ಆ್ಯಪ್ನಗರ

ತಪ್ಪಿದ ಅನಾಹುತ: ವಿಮಾನ ಲ್ಯಾಂಡಿಂಗ್ ಮಾಡದೆ 37,000 ಅಡಿ ಎತ್ತರದಲ್ಲಿ ನಿದ್ರೆಗೆ ಜಾರಿದ ಪೈಲಟ್‌ಗಳು

Ethiopian Airlines: ವಿಮಾನ ಸುಮಾರು 37,000 ಕಿಮೀ ಎತ್ತರದಲ್ಲಿ ಹಾರಾಡುತ್ತಿದ್ದಾಗ ಪೈಲಟ್‌ಗಳು ಆಟೋ ಪೈಲಟ್ ವ್ಯವಸ್ಥೆ ಸೆಟ್ ಮಾಡಿ ನಿದ್ರೆಗೆ ಜಾರಿದ್ದಾರೆ. ತಾವು ಲ್ಯಾಂಡ್ ಮಾಡಬೇಕಿದ್ದ ವಿಮಾಣ ನಿಲ್ದಾಣವನ್ನು ದಾಟಿದ್ದರೂ ಅದು ಅವರಿಗೆ ಅರಿವಾಗಿರಲಿಲ್ಲ.

Edited byಅಮಿತ್ ಎಂ.ಎಸ್ | Vijaya Karnataka Web 19 Aug 2022, 3:20 pm

ಹೈಲೈಟ್ಸ್‌:

  • ನಿದ್ರೆಗೆ ಜಾರಿದ್ದ ಇಥಿಯೋಪಿಯನ್ ಏರ್‌ಲೈನ್ಸ್ ಪೈಲಟ್‌ಗಳು
  • ವಿಮಾನ ನಿಲ್ದಾಣದಲ್ಲಿ ಲ್ಯಾಂಡಿಂಗ್ ಮಾಡದೆ ವಿಮಾನ ಹಾರಾಟ
  • ಆಟೋಪೈಲಟ್ ವ್ಯವಸ್ಥೆ ಸ್ಥಗಿತಗೊಂಡ ಬಳಿಕ ಪೈಲಟ್‌ಗಳಿಗೆ ಎಚ್ಚರ
ಹೈಲೈಟ್ಸ್‌ ಮಾತ್ರವೇ ಓದಲು ಆ್ಯಪ್‌ ಡೌನ್‌ಲೋಡ್‌ ಮಾಡಿ
Vijaya Karnataka Web Flight
ಖಾರ್ಟೌಮ್: ಸೂಡಾನ್‌ನ ಖಾರ್ಟೌಮ್‌ನಿಂದ ಇಥಿಯೋಪಿಯಾ ರಾಜಧಾನಿ ಅಡ್ಡಿಸ್ ಅಬಬಾಗೆ ತೆರಳುತ್ತಿದ್ದ ಇಥಿಯೋಪಿಯನ್ ಏರ್‌ಲೈನ್ಸ್ ವಿಮಾನದ ಇಬ್ಬರು ನಿದ್ರೆಗೆ ಜಾರಿದ ವಿಚಿತ್ರ ಘಟನೆ ಸೋಮವಾರ ನಡೆದಿದೆ. ಇದರಿಂದ ಸಕಾಲಕ್ಕೆ ವಿಮಾನ ಲ್ಯಾಂಡ್ ಆಗಿಲ್ಲ.
ಇಟಿ343 ವಿಮಾನವು ವಿಮಾನ ನಿಲ್ದಾಣ ಸಮೀಪಿಸಿದರೂ ಅದು ಕೆಳಕ್ಕೆ ಇಳಿದಿರಲಿಲ್ಲ. ಕೂಡ ವಾಯು ಸಂಚಾರ ನಿಯಂತ್ರಣ (ಎಟಿಸಿ) ಅಲರ್ಟ್ ಘೋಷಣೆ ಮಾಡಿತ್ತು. ಇಬ್ಬರೂ ಪೈಲಟ್‌ಗಳು ಆಗಸದಲ್ಲಿ ಸುಖನಿದ್ರೆ ಮಾಡುತ್ತಿರುವಾಗ ಬೋಯಿಂಗ್ 737 ಆಟೋಪೈಲಟ್ ವ್ಯವಸ್ಥೆಯು ವಿಮಾನವನ್ನು ಸುಮಾರು 37,000 ಅಡಿ ಎತ್ತರದಲ್ಲಿ ಹಾರಿಸುವುದನ್ನು ಮುಂದುವರಿಸಿತ್ತು. ಬಳಿಕ ವಿಮಾನವು ಮುಂದಿನ ಹಾರಾಟಕ್ಕೆ ತೊಡಗುವ ಮುನ್ನ ಸುಮಾರು ಎರಡೂವರೆ ಗಂಟೆಗಳ ಕಾಲ ವಿಮಾನ ನಿಲ್ದಾಣದಲ್ಲಿಯೇ ಉಳಿಯುವಂತಾಗಿತ್ತು ಎಂದು ಏವಿಯೇಷನ್ ಹೆರಾಲ್ಡ್ ವರದಿ ಮಾಡಿದೆ.
Dubai-Bengaluru: ಜಗತ್ತಿನ ಅತಿ ದೊಡ್ಡ ಜಂಬೋ ಜೆಟ್ ಸ್ವಾಗತಕ್ಕೆ ಸನ್ನದ್ಧವಾಗಿದೆ ನಮ್ಮ ಬೆಂಗಳೂರು

ಪೈಲಟ್‌ಗಳನ್ನು ಸಂಪರ್ಕಿಸಲು ಎಟಿಸಿ ಅನೇಕ ಬಾರಿ ಪ್ರಯತ್ನ ಮಾಡಿತ್ತು. ಆದರೆ ಅದು ಸಫಲವಾಗಿರಲಿಲ್ಲ. ವಿಮಾನವು ಲ್ಯಾಂಡ್ ಆಗಬೇಕಾದ ರನ್‌ವೇಯನ್ನು ದಾಟಿ ಮುಂದೆ ಹೋದಾಗ ಆಟೋ ಪೈಲಟ್ ವ್ಯವಸ್ಥೆಯು ಕಡಿತಗೊಂಡಿದೆ. ಕೂಡಲೇ ಅದು ಎಚ್ಚರಿಕೆ ಗಂಟೆ ಮೊಳಗಿಸಿದೆ. ಇದರಿಂದ ಪೈಲಟ್‌ಗಳು ಎಚ್ಚರಗೊಂಡಿದ್ದಾರೆ.

ವಿಮಾನ ನಿಲ್ದಾಣಕ್ಕೆ ಸುತ್ತು ಹಾಕಿಸಿದ 25 ನಿಮಿಷಗಳ ಬಳಿಕ ಅವರು ರನ್‌ವೇನಲ್ಲಿ ವಿಮಾನ ಇಳಿಸಿದ್ದಾರೆ. ಅದೃಷ್ಟವಶಾತ್ ವಿಮಾನವು ಸುರಕ್ಷಿತವಾಗಿ ಕೆಳಕ್ಕಿಳಿದಿದ್ದು, ಯಾವುದೇ ಹಾನಿ ಉಂಟಾಗಿಲ್ಲ. ಈ ಬಗ್ಗೆ ತನಿಖೆಗೆ ಆದೇಶಿಸಲಾಗಿದೆ.
12 ಮಂದಿ ಪ್ರಯಾಣಿಕರನ್ನು ಹೊತ್ತು ಹೈದರಾಬಾದ್‌ನಿಂದ ಹೊರಟಿದ್ದ ವಿಮಾನ ಕರಾಚಿಯಲ್ಲಿ ತುರ್ತು ಲ್ಯಾಂಡಿಂಗ್

ಮೇ ತಿಂಗಳಲ್ಲಿ ಇದೇ ರೀತಿಯ ಘಟನೆ ನಡೆದಿತ್ತು. ನ್ಯೂಯಾರ್ಕ್‌ನಿಂದ ರೋಮ್‌ಗೆ ತೆರಳುತ್ತಿದ್ದ ವಿಮಾನವು 38,000 ಕಿಮೀ ಎತ್ತರದಲ್ಲಿದ್ದಾಗ ಇಬ್ಬರು ಪೈಲಟ್‌ಗಳು ನಿದ್ರೆಗೆ ಜಾರಿದ್ದರು. ಐಟಿಎ ಏರ್‌ವೇಸ್‌ನ ಪೈಲಟ್‌ಗಳು ಫ್ರಾನ್ಸ್ ಮೇಲೆ ವಿಮಾನ ಹಾರುವಾಗ ನಿದ್ರಿಸುತ್ತಿದ್ದರು ಎನ್ನುವುದು ತನಿಖೆ ಬಳಿಕ ಖಚಿತವಾಗಿತ್ತು.
ಲೇಖಕರ ಬಗ್ಗೆ
ಅಮಿತ್ ಎಂ.ಎಸ್
ವಿಜಯ ಕರ್ನಾಟಕದ ಡಿಜಿಟಲ್ ವಿಭಾಗದಲ್ಲಿ ಪತ್ರಕರ್ತ. 2009ರಿಂದ ಪತ್ರಿಕೋದ್ಯಮದಲ್ಲಿ ಸಕ್ರಿಯವಾಗಿದ್ದಾರೆ. ದಿನಪತ್ರಿಕೆಗಳು ಮತ್ತು ವೆಬ್‌ ಪೋರ್ಟಲ್‌ಗಳಲ್ಲಿ ವರದಿಗಾರಿಕೆ, ಸಿನಿಮಾ ವರದಿಗಾರಿಕೆ, ಡೆಸ್ಕ್ ಹಾಗೂ ಜಿಲ್ಲಾ ಕರೆಸ್ಪಾಂಡೆಂಟ್ ಆಗಿ ಕೆಲಸ ಮಾಡಿದ ಅನುಭವ ಇವರಿಗಿದೆ. ರಾಷ್ಟ್ರೀಯ ಹಾಗೂ ಅಂತಾರಾಷ್ಟ್ರೀಯ ಸುದ್ದಿಗಳು ಪ್ರಮುಖ ಆಸಕ್ತಿಯ ವಿಭಾಗಗಳು. ಮಾನವಾಸಕ್ತಿಯ ಹಾಗೂ ಸ್ಫೂರ್ತಿದಾಯಕ ಕಥನಗಳನ್ನು ನಿರೂಪಿಸುವುದು ವೃತ್ತಿಯಲ್ಲಿನ ನೆಚ್ಚಿನ ಸಂಗತಿ. ಪ್ರವಾಸ, ಕ್ರಿಕೆಟ್, ಓದು, ಕೃಷಿ ಇತರೆ ಇವರ ಆಸಕ್ತಿ ಮತ್ತು ಹವ್ಯಾಸಗಳು.... ಇನ್ನಷ್ಟು ಓದಿ

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ