Imran Khan Rally in Islamabad: ಪಾಕಿಸ್ತಾನದಲ್ಲಿ ಮೆಟ್ರೋ ನಿಲ್ದಾಣಕ್ಕೆ ಪಿಟಿಐ ಬೆಂಬಲಿಗರ ಬೆಂಕಿ: ಚುನಾವಣೆ ಘೋಷಿಸಲು ಇಮ್ರಾನ್ ಖಾನ್ ಗಡುವು
Imran Khan gives 6-day ultimatum to Pakistan: ಪಾಕಿಸ್ತಾನದಲ್ಲಿ ಇನ್ನು ಆರು ದಿನಗಳಲ್ಲಿ ರಾಷ್ಟ್ರೀಯ ಚುನಾವಣೆ ಘೋಷಣೆ ಮಾಡಬೇಕು. ಇಲ್ಲದಿದ್ದರೆ ದೇಶಾದ್ಯಂತ ಬೃಹತ್ ಪ್ರಮಾಣದಲ್ಲಿ ಪ್ರತಿಭಟನೆ ನಡೆಸಲಾಗುವುದು ಎಂದು ನೂತನ ಸರ್ಕಾರಕ್ಕೆ ಇಮ್ರಾನ್ ಖಾನ್ ಎಚ್ಚರಿಕೆ ನೀಡಿದ್ದಾರೆ.
ಹೈಲೈಟ್ಸ್:
- ಇಮ್ರಾನ್ ಖಾನ್ ನೇತೃತ್ವದಲ್ಲಿ ರಾಜಧಾನಿಗೆ ಸಾವಿರಾರು ಮಂದಿ ಮುತ್ತಿಗೆ
- ಇಸ್ಲಾಮಾಬಾದ್ನಲ್ಲಿ ಪಿಟಿಐ ಬೆಂಬಲಿಗರಿಂದ ಬೃಹತ್ ಮೆರವಣಿಗೆ
- ಆರು ದಿನಗಳಲ್ಲಿ ಚುನಾವಣಾ ದಿನಾಂಕ ಘೋಷಿಸಲು ಇಮ್ರಾನ್ ಖಾನ್ ಗಡುವು
- ಚುನಾವಣೆ ಘೋಷಣೆ ಮಾಡದಿದ್ದರೆ ಬೃಹತ್ ಪ್ರತಿಭಟನೆ ನಡೆಸುವ ಎಚ್ಚರಿಕೆ
ಇಸ್ಲಾಮಾಬಾದ್: ಪಾಕಿಸ್ತಾನದಲ್ಲಿ ಹೊಸದಾಗಿ ಚುನಾವಣೆ ಘೋಷಣೆ ಮಾಡುವಂತೆ ಒತ್ತಾಯಿಸಿ ಪದಚ್ಯುತ ಪ್ರಧಾನಿ ಇಮ್ರಾನ್ ಖಾನ್ ನಡೆಸಿದ ಮೆರವಣಿಗೆ ಹಿಂಸಾಚಾರಕ್ಕೆ ತಿರುಗಿದೆ. ಬುಧವಾರ ಪ್ರತಿಭಟನಾ ಮೆರವಣಿಗೆ ವೇಳೆ ಇಮ್ರಾನ್ ಖಾನ್ ಅವರ ಪಿಟಿಐ ಪಕ್ಷದ ಬೆಂಬಲಿಗರು ಮೆಟ್ರೋ ನಿಲ್ದಾಣಕ್ಕೆ ಬೆಂಕಿ ಹಚ್ಚಿದ್ದಾರೆ. ಸಾವಿರಾರು ಬೆಂಬಲಿಗರ ಜತೆ ಇಸ್ಲಾಮಾಬಾದ್ಗೆ ಮೆರವಣಿಗೆಯಲ್ಲಿ ತೆರಳಿದ ಇಮ್ರಾನ್ ಖಾನ್, ಹೊಸದಾಗಿ ಚುನಾವಣೆ ನಡೆಸದೆ ಹೋದರೆ ಮತ್ತಷ್ಟು ಸಾಮೂಹಿಕ ಪ್ರತಿಭಟನೆ ಎದುರಿಸಬೇಕಾಗುತ್ತದೆ ಎಂದು ಶೆಹಬಾಜ್ ಷರೀಫ್ ಸರ್ಕಾರಕ್ಕೆ ಎಚ್ಚರಿಕೆ ನೀಡಿದ್ದಾರೆ.
ಸಾವಿರಾರು ಸಂಖ್ಯೆಯಲ್ಲಿ ಸೇರಿದ್ದ ಪ್ರತಿಭಟನಾಕಾರರು, ನಗರ ಪ್ರವೇಶಿದಂತೆ ಅಡ್ಡಲಾಗಿ ಇರಿಸಿದ್ದ ಬ್ಯಾರಿಕೇಡ್ಗಳನ್ನು ಕಿತ್ತೆಸೆಯಲು ಆರಂಭಿಸಿದರು. ಈ ವೇಳೆ ಪೊಲೀಸರು ಮತ್ತು ಇಮ್ರಾನ್ ಖಾನ್ ಬೆಂಬಲಿಗರ ಮಧ್ಯೆ ಘರ್ಷಣೆಗಳು ನಡೆದವು. ರಾಜಧಾನಿಯುದ್ದಕ್ಕೂ ಪೊಲೀಸರು ತಡೆಗೋಡೆಗಳನ್ನು ನಿರ್ಮಿಸಿದ್ದರು. ದೇಶದ ಇನ್ನೂ ಅನೇಕ ಕಡೆಗಳಲ್ಲಿ ಪೊಲೀಸರು ಮತ್ತು ಪಿಟಿಐ ಬೆಂಬಲಿಗರ ಘರ್ಷಣೆ ನಡೆದಿದೆ.
ಇಮ್ರಾನ್ ಖಾನ್ ಬಣವು ರಾಜಧಾನಿ ಪ್ರವೇಶಿಸುವುದನ್ನು ತಡೆಯಲು ಪ್ರಯತ್ನ ನಡೆಸಿತ್ತು. ನಗರದ ಒಳಗೆ ಬರುವ ಹಾಗೂ ನಿರ್ಗಮಿಸುವ ಎಲ್ಲ ಮಾರ್ಗಗಳನ್ನೂ ಬಂದ್ ಮಾಡಿತ್ತು. ಆದರೆ ಸುಪ್ರೀಂಕೋರ್ಟ್ನ ತುರ್ತು ಆದೇಶದಂತೆ ಅವರು ಪ್ರತಿಭಟನಾಕಾರರಿಗೆ ಅನುಮತಿ ನೀಡುವುದು ಅನಿವಾರ್ಯವಾಯಿತು.
ಚುನಾವಣೆಗೆ ಆಗ್ರಹಿಸಿ ಇಸ್ಲಾಮಾಬಾದ್ನ ಡಿ ಚೌಕದಲ್ಲಿ ಶಾಂತಿಯುತ ಪ್ರತಿಭಟನೆಗೆ ಇಮ್ರಾನ್ ಖಾನ್ ಕರೆ ನೀಡಿದ್ದರು. ರಾಜಧಾನಿಯಲ್ಲಿ ಮೆರವಣಿಗೆ ನಡೆಸಲು ಹಾಗೂ ಇಮ್ರಾನ್ ಖಾನ್ ಅವರಿಗೆ ಬಂಧನದಿಂದ ರಕ್ಷಣೆ ನೀಡಿ ಸುಪ್ರೀಂಕೋರ್ಟ್ ಆದೇಶ ನೀಡಿತ್ತು.
ಪಿಟಿಐ ಬೆಂಬಲಿಗರು ಚೀನಾ ಚೌಕ ಮೆಟ್ರೋ ನಿಲ್ದಾಣಕ್ಕೆ ಬೆಂಕಿ ಹಚ್ಚಿದ್ದು, ಕೆಲವು ಮರ ಗಿಡಗಳನ್ನು ಉರುಳಿಸಿದ್ದಾರೆ ಎಂದು ಆರೋಪಿಸಲಾಗಿದೆ. ಮರಗಳಿಗೆ ಕೂಡ ಬೆಂಕಿ ಹಚ್ಚಲಾಗಿದೆ. ಬಟ್ಟಿ ಚೌಕದ ಸಮೀಪ ಪಿಟಿಐ ಕಾರ್ಯಕರ್ತನೊಬ್ಬ ಸೇತುವೆಯಿಂದ ಬಿದ್ದು ಮೃತಪಟ್ಟಿದ್ದಾನೆ. ಆತನನ್ನು ಪೊಲೀಸರೇ ಕೆಳಕ್ಕೆ ತಳ್ಳಿ ಸಾಯಿಸಿದ್ದಾರೆ ಎಂದು ಪಕ್ಷದ ಬೆಂಬಲಿಗರು ಆರೋಪಿಸಿದ್ದಾರೆ.
"ಇನ್ನು ಆರು ದಿನಗಳ ಒಳಗೆ ಚುನಾವಣೆ ದಿನಾಂಕ ಘೋಷಣೆ ಮಾಡುವಂತೆ ಈ ಆಮದು ಸರ್ಕಾರಕ್ಕೆ ನಾನು ಸಂದೇಶ ನೀಡಲು ಬಯಸುತ್ತೇನೆ. ಸಂಸತ್ ಅನ್ನು ವಿಸರ್ಜನೆ ಮಾಡಿ ಮತ್ತು ಜೂನ್ನಲ್ಲಿ ಚುನಾವಣೆ ನಡೆಸಿ" ಎಂದಿರುವ ಇಮ್ರಾನ್ ಖಾನ್, ತಮ್ಮನ್ನು ವಿದೇಶಿ ಶಕ್ತಿಗಳ ಕೈವಾಡದೊಂದಿಗೆ ಅಧಿಕಾರದಿಂದ ಕೆಳಕ್ಕೆ ಇಳಿಸಲಾಗಿದೆ ಎಂದು ಪುನರುಚ್ಚರಿಸಿದ್ದಾರೆ. ಚುನಾವಣಾ ದಿನಾಂಕ ನಿಗದಿಯಾಗದೆ ಇದ್ದರೆ, ಇನ್ನೂ ದೊಡ್ಡ ಮಟ್ಟದ ಸಮಾವೇಶ ನಡೆಸುವುದಾಗಿ ಹೇಳಿದ್ದಾರೆ.
ಸಾವಿರಾರು ಸಂಖ್ಯೆಯಲ್ಲಿ ಸೇರಿದ್ದ ಪ್ರತಿಭಟನಾಕಾರರು, ನಗರ ಪ್ರವೇಶಿದಂತೆ ಅಡ್ಡಲಾಗಿ ಇರಿಸಿದ್ದ ಬ್ಯಾರಿಕೇಡ್ಗಳನ್ನು ಕಿತ್ತೆಸೆಯಲು ಆರಂಭಿಸಿದರು. ಈ ವೇಳೆ ಪೊಲೀಸರು ಮತ್ತು ಇಮ್ರಾನ್ ಖಾನ್ ಬೆಂಬಲಿಗರ ಮಧ್ಯೆ ಘರ್ಷಣೆಗಳು ನಡೆದವು. ರಾಜಧಾನಿಯುದ್ದಕ್ಕೂ ಪೊಲೀಸರು ತಡೆಗೋಡೆಗಳನ್ನು ನಿರ್ಮಿಸಿದ್ದರು. ದೇಶದ ಇನ್ನೂ ಅನೇಕ ಕಡೆಗಳಲ್ಲಿ ಪೊಲೀಸರು ಮತ್ತು ಪಿಟಿಐ ಬೆಂಬಲಿಗರ ಘರ್ಷಣೆ ನಡೆದಿದೆ.
ಇಮ್ರಾನ್ ಖಾನ್ ಬಣವು ರಾಜಧಾನಿ ಪ್ರವೇಶಿಸುವುದನ್ನು ತಡೆಯಲು ಪ್ರಯತ್ನ ನಡೆಸಿತ್ತು. ನಗರದ ಒಳಗೆ ಬರುವ ಹಾಗೂ ನಿರ್ಗಮಿಸುವ ಎಲ್ಲ ಮಾರ್ಗಗಳನ್ನೂ ಬಂದ್ ಮಾಡಿತ್ತು. ಆದರೆ ಸುಪ್ರೀಂಕೋರ್ಟ್ನ ತುರ್ತು ಆದೇಶದಂತೆ ಅವರು ಪ್ರತಿಭಟನಾಕಾರರಿಗೆ ಅನುಮತಿ ನೀಡುವುದು ಅನಿವಾರ್ಯವಾಯಿತು.
ಚುನಾವಣೆಗೆ ಆಗ್ರಹಿಸಿ ಇಸ್ಲಾಮಾಬಾದ್ನ ಡಿ ಚೌಕದಲ್ಲಿ ಶಾಂತಿಯುತ ಪ್ರತಿಭಟನೆಗೆ ಇಮ್ರಾನ್ ಖಾನ್ ಕರೆ ನೀಡಿದ್ದರು. ರಾಜಧಾನಿಯಲ್ಲಿ ಮೆರವಣಿಗೆ ನಡೆಸಲು ಹಾಗೂ ಇಮ್ರಾನ್ ಖಾನ್ ಅವರಿಗೆ ಬಂಧನದಿಂದ ರಕ್ಷಣೆ ನೀಡಿ ಸುಪ್ರೀಂಕೋರ್ಟ್ ಆದೇಶ ನೀಡಿತ್ತು.
ಪಿಟಿಐ ಬೆಂಬಲಿಗರು ಚೀನಾ ಚೌಕ ಮೆಟ್ರೋ ನಿಲ್ದಾಣಕ್ಕೆ ಬೆಂಕಿ ಹಚ್ಚಿದ್ದು, ಕೆಲವು ಮರ ಗಿಡಗಳನ್ನು ಉರುಳಿಸಿದ್ದಾರೆ ಎಂದು ಆರೋಪಿಸಲಾಗಿದೆ. ಮರಗಳಿಗೆ ಕೂಡ ಬೆಂಕಿ ಹಚ್ಚಲಾಗಿದೆ. ಬಟ್ಟಿ ಚೌಕದ ಸಮೀಪ ಪಿಟಿಐ ಕಾರ್ಯಕರ್ತನೊಬ್ಬ ಸೇತುವೆಯಿಂದ ಬಿದ್ದು ಮೃತಪಟ್ಟಿದ್ದಾನೆ. ಆತನನ್ನು ಪೊಲೀಸರೇ ಕೆಳಕ್ಕೆ ತಳ್ಳಿ ಸಾಯಿಸಿದ್ದಾರೆ ಎಂದು ಪಕ್ಷದ ಬೆಂಬಲಿಗರು ಆರೋಪಿಸಿದ್ದಾರೆ.
"ಇನ್ನು ಆರು ದಿನಗಳ ಒಳಗೆ ಚುನಾವಣೆ ದಿನಾಂಕ ಘೋಷಣೆ ಮಾಡುವಂತೆ ಈ ಆಮದು ಸರ್ಕಾರಕ್ಕೆ ನಾನು ಸಂದೇಶ ನೀಡಲು ಬಯಸುತ್ತೇನೆ. ಸಂಸತ್ ಅನ್ನು ವಿಸರ್ಜನೆ ಮಾಡಿ ಮತ್ತು ಜೂನ್ನಲ್ಲಿ ಚುನಾವಣೆ ನಡೆಸಿ" ಎಂದಿರುವ ಇಮ್ರಾನ್ ಖಾನ್, ತಮ್ಮನ್ನು ವಿದೇಶಿ ಶಕ್ತಿಗಳ ಕೈವಾಡದೊಂದಿಗೆ ಅಧಿಕಾರದಿಂದ ಕೆಳಕ್ಕೆ ಇಳಿಸಲಾಗಿದೆ ಎಂದು ಪುನರುಚ್ಚರಿಸಿದ್ದಾರೆ. ಚುನಾವಣಾ ದಿನಾಂಕ ನಿಗದಿಯಾಗದೆ ಇದ್ದರೆ, ಇನ್ನೂ ದೊಡ್ಡ ಮಟ್ಟದ ಸಮಾವೇಶ ನಡೆಸುವುದಾಗಿ ಹೇಳಿದ್ದಾರೆ.