ಆ್ಯಪ್ನಗರ

ಮತ್ತೆ ಹಳೇ ಸಂಪ್ರದಾಯಕ್ಕೆ ಮರಳಿದ ಜಪಾನ್‌

ಜಾಗತೀಕರಣದ ಪರಿಣಾಮ ಎಲ್ಲ ದೇಶ-ಭಾಷೆಗಳ ಮೂಲ ಸಂಸ್ಕೃತಿ ಸಂಪ್ರದಾಯಗಳು ಮರೆಯಾಗುತ್ತಿವೆ. ಎಲ್ಲರೂ, ಕಲಬೆರಕೆ ಸಂಸ್ಕೃತಿಯ ಭಾಗವಾಗುತ್ತಿದ್ದಾರೆ. ಈ ಸಂದರ್ಭದಲ್ಲಿ ತನ್ನ ಸಂಪ್ರದಾಯವನ್ನು ಉಳಿಸಿಕೊಳ್ಳಲು ಜಪಾನ್ ಮಹತ್ವದ ಕ್ರಮ ಕೈಗೊಂಡಿದೆ.

PTI 6 Sep 2019, 1:50 pm
ಪಿಟಿಐ: ಪಾಶ್ಚಾತ್ಯೀಕರಣದ ಈ ಯುಗದಲ್ಲಿ ಸಂಸ್ಕೃತಿ, ಆಚರಣೆ, ಆಹಾರ, ಉಡುಪು ಎಲ್ಲದರಲ್ಲೂ ಕಲಬೆರಕೆಯಾಗುತ್ತಿದೆ. ಶತಮಾನದಿಂದೀಚೆಗೆ ಪಾಶ್ಚಾತ್ಯೀಕರಣದ ಪೆಡಂಭೂತ ಬೃಹದಾಕಾರ ತಾಳಿದೆ. ಇಂತಹ ಸಂದರ್ಭದಲ್ಲಿ ಜಪಾನ್‌ ತನ್ನ ಹಿಂದಿನ ಸಂಪ್ರದಾಯಗಳನ್ನು ಉಳಿಸಿಕೊಳ್ಳಲು ಅಧಿಕೃತ ಕ್ರಮ ಕೈಗೊಳ್ಳುತ್ತಿದೆ.
Vijaya Karnataka Web shinjo abe


ಇನ್ನು ಮುಂದೆ ಜಾಪಾನಿನ ಸರ್ಕಾರಿ ಕಡತಗಳಲ್ಲಿ ವ್ಯಕ್ತಿಗಳ ಹೆಸರನ್ನು ಸಾಂಪ್ರದಾಯಿಕ ಕ್ರಮದಲ್ಲೇ ನಮೂದಿಸಬೇಕು. ಹೆಸರಿನ ಮೊದಲು ಅವರ ಕುಂಟುಂಬದ ಹೆಸರನ್ನು ಬರೆಯಬೇಕು. ಜಪಾನ್‌ ಶತಮಾನಗಳಷ್ಟು ಹಿಂದೆಯೇ ಸರ್ಕಾರಿ ಕಡತಗಳಲ್ಲಿ ಹೆಸರು ನಮೂದಿಸಲು ಪಾಶ್ಚಾತ್ಯ ಕ್ರಮ ಅಳವಡಿಸಿಕೊಂಡಿತ್ತು. ಇದೀಗ ಮತ್ತೆ ತನ್ನ ಮೂಲ ಕ್ರಮವನ್ನೇ ಜಾರಿಗೆ ತರುತ್ತಿದೆ. ಕಳೆದ ಕೆಲ ವರ್ಷಗಳಿಂದಲೇ ಈ ಕುರಿತು ಚಿಂತನೆ ನಡೆಯುತ್ತಿತ್ತು. ಈ ಚಿಂತನೆಗೆ ಪ್ರಧಾನಿ ಶಿಂಜೋ ಅಬೆ ನೇತೃತ್ವದ ಸಂಪುಟವು ಶುಕ್ರವಾರ ಅನುಮೋದನೆ ನೀಡಿದೆ.

ಜಪಾನ್‌, ಭಾರತ ಸಂಸ್ಕೃತಿಯಲ್ಲಿ ಸಾಮ್ಯತೆ ಇದೆ: ಮೋದಿ

'ನಾವು ಜಾಗತೀಕರಣಗೊಂಡ ಸಮಾಜದಲ್ಲಿ ಬದುಕುತ್ತಿದ್ದೇವೆ. ಭಾಷೆ ಮತ್ತು ಸಾಂಸ್ಕೃತಿಕ ವೈವಿಧ್ಯತೆ ಇರುವ ಈ ವಿಶ್ವದಲ್ಲಿ ಗುರುತಿಸಿಕೊಳ್ಳುವಲ್ಲಿ ಈ ಕ್ರಮ ಪ್ರಮುಖವಾದುದು' ಎಂದು ಜಪಾನ್‌ ಶಿಕ್ಷಣ ಮಂತ್ರಿ ಮಸಾಹಿಕೋ ಶಿಬಾಯಮ ಹೇಳಿದ್ದಾರೆ. ಈ ಮೂಲಕ ಸರ್ಕಾರದ ಕ್ರಮಕ್ಕೆ ಬೆಂಬಲ ಸೂಚಿಸಿದ್ದಾರೆ.

ಚೀನಾ ಮತ್ತು ದಕ್ಷಿಣ ಕೊರಿಯಾ ರಾಷ್ಟ್ರಗಳು ಸರ್ಕಾರಿ ಕಡತಗಳಲ್ಲಿ ಹೆಸರು ನಮೂದಿಸಲು ಸಾಂಪ್ರದಾಯಿಕ ಕ್ರಮವನ್ನೇ ಅನುಸರಿಸುತ್ತಿವೆ. ಇಲ್ಲಿ ವ್ಯಕ್ತಿಯ ಹೆಸರಿಗೂ ಮೊದಲು ಅವರ ಮನೆತನದ ಹೆಸರು ನಮೂದಿಸುವ ಕ್ರಮವಿದೆ. ಆದರೆ, ಜಪಾನ್‌ ಸುಮಾರು 150 ವರ್ಷಗಳಷ್ಟು ಹಿಂದೆಯೇ ಪಾಶ್ಚಾತ್ಯ ಕ್ರಮವನ್ನು ಅನುಸರಿಸಿತ್ತು.

2025ಕ್ಕೆ ಜಪಾನ್‌ಗಿಂತಲೂ ಭಾರತವೇ ಮುಂದೆ

ಆರಂಭದಲ್ಲಿ ಜಪಾನಿನ ಶಿಕ್ಷಣ ಇಲಾಖೆಯಲ್ಲಷ್ಟೆ ಈ ಕ್ರಮ ಅವಳವಡಿಕೆಯಾಗುತ್ತಿದೆ. ಉಳಿದ ಎಲ್ಲ ಇಲಾಖೆಯ ವೆಬ್‌ಸೈಟ್‌ಗಳಲ್ಲಿ ಈಗಿರುವ ಕ್ರಮವೇ ಮುಂದುವರಿಯಲಿದೆ.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ