ಆ್ಯಪ್ನಗರ

ಕೊರೊನಾದಿಂದ ಕುಸಿದ ಆರ್ಥಿಕತೆ: ಪರಿಸ್ಥಿತಿ ನಿಭಾಯಿಸಲು ಆಗದೆ ಹಣಕಾಸು ಸಚಿವ ಆತ್ಮಹತ್ಯೆ

ಜಗತ್ತಿನಾದ್ಯಂತ ಕೊರೊನಾ ವೈರಸ್‌ ಆರ್ಭಟಕ್ಕೆ ಎಲ್ಲ ಕ್ಷೇತ್ರಗಳು ಮಕಾಡೆ ಮಲಗಿವೆ. ಆರ್ಥಿಕತೆ ಪಾತಾಳಕ್ಕೆ ಕುಸಿದಿದ್ದು, ಈಗ ಇದೇ ಜರ್ಮನಿಯ ಹೆಸ್ಸೆ ರಾಜ್ಯದ ಹಣಕಾಸು ಮಂತ್ರಿಯನ್ನು ಬಲಿ ಪಡೆದಿದೆ. ಮುಂದೆ ರಾಜ್ಯವನ್ನು ಹೇಗೆ ನಿಭಾಯಿದುವುದು ಎಂಬ ಚಿಂತೆಯಲ್ಲಿ ಥಾಮಸ್‌ ಸ್ಕೇಪರ್‌ ಆತ್ಮಹತ್ಯೆ ಮಾಡಿಕೊಂಡಿದ್ದಾರೆ.

AFP 29 Mar 2020, 9:11 pm
ಫ್ರಾಂಕ್‌ಫರ್ಟ್‌: ಜಗತ್ತಿನಾದ್ಯಂತ ಕೊರೊನಾ ವೈರಸ್‌ ಮರಣ ಮೃದಂಗ ಬಾರಿಸುತ್ತಿದೆ. ಕೊರೊನಾ ಹೊಡೆತಕ್ಕೆ ಎಲ್ಲ ಕ್ಷೇತ್ರಗಳು ಮಕಾಡೆ ಮಲಗಿದ್ದು, ಆರ್ಥಿಕತೆ ಪಾತಾಳಕ್ಕೆ ಕುಸಿದಿದೆ. ಈಗ ಈ ಆರ್ಥಿಕ ಕುಸಿತವೇ ಒಂದು ರಾಜ್ಯದ ಹಣಕಾಸು ಮಂತ್ರಿಯನ್ನು ಬಲಿ ಪಡೆದಿದೆ.
Vijaya Karnataka Web GERMAN MINISTER


ಹೌದು, ಕೊರೊನಾದಿಂದ ಉಂಟಾಗಿರುವ ಆರ್ಥಿಕ ಕುಸಿತವನ್ನು ಹೇಗೆ ನಿಭಾಯಿಸುವುದು ಎಂಬ ಚಿಂತೆಯಲ್ಲಿದ್ದ ಜರ್ಮನಿಯ ಹೆಸ್ಸೆ ರಾಜ್ಯದ ಹಣಕಾಸು ಮಂತ್ರಿ ಥಾಮಸ್‌ ಸ್ಕೇಪರ್‌ ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಈ ವಿಚಾರವನ್ನು ಹೆಸ್ಸೆ ರಾಜ್ಯದ ಪ್ರಧಾನಿ ವೋಲ್ಕರ್ ಬೌಫಿಯರ್ ಭಾನುವಾರ ಖಚಿತಪಡಿಸಿದ್ದಾರೆ.

54 ವರ್ಷ ವಯಸ್ಸಿನ ಥಾಮಸ್ ಸ್ಕೇಫರ್ ರೈಲ್ವೆ ಹಳಿಗೆ ತಲೆಕೊಟ್ಟು ಸಾವಿಗೀಡಾಗಿದ್ದಾರೆ ಎಂದು ವೈಸ್‌ಬಾಡೆನ್ ಪ್ರಾಸಿಕ್ಯೂಷನ್ ಕಚೇರಿ ಹೇಳಿದೆ. ನಾವು ಆಘಾತಕ್ಕೊಳಗಾಗಿದ್ದೇವೆ, ನಮಗೆ ಈ ಘಟನೆ ನಂಬುವುದಕ್ಕೆ ಆಗುತ್ತಿಲ್ಲ ಎಂದು ವೋಲ್ಕರ್ ಬೌಫಿಯರ್ ತಮ್ಮ ಹೇಳಿಕೆಯಲ್ಲಿ ತಿಳಿಸಿದ್ದಾರೆ.

ಜರ್ಮನಿಯ ಹಣಕಾಸು ರಾಜಧಾನಿ ಎಂದು ಕರೆಸಿಕೊಳ್ಳುವ ಫ್ರಾಂಕ್‌ಫರ್ಟ ಹೆಸ್ಸೆ ರಾಜ್ಯದಲ್ಲಿಯೇ ಇದೆ. ಅಲ್ಲಿ ಪ್ರಮುಖವಾದ ಡ್ಯುಚ್‌ ಬ್ಯಾಂಕ್ ಮತ್ತು ಕಾಮರ್ಸ್‌ ಬ್ಯಾಂಕ್‌ನ ಪ್ರಧಾನ ಕಚೇರಿಗಳಿವೆ. ಯುರೋಪಿಯನ್ ಸೆಂಟ್ರಲ್ ಬ್ಯಾಂಕ್ ಕೂಡ ಫ್ರಾಂಕ್‌ಫರ್ಟ್‌ನಲ್ಲಿದೆ.

3 ತಿಂಗಳ ಬಳಿಕ ಮನೆಯಿಂದ ಹೊರಬಂದ ಜನ: ವುಹಾನ್ ನಗರದಾದ್ಯಂತ ಬಡಿದಾಟ!

10 ವರ್ಷಗಳ ಕಾಲ ಹೆಸ್ಸೆಯ ಹಣಕಾಸು ಮುಖ್ಯಸ್ಥರಾಗಿದ್ದ ಥಾಮಸ್ ಸ್ಕೇಫರ್, ಕಂಪನಿಗಳು ಮತ್ತು ಕಾರ್ಮಿಕರು ಕೊರೊನಾದಿಂದ ಉಂಟಾದ ಆರ್ಥಿಕ ಕುಸಿತವನ್ನು ಎದುರಿಸಲು ಹಗಲಿರುಳು ಶ್ರಮಿಸಿದ್ದರು ಎಂದು ವೋಲ್ಕರ್ ಬೌಫಿಯರ್ ಅವರನ್ನು ಸ್ಮರಿಸಿದರು.

ಇರಾನ್‌ನಲ್ಲಿ 300 ಜನರ ಬಲಿ ಪಡೆದ ಗಾಳಿ ಸುದ್ದಿ, ಕೊರೊನಾ ಔಷಧಿಯೆಂದು ಮೆಥನಾಲ್‌ ಸೇವನೆ

ಆತ್ಮಹತ್ಯೆ ಮಾಡಿಕೊಂಡ ಥಾಮಸ್‌ ಸ್ಕೇಪರ್‌ ಜರ್ಮನಿಯಲ್ಲಿ ಭಾರಿ ಜನಪ್ರಿಯತೆ ಗಳಿಸಿದ್ದರು. ವೋಲ್ಕರ್ ಬೌಫಿಯರ್‌ನ ಉತ್ತರಾಧಿಕಾರಿ ಎಂದು ಹೆಸ್ಸೆ ರಾಜ್ಯದಲ್ಲಿ ಸ್ಕೇಪರ್‌ ಕರೆಸಿಕೊಳ್ಳುತ್ತಿದ್ದರು. ಥಾಮಸ್ ಸ್ಕೇಫರ್ ಸಿಡಿಯು ಪಕ್ಷದಿಂದ ಆಯ್ಕೆಯಾಗಿದ್ದರು. ಸ್ಕೇಪರ್‌ ತಮ್ಮ ಪತ್ನಿ, ಇಬ್ಬರು ಮಕ್ಕಳನ್ನು ಅಗಲಿದ್ದಾರೆ.

ಕೊರೊನಾಗೆ ಬಲಿಯಾದ ಮೊದಲ ರಾಯಲ್ ರಕ್ತ: ಸ್ಪೇನ್ ರಾಜಕುಮಾರಿ ತೆರೆಸಾ ಇನ್ನಿಲ್ಲ!

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ