ಆ್ಯಪ್ನಗರ

ಬೆಲ್ಜಿಯಂ ಪ್ರಧಾನಿ ಬಂದಾಗ ಬೆನ್ನು ತಿರುಗಿಸಿ ನಿಂತ ವೈದ್ಯರು..! ಪ್ರತಿಭಟನೆ ಶಾಂತ.. ಎಫೆಕ್ಟ್‌ ವಿಪರೀತ..!

ಪ್ರಧಾನಿ ವಾಹನ ಬಂದ ಕೂಡಲೇ ವೈದ್ಯರು ಬೆನ್ನು ತಿರುಗಿಸಿ ನಿಂತು ಪ್ರಧಾನಿ ವಿರುದ್ಧ ತಮ್ಮ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಈ ದೃಶ್ಯ ಇದೀಗ ಅಂತಾರಾಷ್ಟ್ರೀಯ ಮಟ್ಟದಲ್ಲಿ ವೈರಲ್ ಆಗಿದ್ದು, ಬೆಲ್ಜಿಯಂ ಪ್ರಧಾನಿಗೆ ತೀವ್ರ ಇರುಸು ಮುರುಸು ಉಂಟು ಮಾಡಿದೆ.

TIMESOFINDIA.COM 19 May 2020, 12:12 am

ಹೈಲೈಟ್ಸ್‌:

  • ಬೆಲ್ಜಿಯಂ ಪ್ರಧಾನಿಯ ಕೋವಿಡ್‌ ನೀತಿಗೆ ವೈದ್ಯರು ಕೆಂಡಾಮಂಡಲ
  • ಸೌಲಭ್ಯ ಕಡಿತ, ಸಂಬಳ ಕಡಿತಕ್ಕೆ ವೈದ್ಯರ ಆಕ್ರೋಶ
  • ತರಬೇತಿ ಇಲ್ಲದ ವ್ಯಕ್ತಿಗಳನ್ನು ನರ್ಸಿಂಗ್ ಕೆಲಸಕ್ಕೆ ನೇಮಕ ಮಾಡಿಕೊಳ್ತಿರೋದಕ್ಕೆ ಆಕ್ರೋಶ
ಹೈಲೈಟ್ಸ್‌ ಮಾತ್ರವೇ ಓದಲು ಆ್ಯಪ್‌ ಡೌನ್‌ಲೋಡ್‌ ಮಾಡಿ
ಬ್ರುಸೆಲ್ಸ್‌ (ಬೆಲ್ಜಿಯಂ): ಕೆಲವೊಮ್ಮೆ ಉಗ್ರ ಪ್ರತಿಭಟನೆಗಿಂತಲೂ ಶಾಂತ ರೀತಿಯ ಪ್ರತಿಭಟನೆಗಳೇ ಭಾರೀ ಪರಿಣಾಮಕಾರಿಯಾಗಿರುತ್ತೆ. ಅದರಲ್ಲೂ ವಿಭಿನ್ನವಾದ ಪ್ರತಿಭಟನೆಗಳು ಭಾರೀ ಗಮನ ಸೆಳೆದುಬಿಡುತ್ತವೆ. ಇದಕ್ಕೆ ಬೆಸ್ಟ್‌ ಎಕ್ಸಾಂಪಲ್, ಬೆಲ್ಜಿಯಂ ದೇಶದ ಬ್ರುಸೆಲ್ಸ್‌ನಲ್ಲಿ ಸಿಕ್ಕಿದೆ.
ಈ ದೇಶದ ಪ್ರಧಾನ ಮಂತ್ರಿ ಸೋಫಿ ವಿಲ್ಮ್ಸ್‌ ಅವರು ಇಲ್ಲಿನ ಆಸ್ಪತ್ರೆಯೊಂದಕ್ಕೆ ಭೇಟಿ ನೀಡುವ ಕಾರ್ಯಕ್ರಮ ನಿಗದಿಯಾಗಿತ್ತು. ಮೊದಲೇ ಕೊರೊನಾ ವೈರಸ್‌ನಿಂದ ತತ್ತರಿಸಿರುವ ದೇಶದಲ್ಲಿ ವೈದ್ಯರು ಸೌಕರ್ಯಗಳ ಕೊರತೆಯಿಂದ ಕುದ್ದು ಹೋಗಿದ್ದರು. ಹೀಗಾಗಿ, ಪ್ರಧಾನಿ ವಿರುದ್ಧದ ತಮ್ಮ ಆಕ್ರೋಶವನ್ನು ವಿಭಿನ್ನವಾಗಿ ವ್ಯಕ್ತಪಡಿಸಲು ಮುಂದಾದರು.

ಪ್ರಧಾನಿ ಆಸ್ಪತ್ರೆಗೆ ಬರುವ ಮುನ್ನವೇ ರಸ್ತೆಯ ಎರಡೂ ಬದಿಯಲ್ಲಿ ಸಾಮಾಜಿಕ ಅಂತರ ಕಾಯ್ದುಕೊಂಡು ಸಾಲಾಗಿ ನಿಂತಿದ್ದ ವೈದ್ಯರು, ಪ್ರಧಾನಿಗಳ ಬೆಂಗಾವಲು ಪಡೆ ಹಾಗೂ ಪ್ರಧಾನಿ ವಾಹನ ಆಗಮಿಸಿದ ಕೂಡಲೇ ಅವರಿಗೆ ಬೆನ್ನು ತಿರುಗಿಸಿ ನಿಂತರು. ಈ ಮೂಲಕ, ಪ್ರಧಾನಿ ಭೇಟಿಗೆ ಹಾಗೂ ಪ್ರಧಾನಿ ನೀತಿಗೆ ತಮ್ಮ ಆಕ್ರೋಶವನ್ನು ವ್ಯಕ್ತಪಡಿಸಿದರು. ವೈದ್ಯ ಸಮೂಹದ ಈ ವಿಭಿನ್ನ ಪ್ರತಿಭಟನೆಯ ದೃಶ್ಯ, ಇದೀಗ ವಿಶ್ವಾದ್ಯಂತ ವೈರಲ್ ಆಗಿದೆ.

ಕೊರೊನಾ ಎಫೆಕ್ಟ್‌: ಸ್ವಿಗ್ಗಿಯ 1100 ನೌಕರರಿಗೆ ಪಿಂಕ್‌ ಸ್ಲಿಪ್‌!

ಬೆಲ್ಜಿಯಂ ದೇಶದಲ್ಲಿ ಈವರೆಗೆ 9 ಸಾವಿರ ಮಂದಿ ಕೊರೊನಾ ವೈರಸ್ ಸೋಂಕಿಗೆ ಜೀವಬಿಟ್ಟಿದ್ದಾರೆ. ಇಲ್ಲಿನ ಮಹಿಳಾ ಪ್ರಧಾನಿ ಸೋಫಿ ಅವರು ಆರೋಗ್ಯ ಕಾರ್ಯಕರ್ತರಿಗೆ ಸೂಕ್ತ ಸೌಲಭ್ಯಗಳನ್ನು ಕಲ್ಪಿಸುವಲ್ಲಿ ಸೋತಿದ್ದಾರೆ ಅನ್ನೋದು ಪ್ರತಿಭಟನಾಕಾರರ ಆಕ್ರೋಶ.

ಕೋವಿಡ್‌ ನಿಯಂತ್ರಣದಲ್ಲಿ ಕರ್ನಾಟಕ ಮುಂಚೂಣಿ, ನರೇಂದ್ರ ಮೋದಿಯೇ ನಮ್ಮ ನಂಬಿಕೆ: ಡಾ. ಅಶ್ವತ್ಥನಾರಾಯಣ

ವೈದ್ಯರಿಗೆ ನೀಡುವ ವೈದ್ಯಕೀಯ ಸೌಲಭ್ಯಗಳನ್ನು ಈ ತುರ್ತು ಪರಿಸ್ಥಿತಿಯಲ್ಲೂ ಕಡಿತಗೊಳಿಸಲಾಗಿದೆ. ಓವರ್‌ ಟೈಂ ಕೆಲಸ ಮಾಡುತ್ತಿರುವ ವೈದ್ಯರಿಗೆ ಸಂಬಳ ಕಡಿತ ಮಾಡಲಾಗಿದೆ. ಅಷ್ಟೇ ಅಲ್ಲ, ಈ ತುರ್ತು ಸಂದರ್ಭದಲ್ಲಿ ಯಾವುದೇ ತರಬೇತಿ ಇಲ್ಲದವರನ್ನು ನರ್ಸಿಂಗ್‌ ಕೆಲಸಕ್ಕೆ ನೇಮಕ ಮಾಡಿಕೊಳ್ಳಲಾಗುತ್ತಿದೆ ಎಂದೂ ವೈದ್ಯ ಸಮೂಹ ಆಕ್ರೋಶ ವ್ಯಕ್ತಪಡಿಸಿದೆ.

ಬೆಂಗಳೂರು ಲಾಕ್‌ಡೌನ್‌ Live: ನಗರದಲ್ಲಿ 18 ಮಂದಿಗೆ ಕೊರೊನಾ; ಸೋಂಕಿತರ ಸಂಖ್ಯೆ 234ಕ್ಕೆ ಏರಿಕೆ

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ