ಆ್ಯಪ್ನಗರ

ಭಾರತದ ಪ್ರತೀಕಾರ ಕ್ರಮದ ಭಯ: ಗಡಿಯಲ್ಲಿ ಪಾಕ್ ಯುದ್ಧ ವಿಮಾನಗಳ ಹಾರಾಟ!

ಹಂದ್ವಾರಾ ಎನ್‌ಕೌಂಟರ್‌ಗೆ ಪ್ರತಿಯಾಗಿ ಭಾರತದಿಂದ ಪ್ರತೀಕಾರದ ಕ್ರಮ ಎದುರಾಗಬಹುದು ಎಂಬ ಭಯದಲ್ಲೇ ದಿನದೂಡುತ್ತಿರುವ ಪಾಕಿಸ್ತಾನ, ಗಡಿಯಲ್ಲಿ ಯುದ್ಧ ವಿಮಾನಗಳ ಹಾರಾಟವನ್ನು ದ್ವಿಗುಣಗೊಳಿಸಿದೆ. ಭಾರತದ ಚಲನವಲನಗಳ ಮೇಲೆ ನಿಗಾವಹಿಸುವುದು ಪಾಕಿಸ್ತಾನದ ಇರಾದೆಯಾಗಿದೆ.

Vijaya Karnataka Web 10 May 2020, 4:53 pm
ಇಸ್ಲಾಮಾಬಾದ್: ಜಮ್ಮು ಮತ್ತು ಕಾಶ್ಮೀರದ ಹಂದ್ವಾರಾ ಎನ್‌ಕೌಂಟರ್ ಬಳಿಕ ಭಾರತದಿಂದ ಪ್ರತೀಕಾರದ ಕ್ರಮ ಎದುರಾಗಬಹುದು ಎಂದು ಬೆದರಿರುವ ಪಾಕಿಸ್ತಾನ, ಗಡಿಯಲ್ಲಿ ಯುದ್ಧ ವಿಮಾನಗಳ ಹಾರಾಟವನ್ನು ಹೆಚ್ಚಿಸಿದೆ.
Vijaya Karnataka Web Pakistan Air Force
ಸಂಗ್ರಹ ಚಿತ್ರ


ಹೌದು, ಹಂದ್ವಾರಾ ಎನ್‌ಕೌಂಟರ್ ಬಳಿಕ ಭಾರತ ಪ್ರತೀಕಾರದ ಕ್ರಮಕ್ಕೆ ಮುಂದಾದರೆ ಕಷ್ಟ ಎಂದು ಅರಿತಿರುವ ಪಾಕಿಸ್ತಾನ, ಈ ನಿಟ್ಟಿನಲ್ಲಿ ಗಡಿಯಲ್ಲಿ ತೀವ್ರ ಕಟ್ಟೆಚ್ಚರವಹಿಸಿದೆ. ಗಡಿಯಲ್ಲಿ ಹೆಚ್ಚಿನ ಕಣ್ಗಾವಲು ಇಡುವಂತೆ ವಾಯುಸೇನೆಗೆ ಸೂಚಿಸಲಾಗಿದ್ದು, ಪಾಕ್ ಯುದ್ಧ ವಿಮಾನಗಳು ಗಡಿಯಲ್ಲಿ ಹೆಚ್ಚಿನ ಪ್ರಮಾಣದಲ್ಲಿ ಹಾರಾಟ ನಡೆಸಿವೆ.


ಪಾಕಿಸ್ತಾನ ವಾಯುಸೇನೆಯ ಜೆಟ್ ವಿಮಾನಗಳು ಗಡಿಯಲ್ಲಿ ಹಾರಾಟ ನಡೆಸುತ್ತಿದ್ದು, ತೀವ್ರ ಕಟ್ಟೆಚ್ಚರವಹಿಸಿವೆ. ಭಾರತದ ಪ್ರತೀಕಾರದ ಕ್ರಮಕ್ಕೆ ಬೆದರಿರುವ ಪಾಕಿಸ್ತಾನ ಗಡಿಯಲ್ಲಿ ಕಟ್ಟೆಚ್ಚರವಹಿಸಿರುವುದು ಸ್ಪಷ್ಟ ಎಂದು ಭಾರತೀಯ ಸೇನೆಯ ಮೂಲಗಳು ತಿಳಿಸಿವೆ.

ಉಗ್ರರ ಪಾಲಿನ ದುಸ್ವಪ್ನ ಹುತಾತ್ಮ ಕರ್ನಲ್ ಅಶುತೋಷ್: ವೀರರ ಬಲಿದಾನ ವ್ಯರ್ಥವಾಗಲು ಬಿಡಲ್ಲ ಎಂದ ಪ್ರಧಾನಿ!

ಇನ್ನು ಪಾಕಿಸ್ತಾನದ ಈ ನಡೆಯನ್ನು ಸೂಕ್ಷ್ಮವಾಗಿ ಗಮನಿಸುತ್ತಿರುವ ಭಾರತೀಯ ಸೇನೆ, ಪಾಕ್ ವಾಯುಸೇನೆಯ ಚಲನವಲನಗಳ ಮೇಲೆ ನಿಗಾ ಇಡಲಾಗಿದೆ ಎಂದು ಸ್ಪಷ್ಟಪಡಿಸಿದೆ.

ಕಳೆದ ಮೇ03 ರಂದು ಜಮ್ಮು ಮತ್ತು ಕಾಶ್ಮೀರದ ಹಂದ್ವಾರಾದಲ್ಲಿ ನಡೆದ ಉಗ್ರರ ವಿರುದ್ಧದ ಕಾರ್ಯಾಚರಣೆಯಲ್ಲಿ ಭಾರತೀಯ ಸೇನೆಯ ಕರ್ನಲ್ ಅಶುತೋಷ್ ಶರ್ಮಾ, ಮೇಜರ್ ಅನುಜ್ ಸೂದ್ ಸೇರಿದಂತೆ ಐವರು ಭಾರತೀಯ ಸೈನಿಕರು ಹುತಾತ್ಮರಾಗಿದ್ದನ್ನು ಇಲ್ಲಿ ಸ್ಮರಿಸಬಹುದು.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ