ಆ್ಯಪ್ನಗರ

ಮುಂದುವರಿದ ಚೀನಾದ ದಬ್ಬಾಳಿಕೆ, ಹಾಂಕಾಂಗ್‌ ಪೊಲೀಸರಿಗೆ ಸರ್ವಾಧಿಕಾರ!

ಹಾಂಕಾಂಗ್‌ ಪೊಲೀಸರಿಗೆ ರಾಷ್ಟ್ರೀಯ ಭದ್ರತೆ ಕಾಯಿದೆ ಅಡಿಯಲ್ಲಿ ಸರ್ವಾಧಿಕಾರ ಅಲ್ಲಿನ ಸರಕಾರ ನೀಡಿದೆ. ಈ ಮೂಲಕ ಯಾವುದೇ ವಾರಂಟ್‌ ಇಲ್ಲದೆಯೇ ಶೋಧ ನಡೆಸಲು, ಶಂಕಿತರನ್ನು ದೇಶ ಬಿಡದಂತೆ ತಡೆಯಲು ಮತ್ತು ಫೋನ್‌ಗಳನ್ನು ಆಲಿಸಲು ಪೊಲೀಸರಿಗೆ ಅಧಿಕಾರ ಸಿಕ್ಕಿದಂತಾಗಿದೆ.

Vijaya Karnataka Web 8 Jul 2020, 9:10 am
ಹಾಂಕಾಂಗ್‌: ಆಂತರಿಕ ಬಂಡಾಯದ ಭೀತಿ ಹಿನ್ನೆಲೆಯಲ್ಲಿ ಹಾಂಕಾಂಗ್‌ ಸರಕಾರ ಪೊಲೀಸರಿಗೆ ರಾಷ್ಟ್ರೀಯ ಭದ್ರತೆ ಕಾಯಿದೆ ಅಡಿಯಲ್ಲಿ ಸರ್ವಾಧಿಕಾರ ನೀಡಿದೆ. ಇದರೊಂದಿಗೆ ಯಾವುದೇ ವಾರಂಟ್‌ ಇಲ್ಲದೆಯೇ ಶೋಧ ನಡೆಸಲು, ಶಂಕಿತರನ್ನು ದೇಶ ಬಿಡದಂತೆ ತಡೆಯಲು ಮತ್ತು ಫೋನ್‌ಗಳನ್ನು ಆಲಿಸಲು ಪೊಲೀಸರಿಗೆ ಅಧಿಕಾರ ನೀಡಲಾಗಿದೆ. ಕಳೆದ ವರ್ಷ ನಡೆದ ಆಂತರಿಕ ಗಲಭೆಗಳ ಬಳಿಕ ಸರಕಾರ ರೂಪಿಸಿದ ನೂತನ ರಾಷ್ಟ್ರೀಯ ಭದ್ರತಾ ಕಾಯಿದೆಯನ್ನು (ಆರ್ಟಿಕಲ್‌ 43) ಸರಕಾರ ಜು.7ರಿಂದ ಸಂಪೂರ್ಣವಾಗಿ ಜಾರಿಗೊಳಿಸಿದೆ.
Vijaya Karnataka Web jpg (83)


ಈ ಬಗ್ಗೆ ಸೋಮವಾರ ರಾತ್ರಿ ಹಾಂಕಾಂಗ್‌ ಸರಕಾರ ಪೊಲೀಸರಿಗೆ ಅಧಿಕಾರ ನೀಡಿದ್ದು, ಶಂಕಿತ ವ್ಯಕ್ತಿಯು ದೇಶ ಬಿಡದಂತೆ ಆತನ ಪ್ರಯಾಣ ದಾಖಲೆಗಳನ್ನು ವಶಕ್ಕೆ ಪಡೆಯಬಹುದಾಗಿದೆ. ಜೊತೆಗೆ ಸಾಕಷ್ಟು ಪುರಾವೆಗಳು ದೊರೆತಲ್ಲಿ ಅಂಥವರ ಸ್ಥಿರಾಸ್ತಿಗಳನ್ನು ಮುಟ್ಟುಗೋಲು ಹಾಕಿಕೊಳ್ಳುವ ಅಧಿಕಾರವನ್ನೂ ಕಾಯಿದೆ ಒದಗಿಸಿದೆ. ರಾಷ್ಟ್ರೀಯ ಭದ್ರತೆಗೆ ಧಕ್ಕೆ ತರುವಂತಹ ಯಾವುದೇ ವಿದ್ಯುನ್ಮಾನ ಸಂದೇಶ, ಸಾಮಾಜಿಕ ಜಾಲತಾಣದ ಪೋಸ್ಟ್‌ಗಳನ್ನು ಕೂಡಲೇ ತೆಗೆದು ಹಾಕುವಂತೆ ಸಂಬಂಧಪಟ್ಟ ಟೆಲಿಕಾಂ, ಇಂಟರ್‌ನೆಟ್‌ ಸಂಸ್ಥೆಗಳಿಗೆ ಆದೇಶಿಸುವ ಮತ್ತು ಉಲ್ಲಂಘಿಸಿದವರಿಗೆ ಭಾರಿ ದಂಡ ವಿಧಿಸಲು ಹೊಸ ಕಾಯಿದೆ ಅವಕಾಶ ನೀಡುತ್ತದೆ.

ಇನ್ನು ಈ ಕಾಯಿದೆ ಬಗ್ಗೆ ಜಾಗತಿಕವಾಗಿ ಮುಂದುವರಿದ ದೇಶಗಳು, ಭಾರೀ ಕಳವಳ ವ್ಯಕ್ತಪಡಿಸಿದೆ. ಇದರಿಂದಾಗಿ ಹಾಂಕಾಂಗ್‌ ಜನರ ಹೋರಾಟದ ಸ್ವಾತಂತ್ರ್ಯವನ್ನ ಕಸಿದುಕೊಂಡಂತೆ ಆಗಿದೆ ಎಂದು ಆರೋಪಿಸಿವೆ. ಈ ಬಗ್ಗೆ ಹಾಂಕಾಂಗ್‌ ಸರಕಾರಕ್ಕೆ ವಿವಿಧ ದೇಶಗಳು ಕಾನೂನಾತ್ಮಕ ಪತ್ರಗಳನ್ನು ಕೂಡ ರವಾನಿಸಿವೆ. ಇನ್ನು ಇಂತಹ ನಡೆಯಿಂದ ಆಕ್ರೋಶಿತರಾಗಿರುವ ಹಾಂಕಾಂಗ್‌ನ ಜನರು ಚೀನಾದ ವಿರುದ್ಧ ಕಿಡಿಕಾರುತ್ತಿದ್ದಾರೆ. ಈ ಎಲ್ಲಾ ಕುತಂತ್ರದ ಹಿಂದೆ ಚೀನಾ ಇದೆ. ನಮ್ಮ ಪ್ರತಿಭಟನೆಯನ್ನ ಹತ್ತಿಕ್ಕುವ ಕೆಲಸ ಮಾಡುತ್ತಿದೆ ಎಂದು ಆಕ್ರೋಶಿತರಾಗಿದ್ದಾರೆ.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ