ಆ್ಯಪ್ನಗರ

ಬಾಂಗ್ಲಾದಲ್ಲಿ ಕಿಡಿಗೇಡಿಗಳಿಂದ ಶಿವ ದೇಗುಲ ಧ್ವಂಸ

20 ವರ್ಷಗಳ ಹಿಂದೆ ಚಿತ್ತರಂಜನ್‌ ಎನ್ನುವವರು ಜಮೀನನ್ನು ಖರೀದಿಸಿ ದೇಗುಲ ನಿರ್ಮಿಸಿದ್ದರು. ಅಂದಿನಿಂದ ಇಲ್ಲಿ ದಿನನಿತ್ಯ ಪೂಜಾ ಕಾರ್ಯ ನಡೆಯುತ್ತಿದೆ. ಗ್ರಾಮದ ಸ್ಥಳೀಯ ನಿವಾಸಿಗಳು ದೇಗುಲದ ಭೂಮಿಯನ್ನು ಬಲವಂತವಾಗಿ ವಶಕ್ಕೆ ಪಡೆಯಲು ಯತ್ನಿಸಿದ್ದಾರೆ. ಈ ವೇಳೆ ಚಿತ್ತರಂಜನ್‌ ಅವರ ಕುಟುಂಬ ಮತ್ತು ಗ್ರಾಮದ ಒಂದು ಗುಂಪಿನ ನಡುವೆ ಘರ್ಷಣೆ ಸಂಭವಿಸಿದೆ ಎಂದು ಮಾಧ್ಯಮಗಳು ವರದಿ ಮಾಡಿವೆ.

Vijaya Karnataka 7 Jan 2019, 5:00 am
ಢಾಕಾ: ಬಾಂಗ್ಲಾದೇಶದಲ್ಲಿ ಮತ್ತೊಮ್ಮೆ ಹಿಂದೂ ದೇವಾಲಯದ ಮೇಲೆ ದುಷ್ಕರ್ಮಿಗಳಿಂದ ದಾಳಿ ನಡೆದಿದೆ. ತಂಗೈಲ್‌ ಜಿಲ್ಲೆಯ ಬತ್ರಾ ಗ್ರಾಮದಲ್ಲಿರುವ ಶಿವ ದೇಗುಲವನ್ನು ಕಿಡಿಗೇಡಿಗಳು ಶುಕ್ರವಾರ ಧ್ವಂಸಗೊಳಿಸಿದ್ದಾರೆ. ದೇಗುಲದ ಭೂಮಿ ವಿವಾದ ಸಂಬಂಧ ಎರಡು ಗುಂಪುಗಳ ನಡುವೆ ಘರ್ಷಣೆ ನಡೆದಿದೆ. ಈ ವೇಳೆ ಒಂಬತ್ತು ಜನರ ಗುಂಪೊಂದು ಶಿವ ಮಂದಿರವನ್ನು ನಾಶ ಮಾಡಿ, ದೇಗುಲದ ಮಾಲೀಕರ ಕುಟುಂಬದ ಮೇಲೆ ಹಲ್ಲೆ ನಡೆಸಿದೆ.
Vijaya Karnataka Web hindu temple vandalised in bangladesh
ಬಾಂಗ್ಲಾದಲ್ಲಿ ಕಿಡಿಗೇಡಿಗಳಿಂದ ಶಿವ ದೇಗುಲ ಧ್ವಂಸ


20 ವರ್ಷಗಳ ಹಿಂದೆ ಚಿತ್ತರಂಜನ್‌ ಎನ್ನುವವರು ಜಮೀನನ್ನು ಖರೀದಿಸಿ ದೇಗುಲ ನಿರ್ಮಿಸಿದ್ದರು. ಅಂದಿನಿಂದ ಇಲ್ಲಿ ದಿನನಿತ್ಯ ಪೂಜಾ ಕಾರ್ಯ ನಡೆಯುತ್ತಿದೆ. ಗ್ರಾಮದ ಸ್ಥಳೀಯ ನಿವಾಸಿಗಳು ದೇಗುಲದ ಭೂಮಿಯನ್ನು ಬಲವಂತವಾಗಿ ವಶಕ್ಕೆ ಪಡೆಯಲು ಯತ್ನಿಸಿದ್ದಾರೆ. ಈ ವೇಳೆ ಚಿತ್ತರಂಜನ್‌ ಅವರ ಕುಟುಂಬ ಮತ್ತು ಗ್ರಾಮದ ಒಂದು ಗುಂಪಿನ ನಡುವೆ ಘರ್ಷಣೆ ಸಂಭವಿಸಿದೆ ಎಂದು ಮಾಧ್ಯಮಗಳು ವರದಿ ಮಾಡಿವೆ.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ