ಆ್ಯಪ್ನಗರ

ಬ್ರೆಜಿಲ್‌ನಲ್ಲಿ ಅಣೆಕಟ್ಟೆ ಒಡೆದು ಒಂಬತ್ತು ಮಂದಿ ಜಲಸಮಾಧಿ

ಬ್ರೆಜಿಲ್‌ನ ದೈತ್ಯ ಗಣಿಗಾರಿಕಾ ಸಂಸ್ಥೆ 'ವೇಲ್‌' ಒಡೆತನದ ಕಬ್ಬಿಣದ ಅದಿರಿನ ಗಣಿ ಪಕ್ಕವೇ ಅಣೆಕಟ್ಟೆ ಇದೆ. ಏಕಾಏಕಿ ನುಗ್ಗಿದ ನೀರಿನ ರಭಸಕ್ಕೆ ವೇಲ್‌ನ ಅಡಳಿತ ಕಚೇರಿ ಸಿಬ್ಬಂದಿ, ಗಣಿ ಕಾರ್ಮಿಕರು ಹಾಗೂ ಸ್ಥಳೀಯರು ನೀರಿನಲ್ಲಿ ಕೊಚ್ಚಿ ಹೋಗಿದ್ದಾರೆ.

Vijaya Karnataka 27 Jan 2019, 5:00 am
ಬ್ರುಮಾಡಿನೊ: ಬ್ರೆಜಿಲ್‌ನ ಕಬ್ಬಿಣದ ಅದಿರು ಗಣಿಯೊಂದರ ಪಕ್ಕ ಇದ್ದ ಅಣೆಕಟ್ಟೆ ಒಡೆದ ಪರಿಣಾಮ ಒಂಬತ್ತು ಮಂದಿ ಜಲಸಮಾಧಿಯಾಗಿದ್ದು, ಸುಮಾರು 300 ಜನರು ನಾಪತ್ತೆಯಾಗಿದ್ದಾರೆ.
Vijaya Karnataka Web fears rise for 300 missing in brazil dam disaster 9 bodies recovered
ಬ್ರೆಜಿಲ್‌ನಲ್ಲಿ ಅಣೆಕಟ್ಟೆ ಒಡೆದು ಒಂಬತ್ತು ಮಂದಿ ಜಲಸಮಾಧಿ


ಮಿನಾಸ್‌ ಗೆರೈಸ್‌ ರಾಜ್ಯದ ಬೆಲೊ ಹಾರಿಜಾಂಟೆ ನಗರದ ಬಳಿ ಇರುವ ಈ ಅಣೆಕಟ್ಟೆ ಸ್ಥಳೀಯ ಕಾಲಮಾನ ಶುಕ್ರವಾರ ಮಧ್ಯಾಹ್ನ 1 ಗಂಟೆಗೆ ಒಡೆದಿದೆ. ಬ್ರೆಜಿಲ್‌ನ ದೈತ್ಯ ಗಣಿಗಾರಿಕಾ ಸಂಸ್ಥೆ 'ವೇಲ್‌' ಒಡೆತನದ ಕಬ್ಬಿಣದ ಅದಿರಿನ ಗಣಿ ಪಕ್ಕವೇ ಅಣೆಕಟ್ಟೆ ಇದೆ. ಏಕಾಏಕಿ ನುಗ್ಗಿದ ನೀರಿನ ರಭಸಕ್ಕೆ ವೇಲ್‌ನ ಅಡಳಿತ ಕಚೇರಿ ಸಿಬ್ಬಂದಿ, ಗಣಿ ಕಾರ್ಮಿಕರು ಹಾಗೂ ಸ್ಥಳೀಯರು ನೀರಿನಲ್ಲಿ ಕೊಚ್ಚಿ ಹೋಗಿದ್ದಾರೆ. ದುರಂತ ನಡೆದ ಸಮಯದಲ್ಲಿ 427 ಕಾರ್ಮಿಕರು ಗಣಿಯಲ್ಲಿ ಕೆಲಸ ಮಾಡುತ್ತಿದ್ದರು. ಈ ಪೈಕಿ 279 ಮಂದಿ ಸುರಕ್ಷಿತವಾಗಿದ್ದು, ಉಳಿದವರು ಕಾಣೆಯಾಗಿದ್ದಾರೆ. ಶುಕ್ರವಾರ ಏಳು ಮೃತದೇಹಗಳು ಪತ್ತೆಯಾಗಿದ್ದು, ಶನಿವಾರ ಮತ್ತೆರಡು ಶವಗಳು ಪತ್ತೆಯಾಗಿವೆ. ಕಾಣೆಯಾಗಿರುವ 300ಕ್ಕೂ ಹೆಚ್ಚು ಜನರ ಶೋಧಕ್ಕೆ ಹೆಲಿಕಾಪ್ಟರ್‌ಗಳ ಸಹಾಯ ಪಡೆಯಲಾಗಿದೆ.

ಗಣಿಗಾರಿಕೆಯೇ ದುರ್ಘಟನೆಗೆ ಕಾರಣ ಎಂದು ಪರಿಸರವಾದಿಗಳು ಆರೋಪಿಸಿದ್ದಾರೆ. ''ಇದು ಆಕಸ್ಮಿಕ ಅಪಘಾತ ಅಲ್ಲ. ಬ್ರೆಜಿಲ್‌ ಸರಕಾರ ಮತ್ತು ಗಣಿಗಾರಿಕೆ ಕಂಪೆನಿಗಳು ಪಾಠ ಕಲಿಯದೇ ಇರುವುದರ ಪರಿಣಾಮ ಇದು. ಪರಿಸರ ಅಪರಾಧಗಳ ಕುರಿತು ತನಿಖೆ ನಡೆಸಿ ತಪ್ಪಿತಸ್ಥರನ್ನು ಶಿಕ್ಷೆಗೆ ಗುರಿಪಡಿಸಬೇಕು,'' ಎಂದು ಗ್ರೀನ್‌ಪೀಸ್‌ ಸಂಸ್ಥೆ ಆಗ್ರಹಿಸಿದೆ.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ