ಆ್ಯಪ್ನಗರ

ನೋ ಮನಿ ಫಾರ್‌ ಟೆರರ್‌: ಅಂತಾ­ರಾಷ್ಟ್ರೀಯ ವೇದಿಕೆಯಲ್ಲಿ ಪಾಕ್ ವಿರುದ್ಧ ವಾಗ್ದಾಳಿ ನಡೆಸಿದ ಭಾರತ

'ನೋ ಮನಿ ಫಾರ್‌ ಟೆರರ್‌' ಎನ್ನುವ ವಿಷಯದ ಮೇಲೆ ಆಸ್ಟ್ರೇಲಿಯಾದ ಮೆಲ್ಬೋರ್ನ್ ನಲ್ಲಿ ನಡೆದ ಸಮಾ­ವೇಶದಲ್ಲಿ ಪಾಲ್ಗೊಂಡ ಭಾರತ ಪಾಕಿಸ್ತಾನದ ವಿರುದ್ಧ ವಾಗ್ದಾಳಿ ನಡೆಸಿದೆ. ಭಯೋತ್ಪಾ­ದನೆ ವಿರುದ್ಧ ಶೂನ್ಯ ಸಹಿಷ್ಣುತೆ ಅನಿವಾರ್ಯ ಎಂದಿದೆ.

Vijaya Karnataka Web 8 Nov 2019, 8:17 am
ಮೆಲ್ಬೋರ್ನ್‌: ಭಯೋತ್ಪಾ­ದನೆ ವಿರುದ್ಧ ಶೂನ್ಯ ಸಹಿಷ್ಣುತೆ ಅನಿವಾರ್ಯ. ಈ ಸಮಾಜ ಘಾತುಕ ಶಕ್ತಿಗಳಿಗೆ ಬೆಂಬಲ ಹಾಗೂ ಆರ್ಥಿಕ ನೆರವು ನೀಡುತ್ತಿರುವ ದೇಶಗಳನ್ನೂ ದಂಡಿಸುವ ಅಗತ್ಯ ಇದೆ ಎಂದು ಪಾಕಿಸ್ತಾನವನ್ನು ಗುರಿಯಾಗಿಸಿ­ಕೊಂಡು ಭಾರತ ಮತ್ತೊಮ್ಮೆ ಅಂತಾ­ರಾಷ್ಟ್ರೀಯ ವೇದಿಕೆಯಲ್ಲಿ ವಾಗ್ದಾಳಿ ನಡೆ­ಸಿದೆ.
Vijaya Karnataka Web G Kishan Reddy


ಉಗ್ರ ಪಾಕಿಸ್ತಾನ ಇನ್ನು ಪರಮಾಪ್ತ ದೇಶವಲ್ಲ

'ನೋ ಮನಿ ಫಾರ್‌ ಟೆರರ್‌' ಎನ್ನುವ ವಿಷಯದ ಮೇಲೆ ಆಸ್ಟ್ರೇಲಿಯಾದ ಮೆಲ್ಬೋರ್ನ್ ನಲ್ಲಿ ನಡೆದ ಸಮಾವೇಶದಲ್ಲಿ ಪಾಲ್ಗೊಂಡು ಮಾತನಾಡಿದ ಕೇಂದ್ರ ಗೃಹ ಖಾತೆ ಸಹಾಯಕ ಸಚಿವ ಜಿ.ಕಿಶನ್‌ ರೆಡ್ಡಿ, ''ಉಗ್ರರನ್ನು ಬೆಂಬಲಿಸುವವರ ವಿರುದ್ಧವೂ ಜಾಗತಿಕ ಒಗ್ಗಟ್ಟಿನ ಹೋರಾಟ ನಡೆಯಬೇಕಿದೆ. ವಿಶ್ವಸಂಸ್ಥೆಯ ಮುಂದಾಳತ್ವದಲ್ಲಿ ಈ ಪ್ರಯತ್ನವನ್ನು ತ್ವರಿತಗೊಳಿಸಬೇಕಿದೆ. ಇಲ್ಲದೇ ಹೋದರೆ ಸಭ್ಯ ರಾಷ್ಟ್ರಗಳಿಗೆ ಉಳಿಗಾಲ ಇಲ್ಲ,'' ಎಂದು ಪರೋಕ್ಷವಾಗಿ ಪಾಕಿಸ್ತಾನವನ್ನು ತಿವಿದರು.

ಪಾಕ್‌ ಹಿಂದೂ ಯುವತಿ ನಿಗೂಢ ಸಾವಿನ ಜಾಡು ಪತ್ತೆ! ರೇಪ್ & ಮರ್ಡರ್ ಕೇಸ್‌ಗೆ ಆತ್ಮಹತ್ಯೆ ಬಣ್ಣ!

ಲಷ್ಕರೆ ತಯ್ಬಾ, ಜೈಷೆ ಮೊಹಮ್ಮದ್‌ ಮತ್ತು ಹಿಜ್ಬುಲ್‌ ಮುಜಾಹಿದೀನ್‌ ನಂತಹ ಉಗ್ರ ಸಂಘಟನೆ­ಗಳಿಗೆ ನೆಲೆ ನೀಡಿರುವ ಪಾಕಿ­ಸ್ತಾನವು ಅಂತಾರಾಷ್ಟ್ರೀಯ ವೇದಿಕೆ­ಗಳಲ್ಲಿ ನಿರಂತರ ಒತ್ತಡಕ್ಕೆ ಒಳಗಾಗುತ್ತಲೇ ಬಂದಿದೆ. ಮುಂಬಯಿ ಮತ್ತು ದಿಲ್ಲಿ ಸೇರಿದಂತೆ ಭಾರತದ ಹಲವೆಡೆ ನಡೆದ ಉಗ್ರ ದಾಳಿಗಳ ನೇರ ಹೊಣೆಯನ್ನು ಈ ಸಂಘಟನೆಗಳು ಹೊತ್ತುಕೊಂಡಿವೆ. ಪಾಕ್‌ ಸರಕಾರವೇ ಈ ಸಂಘಟನೆಗಳಿಗೆ ಪರೋಕ್ಷ­ವಾಗಿ ಹಣಕಾಸು ನೆರವು ಒದಗಿಸುತ್ತಿದೆ ಎನ್ನುವ ಆರೋಪ ಇದೆ. 'ನೋ ಮನಿ ಫಾರ್‌ ಟೆರರ್‌' ಸಮ್ಮೇಳನವನ್ನು 100ಕ್ಕೂ ಹೆಚ್ಚು ದೇಶಗಳ ಹಣಕಾಸು ಗುಪ್ತಚರ ಘಟಕಗಳು ಜಂಟಿಯಾಗಿ ಆಯೋಜಿಸಿವೆ.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ