ಬ್ಯಾಂಕಾಕ್: ಐದು ಲಕ್ಷ ಕೋಟಿ ಡಾಲರ್ ಆರ್ಥಿಕತೆಯಾಗುವ ಮಹತ್ವಾಕಾಂಕ್ಷೆ ಹೊಂದಿರುವ ಭಾರತ ಜಾಗತಿಕ ಮಟ್ಟದಲ್ಲಿ ಪ್ರಾಬಲ್ಯ ಹೆಚ್ಚಿಸಿಕೊಳ್ಳುತ್ತಿದೆ ಎಂಬುದಕ್ಕೆಬ್ಯಾಂಕಾಕ್ ನಲ್ಲಿ ನಡೆದ ಆಸಿಯಾನ್ ರಾಷ್ಟ್ರಗಳ ಶೃಂಗಸಭೆಯಲ್ಲಿ ಮಹತ್ವದ ಸುಳಿವು ದೊರೆತಿದೆ.
ಭಾರತ ಕಳವಳ ಪ್ರತಿಬಿಂಬಿಸಿದ ಮೋದಿ: ಆರ್ಸಿಇಪಿ ಆತಂಕ ಒಂದು ವರ್ಷ ಮುಂದಕ್ಕೆ
ಇಂಡೊ-ಪೆಸಿಫಿಕ್ ಪ್ರಾಂತ್ಯದಲ್ಲಿ ಶಾಂತಿ ಮತ್ತು ಸುಸ್ಥಿರತೆಗೆ ಸಂಬಂಧಿಸಿದಂತೆ ಹೆಚ್ಚುತ್ತಿರುವ ಭಾರತದ ಪಾತ್ರದ ಬಗ್ಗೆ 'ಆಸಿಯಾನ್' ರಾಷ್ಟ್ರಗಳು ಮೆಚ್ಚುಗೆ ವ್ಯಕ್ತಪಡಿಸಿದ್ದು, ಉಭಯ ದೇಶಗಳ ವ್ಯಾಪಾರ ಸಂಬಂಧವನ್ನು ಮತ್ತಷ್ಟು ವೃದ್ಧಿಸುವ ಸಂಕಲ್ಪ ತೊಟ್ಟಿವೆ. ಇದೇ ವೇಳೆ, ಭಯೋತ್ಪಾದನೆಯಂತಹ ಬೃಹತ್ ಸವಾಲನ್ನು ಜಂಟಿಯಾಗಿ ಎದುರಿಸಲು ಕೈಜೋಡಿಸುವ ಭರವಸೆಯನ್ನೂ ನೀಡಿವೆ.
ಆರ್ಸಿಇಪಿ ಒಪ್ಪಂದಕ್ಕೆ ಬ್ರೇಕ್: ಭಾರತ ಆಕ್ಷೇಪದಿಂದ ಒಂದು ವರ್ಷ ಮುಂದಕ್ಕೆ
ಥಾಯ್ಲೆಂಡ್ ರಾಜಧಾನಿ ಬ್ಯಾಂಕಾಕ್ನಲ್ಲಿ ನಡೆದ ವಾರ್ಷಿಕ ಆಸಿಯಾನ್ ಸಭೆಯಲ್ಲಿ ಮಾತನಾಡಿದ ಪ್ರಧಾನಿ ಮೋದಿ ಅವರು ಆಸಿಯಾನ್-ಭಾರತದ ನಡುವಿನ ಸಂಬಂಧ ಮತ್ತು ಚೀನಾ ಪ್ರಾಬಲ್ಯ ಹೆಚ್ಚುತ್ತಿರುವ ಇಂಡೊ-ಪೆಸಿಫಿಕ್ ಪ್ರಾಂತ್ಯದ ಕುರಿತು ಭಾರತದ ದೃಷ್ಟಿಕೋನದ ಬಗ್ಗೆ ಮುನ್ನೋಟ ಒದಗಿಸಿದರು. ಆಸಿಯಾನ್ ಒಕ್ಕೂಟದ 10 ದೇಶಗಳು ಮತ್ತು ಭಾರತದ ದೃಷ್ಟಿಕೋನದಲ್ಲಿಸಹಕಾರ ಮತ್ತು ಸಮನ್ವಯತೆಯ ಅಗತ್ಯದ ಬಗ್ಗೆ ಅವರು ಒತ್ತಿ ಹೇಳಿದರು.
ಥಾಯ್ಲೆಂಡ್ನಲ್ಲಿ ಭಾರತೀಯ ಸಮುದಾಯ ಉದ್ದೇಶಿಸಿ ಮೋದಿ ಭಾಷಣ; ಕಿಕ್ಕಿರಿದು ತುಂಬಿರುವ ಸಭಾಂಗಣ
ಗಡಿಯಾಚೆಗಿನ ಭಯೋತ್ಪಾದನೆ, ಹಿಂಸಾತ್ಮಕ ತೀವ್ರಗಾಮಿ ಚಳವಳಿ, ದಕ್ಷಿಣ ಚೀನಾ ಸಮುದ್ರದಲ್ಲಿನ ಪರಿಸ್ಥಿತಿಯ ಬಗ್ಗೆ ಪ್ರಸ್ತಾಪಿಸಿದ ಮೋದಿ ಅವರು, ಈ ಸವಾಲುಗಳನ್ನು ಎದುರಿಸಲು ಭಾರತ ಮತ್ತು ಆಸಿಯಾನ್ ದೇಶಗಳ ನಡುವಿನ ಸಹಕಾರದ ಅಗತ್ಯವನ್ನು ಒತ್ತಿ ಹೇಳಿದರು.
ಆಕ್ಟ್ ಈಸ್ಟ್ ನೀತಿ ಹೃದಯ: ''ಭಾರತದ ಇಂಡೊ-ಪೆಸಿಫಿಕ್ ದೃಷ್ಟಿಕೋನದಲ್ಲಿ, 'ಆಕ್ಟ್ ಈಸ್ಟ್' ನೀತಿಯು ಪ್ರಮುಖ ಭಾಗವಾಗಿದೆ. 'ಏಸಿಯಾನ್' ಒಕ್ಕೂಟವು ಸದಾ ಭಾರತದ 'ಆಕ್ಟ್ ಈಸ್ಟ್' ನೀತಿಯ ಹೃದಯವಾಗಿರಲಿದೆ. ಸಮಗ್ರ, ಸಂಘಟಿತ ಮತ್ತು ಆರ್ಥಿಕವಾಗಿ ಪ್ರಗತಿ ಕಾಣುತ್ತಿರುವ 'ಆಸಿಯಾನ್' ಬಗ್ಗೆ ಭಾರತ ಒಲವು ಹೊಂದಿದೆ,'' ಎಂದರು.
ಬಲಿಷ್ಠ ಸಂಪರ್ಕಕ್ಕೆ ಇಂಗಿತ: ಭೂ, ಸಾಗರ ಮತ್ತು ವಾಯುಯಾನ ಮಾತ್ರವಲ್ಲದೆ, ಡಿಜಿಟಲ್ ವಲಯದಲ್ಲೂಆಸಿಯಾನ್ ದೇಶಗಳ ಜತೆಗೆ ಪಾಲುದಾರಿಕೆ ಹೆಚ್ಚಿಸಲು ಭಾರತ ಬದ್ಧವಾಗಿದೆ. ಕೃಷಿ, ವಿಜ್ಞಾನ ಮತ್ತು ಸಂಶೋಧನೆ, ಎಂಜಿನಿಯರಿಂಗ್ ಕ್ಷೇತ್ರಗಳಲ್ಲೂಸಾಮರ್ಥ್ಯ ವೃದ್ಧಿ ಹಾಗೂ ಪಾಲುದಾರಿಕೆಗೆ ಭಾರತ ಸಿದ್ಧ ಎಂದು ಮೋದಿ ಹೇಳಿದ್ದಾರೆ.
ಭಾರತಕ್ಕೆ ಹೆಚ್ಚಿದ ಮಹತ್ವ:
ಅಮೆರಿಕ-ಚೀನಾ ನಡುವೆ ವ್ಯಾಪಾರ ಯುದ್ಧ ತೀವ್ರಗೊಂಡಿದೆ. ಇತ್ತ ದಕ್ಷಿಣ ಚೀನಾ ಸಮುದ್ರದಲ್ಲಿಚೀನಾ ದೇಶದ ಪ್ರಾಬಲ್ಯ ಹೆಚ್ಚುತ್ತಿದೆ. ಆಸಿಯಾನ್ ದೇಶಗಳು ಮತ್ತು ಚೀನಾ ನಡುವೆ ಗಡಿ ತಕರಾರುಗಳೂ ಹೆಚ್ಚುತ್ತಿವೆ. ಇಂತಹ ಸಂದರ್ಭದಲ್ಲಿಇದೇ ಮೊದಲ ಬಾರಿಗೆ 'ಆಸಿಯಾನ್' ದೇಶಗಳು ಇಂಡೊ-ಪೆಸಿಫಿಕ್ಗೆ ಸಂಬಂಧಿಸಿದಂತೆ ಭಾರತದ ಪಾತ್ರ ಹೆಚ್ಚುತ್ತಿರುವುದನ್ನು ಬಹಿರಂಗವಾಗಿ ಗುರುತಿಸಿ, ಸಮ್ಮತಿಸಿವೆ. ಇಂಡೊ-ಪೆಸಿಫಕ್ ಪ್ರಾಂತ್ಯದಲ್ಲಿಅತ್ಯಧಿಕ ವ್ಯಾಪಾರ ವಹಿವಾಟು ನಡೆಯುವ ಹಿನ್ನೆಲೆಯಲ್ಲಿ, ಈ ಪ್ರಾಂತ್ಯದಲ್ಲಿಶಾಂತಿ-ಸುಸ್ಥಿರತೆ ಎಲ್ಲ ದೇಶಗಳ ಆದ್ಯತೆಯಾಗಿದೆ. ಈ ವಿಚಾರದಲ್ಲಿ ಭಾರತದ ಪಾತ್ರವನ್ನು ಆಸಿಯಾನ್ ದೇಶಗಳು ಎತ್ತಿ ಹಿಡಿದಿವೆ.
ಭಾರತದಲ್ಲಿ ಹೂಡಿಕೆ ಮಾಡಲು ಕರೆ:
ಭಾರತ ಭಾರತದಲ್ಲಿಹೂಡಿಕೆ ಮಾಡಲು ಇದು ಅತ್ಯುತ್ತಮವಾದ ಸಮಯವಾಗಿದ್ದು, ಉದ್ಯಮಿಗಳು ದೇಶದಲ್ಲಿರುವ ಹೂಡಿಕೆ ಅವಕಾಶಗಳನ್ನು ಬಳಸಿಕೊಳ್ಳಬೇಕೆಂದು ಪ್ರಧಾನಿ ಮೋದಿ ಕರೆ ನೀಡಿದ್ದಾರೆ. ಬ್ಯಾಂಕಾಕ್ನಲ್ಲಿ ಉದ್ಯಮಿಗಳ ಸಮಾರಂಭ ಉದ್ದೇಶಿಸಿ ಮಾತನಾಡಿದ ಅವರು, ವಿಶ್ವಬ್ಯಾಂಕ್ನ 'ಸುಲಭ ವ್ಯವಹಾರ ವಾತಾವರಣ' ಸೂಚ್ಯಂಕದಲ್ಲಿಭಾರತದ ಮೇಲಿನ ಶ್ರೇಣಿಗೆ ಏರಿರುವುದನ್ನು ಪ್ರಸ್ತಾಪಿಸಿದರು. ಭಾರತದಲ್ಲಿಉದ್ಯಮ ಸ್ನೇಹಿ ತೆರಿಗೆ ನೀತಿಯಿದೆ. ಅಧಿಕಾರಿ ವರ್ಗದ ನಿರುತ್ಸಾಹ, ಭ್ರಷ್ಟಾಚಾರ ಕಡಿಮೆಯಾಗುತ್ತಿದೆ. ಉತ್ಪಾದಕತೆ ಹೆಚ್ಚಾಗುತ್ತಿದೆ ಎಂದರು.
ಭಾರತ ಕಳವಳ ಪ್ರತಿಬಿಂಬಿಸಿದ ಮೋದಿ: ಆರ್ಸಿಇಪಿ ಆತಂಕ ಒಂದು ವರ್ಷ ಮುಂದಕ್ಕೆ
ಇಂಡೊ-ಪೆಸಿಫಿಕ್ ಪ್ರಾಂತ್ಯದಲ್ಲಿ ಶಾಂತಿ ಮತ್ತು ಸುಸ್ಥಿರತೆಗೆ ಸಂಬಂಧಿಸಿದಂತೆ ಹೆಚ್ಚುತ್ತಿರುವ ಭಾರತದ ಪಾತ್ರದ ಬಗ್ಗೆ 'ಆಸಿಯಾನ್' ರಾಷ್ಟ್ರಗಳು ಮೆಚ್ಚುಗೆ ವ್ಯಕ್ತಪಡಿಸಿದ್ದು, ಉಭಯ ದೇಶಗಳ ವ್ಯಾಪಾರ ಸಂಬಂಧವನ್ನು ಮತ್ತಷ್ಟು ವೃದ್ಧಿಸುವ ಸಂಕಲ್ಪ ತೊಟ್ಟಿವೆ. ಇದೇ ವೇಳೆ, ಭಯೋತ್ಪಾದನೆಯಂತಹ ಬೃಹತ್ ಸವಾಲನ್ನು ಜಂಟಿಯಾಗಿ ಎದುರಿಸಲು ಕೈಜೋಡಿಸುವ ಭರವಸೆಯನ್ನೂ ನೀಡಿವೆ.
ಆರ್ಸಿಇಪಿ ಒಪ್ಪಂದಕ್ಕೆ ಬ್ರೇಕ್: ಭಾರತ ಆಕ್ಷೇಪದಿಂದ ಒಂದು ವರ್ಷ ಮುಂದಕ್ಕೆ
ಥಾಯ್ಲೆಂಡ್ ರಾಜಧಾನಿ ಬ್ಯಾಂಕಾಕ್ನಲ್ಲಿ ನಡೆದ ವಾರ್ಷಿಕ ಆಸಿಯಾನ್ ಸಭೆಯಲ್ಲಿ ಮಾತನಾಡಿದ ಪ್ರಧಾನಿ ಮೋದಿ ಅವರು ಆಸಿಯಾನ್-ಭಾರತದ ನಡುವಿನ ಸಂಬಂಧ ಮತ್ತು ಚೀನಾ ಪ್ರಾಬಲ್ಯ ಹೆಚ್ಚುತ್ತಿರುವ ಇಂಡೊ-ಪೆಸಿಫಿಕ್ ಪ್ರಾಂತ್ಯದ ಕುರಿತು ಭಾರತದ ದೃಷ್ಟಿಕೋನದ ಬಗ್ಗೆ ಮುನ್ನೋಟ ಒದಗಿಸಿದರು. ಆಸಿಯಾನ್ ಒಕ್ಕೂಟದ 10 ದೇಶಗಳು ಮತ್ತು ಭಾರತದ ದೃಷ್ಟಿಕೋನದಲ್ಲಿಸಹಕಾರ ಮತ್ತು ಸಮನ್ವಯತೆಯ ಅಗತ್ಯದ ಬಗ್ಗೆ ಅವರು ಒತ್ತಿ ಹೇಳಿದರು.
ಥಾಯ್ಲೆಂಡ್ನಲ್ಲಿ ಭಾರತೀಯ ಸಮುದಾಯ ಉದ್ದೇಶಿಸಿ ಮೋದಿ ಭಾಷಣ; ಕಿಕ್ಕಿರಿದು ತುಂಬಿರುವ ಸಭಾಂಗಣ
ಗಡಿಯಾಚೆಗಿನ ಭಯೋತ್ಪಾದನೆ, ಹಿಂಸಾತ್ಮಕ ತೀವ್ರಗಾಮಿ ಚಳವಳಿ, ದಕ್ಷಿಣ ಚೀನಾ ಸಮುದ್ರದಲ್ಲಿನ ಪರಿಸ್ಥಿತಿಯ ಬಗ್ಗೆ ಪ್ರಸ್ತಾಪಿಸಿದ ಮೋದಿ ಅವರು, ಈ ಸವಾಲುಗಳನ್ನು ಎದುರಿಸಲು ಭಾರತ ಮತ್ತು ಆಸಿಯಾನ್ ದೇಶಗಳ ನಡುವಿನ ಸಹಕಾರದ ಅಗತ್ಯವನ್ನು ಒತ್ತಿ ಹೇಳಿದರು.
ಆಕ್ಟ್ ಈಸ್ಟ್ ನೀತಿ ಹೃದಯ: ''ಭಾರತದ ಇಂಡೊ-ಪೆಸಿಫಿಕ್ ದೃಷ್ಟಿಕೋನದಲ್ಲಿ, 'ಆಕ್ಟ್ ಈಸ್ಟ್' ನೀತಿಯು ಪ್ರಮುಖ ಭಾಗವಾಗಿದೆ. 'ಏಸಿಯಾನ್' ಒಕ್ಕೂಟವು ಸದಾ ಭಾರತದ 'ಆಕ್ಟ್ ಈಸ್ಟ್' ನೀತಿಯ ಹೃದಯವಾಗಿರಲಿದೆ. ಸಮಗ್ರ, ಸಂಘಟಿತ ಮತ್ತು ಆರ್ಥಿಕವಾಗಿ ಪ್ರಗತಿ ಕಾಣುತ್ತಿರುವ 'ಆಸಿಯಾನ್' ಬಗ್ಗೆ ಭಾರತ ಒಲವು ಹೊಂದಿದೆ,'' ಎಂದರು.
ಬಲಿಷ್ಠ ಸಂಪರ್ಕಕ್ಕೆ ಇಂಗಿತ: ಭೂ, ಸಾಗರ ಮತ್ತು ವಾಯುಯಾನ ಮಾತ್ರವಲ್ಲದೆ, ಡಿಜಿಟಲ್ ವಲಯದಲ್ಲೂಆಸಿಯಾನ್ ದೇಶಗಳ ಜತೆಗೆ ಪಾಲುದಾರಿಕೆ ಹೆಚ್ಚಿಸಲು ಭಾರತ ಬದ್ಧವಾಗಿದೆ. ಕೃಷಿ, ವಿಜ್ಞಾನ ಮತ್ತು ಸಂಶೋಧನೆ, ಎಂಜಿನಿಯರಿಂಗ್ ಕ್ಷೇತ್ರಗಳಲ್ಲೂಸಾಮರ್ಥ್ಯ ವೃದ್ಧಿ ಹಾಗೂ ಪಾಲುದಾರಿಕೆಗೆ ಭಾರತ ಸಿದ್ಧ ಎಂದು ಮೋದಿ ಹೇಳಿದ್ದಾರೆ.
ಭಾರತಕ್ಕೆ ಹೆಚ್ಚಿದ ಮಹತ್ವ:
ಅಮೆರಿಕ-ಚೀನಾ ನಡುವೆ ವ್ಯಾಪಾರ ಯುದ್ಧ ತೀವ್ರಗೊಂಡಿದೆ. ಇತ್ತ ದಕ್ಷಿಣ ಚೀನಾ ಸಮುದ್ರದಲ್ಲಿಚೀನಾ ದೇಶದ ಪ್ರಾಬಲ್ಯ ಹೆಚ್ಚುತ್ತಿದೆ. ಆಸಿಯಾನ್ ದೇಶಗಳು ಮತ್ತು ಚೀನಾ ನಡುವೆ ಗಡಿ ತಕರಾರುಗಳೂ ಹೆಚ್ಚುತ್ತಿವೆ. ಇಂತಹ ಸಂದರ್ಭದಲ್ಲಿಇದೇ ಮೊದಲ ಬಾರಿಗೆ 'ಆಸಿಯಾನ್' ದೇಶಗಳು ಇಂಡೊ-ಪೆಸಿಫಿಕ್ಗೆ ಸಂಬಂಧಿಸಿದಂತೆ ಭಾರತದ ಪಾತ್ರ ಹೆಚ್ಚುತ್ತಿರುವುದನ್ನು ಬಹಿರಂಗವಾಗಿ ಗುರುತಿಸಿ, ಸಮ್ಮತಿಸಿವೆ. ಇಂಡೊ-ಪೆಸಿಫಕ್ ಪ್ರಾಂತ್ಯದಲ್ಲಿಅತ್ಯಧಿಕ ವ್ಯಾಪಾರ ವಹಿವಾಟು ನಡೆಯುವ ಹಿನ್ನೆಲೆಯಲ್ಲಿ, ಈ ಪ್ರಾಂತ್ಯದಲ್ಲಿಶಾಂತಿ-ಸುಸ್ಥಿರತೆ ಎಲ್ಲ ದೇಶಗಳ ಆದ್ಯತೆಯಾಗಿದೆ. ಈ ವಿಚಾರದಲ್ಲಿ ಭಾರತದ ಪಾತ್ರವನ್ನು ಆಸಿಯಾನ್ ದೇಶಗಳು ಎತ್ತಿ ಹಿಡಿದಿವೆ.
ಭಾರತದಲ್ಲಿ ಹೂಡಿಕೆ ಮಾಡಲು ಕರೆ:
ಭಾರತ ಭಾರತದಲ್ಲಿಹೂಡಿಕೆ ಮಾಡಲು ಇದು ಅತ್ಯುತ್ತಮವಾದ ಸಮಯವಾಗಿದ್ದು, ಉದ್ಯಮಿಗಳು ದೇಶದಲ್ಲಿರುವ ಹೂಡಿಕೆ ಅವಕಾಶಗಳನ್ನು ಬಳಸಿಕೊಳ್ಳಬೇಕೆಂದು ಪ್ರಧಾನಿ ಮೋದಿ ಕರೆ ನೀಡಿದ್ದಾರೆ. ಬ್ಯಾಂಕಾಕ್ನಲ್ಲಿ ಉದ್ಯಮಿಗಳ ಸಮಾರಂಭ ಉದ್ದೇಶಿಸಿ ಮಾತನಾಡಿದ ಅವರು, ವಿಶ್ವಬ್ಯಾಂಕ್ನ 'ಸುಲಭ ವ್ಯವಹಾರ ವಾತಾವರಣ' ಸೂಚ್ಯಂಕದಲ್ಲಿಭಾರತದ ಮೇಲಿನ ಶ್ರೇಣಿಗೆ ಏರಿರುವುದನ್ನು ಪ್ರಸ್ತಾಪಿಸಿದರು. ಭಾರತದಲ್ಲಿಉದ್ಯಮ ಸ್ನೇಹಿ ತೆರಿಗೆ ನೀತಿಯಿದೆ. ಅಧಿಕಾರಿ ವರ್ಗದ ನಿರುತ್ಸಾಹ, ಭ್ರಷ್ಟಾಚಾರ ಕಡಿಮೆಯಾಗುತ್ತಿದೆ. ಉತ್ಪಾದಕತೆ ಹೆಚ್ಚಾಗುತ್ತಿದೆ ಎಂದರು.