ಆ್ಯಪ್ನಗರ

ನಗೆಪಾಟಲಿಗೆ ಗುರಿಯಾದ ಇಮ್ರಾನ್ ಖಾನ್ ಹೊಸ ಸಂಶೋಧನೆ!

ಲಘು ಹೇಳಿಕೆಗಳನ್ನು ನೀಡುವ ಮೂಲಕ ಸ್ವದೇಶಿಯರಿಂದಲೇ ಟೀಕೆಗೆ ಒಳಗಾಗುತ್ತಿ­ರುವ ಪಾಕಿಸ್ತಾನದ ಪ್ರಧಾನಿ ಇಮ್ರಾನ್‌ ಖಾನ್‌, ಈಗ ಮತ್ತೊಂದು ಅಪಭ್ರಂಶ ನುಡಿದು ಅಪಹಾಸ್ಯಕ್ಕೆ ಗುರಿಯಾಗಿದ್ದಾರೆ.

Vijaya Karnataka Web 28 Nov 2019, 7:13 am
ಇಸ್ಲಾಮಾಬಾದ್‌: ಲಘು ಹೇಳಿಕೆಗಳನ್ನು ನೀಡುವ ಮೂಲಕ ಸ್ವದೇಶಿಯರಿಂದಲೇ ಟೀಕೆಗೆ ಒಳಗಾಗುತ್ತಿರುವ ಪಾಕಿಸ್ತಾನದ ಪ್ರಧಾನಿ ಇಮ್ರಾನ್‌ ಖಾನ್‌, ಈಗ ಮತ್ತೊಂದು ಅಪಭ್ರಂಶ ನುಡಿದು ಅಪಹಾಸ್ಯಕ್ಕೆ ಗುರಿಯಾಗಿದ್ದಾರೆ.
Vijaya Karnataka Web imran khan saying that the trees produce oxygen in the night has been going viral
ನಗೆಪಾಟಲಿಗೆ ಗುರಿಯಾದ ಇಮ್ರಾನ್ ಖಾನ್ ಹೊಸ ಸಂಶೋಧನೆ!


''ಮರಗಳು ರಾತ್ರಿ ಆಮ್ಲಜನಕವನ್ನು ಹೊರಸೂಸಿ, ಇಂಗಾಲದ ಡೈಆಕ್ಸೈಡ್‌ ಹೀರಿಕೊಂಡು ಜನರ ಜೀವ ರಕ್ಷಣೆಗೆ ನೆರವಾಗುತ್ತವೆ,'' ಎಂದು ಖಾನ್‌ ಹೊಸ ವೈಜ್ಞಾನಿಕ ಸಂಶೋಧನೆ ಮಂಡಿಸಿ ನಗೆಪಾಟಲಿಗೆ ಈಡಾಗಿದ್ದಾರೆ.

ಕಾರ್ಯಕ್ರಮವೊಂದರಲ್ಲಿ ಖಾನ್‌ ಆಡಿದ ಈ ಉಲ್ಟಾ ವೈಚಾರಿಕತೆಯ ಮಾತುಗಳ ವಿಡಿಯೊ ವೈರಲ್‌ ಆಗಿದೆ. ಪಾಕಿಸ್ತಾನದ ಪತ್ರಕರ್ತೆ ನೈಲಾ ಇನಾಯತ್‌ ಈ ವಿಡಿಯೊ ಪೋಸ್ಟ್‌ ಮಾಡಿದ್ದು, 'ರಾತ್ರಿ ವೇಳೆ ಮರಗಳ ಆಕ್ಸಿಜನ್‌ ಬಿಡುಗಡೆ ಮಾಡುತ್ತವೆ: ಐನ್‌ಸ್ಟೈನ್‌ ಖಾನ್‌' ಎನ್ನುವ ವ್ಯಂಗ್ಯದ ಶೀರ್ಷಿಕೆ ನೀಡಿದ್ದಾರೆ.


ಪಾಕಿಸ್ತಾನ ಪ್ರಧಾನಿ ಹುದ್ದೆ ತೊರೆಯಲು ಇಮ್ರಾನ್ ಗೆ ಹೆಚ್ಚಿದ ಒತ್ತಡ

ಕಳೆದ 10 ವರ್ಷಗಳಲ್ಲಿ ಶೇಕಡಾ 70 ರಷ್ಟು ಹಸಿರು ಹೊದಿಕೆಯನ್ನು ಕಡಿತಗೊಳಿಸಲಾಗಿದೆ. ಮರಗಳು ಗಾಳಿಯನ್ನು ಸ್ವಚ್ಛಗೊಳಿಸುವುದರಿಂದ ಅವು ರಾತ್ರಿಯಲ್ಲಿ ಆಮ್ಲಜನಕವನ್ನು ನೀಡುತ್ತವೆ. ಮರಗಳು ಕಾರ್ಬನ್ ಡೈಆಕ್ಸೈಡ್ ಅನ್ನು ಸಹ ಹೀರಿಕೊಳ್ಳುತ್ತವೆ ಎಂದು ಖಾನ್ ವಿಡಿಯೋದಲ್ಲಿ ಹೇಳಿದ್ದಾರೆ. ಈ ವಿಡಿಯೋಗೆ ಸಾಮಾಜಿಕ ಜಾಲತಾಣದಲ್ಲಿ ತರಹೇವಾರಿ ತಮಾಷೆಗೂ ಮೀರಿದ ಕಮೆಂಟ್ ಗಳು ಬರುತ್ತಿವೆ.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ