ಆ್ಯಪ್ನಗರ

ಸೂಕ್ಷ್ಮಾಣು ವಿಜ್ಞಾನಿ ಕ್ರಿಶ್ಚಿಯನ್‌ ಗ್ರಾಮ್‌ಗೆ ಗೂಗಲ್‌ ಡೂಡಲ್‌ ಗೌರವ

ಸೂಕ್ಷಾಣುಜೀವಿಗಳ ಕುರಿತು ಸ್ವಲ್ಪವೂ ಅರಿವಿರದ ಕಾಲದಲ್ಲಿ, ಅವುಗಳ ಸ್ವರೂಪ, ರಚನೆ ಕುರಿತು ಕೂಲಂಕಶ ಅಧ್ಯಯನ ನಡೆಸಿದವರು ಹ್ಯಾನ್ಸ್‌ ಕ್ರಿಶ್ಚಿಯನ್ ಗ್ರಾಮ್‌. ಈ ಮಹಾನ್‌ ವಿಜ್ಞಾನಿಗೆ ಅವರ 166ನೇ ಜನ್ಮದಿನದಂದು ಗೂಗಲ್‌, ಡೂಡಲ್‌ ಮೂಲಕ ಗೌರವ ಸಲ್ಲಿಸಿದೆ.

Vijaya Karnataka Web 13 Sep 2019, 2:32 pm
ಹೊಸದಿಲ್ಲಿ: ಹಲ್ಲುಜ್ಜುವ ಪೇಸ್ಟ್‌ ಹಾಗೂ ಸೋಪುಗಳ ಜಾಹೀರಾತುಗಳಲ್ಲಿ ಕೀಟಾಣುಗಳ ಕುರಿತು ಭಯ ಹುಟ್ಟುವಂತೆ ಬಿಂಬಿಸುವುದನ್ನು ನೋಡೇ ಇರುತ್ತೇವೆ. ಆದರೆ, ಬರಿಗಣ್ಣಿಗೆ ಕಾಣದ ಈ ಸೂಕ್ಷ್ಮಾಣು ಜೀವಿಗಳ ಕುರಿತು ಮೊದಲ ಬಾರಿಗೆ ಬೆಳಕು ಚೆಲ್ಲಿದವರು ಹ್ಯಾನ್ಸ್‌ ಕ್ರಿಶ್ಚಿಯನ್ ಗ್ರಾಮ್‌. ಈ ಶ್ರೇಷ್ಠ ವಿಜ್ಞಾನಿಯ 166ನೇ ಜನ್ಮದಿನದಂದು ಗೂಗಲ್‌ ತನ್ನ ಡೂಡಲ್‌ ಮೂಲಕ ಗೌರವ ಸಲ್ಲಿಸಿದೆ.
Vijaya Karnataka Web gram


ಗೂಗಲ್‌ ಪ್ರಕಟಿಸಿರುವ ಡೂಡಲ್‌ಅನ್ನು ಡ್ಯಾನಿಶ್‌ ಮೂಲದ ಅತಿಥಿ ಕಲಾವಿದ ಮೈಕೆಲ್‌ ಸಮ್ಮರ್‌ ಚಿತ್ರಿಸಿದ್ದಾರೆ. ಗ್ರಾಮ್‌ (Gram) ಎಂಬ ನಾಲ್ಕು ಅಕ್ಷರಗಳ ಮೂಲಕ ಹ್ಯಾನ್ಸ್‌ ಕ್ರಿಶ್ಚಿಯನ್ ಅವರು ಕೈಗೊಳ್ಳುತ್ತಿದ ಪ್ರಯೋಗಗಳನ್ನು ಮನೋಜ್ಞವಾಗಿ ಚಿಯತ್ರಿಸಿದ್ದಾರೆ. ಚಿತ್ರದಲ್ಲಿ ಗ್ರಾಮ್ ಅವರು ಧರಿಸುತ್ತಿದ್ದ ದುಡ್ಡಾದ ಕನ್ನಡಕ, ಸೂಕ್ಷ್ಮದರ್ಶಕ, ಬ್ಯಾಕ್ಟೀರಿಯಾಗಳು, ಆ ಬ್ಯಾಕ್ಟೀರಿಯಾಗಳನ್ನು ಕಂಡು ಗ್ರಾಂ ಅವರು ಹುಬ್ಬೇರಿಸಿ ಆಶ್ಚರ್ಯಪಡುತ್ತಿರುವ ಎಲ್ಲ ಭಾವಗಳೂ ವ್ಯಕ್ತವಾಗುವಂತೆ ಸೊಗಸಾಗಿ ಚಿತ್ರಿಸಿದ್ದಾರೆ.



ಗ್ರಾಮ್ ಅವರು 1853ರ ಸೆಪ್ಟೆಂಬರ್‌ 13ರಂದು ಜನಿಸಿದರು. 1878ರಲ್ಲಿ ಕೋಪನ್‌ಹೇಗನ್‌ ವಿಶ್ವವಿದ್ಯಾಲಯದಿಂದ ಉನ್ನತ ಶಿಕ್ಷಣ (ಎಂಡಿ) ಪೂರೈಸಿದ್ದಾರೆ. 1884ರಲ್ಲಿ ಬರ್ಲಿನ್‌ ಆಸ್ಪತ್ರೆಯ ಶವಾಗಾರದಲ್ಲಿ ಕೆಲಸ ಮಾಡುತ್ತಿದ್ದ ವೇಳೆ ಜರ್ಮನ್‌ ಸೂಕ್ಷ್ಮಾಣು ವಿಜ್ಞಾನಿ ಕಾರ್ಲ್‌ ಫ್ರೆಡ್‌ಲ್ಯಾಂಡರ್‌ ಅವರೊಟ್ಟಿಗೆ ಸೂಕ್ಷಾಣು ಜೀವಿಗಳ ಅಧ್ಯಯನದಲ್ಲಿ ತೊಡಗುತ್ತಾರೆ. ಸೂಕ್ಷ್ಮಾಣು ಜೀವಿಗಳನ್ನು ಅಧ್ಯಯನ ಮಾಡುವ ಕ್ರಮವನ್ನು ಮೊದಲ ಬಾರಿಗೆ ಪರಿಚಯಿಸುತ್ತಾರೆ. ಬ್ಯಾಕ್ಟೀರಿಯಾಲಜಿ ಮತ್ತು ಫಾರ್ಮಾಲಜಿ ಅಧ್ಯಯನಕ್ಕಾಗಿ ಯುರೊಪ್‌ನಾದ್ಯಂತ ಸಂಚರಿಸಿದ್ದಾರೆ.

ಪ್ರಯೋಗದಲ್ಲಿ ನಿರತರಾಗಿದ್ದಾಗ ಬ್ಯಾಕ್ಟೀರಿಯಾಗಳು ಸ್ಪಟಿಕದ ನೇರಳೆ ಕಲೆ ಹಾಗೂ ಜೈವಿಕ ದ್ರಾವಕದಲ್ಲಿ ಕರಗಿದ ಐಯೋಡಿನ್‌ ದ್ರಾವಣಗಳಿಂದ ಬ್ಯಾಕ್ಟೀರಿಯಾಗಳು ನಾಶವಾಗುವುದನ್ನು ಕಂಡುಕೊಂಡರು. ಇದರಿಂದ ವಿವಿಧ ಬ್ಯಾಕ್ಟೀರಿಯಾಗಳ ನಡುವಿನ ರಚನಾತ್ಮಕ ವ್ಯತ್ಯಾಸ ಹಾಗೂ ಜೈವಿಕ ರಾಸಾಯನಿಕ ಕಾರ್ಯಗಳ ಮೇಲೆ ಬೆಳಕು ಚೆಲ್ಲಲು ಸಾಧ್ಯವಾಯಿತು. ಒಂದೂವರೆ ಶತಮಾನ ಕಳೆದರೂ ಸೂಕ್ಷ್ಮಾಣು ಜೀವಿಗಳ ಅಧ್ಯಯದಲ್ಲಿ ಕ್ರಿಶ್ಚಿಯನ್ ಗ್ರಾಮ್‌ ಪರಿಚಯಿಸಿದ ಪದ್ಧತಿಯನ್ನೇ ಅನುಸರಿಸಲಾಗುತ್ತಿದೆ. ಹೀಗಾಗಿಯೇ ಇವರನ್ನು ಶ್ರೇಷ್ಠ ವಿಜ್ಞಾನಿ ಎಂದು ಗುರುತಿಸಲಾಗಿದೆ. ಇಂದಿಗೂ ವೈದ್ಯಲೋಕದಲ್ಲಿ ಗ್ರಾಮ್ ಸ್ಟೇನ್‌ ಪದ್ದತಿ ಪ್ರಚಲಿತದಲ್ಲಿದೆ.

ಬಹುಪಾಲು ರೋಗಗಳಿಗೆ ಸೂಕ್ಷ್ಮಾಣು ಜೀವಿಗಳೇ ಕಾರಣ. ಕೆಲವು ಸೂಕ್ಷ್ಮಾಣುಗಳು ಜೀವಿಗಳಿಗೆ ಒಳಿತು ಮಾಡಿದರೆ, ಕೆಲವು ರೋಗಕಾರಕವಾಗಿವೆ. ತಿಂದ ಆಹಾರ ಜೀರ್ಣವಾಗುವುದು ಕೂಡ ಸೂಕ್ಷಾಣುಗಳ ಸಹಾಯದಿಂದಲೇ!

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ