ಆ್ಯಪ್ನಗರ

ವಿದ್ಯಾರ್ಥಿಯನ್ನು ತಾಲಿಬಾನಿ ಎಂದು ನಂತರ ಕ್ಷಮೆ ಯಾಚಿಸಿದ ಸದ್ಗುರು

ಲಂಡನ್‌ ಸ್ಕೂಲ್‌ ಆಫ್‌ ಎಕನಾಮಿಕ್ಸ್‌'ಗೆ ಭೇಟಿ ನೀಡಿದ್ದ ವೇಳೆ ಸದ್ಗುರು ಅವರು ಅಲ್ಲಿನ ವಿದ್ಯಾರ್ಥಿಗಳೊಂದಿಗೆ ಸಂವಾದದಲ್ಲಿ ಪಾಲ್ಗೊಂಡಿದ್ದರು.

Vijaya Karnataka Web 6 Apr 2019, 2:30 pm
ಲಂಡನ್‌: ಇಶಾ ಪ್ರತಿಷ್ಠಾನದ ಸಂಸ್ಥಾಪಕ ಸದ್ಗುರು ಜಗ್ಗಿ ವಾಸುದೇವ್‌ ಅವರು, ಮುಸ್ಲಿಂ ವಿದ್ಯಾರ್ಥಿಯೊಬ್ಬರನ್ನು 'ತಾಲಿಬಾನಿ' ಎಂದು ಕರೆಯುವ ಮೂಲಕ ವಿವಾದಕ್ಕೆ ಗುರಿಯಾಗಿದ್ದು, ಬಳಿಕ ಕ್ಷಮೆ ಯಾಚಿಸಿದ್ದಾರೆ.
Vijaya Karnataka Web sadguru


ಇತ್ತೀಚೆಗೆ 'ಲಂಡನ್‌ ಸ್ಕೂಲ್‌ ಆಫ್‌ ಎಕನಾಮಿಕ್ಸ್‌'ಗೆ ಭೇಟಿ ನೀಡಿದ್ದ ವೇಳೆ ಸದ್ಗುರು ಅವರು ಅಲ್ಲಿನ ವಿದ್ಯಾರ್ಥಿಗಳೊಂದಿಗೆ ಸಂವಾದದಲ್ಲಿ ಪಾಲ್ಗೊಂಡಿದ್ದರು. ಈ ಸಂದರ್ಭ ಬಿಲಾಲ್‌ ಬಿನ್‌ ಸಾಕ್ವಿಬ್‌ ಎಂಬ ಮುಸ್ಲಿಂ ವಿದ್ಯಾರ್ಥಿಯೂ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು.

ಸಂವಾದದ ವೇಳೆ ಬಿಲಾಲ್‌ ಸದ್ಗುರು ಅವರನ್ನು ಕುರಿತು ''ನೀವು ಸಮಾಧಿಯಲ್ಲಿ ರಾತ್ರಿ ಕಳೆಯುವುದಾದರೆ, ಆಗ ಹೊರಗೆ ಇರುವುದಿಲ್ಲವಲ್ಲ,'' ಎಂದು ಹೇಳಿದ್ದರು. ಇದಕ್ಕೆ ಪ್ರತಿಕ್ರಿಯಿಸಿದ್ದ ಸದ್ಗುರು, ''ಈ ಹುಡುಗ ಪಕ್ಕಾ ತಾಲಿಬಾನ್‌'' ಎಂದಿದ್ದರು.

ಬಳಿಕ ಸ್ಪಷ್ಟನೆ ನೀಡಿದ್ದ ಸದ್ಗುರು, ತಾವು ಆ ಅರ್ಥದಲ್ಲಿ ತಾಲಿಬಾನ್‌ ಪದ ಬಳಸಿಲ್ಲ ಎಂದಿದ್ದರು. ವಿದ್ಯಾರ್ಥಿ ಸಂಘಟನೆಯು ಆಕ್ಷೇಪ ವ್ಯಕ್ತಪಡಿಸಿದ ಬಳಿಕ ಸದ್ಗುರು ಕ್ಷಮೆ ಯಾಚಿಸಿದ್ದಾರೆ.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ