ಆ್ಯಪ್ನಗರ

ಪರಮಾಣು ವಿಜ್ಞಾನಿ ಹತ್ಯೆ: ಇಸ್ರೇಲ್‌, ಅಮೆರಿಕದ ಮೇಲೆ ಆರೋಪ ಹೊರಿಸಿದ ಇರಾನ್; ಪ್ರತೀಕಾರ ತೀರಿಸುತ್ತೇವೆಂದು ಗುಡುಗು!

ಸಾವನಪ್ಪಿದ ಹುತಾತ್ಮ ವಿಜ್ಞಾನಿಯ ಕೊಂದವರನ್ನು ಗುಂಡಿಕ್ಕಿ ಕೊಲ್ಲುತ್ತೇವೆ ಹಾಗೂ ಕೊಲೆ ಮಾಡಿದ ತಪ್ಪಿಗೆ ಪಶ್ಚಾತಾಪ ಪಡುವಂತೆ ಮಾಡುತ್ತೇವೆ ಎಂದು ಇರಾನ್‌ನ ಸರ್ವೋಚ್ಚ ನಾಯಕ ಅಯತೊಲ್ಲಾ ಅಲಿ ಖಮೇನಿಯವರ ಸಲಹೆಗಾರ ಹೊಸೆನ್ ಡೆಹಗನ್‌ ಗುಡುಗಿದ್ದಾರೆ. ಇನ್ನು ಇಸ್ರೇಲ್‌ಗೆ ಅಮೆರಿಕ ಕೂಡ ಸಾಥ್‌ ನೀಡಿದೆ ಎನ್ನುವ ಆರೋಪವಿದೆ.

Vijaya Karnataka Web 28 Nov 2020, 11:01 am
ಟೆಹ್ರನ್: ಇರಾನ್ ಪರಮಾಣು ಯೋಜನೆಯ ಅತ್ಯಂತ ಉನ್ನತ ವಿಜ್ಞಾನಿ ಮೊಹ್ಸೆನ್ ಫಕ್ರಿಜಾಡೆ ಅವರ ಹತ್ಯೆಗೆ ಸಂಬಂಧಪಟ್ಟಂತೆ ಇದೀಗ ಇರಾನ್‌ ಕೊತ ಕೊತ ಕುದಿಯುತ್ತಿದೆ. ಇರಾನ್‌ನ ಪ್ರಮುಖ ನಾಯಕರು ಬಹಿರಂಗವಾಗೇ ಈ ಹತ್ಯೆಯ ಹಿಂದೆ ಇಸ್ರೇಲ್‌ ಹಾಗೂ ಅದರ ಗುಪ್ತಚರ ಸಂಸ್ಥೆಯ ಕೈವಾಡವಿದೆ ಎಂದು ನೇರವಾಗಿ ಆರೋಪ ಹೊರಿಸಿದ್ದಾರೆ. ಅಲ್ಲದೇ ತಮ್ಮ ವಿಜ್ಞಾನಿಯನ್ನು ಕೊಂದವರ ವಿರುದ್ಧ ಪ್ರತೀಕಾರ ತೀರಿಸುತ್ತೇವೆ ಎಂದು ಹೇಳಿದ್ದಾರೆ.
Vijaya Karnataka Web Prominent Iranian scientist Mohsen Fakhrizadeh is seen in Iran


ಈ ಬಗ್ಗೆ ಟ್ವೀಟ್‌ ಮಾಡಿರುವ ಇರಾನ್‌ ವಿದೇಶಾಂಗ ಸಚಿವ ಜಾವದ್‌ ಜರೀಫ್‌, ಇರಾನಿನ ಖ್ಯಾತ ವಿಜ್ಞಾನಿಯನ್ನು ಕೊಲೆ ಮಾಡಿರುವುದು ಹೇಡಿತನದ ಕೃತ್ಯವಾಗಿದೆ. ಇದರಲ್ಲಿ ಇಸ್ರೇಲ್‌ನ ಕೈವಾಡವಿರುವುದು ಸ್ಪಷ್ಟವಾಗಿದೆ. ಅಲ್ಲದೇ ಇದು ಯುದ್ಧದ ಹತಾಶ ಭಾವನೆ ತೋರಿಸುತ್ತದೆ ಎಂದು ಆರೋಪಿಸಿದ್ದಾರೆ. ಕೂಡಲೇ ಅವರ ನಾಚಿಕೆಗೇಡಿನ ದ್ವಿ ನೀತಿಯನ್ನು ಕೊನೆಗೊಳಿಸುವಂತೆ ಇರಾನ್‌ ಅಂತರರಾಷ್ಟ್ರೀಯ ಸಮುದಾಯವನ್ನು, ವಿಶೇಷವಾಗಿ ಯುರೋಪಿಯನ್ ಒಕ್ಕೂಟಕ್ಕೆ ಕರೆ ನೀಡುತ್ತಿದೆ ಎಂದು ತಿಳಿಸಿದ್ದಾರೆ.

ಇನ್ನು ಇನ್ನಿತರ ನಾಯಕರು ಕೂಡ ಇಸ್ರೇಲ್ ಮತ್ತು ಅದರ ಗುಪ್ತಚರ ಸಂಸ್ಥೆ ಮೊಸಾದ್ ಮೊದಲಿನಿಂದಲೂ ಇರಾನಿನ ಉನ್ನತ ಅಧಿಕಾರಿಗಳು ಮತ್ತು ವಿಜ್ಞಾನಿಗಳನ್ನು ಹತ್ಯೆ ಮಾಡುತ್ತಿದೆ ಎಂದು ಆರೋಪಿಸಿದ್ದಾರೆ. ಏತನ್ಮಧ್ಯೆ, ಇರಾನ್‌ನ ಸರ್ವೋಚ್ಚ ನಾಯಕ ಅಯತೊಲ್ಲಾ ಅಲಿ ಖಮೇನಿಯವರ ಸಲಹೆಗಾರ ಹೊಸೆನ್ ಡೆಹಗನ್, ಪ್ರತೀಕಾರ ತೆಗೆದುಕೊಳ್ಳುತ್ತೇವೆ ಎಂದಿದ್ದಾರೆ. ಸಾವನಪ್ಪಿದ ಹುತಾತ್ಮ ವಿಜ್ಞಾನಿಯ ಕೊಂದವರನ್ನು ಗುಂಡಿಕ್ಕಿ ಕೊಲ್ಲುತ್ತೇವೆ ಹಾಗೂ ಕೊಲೆ ಮಾಡಿದಕ್ಕೆ ಅವರಿಂದಲೇ ತಪ್ಪಾಗಿದೆ ಎನ್ನುವಂತೆ ಮಾಡಿಸುತ್ತೇವೆ ಎಂದು ಗುಡುಗಿದ್ದಾರೆ. ಇನ್ನು ಇಸ್ರೇಲ್‌ಗೆ ಅಮೆರಿಕ ಕೂಡ ಸಾಥ್‌ ನೀಡಿದೆ ಎನ್ನುವ ಆರೋಪವಿದೆ.

ಇರಾನ್‌ನ ಉನ್ನತ ಪರಮಾಣು ವಿಜ್ಞಾನಿ ಹತ್ಯೆ: ಉಗ್ರರ ಗುಂಡೇಟಿಗೆ ಬಲಿಯಾದ 'ಫಾದರ್ ಆಫ್ ಇರಾನಿಯನ್ ಬಾಂಬ್'!

ರಾಜಧಾನಿ ಟೆಹ್ರನ್ ವಲಯದಲ್ಲಿ ಮೊಹ್ಸೆನ್ ಫಕ್ರಿಜಾಡೆ ಅವರು ಪ್ರಯಾಣಿಸುತ್ತಿದ್ದ ಕಾರಿನ ಮೇಲೆ ಭಯೋತ್ಪಾದಕರು ದಾಳಿ ಮಾಡಿದ್ದರು. ಮನಬಂದಂತೆ ಗುಂಡು ಹಾರಿಸಿದ್ದರು. ಅವರನ್ನು ಆಸ್ಪತ್ರೆಗೆ ಕರೆದುಕೊಂಡು ಹೋಗಲಾಗಿತ್ತಾದರೂ ಚಿಕಿತ್ಸೆ ಫಲಕಾರಿಯಾಗದೆ ಅವರು ಸಾವನಪ್ಪಿದ್ದರು. 2010ರಲ್ಲೂ ಇರಾನ್‌ನ ಪರಮಾಣು ವಿಜ್ಞಾನಿಯನ್ನು ಹತ್ಯೆ ಮಾಡಲಾಗಿತ್ತು.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ