ಆ್ಯಪ್ನಗರ

ಉಗ್ರ ಪೋಷಕ ಪಾಕಿಸ್ತಾನದ ಜತೆ ಮೈತ್ರಿ ಸಾಧ್ಯವೇ ಇಲ್ಲ: ಜೈಶಂಕರ್‌ ಖಡಕ್‌ ಹೇಳಿಕೆ

​​ಏಷ್ಯಾ ಸೊಸೈಟಿ ಆಯೋಜಿ­ಸಿದ್ದ ಆನ್‌ಲೈನ್‌ ಕಾರ್ಯಕ್ರಮ­ವೊಂದರಲ್ಲಿ ಪಾಲ್ಗೊಂಡು ಮಾತನಾಡಿದ ಜೈಶಂಕರ್‌, ''ಈಗಲೂ ಭಯೋತ್ಪಾದನೆಯನ್ನು ಪಾಕಿಸ್ತಾನ ಎಗ್ಗಿಲ್ಲದೆ ಸಮರ್ಥಿಸಿಕೊಳ್ಳುತ್ತಿದೆ. ಅದು ತನ್ನ ನೀತಿಯ ಭಾಗ ಎನ್ನುವಂತೆ ಬಿಂಬಿಸುತ್ತಿದೆ. ಬಹಿರಂಗವಾಗಿಯೇ ಉಗ್ರರಿಗೆ ಆಶ್ರಯ ನೀಡಿ ಲಜ್ಜೆಗೇಡಿತನ ಮೆರೆದಿದೆ. ಇದರಿಂದಾಗಿ ನಾವು ಎಷ್ಟೇ ಪ್ರಯತ್ನ ಪಟ್ಟರೂ ಆ ದೇಶದೊಂದಿಗೆ ಸಹಜ ಸಂಬಂಧ ಸ್ಥಾಪಿಸಲು ಸಾಧ್ಯವಾಗುತ್ತಿಲ್ಲ.

Vijaya Karnataka Web 17 Oct 2020, 11:52 am
ನ್ಯೂಯಾರ್ಕ್: ಭಯೋತ್ಪಾದನೆಯನ್ನು ಬಹಿರಂಗವಾಗಿ ಸಮರ್ಥಿಸಿಕೊಳ್ಳುವ ಕೆಟ್ಟ ಚಾಳಿಯನ್ನು ಪಾಕಿಸ್ತಾನ ಸರಕಾರ ಈಗಲೂ ಮುಂದುವರಿಸಿದೆ. ಈ ಕೆಟ್ಟ ನಡತೆಯಿಂದಾಗಿಯೇ ಆ ದೇಶದ ಜತೆ ಸಹಜ ಸಂಬಂಧ ಹೊಂದುವುದು ಭಾರತಕ್ಕೆ ಕಷ್ಟವಾಗಿದೆ ಎಂದು ವಿದೇಶಾಂಗ ಸಚಿವ ಎಸ್‌.ಜೈಶಂಕರ್‌ ಶುಕ್ರವಾರ ಹೇಳಿದ್ದಾರೆ.
Vijaya Karnataka Web Imran Khan


ಏಷ್ಯಾ ಸೊಸೈಟಿ ಆಯೋಜಿ­ಸಿದ್ದ ಆನ್‌ಲೈನ್‌ ಕಾರ್ಯಕ್ರಮ­ವೊಂದರಲ್ಲಿ ಪಾಲ್ಗೊಂಡು ಮಾತನಾಡಿದ ಜೈಶಂಕರ್‌, ''ಈಗಲೂ ಭಯೋತ್ಪಾದನೆಯನ್ನು ಪಾಕಿಸ್ತಾನ ಎಗ್ಗಿಲ್ಲದೆ ಸಮರ್ಥಿಸಿಕೊಳ್ಳುತ್ತಿದೆ. ಅದು ತನ್ನ ನೀತಿಯ ಭಾಗ ಎನ್ನುವಂತೆ ಬಿಂಬಿಸುತ್ತಿದೆ. ಬಹಿರಂಗವಾಗಿಯೇ ಉಗ್ರರಿಗೆ ಆಶ್ರಯ ನೀಡಿ ಲಜ್ಜೆಗೇಡಿತನ ಮೆರೆದಿದೆ. ಇದರಿಂದಾಗಿ ನಾವು ಎಷ್ಟೇ ಪ್ರಯತ್ನ ಪಟ್ಟರೂ ಆ ದೇಶದೊಂದಿಗೆ ಸಹಜ ಸಂಬಂಧ ಸ್ಥಾಪಿಸಲು ಸಾಧ್ಯವಾಗುತ್ತಿಲ್ಲ.

ನಾವು ಸುಲಭ ವೀಸಾ ಸಂಬಂಧವನ್ನು ಕೂಡ ಹೊಂದಿಲ್ಲ, ವೀಸಾ ವಿಷಯದಲ್ಲಿಅವರ ನಿರ್ಬಂಧಗಳು ನೂರಾರು. ಭಾರತ- ಅಫಘಾನಿಸ್ತಾನದ ಸಂಪರ್ಕಕ್ಕೂ ಅವರು ಮುಳ್ಳಾಗಿ ಕಾಡುತ್ತಿದ್ದಾರೆ. ಸಾಮಾನ್ಯ ನೆರೆ ಹೊರೆಯವರ ನಡುವೆ ಸುಗಮ ವೀಸಾ ನಿಯಮಗಳಿರುತ್ತವೆ. ವ್ಯಾಪಾರ ವಹಿವಾಟು ನಡೆಯುತ್ತದೆ. ಆದರೆ ಪಾಕಿಸ್ತಾನದ ಜತೆಗೆ ನಮಗೆ ಇದ್ಯಾವುದೂ ಸಾಧ್ಯವಿಲ್ಲ. ಅಭಿವೃದ್ಧಿ ಹೀನ ಪಾಕಿಸ್ತಾನ, ಭಯೋತ್ಪಾದನೆಯನ್ನು ನೆಚ್ಚಿ ಕುಳಿತಿದೆ. ಇದರಿಂದ ಎಲ್ಲರ ನೆಮ್ಮದಿಯೂ ಹಾಳಾಗುತ್ತಿದೆ,'' ಎಂದು ಕಿಡಿಕಾರಿದರು.

''ನಾವು ಪಾಕಿಸ್ತಾನ­ದೊಂದಿಗೆ ಹೇಗೆ ಇದ್ದೇವೆ ಎಂಬುದಾಗಿ ನೀವು ಪ್ರಶ್ನಿಸು­ತ್ತೀರಿ. ಹೌದು, ಆತಂಕ­ದಿಂದಲೇ ನಾವು ಆ ದೇಶದ ಜತೆ ಕನಿಷ್ಠ ವ್ಯವಹಾರ ಇಟ್ಟುಕೊಂಡಿದ್ದೇವೆ. ನೂರಾರು ಸಮಸ್ಯೆಗಳ ಹೂಳಲ್ಲಿ ಪಾಕ್‌ ಹೂತು ಹೋಗಿದೆ. ದೀರ್ಘಕಾಲೀನ ಹಲವು ಸಮಸ್ಯೆಗಳು ಅಲ್ಲಿ ಜೀವಂತವಾಗಿವೆ. ಭಯೋತ್ಪಾದನೆಯೂ ಅವುಗಳಲ್ಲಿಒಂದು,'' ಎಂದರು.

ಜಮ್ಮು-ಕಾಶ್ಮೀರದ ವಿಭಜನೆ ಕುರಿತು ಕೇಳಿದ ಪ್ರಶ್ನೆಗೆ ನೇರ ಉತ್ತರ ನೀಡಿದ ಜೈಶಂಕರ್‌, ''ಭಾರತದ ಬಾಹ್ಯ ಗಡಿಗಳು ಬದಲಾಗಿಲ್ಲ. ಬಾಹ್ಯ ಗಡಿಗಳು ಐದು ವರ್ಷಗಳ ಹಿಂದೆ ಅಥವಾ 20 ವರ್ಷಗಳ ಹಿಂದೆ, 40 ವರ್ಷಗಳ ಹಿಂದೆ ಹೇಗೆ ಇದ್ದವೋ ಇವತ್ತಿಗೂ ಹಾಗೇ ಇವೆ. ಯಾರ ಗಡಿಯನ್ನೂ ನಾವು ಆಕ್ರಮಿಸಿ ರಾಜ್ಯ ನಿರ್ಮಿಸಿಲ್ಲ,'' ಎಂದರು.''ಬಾಹ್ಯ ಗಡಿಗಳನ್ನು ಬದಲಿಸದೇ ಆಡಳಿತಾತ್ಮಕವಾಗಿ ಮರು ವಿಂಗಡಣೆ ಮಾಡಿಕೊಳ್ಳುವುದು ಯಾವುದೇ ದೇಶದ ಆಂತರಿಕ ವಿಚಾರವಾಗಿದೆ,'' ಎಂದು ಲಡಾಕ್‌, ಜಮ್ಮು-ಕಾಶ್ಮೀರ ಕೇಂದ್ರಾಡಳಿತ ರಚನೆಯನ್ನು ಸಚಿವ ಜೈಶಂಕರ್‌ ಅವರು ಸಮರ್ಥಿಸಿಕೊಂಡರು.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ