ಆ್ಯಪ್ನಗರ

ಭಾರತ- ಭೂತಾನ್ ನಡುವೆ ಐತಿಹಾಸಿಕ, ಸಾಂಸ್ಕೃತಿಕ ಮತ್ತು ಆಧ್ಯಾತ್ಮಿಕ ಸಂಬಂಧ: ಪ್ರಧಾನಿ ಮೋದಿ

ಬಾಹ್ಯಾಕಾಶ ಸಂಶೋಧನೆ, ವಿಮಾನ ಯಾನ, ಐಟಿ, ವಿದ್ಯುತ್‌ ಮತ್ತು ಶಿಕ್ಷಣ ಕ್ಷೇತ್ರಗಳಿಗೆ ಸಂಬಂಧಿಸಿದ 10 ಒಡಂಬಡಿಕೆಗಳಿಗೆ ಉಭಯ ರಾಷ್ಟ್ರಗಳು ಸಹಿ ಹಾಕಿವೆ.

Times Now 18 Aug 2019, 12:47 pm
ಥಿಂಪು: ಭಾರತ ಮತ್ತು ಭೂತಾನ್ ಐತಿಹಾಸಿಕ, ಸಾಂಸ್ಕೃತಿಕ ಮತ್ತು ಆಧ್ಯಾತ್ಮಿಕ, ಶೈಕ್ಷಣಿಕ ಸಂಪ್ರದಾಯಗಳೊಂದಿಗೆ ವಿಶಿಷ್ಟ ಸಂಬಂಧವನ್ನು ಹಂಚಿಕೊಳ್ಳುತ್ತವೆ , ಈ ಸಂಬಂಧ ಆಧುನಿಕ ಕಾಲದಲ್ಲೂ ಮುಂದುವರಿದಿದೆ ಎಂದು ಪ್ರಧಾನಿ ಮೋದಿ ಹೇಳಿದ್ದಾರೆ.
Vijaya Karnataka Web 1566103952-MODI_THIMPU


ಎರಡು ದಿನಗಳ ಭೂತಾನ್‌ ಪ್ರವಾಸದಲ್ಲಿರುವ ಪ್ರಧಾನಿ ನರೇಂದ್ರ ಮೋದಿ ಥಿಂಪುವಿನಲ್ಲಿರುವ ರಾಯಲ್ ವಿಶ್ವವಿದ್ಯಾಲಯದ ವಿದ್ಯಾರ್ಥಿಗಳನ್ನುದ್ದೇಶಿಸಿ ಮಾತನಾಡುತ್ತ, ಭಾರತ ಮತ್ತು ಭೂತಾನ್ ನಡುವೆ ಹಿಂದಿನಿಂದಲೂ ಐತಿಹಾಸಿಕ, ಸಾಂಸ್ಕೃತಿಕ ಮತ್ತು ಆಧ್ಯಾತ್ಮಿಕ ಸಂಪ್ರದಾಯಗಳ ವಿಶಿಷ್ಟ ಸಂಬಂಧವಿದೆ. ಎರಡು ದೇಶಗಳ ಪ್ರಧಾನ ಶಿಕ್ಷಣ ಸಂಸ್ಥೆಗಳ ನಡುವೆ ಆಳವಾದ ಶೈಕ್ಷಣಿಕ ಸಹಯೋಗ ಮತ್ತಷ್ಟು ಬೆಳೆಯಬೇಕು ಎಂದರು.

"ಭೂತಾನ್ ಮತ್ತು ಭಾರತದ ಜನರು ಒಬ್ಬರಿಗೊಬ್ಬರು ಹೆಚ್ಚಿನ ಬಾಂಧವ್ಯವನ್ನು ಅನುಭವಿಸುವುದು ಸಹಜ. ಏಕೆಂದರೆ ನಾವು ನಮ್ಮ ಭೌಗೋಳಿಕತೆಯಿಂದಾಗಿ ಮಾತ್ರ ಹತ್ತಿರವಿಲ್ಲ, ಭೂತಾನ್‌ಗೆ ಭೇಟಿ ನೀಡುವ ಪ್ರತಿಯೊಬ್ಬರು ಇಲ್ಲಿನ ನೈಸರ್ಗಿಕ ಸೌಂದರ್ಯದಿಂದ ಜನರ ಪ್ರೀತ್ಯಾದರ ಮತ್ತು ಸರಳತೆಯಿಂದ ಪ್ರಭಾವಿತರಾಗುತ್ತಾರೆ, ”ಎಂದು ಹೇಳಿದರು.


"ತಮ್ಮ 'ಎಕ್ಸಾಂ ವಾರಿಯರ್ಸ್' ಪುಸ್ತಕವು ಭಗವಾನ್ ಬುದ್ಧನ ಬೋಧನೆಗಳಿಂದ ಪ್ರಭಾವಿತವಾಗಿದೆ, ಎಂದಿದ್ದಾರೆ ಮೋದಿ.

ಭೂತಾನ್‌ನ ಸ್ವಂತ ಉಪಗ್ರಹ ವಿನ್ಯಾಸ ಮತ್ತು ಉಡ್ಡಯನಕ್ಕಾಗಿ ಅಧ್ಯಯನ ಮಾಡಲು ಭಾರತಕ್ಕೆ ಬರುತ್ತಿರುವ ಅಲ್ಲಿನ ಯುವ ವಿಜ್ಞಾನಿಗಳಿಗೆ ಮೋದಿ ಸ್ವಾಗತ ಕೋರಿದ್ದಾರೆ.

ಶನಿವಾರ, ಥಿಂಪುವಿನಲ್ಲಿ ದಕ್ಷಿಣ ಏಷ್ಯಾ ಉಪಗ್ರಹ ಕೇಂದ್ರವನ್ನು ಉದ್ಘಾಟಿಸಲಾಯಿತು, ಈ ಮೂಲಕ ಉಭಯ ದೇಶಗಳ ನಡುವೆ ಬಾಹ್ಯಾಕಾಶ ಸಹಕಾರವನ್ನು ವಿಸ್ತರಿಸಲಾಯಿತು.

10 ಒಡಂಬಡಿಕೆಗಳಿಗೆ ಸಹಿ

ಪ್ರಧಾನಿಯಾದ ಬಳಿಕ ಭೂತಾನ್‌ಗೆ ಮೋದಿ ಅವರದಿದು ಎರಡನೆಯ ಭೇಟಿ. ಶನಿವಾರ ಮುಂಜಾನೆ ಭೂತಾನ್‌ ಪ್ರಧಾನಿ ಲೋಟೇ ತ್ಶೇರಿಂಗ್‌ ಜತೆ ಅವರು ವಿಸ್ತೃತ ಮಾತುಕತೆ ನಡೆಸಿದರು. ಈ ಸಂದರ್ಭ ಉಭಯ ರಾಷ್ಟ್ರಗಳ ನಡುವಿನ ಸಂಬಂಧ ಬಲವರ್ಧನೆಗೆ ಹೊಸ ಶಕ್ತಿ ತುಂಬುವ 10 ಒಡಂಬಡಿಕೆಗಳಿಗೆ ಸಹಿ ಹಾಕಲಾಯಿತು. ಹಲವಾರು ಕ್ಷೇತ್ರಗಳಲ್ಲಿ ದ್ವಿಪಕ್ಷೀಯ ಸಹಭಾಗಿತ್ವವನ್ನು ಇನ್ನಷ್ಟು ವಿಸ್ತರಿಸುವ ಕ್ರಮಗಳ ಕುರಿತೂ ಚರ್ಚಿಸಲಾಯಿತು.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ