ಆ್ಯಪ್ನಗರ

ಅಮೆರಿಕಾ ಪ್ರತಿಭಟನಾಕಾರರಿಗೆ ಆಶ್ರಯ ಕಲ್ಪಿಸಿ ಹೀರೊ ಆದ ಭಾರತೀಯ

ಪ್ರತಿಭಟನಾಕಾರರನ್ನು ಚದುರಿಸಲು ಪೊಲೀಸರು ಲಾಠಿ ಪ್ರಹಾರ ನಡೆಸಿದ್ದ ವೇಳೆ ನೂರಾರು ಮಂದಿ ಆಶ್ರಯ ಬಯಸಿ ಸೋಮವಾರ ರಾತ್ರಿ ಹಲವು ಕಡೆ ಧಾವಿಸಿದ್ದರು. ಈ ವೇಳೆ ರಾಹುಲ್‌ ದುಬೆ ತಮ್ಮ ನಿವಾಸದಲ್ಲಿ 70 ಪ್ರತಿಭಟನಾಕಾರರಿಗೆ ಆಶ್ರಯ ಕಲ್ಪಿಸಿದ್ದರು.

Agencies 3 Jun 2020, 8:31 pm

ವಾಷಿಂಗ್ಟನ್‌: ಪೊಲೀಸ್‌ ಅಧಿಕಾರಿ ಕಪ್ಪು ವರ್ಣೀಯನನ್ನು ಹತ್ಯೆ ಮಾಡಿರುವುದನ್ನು ಖಂಡಿಸಿ ಅಮೆರಿಕದಲ್ಲಿ ನಡೆಯುತ್ತಿರುವ ಪ್ರತಿಭಟನೆ ತುಸು ನಿಯಂತ್ರಣಕ್ಕೆ ಬಂದಿದ್ದರೂ ಪರಿಸ್ಥಿತಿ ಇನ್ನೂ ಬೂದಿ ಮುಚ್ಚಿದ ಕೆಂಡಂತಿದೆ. ಇದರ ಮಧ್ಯೆ ಪೊಲೀಸರಿಂದ ಪ್ರಾಣಾಪಾಯಕ್ಕೆ ಗುರಿಯಾಗಿದ್ದ 70 ಪ್ರತಿಭಟನಾಕಾರರಿಗೆ ತಮ್ಮ ಮನೆಯಲ್ಲಿಆಶ್ರಯ ನೀಡಿದ ಭಾರತೀಯ ಮೂಲದ ವ್ಯಕ್ತಿ ರಾಹುಲ್‌ ದುಬೆ ಅವರ ಕ್ರಮಕ್ಕೆ ಕರಿಯರಿಂದ ಭಾರಿ ಮೆಚ್ಚುಗೆ ವ್ಯಕ್ತವಾಗಿದೆ.
Vijaya Karnataka Web Rahul Dubey


ಕಪ್ಪು ವರ್ಣೀಯ 46 ವರ್ಷದ ಜಾರ್ಜ್‌ ಫ್ಲಾಯ್ಡ್‌ ಪೊಲೀಸ್‌ ದೌರ್ಜನ್ಯದಲ್ಲಿ ಹತ್ಯೆಗೀಡಾಗಿದ್ದನ್ನು ಖಂಡಿಸಿ ವೀಕೆಂಡ್‌ನಲ್ಲಿ ಅಮೆರಿಕದಾದ್ಯಂತ ಸಾವಿರಾರು ಕರಿಯರು ಬೀದಿಗಿಳಿದು ಪ್ರತಿಭಟನೆ ನಡೆಸಿದ್ದರು. ಇವರನ್ನು ಚದುರಿಸಲು ಪೊಲೀಸರು ಲಾಠಿ ಪ್ರಹಾರ ನಡೆಸಿದ್ದ ವೇಳೆ ನೂರಾರು ಮಂದಿ ಆಶ್ರಯ ಬಯಸಿ ಸೋಮವಾರ ರಾತ್ರಿ ಹಲವು ಕಡೆ ಧಾವಿಸಿದ್ದರು. ಈ ವೇಳೆ ವಾಷಿಂಗ್ಟನ್‌ನ ಅಲೆನ್‌ ಸ್ಟ್ರೀಟ್‌ನಲ್ಲಿ ಕಳೆದ 17 ವರ್ಷಗಳಿಂದ ವಾಸವಾಗಿರುವ ರಾಹುಲ್‌ ದುಬೆ ಅವರು ತಮ್ಮ ನಿವಾಸದಲ್ಲಿ 70 ಪ್ರತಿಭಟನಾಕಾರರಿಗೆ ಆಶ್ರಯ ಕಲ್ಪಿಸಿದರು. ತಾಯಿ, ಪತ್ನಿ ಹಾಗೂ ಪುತ್ರನೊಂದಿಗೆ ವಾಸವಿರುವ ದುಬೆ ತಮ್ಮ ಮನೆಯಲ್ಲಿ ಆಶ್ರಯ ಕಲ್ಪಿಸಿದ್ದಕ್ಕೆ ಕರಿಯರು ಅಭಿನಂದನೆ ಸಲ್ಲಿಸಿದ್ದಾರೆ.

ಭಾರತ ಗಡಿಯಲ್ಲಿ ಅಸ್ಥಿರತೆ ಇಲ್ಲ, ಮೂರನೇ ವ್ಯಕ್ತಿಗಳ ಹಸ್ತಕ್ಷೇಪ ಬೇಡ ಎಂದ ಚೀನಾ


ವರ್ಣಭೇದ ನೀತಿಯನ್ನು ಯಾವುದೇ ಕಾರಣಕ್ಕೂ ಒಪ್ಪಲಾಗದು. ಸಮಾಜ ಪ್ರತಿಯೊಬ್ಬರ ಹಕ್ಕುಗಳನ್ನೂ ಗೌರವಿಸಬೇಕು. ಹಿಂಸೆಯಿಂದ ಏನನ್ನೂ ಸಾಧಿಸಲಾಗದು. ಶಾಂತಿ ಹಾಗೂ ಸುವ್ಯವಸ್ಥೆ ಕಾಪಾಡಿಕೊಂಡು ಹೋಗುವುದು ಅಮೆರಿಕದ ಸರಕಾರ ಕರ್ತವ್ಯ.
ಪೋಪ್‌ ಫ್ರಾನ್ಸಿಸ್, ಕ್ರೈಸ್ತ ಧರ್ಮಗುರು


‘ಅಲ್ವಾರೇಜ್‌ ದುಬೆ ಟ್ರೇಡಿಂಗ್‌ ಕಂಪನಿ’ಯನ್ನು ನಡೆಸುತ್ತಿರುವ ದುಬೆ ಅವರು, "ನೀವು ಯಾವುದೇ ಕಾರಣಕ್ಕೂ ನಿಮ್ಮ ಹಕ್ಕುಗಳನ್ನು ಬಿಟ್ಟುಕೊಡಬೇಡಿ. ಪ್ರತಿಭಟನೆ ಮುಂದುವರಿಸಿ, ಆದರೆ ಹಿಂಸಾ ಮಾರ್ಗ ತುಳಿಯದೇ ಶಾಂತಿಯುತವಾಗಿ ನಡೆಸಿ," ಎಂದು ತಿಳಿ ಹೇಳಿದರು. ಅವರ ಕಾಳಜಿಗೆ ಧನ್ಯವಾದಗಳು ಎಂದು ಕಪ್ಪು ವರ್ಣೀಯ ಕಾರ‍್ಯಕರ್ತರೊಬ್ಬರು ಟ್ವೀಟ್‌ ಮಾಡಿದ್ದಾರೆ. ಕರ್ಫ್ಯೂ ಮಂಗಳವಾರ ಬೆಳಗ್ಗೆ 6 ಗಂಟೆಗೆ ತೆರವಾದ ಬಳಿಕ ಪ್ರತಿಭಟನಾಕಾರರು ದುಬೆ ಅವರ ಮನೆಯಿಂದ ತಮ್ಮ ಸ್ಥಳಗಳಿಗೆ ತೆರಳಿದರು.

ಬುಧವಾರ ಕೂಡ ಅಮೆರಿಕದಾದ್ಯಂತ ಪ್ರತಿಭಟನೆಗಳು ನಡೆದಿದ್ದು ಮತ್ತಷ್ಟು ನಗರಗಳಿಗೆ ಹರಡಿದೆ. ಆದರೆ ಯಾವುದೇ ಹಿಂಸಾಚಾರ ನಡೆದಿಲ್ಲ ಎಂದು ಮೂಲಗಳು ತಿಳಿಸಿವೆ.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ