ಆ್ಯಪ್ನಗರ

ಹವಾಮಾನ ಸಂರಕ್ಷಣೆಗೆ ಕ್ರಮ: ಟಾಪ್‌ 10 ದೇಶಗಳಲ್ಲಿ 9ನೇ ಸ್ಥಾನ ಪಡೆದ ಭಾರತ

ಜಾಗತಿಕ ಹವಾಮಾನ ಬದಲಾವಣೆಯನ್ನು ತಡೆಯಲು ದಿಟ್ಟ ಕ್ರಮಗಳನ್ನು ಕೈಗೊಂಡ ವಿಶ್ವದ ಹತ್ತು ಪ್ರಮುಖ ದೇಶಗಳ ಪಟ್ಟಿಯಲ್ಲಿ ಭಾರತ ಇದೇ ಮೊದಲ ಬಾರಿಗೆ ಸ್ಥಾನ ಪಡೆದಿದೆ. ಹವಾಮಾನ ಬದಲಾವಣೆ ಕಾರ್ಯದಕ್ಷತೆ ಸೂಚ್ಯಂಕ (ಸಿಸಿಪಿಐ)ದಲ್ಲಿ ಭಾರತ 9ನೇ ರ‍್ಯಾಂಕ್‌ ಪಡೆದಿದೆ.

Vijaya Karnataka Web 10 Dec 2019, 9:54 pm
ಮ್ಯಾಡ್ರಿಡ್‌(ಸ್ಪೇನ್‌): ಜಾಗತಿಕ ಹವಾಮಾನ ಬದಲಾವಣೆಯನ್ನು ತಡೆಯಲು ದಿಟ್ಟ ಕ್ರಮಗಳನ್ನು ಕೈಗೊಂಡ ವಿಶ್ವದ ಹತ್ತು ಪ್ರಮುಖ ದೇಶಗಳ ಪಟ್ಟಿಯಲ್ಲಿ ಭಾರತ ಇದೇ ಮೊದಲ ಬಾರಿಗೆ ಸ್ಥಾನ ಪಡೆದಿದೆ. ಮಂಗಳವಾರ ಬಿಡುಗಡೆಗೊಂಡ 'ಹವಾಮಾನ ಬದಲಾವಣೆ ಕಾರ್ಯದಕ್ಷತೆ ಸೂಚ್ಯಂಕ (ಸಿಸಿಪಿಐ)ದಲ್ಲಿಸ್ಥಾನ ಪಡೆದ ಟಾಪ್‌ 10 ದೇಶಗಳಲ್ಲಿ ಭಾರತವೂ ಸೇರಿದೆ. ಇಲ್ಲಿನಡೆಯುತ್ತಿರುವ 'ಸಿಒಪಿ25' ಹವಾಮಾನ ಸಂರಕ್ಷಣೆ ಶೃಂಗಸಭೆಯಲ್ಲಿಈ ಸೂಚ್ಯಂಕವನ್ನು ಬಿಡುಗಡೆ ಮಾಡಲಾಗಿದೆ.
Vijaya Karnataka Web earth


ಭಾರತದಲ್ಲಿ'ಮಾಲಿನ್ಯ ಹೊರಸೂಸುವಿಕೆ' ಮತ್ತು ತಲಾ 'ಶಕ್ತಿ ಸಂಪನ್ಮೂಲ ಬಳಕೆ' ಪ್ರಮಾಣವು ಇತರೆ ದೇಶಗಳಿಗೆ ಹೋಲಿಸಿದರೆ ಕಡಿಮೆ ಇದ್ದು, ಅದು ಪ್ಯಾರಿಸ್‌ ಒಪ್ಪಂದದಂತೆ 2030ರ ನಿರೀಕ್ಷಿತ ಗುರಿಯ ವ್ಯಾಪ್ತಿಯಲ್ಲೇ ಇದೆ. ಈ ವಿಭಾಗದಲ್ಲಿ ಭಾರತ ಸೂಚ್ಯಂಕದಲ್ಲಿ9ನೇ ರ‍್ಯಾಂಕ್‌ ಪಡೆದಿದೆ. ಇದೇ ವೇಳೆ ಹಸಿರು ಮನೆ ಅನಿಲ ಹೊರಸೂಸುವಿಕೆ ವಿಚಾರದಲ್ಲೂ ಭಾರತ ನಿಗದಿತ ಮಿತಿಯನ್ನು ಮೀರಿಲ್ಲಎಂದು ವರದಿ ತಿಳಿಸಿದೆ.

ಆಸ್ಪ್ರೇಲಿಯಾ, ಸೌದಿ ಅರೇಬಿಯಾ ಮತ್ತು ಪ್ಯಾರಿಸ್‌ ಒಪ್ಪಂದದಿಂದ ಹಿಂದೆ ಸರಿದಿರುವ ಅಮೆರಿಕಗಳು ತ್ಯಾಜ್ಯ ಹೊರಸೂಸುವಿಕೆ ಮತ್ತು ನವೀಕರಿಸಬಹುದಾದ ಇಂಧನ ಬಳಕೆಯಲ್ಲಿ ಹಿಂದುಳಿದಿರುವುದು ಕಳವಳಕಾರಿ ಸಂಗತಿ ಎಂದೂ ವರದಿಯಲ್ಲಿಹೇಳಲಾಗಿದೆ.

ಮೋದಿ ಲೋಕಸಭಾ ಚುನಾವಣೆ ಗೆಲುವಿನ ಧನ್ಯವಾದ ಸಂದೇಶಕ್ಕೆ ‘ಗೋಲ್ಡನ್‌ ಟ್ವೀಟ್‌’ ಗೌರವ

ಇನ್ನೂ ಸಾಲದು: ಸೂಚ್ಯಂಕದಲ್ಲಿಉತ್ತಮ ಸ್ಥಾನದ ಹೊರತಾಗಿಯೂ ಭಾರತ ಜಾಗತಿಕ ಹವಾಮಾನ ಸಂರಕ್ಷಣೆಗಾಗಿ ಕೈಗೊಳ್ಳಬೇಕಾದ ಕೆಲಸಗಳು ಸಾಕಷ್ಟಿವೆ ಎಂದು ತಜ್ಞರು ಹೇಳಿದ್ದಾರೆ. ಇದರಲ್ಲಿ ಮುಖ್ಯವಾಗಿ ಪಳಿಯುಳಿಕೆ ಇಂಧನಗಳ ಮೇಲಿನ ಸಬ್ಸಿಡಿಯನ್ನು ಹಂತಹಂತವಾಗಿ ರದ್ದು ಮಾಡುವ ಮೂಲಕ ಅವುಗಳ ಬಳಕೆಯನ್ನು ಕಡಿಮೆ ಮಾಡಲು ಕ್ರಮ ಕೈಗೊಳ್ಳಬೇಕೆಂದು ತಜ್ಞರು ಅಭಿಪ್ರಾಯಪಟ್ಟಿದ್ದಾರೆ. ಈ ಕ್ರಮದಿಂದ ಪಳಿಯುಳಿಕೆ ಇಂಧನಗಳ ಮೇಲೆ ದೇಶದ ಅವಲಂಬನೆ ತಪ್ಪಿಸಲು ಸಹಾಯವಾಗುತ್ತದೆ ಎಂಬುದು ತಜ್ಞರ ಅಭಿಮತ. ನವೀಕರಿಸಬಹುದಾದ ಶಕ್ತಿ ಸಂಪನ್ಮೂಲಗಳ ಬಳಕೆಗೆ ಸಂಬಂಧಿಸಿದಂತೆ 2030ರ ವೇಳೆಗೆ ಗುರಿ ಸಾಧಿಸುವ ನಿಟ್ಟಿನಲ್ಲಿಯೂ ಭಾರತ ತೀವ್ರಗತಿಯಲ್ಲಿಕಾರ್ಯಪ್ರವೃತ್ತವಾಗಬೇಕು ಎಂದೂ ತಜ್ಞರು ಅಭಿಪ್ರಾಯಪಟ್ಟಿದ್ದಾರೆ.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ