ಆ್ಯಪ್ನಗರ

ದೇವರು ಕರುಣಾಮಯಿ: ಪಾಕ್ ವಿಮಾನ ಅಪಘಾತದಲ್ಲಿ ಬದುಕುಳಿದವನ ಅಂತರಾಳದ ಮಾತು!

ಪಾಕಿಸ್ತಾನದ ಬ್ಯಾಂಕ್ ಆಫ್ ಪಂಜಾಬ್‌ನ ಉದ್ಯೋಗಿ ಜಫರ್ ಮೆಹಮೂದ್ ಪಾಕಿಸ್ತಾನದ ಕರಾಚಿಯಲ್ಲಿ ಸಂಭವಿಸಿರುವ ಭೀಕರ ವಿಮಾನ ಅಪಘಾತದಲ್ಲಿ ಪವಾಡ ಸದೃಶ್ಯ ರೀತಿಯಲ್ಲಿ ಬದುಕುಳಿದಿದ್ದು, ಕರಾಚಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.

Vijaya Karnataka Web 22 May 2020, 10:20 pm
ಕರಾಚಿ: ಪಾಕಿಸ್ತಾನದ ಕರಾಚಿಯಲ್ಲಿ ಸಂಭವಿಸಿರುವ ಭೀಕರ ವಿಮಾನ ಅಪಘಾತದಲ್ಲಿ ಮೃತಪಟ್ಟವರ ಅಧಿಕೃತ ಸಂಖ್ಯೆಯನ್ನು ಪಾಕಿಸ್ತಾನ ಇನ್ನಷ್ಟೇ ಬಿಡುಗಡೆ ಮಾಡಬೇಕಿದೆ.
Vijaya Karnataka Web pakistan
ಕರಾಚಿ ವಿಮಾನ ಅಪಘಾತ


ಈ ಮಧ್ಯೆ ಭೀಕರ ವಿಮಾನ ಅಪಘಾತದಲ್ಲಿ ಪವಾಡ ಸದೃಶ್ಯ ರೀತಿಯಲ್ಲಿ ಬದುಕುಳಿದಿರುವ ಓರ್ವ ಪ್ರಯಾಣಿಕ, ದುರ್ಘಟನೆ ಕುರಿತು ತನ್ನ ಹೇಳಿಕೆಯನ್ನು ದಾಖಲಿಸಿದ್ದಾನೆ.

ಪಾಕಿಸ್ತಾನದಲ್ಲಿ ವಿಮಾನ ದುರಂತ: ಸಿಬ್ಬಂದಿಯೂ ಸೇರಿ ಎಲ್ಲಾ 107 ಪ್ರಯಾಣಿಕರ ದುರ್ಮರಣ?

ಪಾಕಿಸ್ತಾನದ ಬ್ಯಾಂಕ್ ಆಫ್ ಪಂಜಾಬ್‌ನ ಉದ್ಯೋಗಿ ಜಫರ್ ಮೆಹಮೂದ್ ಈ ಭೀಕರ ಅಪಘಾತದಲ್ಲಿ ಪವಾಡ ಸದೃಶ್ಯ ರೀತಿಯಲ್ಲಿ ಬದುಕುಳಿದಿದ್ದು, ಕರಾಚಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.

ದೇವರು ಕರುಣಾಮಯಿ ಎಂದು ಹೇಳಿರುವ ಜಫರ್ ಮೆಹಮೂದ್, ತಾವು ಬದುಕಿರುವುದು ನಂಬಲು ಆಗುತ್ತಿಲ್ಲ ಎಂದು ಹೇಳಿದ್ದಾರೆ. ವಿಮಾನದ ಎರಡೂ ಎಂಜಿನ್ ಕಾರ್ಯ ನಿರ್ವಹಿಸಿವುದನ್ನು ನಿಲ್ಲಿಸಿದ ಪರಿಣಾಮ ಪೈಲೆಟ್‌ಗೆ ವಿಮಾನವನ್ನು ವಿಮಾನ ನಿಲ್ದಾಣದವರೆಗೂ ಕೊಂಡೊಯ್ಯಲು ಸಾಧ್ಯವಾಗಲಿಲ್ಲ ಎಂದು ಜಫರ್ ಮೆಹಮೂದ್ ಹೇಳಿದ್ದಾರೆ.

ಇನ್ನೈದು ನಿಮಿಷದಲ್ಲಿ ಇಳಿಯಬೇಕಾಗಿದ್ದ ವಿಮಾನ ದುರಂತ ಅಂತ್ಯ ಕಂಡಾಗ...!

ಸದ್ಯ ವಿಮಾನದಲ್ಲಿ 91 ಪ್ರಯಾಣಿಕರು ಹಾಗೂ 8 ಸಿಬ್ಬಂದಿ ಪ್ರಯಾಣಿಸುತ್ತಿದ್ದರು ಎಂದು ಪಾಕಿಸ್ತಾನ ವಿಮಾನಯಾನ ಸಚಿವಾಲಯ ಮಾಹಿತಿ ನೀಡಿದ್ದು, ಮೃತರ ಹಾಗೂ ಬದುಕುಳಿದವರ ಸಂಖ್ಯೆ ಕುರಿತು ಶೀಘ್ರದಲ್ಲೇ ಅಧಿಕೃತ ಹೇಳಿಕೆ ಪ್ರಕಟಿಸಲಾಗುವುದು ಎಂಧು ಸ್ಪಷ್ಟಪಡಿಸಿದೆ.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ