ನ್ಯೂಯಾರ್ಕ್: ಅಮೆರಿಕದ ಇಂಡಿಯಾನ ಪೊಲೀಸ್ನಲ್ಲಿ ದುಷ್ಕರ್ಮಿಯೊಬ್ಬ ನಡೆಸಿದ ಗುಂಡಿನ ದಾಳಿಯಲ್ಲಿ 8 ಮಂದಿ ಮೃತಪಟ್ಟಿದ್ದಾರೆ. ದುರ್ಘಟನೆಯಲ್ಲಿ ಹಲವರು ಗಾಯಗೊಂಡಿದ್ದು, ದಾಳಿ ನಡೆಸಿದ ದುಷ್ಕರ್ಮಿ ಕೂಡ ತನಗೆ ತಾನೇ ಗುಂಡಿಕ್ಕಿಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾನೆ. ಇನ್ನು ಎಂಟು ಮಂದಿ ಪೈಕಿ ಭಾರತೀಯ ಮೂಲದ ನಾಲ್ವರು ಸಿಖ್ ಸಮುದಾಯದವರು ಮೃತಪಟ್ಟಿದ್ದಾರೆ. ವಿಮಾನ ನಿಲ್ದಾಣ ಬಳಿಯ ಫೆಡ್ಎಕ್ಸ್ ಕೇಂದ್ರದ ಮೃತಪಟ್ಟವರೆಲ್ಲ ಕಾರ್ಯನಿರ್ವಹಿಸುತ್ತಿದ್ದರು ಎಂದು ತಿಳಿದುಬಂದಿದೆ. ಮೂಲಗಳ ಪ್ರಕಾರ ಭಾರತದಿಂದ ಬರುವ ಸಿಖ್ಖರಿಗೆ ಮಾಹಿತಿ ನೀಡುವ ಕೆಲಸವನ್ನು ಫೆಡ್ಎಕ್ಸ್ ಕಂಪನಿ ಮೂಲಕ ಮೃತಪಟ್ಟ ವ್ಯಕ್ತಿಗಳು ಮಾಡುತ್ತಿದ್ದರು.
ಅಮೆರಿಕಗೆ ಬರುವ ಕೆಲ ಸಿಖ್ಖರಿಗೆ ಇಂಗ್ಲೀಷ್ ಬರೋದಿಲ್ಲ, ಅಲ್ಲದೇ ಸ್ಥಳದ ಬಗ್ಗೆ ಅರಿವು ಇರುವುದಿಲ್ಲ ಈ ನಿಟ್ಟಿನಲ್ಲಿ ಇವರೆಲ್ಲ ಕೆಲಸ ಮಾಡುತ್ತಿದ್ದರು. ಇನ್ನು ಈ ಬಗ್ಗೆ ಪ್ರತಿಕ್ರಿಯೆ ನೀಡಿರುವ ಭಾರತೀಯ ವಿದೇಶಾಂಗ ಸಚಿವಾಲಯ, ಇಂಡಿಯಾನಾಪೊಲಿಸ್ನ ಫೆಡ್ಎಕ್ಸ್ನಲ್ಲಿ ನಡೆದ ಘಟನೆ ತೀವ್ರ ಆಘಾತ ಉಂಟುಮಾಡಿದೆ.
ಸಾವನಪ್ಪಿರುವವರ ಪೈಕಿ ಭಾರತ ಮೂಲದ ಅಮೆರಿಕನ್ ಸಿಖ್ ಸಮುದಾಯದ ವ್ಯಕ್ತಿಗಳು ಸೇರಿದ್ದಾರೆ. ಚಿಕಾಗೋದ ನಮ್ಮ ರಾಯಬಾರಿ ಮೇಯರ್ ಅವರೊಂದಿಗೆ ಸಂಪರ್ಕದಲ್ಲಿದ್ದಾರೆ. ಇಂಡಿಯಾನಾಪೊಲಿಸ್ನ ಸ್ಥಳೀಯ ಅಧಿಕಾರಿಗಳು ಮತ್ತು ಸಮುದಾಯದ ಮುಖಂಡರು ಸಾಧ್ಯವಿರುವ ಎಲ್ಲ ಸಹಾಯವನ್ನು ಸಂತ್ರಸ್ತರಿಗೆ ನೀಡಲಿದ್ದಾರೆ ಎಂದು ತಿಳಿಸಿದೆ.ಇನ್ನು ಗುಂಡಿನ ದಾಳಿಯಲ್ಲಿ ಭಾರತೀಯ ಮೂಲದ ಹರ್ಪ್ರೀತ್ ಗಿಲ್ ಗಾಯಗೊಂಡಿದ್ದು ಸದ್ಯ ಚಿಕಿತ್ಸೆ ಪಡೆಯುತ್ತಿದ್ದಾರೆ ಎಂದು ವಿದೇಶಾಂಗ ಇಲಾಖೆ ತಿಳಿಸಿದೆ. ಅವರಿಗೆ ತಲೆಗೆ ಗುಂಡು ತಗುಲಿದೆ ಎಂದು ಇಲಾಖೆ ಮಾಹಿತಿ ನೀಡಿದೆ.
ನಡೆದಿದ್ದು ಏನು?
ವಿಮಾನ ನಿಲ್ದಾಣ ಬಳಿಯ ಫೆಡ್ಎಕ್ಸ್ ಕೇಂದ್ರದೊಳಗೆ ರೈಫಲ್ ಹಿಡಿದು ಬಂದ ವ್ಯಕ್ತಿಯೊಬ್ಬ ಏಕಾಏಕಿ ಗುಂಡಿನ ಸುರಿಮಳೆಗೈದಿದ್ದಾನೆ. ಘಟನೆಯಲ್ಲಿ ಎಂಟು ಮಂದಿ ಸಾವನಪ್ಪಿದ್ದಾರೆ. ಕೆಲವರಿಗೆ ಗಾಯಗಳಾಗಿದೆ. ನಂತರ ಆತನೂ ಆತ್ಮಹತ್ಯೆ ಮಾಡಿಕೊಂಡಿದ್ದಾನೆ. ಇನ್ನು ಈತ ಫೆಡ್ಎಕ್ಸ್ ಕೇಂದ್ರದ ಮಾಜಿ ಉದ್ಯೋಗಿ ಎಂದು ತಿಳಿದುಬಂದಿದೆ.
ಪೂರ್ವಪರ ದ್ವೇಷದಿಂದ ಈ ರೀತಿ ಮಾಡಿರಬಹುದು ಎಂದು ಅಂದಾಜಿಸಲಾಗಿದೆ. ಇಂಡಿಯಾನ-ಪೊಲೀಸ್ ರಾಜ್ಯದಲ್ಲಿಈ ವರ್ಷ ಜರುಗಿದ ಮೂರನೇ ಸಾಮೂಹಿಕ ಗುಂಡಿನ ದಾಳಿ ಇದಾಗಿದೆ. ಕಳೆದ ತಿಂಗಳು ಅಟ್ಲಾಂಟಾ ಪ್ರದೇಶದಲ್ಲಿನಡೆದ ಶೂಟಿಂಗ್ನಲ್ಲಿ8 ಮಂದಿ ಮೃತರಾಗಿ-ದ್ದರು. ಜನವರಿಯಲ್ಲಿಮನೆಯೊಂದರಲ್ಲಿವಾದ-ವಿವಾದ-ದಿಂದಾಗಿ ಉಂಟಾದ ಘರ್ಷಣೆ ವೇಳೆ ನಡೆದ ಗುಂಡಿನ ದಾಳಿಯಲ್ಲಿಗರ್ಭಿಣಿ ಮಹಿಳೆ ಸಮೇತ ಐವರು ಮೃತಪಟ್ಟಿದ್ದರು.
ಅಮೆರಿಕಗೆ ಬರುವ ಕೆಲ ಸಿಖ್ಖರಿಗೆ ಇಂಗ್ಲೀಷ್ ಬರೋದಿಲ್ಲ, ಅಲ್ಲದೇ ಸ್ಥಳದ ಬಗ್ಗೆ ಅರಿವು ಇರುವುದಿಲ್ಲ ಈ ನಿಟ್ಟಿನಲ್ಲಿ ಇವರೆಲ್ಲ ಕೆಲಸ ಮಾಡುತ್ತಿದ್ದರು. ಇನ್ನು ಈ ಬಗ್ಗೆ ಪ್ರತಿಕ್ರಿಯೆ ನೀಡಿರುವ ಭಾರತೀಯ ವಿದೇಶಾಂಗ ಸಚಿವಾಲಯ, ಇಂಡಿಯಾನಾಪೊಲಿಸ್ನ ಫೆಡ್ಎಕ್ಸ್ನಲ್ಲಿ ನಡೆದ ಘಟನೆ ತೀವ್ರ ಆಘಾತ ಉಂಟುಮಾಡಿದೆ.
ಸಾವನಪ್ಪಿರುವವರ ಪೈಕಿ ಭಾರತ ಮೂಲದ ಅಮೆರಿಕನ್ ಸಿಖ್ ಸಮುದಾಯದ ವ್ಯಕ್ತಿಗಳು ಸೇರಿದ್ದಾರೆ. ಚಿಕಾಗೋದ ನಮ್ಮ ರಾಯಬಾರಿ ಮೇಯರ್ ಅವರೊಂದಿಗೆ ಸಂಪರ್ಕದಲ್ಲಿದ್ದಾರೆ. ಇಂಡಿಯಾನಾಪೊಲಿಸ್ನ ಸ್ಥಳೀಯ ಅಧಿಕಾರಿಗಳು ಮತ್ತು ಸಮುದಾಯದ ಮುಖಂಡರು ಸಾಧ್ಯವಿರುವ ಎಲ್ಲ ಸಹಾಯವನ್ನು ಸಂತ್ರಸ್ತರಿಗೆ ನೀಡಲಿದ್ದಾರೆ ಎಂದು ತಿಳಿಸಿದೆ.ಇನ್ನು ಗುಂಡಿನ ದಾಳಿಯಲ್ಲಿ ಭಾರತೀಯ ಮೂಲದ ಹರ್ಪ್ರೀತ್ ಗಿಲ್ ಗಾಯಗೊಂಡಿದ್ದು ಸದ್ಯ ಚಿಕಿತ್ಸೆ ಪಡೆಯುತ್ತಿದ್ದಾರೆ ಎಂದು ವಿದೇಶಾಂಗ ಇಲಾಖೆ ತಿಳಿಸಿದೆ. ಅವರಿಗೆ ತಲೆಗೆ ಗುಂಡು ತಗುಲಿದೆ ಎಂದು ಇಲಾಖೆ ಮಾಹಿತಿ ನೀಡಿದೆ.
ನಡೆದಿದ್ದು ಏನು?
ವಿಮಾನ ನಿಲ್ದಾಣ ಬಳಿಯ ಫೆಡ್ಎಕ್ಸ್ ಕೇಂದ್ರದೊಳಗೆ ರೈಫಲ್ ಹಿಡಿದು ಬಂದ ವ್ಯಕ್ತಿಯೊಬ್ಬ ಏಕಾಏಕಿ ಗುಂಡಿನ ಸುರಿಮಳೆಗೈದಿದ್ದಾನೆ. ಘಟನೆಯಲ್ಲಿ ಎಂಟು ಮಂದಿ ಸಾವನಪ್ಪಿದ್ದಾರೆ. ಕೆಲವರಿಗೆ ಗಾಯಗಳಾಗಿದೆ. ನಂತರ ಆತನೂ ಆತ್ಮಹತ್ಯೆ ಮಾಡಿಕೊಂಡಿದ್ದಾನೆ. ಇನ್ನು ಈತ ಫೆಡ್ಎಕ್ಸ್ ಕೇಂದ್ರದ ಮಾಜಿ ಉದ್ಯೋಗಿ ಎಂದು ತಿಳಿದುಬಂದಿದೆ.
ಪೂರ್ವಪರ ದ್ವೇಷದಿಂದ ಈ ರೀತಿ ಮಾಡಿರಬಹುದು ಎಂದು ಅಂದಾಜಿಸಲಾಗಿದೆ. ಇಂಡಿಯಾನ-ಪೊಲೀಸ್ ರಾಜ್ಯದಲ್ಲಿಈ ವರ್ಷ ಜರುಗಿದ ಮೂರನೇ ಸಾಮೂಹಿಕ ಗುಂಡಿನ ದಾಳಿ ಇದಾಗಿದೆ. ಕಳೆದ ತಿಂಗಳು ಅಟ್ಲಾಂಟಾ ಪ್ರದೇಶದಲ್ಲಿನಡೆದ ಶೂಟಿಂಗ್ನಲ್ಲಿ8 ಮಂದಿ ಮೃತರಾಗಿ-ದ್ದರು. ಜನವರಿಯಲ್ಲಿಮನೆಯೊಂದರಲ್ಲಿವಾದ-ವಿವಾದ-ದಿಂದಾಗಿ ಉಂಟಾದ ಘರ್ಷಣೆ ವೇಳೆ ನಡೆದ ಗುಂಡಿನ ದಾಳಿಯಲ್ಲಿಗರ್ಭಿಣಿ ಮಹಿಳೆ ಸಮೇತ ಐವರು ಮೃತಪಟ್ಟಿದ್ದರು.