ಆ್ಯಪ್ನಗರ

ಕಾಶ್ಮೀರ ವಿವಾದ ಭಾರತ-ಪಾಕ್‌ ಬಗೆಹರಿಸಿಕೊಳ್ಳಲಿ ಎಂದ ಚೀನಾ

ಕಾಶ್ಮೀರ ವಿವಾದವು ಭಾರತ ಹಾಗೂ ಪಾಕಿಸ್ತಾನ ನಡುವಿನ ದ್ವಿಪಕ್ಷೀಯ ವಿಚಾರವಾಗಿದ್ದು, ಉಭಯ ರಾಷ್ಟ್ರಗಳು ಪರಸ್ಪರ ಮಾತುಕತೆ ಮೂಲಕ ಇದನ್ನು ಬಗೆಹರಿಸಿಕೊಳ್ಳಬೇಕು ಎಂದು ಚೀನಾ ಹೇಳಿದೆ. ಹೀಗಾಗಿ ಇಮ್ರಾನ್‌ ಪ್ರಯತ್ನಗಳಿಗೆ ಮತ್ತೊಮ್ಮೆ ಹಿನ್ನಡೆಯಾಗಿದೆ.

Vijaya Karnataka Web 9 Oct 2019, 10:20 am
ಬೀಜಿಂಗ್‌: ಕಾಶ್ಮೀರ ವಿವಾದವು ಭಾರತ ಹಾಗೂ ಪಾಕಿಸ್ತಾನ ನಡುವಿನ ದ್ವಿಪಕ್ಷೀಯ ವಿಚಾರವಾಗಿದ್ದು, ಉಭಯ ರಾಷ್ಟ್ರಗಳು ಪರಸ್ಪರ ಮಾತುಕತೆ ಮೂಲಕ ಇದನ್ನು ಬಗೆಹರಿಸಿಕೊಳ್ಳಬೇಕು ಎಂದು ಚೀನಾ ಹೇಳಿದೆ.
Vijaya Karnataka Web kashmir issue should be resolved between india and pakistan said by china
ಕಾಶ್ಮೀರ ವಿವಾದ ಭಾರತ-ಪಾಕ್‌ ಬಗೆಹರಿಸಿಕೊಳ್ಳಲಿ ಎಂದ ಚೀನಾ


'ಕಪ್ಪು ಪಟ್ಟಿ'ಗೆ ಸೇರುವ ಭಯದಲ್ಲಿದೆ ಪಾಕಿಸ್ತಾನ! ಒಡಲಲ್ಲಿ ಇರುವ ಉಗ್ರರೇ ವಿನಾಶಕ್ಕೆ ಕಾರಣ

ಇತ್ತೀಚೆಗೆ ಅಂತಾರಾಷ್ಟ್ರೀಯ ವೇದಿಕೆಗಳಲ್ಲಿ ಕಾಶ್ಮೀರ ವಿವಾದ ಪ್ರಸ್ತಾಪಿಸಿ ಮುಖಭಂಗ ಅನುಭವಿಸಿರುವ ಪಾಕಿಸ್ತಾನ ಪ್ರಧಾನಿ ಇಮ್ರಾನ್‌ ತಮ್ಮ ಎರಡು ದಿನಗಳ ಚೀನಾ ಪ್ರವಾಸದಲ್ಲಿಈ ವಿಷಯ ಪ್ರಸ್ತಾಪಿಸುವ ಸಾಧ್ಯತೆಗಳ ಬೆನ್ನಲ್ಲೆಯೇ ಚೀನಾ ವಿದೇಶಾಂಗ ಇಲಾಖೆ ಈ ಹೇಳಿಕೆ ನೀಡಿದ್ದು, ಇಮ್ರಾನ್‌ ಪ್ರಯತ್ನಗಳಿಗೆ ಮತ್ತೊಮ್ಮೆ ಹಿನ್ನಡೆಯಾಗಿದೆ.

ಇಮ್ರಾನ್ ಖಾನ್‌ಗೆ ಉಲ್ಟಾ ಹೊಡೀತು 'ಅತಿ ಬುದ್ದಿವಂತಿಕೆ'! ವಿಮಾನದಿಂದ ಒದ್ದು ಹೊರಗೆ ಹಾಕಿದ ಸೌದಿ ದೊರೆ

ಮಂಗಳವಾರ ಬೀಜಿಂಗ್‌ಗೆ ಬಂದಿಳಿದಿರುವ ಇಮ್ರಾನ್‌, ಚೀನಾ ಅಧ್ಯಕ್ಷ ಕ್ಸಿ ಜಿನ್‌ಪಿಂಗ್‌, ಪ್ರಧಾನಿ ಲಿ ಕೆಕಿಯಾಂಗ್‌ ಸೇರಿ ಅನೇಕ ನಾಯಕರ ಜತೆ ಪ್ರಾದೇಶಿಕ ಹಾಗೂ ದ್ವಿಪಕ್ಷೀಯ ಸಂಬಂಧ ವಿಚಾರಗಳ ಕುರಿತು ಮಾತುಕತೆ ನಡೆಸಲಿದ್ದಾರೆ. ಭಾರತ 370ನೇ ವಿಧಿ ರದ್ದು ಮಾಡಿ ಜಮ್ಮು-ಕಾಶ್ಮೀರವನ್ನು ಎರಡು ಕೇಂದ್ರಾಡಳಿತ ಪ್ರದೇಶಗಳಾಗಿ ವಿಭಜಿಸಿ ದಿಟ್ಟ ನಿರ್ಧಾರ ಪ್ರಕಟಿಸಿದ ಬಳಿಕ ಪಾಕ್‌ ಪರ ಸಹಾನೂಭೂತಿ ತೋರುವ ರೀತಿಯಲ್ಲಿ ಮಾತನಾಡಿದ್ದ ಚೀನಾ ಈಗ, ಭಾರತ-ಪಾಕ್‌ ಪರಸ್ಪರ ಮಾತುಕತೆ ಮೂಲಕ ಈ ವಿವಾದ ಬಗೆಹರಿಸಿಕೊಳ್ಳಬೇಕು ಎಂದಿದೆ.

ಸೌದಿ ವಿಮಾನ ಬಳಸಿದ್ದ ಇಮ್ರಾನ್‌ ಖಾನ್‌ಗೆ ಮುಖಭಂಗ

ಕ್ಸಿ ಜಿನ್‌ಪಿಂಗ್‌ ಅವರು ಪ್ರಧಾನಿ ಮೋದಿ ಜತೆ ಅನೌಪಚಾರಿಕ ಸಭೆ ನಡೆಸಲು ಸದ್ಯದಲ್ಲೇ ಭಾರತ ಭೇಟಿ ಕೈಗೊಳ್ಳಲಿದ್ದು, ಇದಕ್ಕೂ ಮುನ್ನವೇ ಇಮ್ರಾನ್‌ ಬೀಜಿಂಗ್‌ ತೆರಳಿ ಅಲ್ಲಿನ ನಾಯಕರ ಜತೆ ಮಾತುಕತೆ ನಡೆಸುತ್ತಿರುವುದು ಮಹತ್ವದ ಪಡೆದಿದೆ. ಇಮ್ರಾನ್‌ ಪಾಕ್‌ ಪ್ರಧಾನಿಯಾದ ಬಳಿಕ ಚೀನಾ ಪ್ರವಾಸ ಕೈಗೊಂಡಿರುವುದು ಇದು ಮೂರನೇ ಬಾರಿಯಾಗಿದೆ.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ