ಆ್ಯಪ್ನಗರ

ಪಾಕ್‌ ಸೇನಾ ಮುಖ್ಯಸ್ಥರ ಕ್ಷಮೆಗೆ ಕ್ಯಾರೇ ಎನ್ನದ ಸೌದಿ ಯುವರಾಜ, ಇಮ್ರಾನ್‌ ಖಾನ್‌ಗೆ ಭಾರಿ ಮುಖಭಂಗ

ಕಾಶ್ಮೀರಕ್ಕೆ ಸಂಬಂಧಿಸಿದಂತೆ ಚರ್ಚೆಗಾಗಿ ತೈಲ ಉತ್ಪಾದಕ ರಾಷ್ಟ್ರಗಳ ವಿದೇಶಾಂಗ ಸಚಿವರ ಸಭೆ ಕರೆಯುವಂತೆ ಪಾಕಿಸ್ತಾನ ಒತ್ತಾಯಿಸಿತ್ತು. ಆದರೆ ಇದಕ್ಕೆ ಸೌದಿ ಅರೇಬಿಯಾ ಬಿಲ್‌ಕುಲ್‌ ಸಾಧ್ಯವಿಲ್ಲ ಎಂದಿತ್ತು. ಬಳಿಕ ಎರಡೂ ರಾಷ್ಟ್ರಗಳ ಸಂಬಂಧ ಹಳಸಿತ್ತು.

Agencies 19 Aug 2020, 8:05 pm
ರಿಯಾದ್‌: ಸೌದಿ ಅರೇಬಿಯಾ ಯುವರಾಜ ಮೊಹಮ್ಮದ್‌ ಬಿನ್‌ ಸಲ್ಮಾನ್‌ (ಎಂಬಿಎಸ್‌) ಅವರೊಂದಿಗೆ ಸೌಹಾರ್ದಯುತ ಭೇಟಿಗೆ ಬಯಸಿ ಬಂದ ಪಾಕಿಸ್ತಾನ ಸೇನಾ ಮುಖ್ಯಸ್ಥ ಜನರಲ್‌ ಕ್ಯುಮರ್‌ ಜಾವೇದ್‌ ಬಾಜ್ವಾ ಅವರಿಗೆ ನಿರಾಸೆಯಾಗಿದೆ.
Vijaya Karnataka Web Pakistan Military Chief


ಭೇಟಿ ಸಾಧ್ಯವಿಲ್ಲ ಎಂದ ಎಂಬಿಎಸ್‌ ತಮ್ಮ ಪರವಾಗಿ ಉಪ ರಕ್ಷಣಾ ಸಚಿವ ಮತ್ತು ತಮ್ಮ ಕಿರಿಯ ಸೋದರ ಶೇಖ್‌ ಖಾಲಿದ್‌ ಬಿನ್‌ ಸಲ್ಮಾನ್‌ ಅವರೊಂದಿಗೆ ಚರ್ಚೆ ನಡೆಸಿದರೆ ಸಾಕು ಎಂದು ಸಂದೇಶ ರವಾನಿಸಿದ್ದಾರೆ. ಇದರಿಂದಾಗಿ ಇಮ್ರಾನ್‌ ಖಾನ್‌ ಅವರು ಕಳುಹಿಸಿದ್ದ ಕ್ಷಮೆಯಾಚನೆ ಸಂದೇಶವನ್ನು ಕೂಡ ಜನರಲ್‌ ಬಾಜ್ವಾ ಅವರು ಎಂಬಿಎಸ್‌ಗೆ ನೇರವಾಗಿ ತಲುಪಿಸಲಾಗಿಲ್ಲ.

ಅಲ್ಲದೆ , ಬಾಜ್ವಾ ಜೊತೆ ಮಾತುಕತೆ ನಡೆಸಿದ ಸೌದಿ ಸಚಿವ ಶೇಖ್‌ ಖಾಲಿದ್‌ ಕೂಡ ಪಾಕ್‌ನ ಕ್ಷಮೆಯನ್ನು ಒಪ್ಪಲು ಸಾಧ್ಯವಿಲ್ಲ ಎಂದು ಖಾರವಾಗಿಯೇ ಪ್ರತಿಕ್ರಿಯಿಸಿದ್ದಾರೆ ಎನ್ನಲಾಗಿದೆ.

ಕ್ಷಮೆ ಯಾಕೆ

ಕಾಶ್ಮೀರ ವಿಷಯಕ್ಕೆ ಸಂಬಂಧಿಸಿದಂತೆ ಚರ್ಚೆಗಾಗಿ ತೈಲ ಉತ್ಪಾದಕ ರಾಷ್ಟ್ರಗಳ ವಿದೇಶಾಂಗ ಸಚಿವರ ಸಭೆ ಕರೆಯುವಂತೆ ಪಾಕಿಸ್ತಾನ ಒತ್ತಾಯಿಸಿತ್ತು. ಆದರೆ ಇದಕ್ಕೆ ಸೌದಿ ಅರೇಬಿಯಾ ಬಿಲ್‌ಕುಲ್‌ ಸಾಧ್ಯವಿಲ್ಲ ಎಂದಿತ್ತು.

ಈ ಬಗ್ಗೆ ಪಾಕಿಸ್ತಾನ ವಿದೇಶಾಂಗ ಸಚಿವ ಷಾ ಮೆಹಮೂದ್‌ ಖುರೇಷಿ ಕಟುವಾಗಿ ಪ್ರತಿಕ್ರಿಯಿಸಿ ಸೌದಿ ಯುವರಾಜ ಎಂಬಿಎಸ್‌ ಕೆಂಗಣ್ಣಿಗೆ ಗುರಿಯಾಗಿದ್ದಾರೆ. ಯುವರಾಜರ ಬಳಿ ಕ್ಷಮೆಯಾಚಿಸಿ ಸೌದಿ ಜತೆಗಿನ ಸಂಬಂಧ ಹಳಸದಂತೆ ನಿಭಾಯಿಸಲು ಪಾಕ್‌ ಪ್ರಧಾನಿ ಇಮ್ರಾನ್‌ ಖಾನ್‌ ಅವರು ಮಿಲಿಟರಿ ಮುಖ್ಯಸ್ಥ ಜನರಲ್‌ ಬಾಜ್ವಾ ಅವರನ್ನು ಸೌದಿ ಪ್ರವಾಸಕ್ಕೆ ಕಳುಹಿಸಿದ್ದಾರೆ.

ಬಾಜ್ವಾ ಜತೆಗೆ ಪಾಕಿಸ್ತಾನ ಕುಖ್ಯಾತ ಗುಪ್ತಚರ ವಿಭಾಗ ಐಎಸ್‌ಐನ ಮುಖ್ಯಸ್ಥ ಲೆ. ಜನರಲ್‌ ಫೈಜ್‌ ಹಮೀದ್‌ ಕೂಡ ಸೌದಿಯಲ್ಲಿದ್ದಾರೆ.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ