಮತ್ತು ಭಾರಿ ಹಿಮ ಸುರಿಯುವಂತಹ ನೈಸರ್ಗಿಕ ಅವಘಡಗಳ ಅಪಾಯದ ಸ್ಥಾನದಲ್ಲಿದೆ. ಗೊರ್ನೊ- ಬಡಾಕ್ಷಾನ್‌ನಲ್ಲಿ ಫೆ. 15ರಂದು ಸಂಭವಿಸಿದ್ದ ಹಿಮಪಾತವು 9 ಮಂದಿಯನ್ನು ಬಲಿ ಪಡೆದುಕೊಂಡಿತ್ತು. ರಾಜಧಾನಿ ದುಶಾಂಬೆಯಲ್ಲಿ ಅದೇ ದಿನ ಹಿಮಪಾತಕ್ಕೆ ಮತ್ತೊಬ್ಬ ವ್ಯಕ್ತಿ ಜೀವ ಕಳೆದುಕೊಂಡಿದ್ದರು.
ಲೇಖಕರ ಬಗ್ಗೆ
ಅಮಿತ್ ಎಂ.ಎಸ್
ವಿಜಯ ಕರ್ನಾಟಕದ ಡಿಜಿಟಲ್ ವಿಭಾಗದಲ್ಲಿ ಪತ್ರಕರ್ತ. 2009ರಿಂದ ಪತ್ರಿಕೋದ್ಯಮದಲ್ಲಿ ಸಕ್ರಿಯವಾಗಿದ್ದಾರೆ. ದಿನಪತ್ರಿಕೆಗಳು ಮತ್ತು ವೆಬ್‌ ಪೋರ್ಟಲ್‌ಗಳಲ್ಲಿ ವರದಿಗಾರಿಕೆ, ಸಿನಿಮಾ ವರದಿಗಾರಿಕೆ, ಡೆಸ್ಕ್ ಹಾಗೂ ಜಿಲ್ಲಾ ಕರೆಸ್ಪಾಂಡೆಂಟ್ ಆಗಿ ಕೆಲಸ ಮಾಡಿದ ಅನುಭವ ಇವರಿಗಿದೆ. ರಾಷ್ಟ್ರೀಯ ಹಾಗೂ ಅಂತಾರಾಷ್ಟ್ರೀಯ ಸುದ್ದಿಗಳು ಪ್ರಮುಖ ಆಸಕ್ತಿಯ ವಿಭಾಗಗಳು. ಮಾನವಾಸಕ್ತಿಯ ಹಾಗೂ ಸ್ಫೂರ್ತಿದಾಯಕ ಕಥನಗಳನ್ನು ನಿರೂಪಿಸುವುದು ವೃತ್ತಿಯಲ್ಲಿನ ನೆಚ್ಚಿನ ಸಂಗತಿ. ಪ್ರವಾಸ, ಕ್ರಿಕೆಟ್, ಓದು, ಕೃಷಿ ಇತರೆ ಇವರ ಆಸಕ್ತಿ ಮತ್ತು ಹವ್ಯಾಸಗಳು.... ಇನ್ನಷ್ಟು ಓದಿ

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ