ಚೀನಾವನ್ನು ತರಾಟೆಗೆ ತೆಗೆದುಕೊಂಡ ಟ್ರಂಪ್!
75ನೇ ವಿಶ್ವಸಂಸ್ಥೆ ಸಾಮಾನ್ಯ ಸಭೆಯ ಚರ್ಚೆಯಲ್ಲಿ ಮಾತನಾಡಿದ ಅಮೆರಿಕದ ಅಧ್ಯಕ್ಷ ಡೊನಾಲ್ಡ್ ಟ್ರಂಪ್, ತಮ್ಮ ಭಾಷಣದುದ್ದಕ್ಕೂ ಚೀನಾ ವಿರುದ್ಧ ಹರಿಹಾಯ್ದರು. ಜಗತ್ತಿಗೆ ಮಾರಕ ಕೊರೊನಾ ವೈರಸ್ ಹರಡಲು ಚೀನಾ ಕಾರಣವಾಗಿದ್ದು, ಚೀನಾ ತನ್ನ ತಪ್ಪನ್ನು ಒಪ್ಪಿಕೊಳ್ಳಲೇಬೇಕು ಎಂದು ಟ್ರಂಪ್ ಆಗ್ರಹಿಸಿದ್ದಾರೆ.
ಅದರಂತೆ ವೈರಸ್ ಹಾವಳಿ ಸಂದರ್ಭದಲ್ಲಿ ಚೀನಾದ ಕೈಗೊಂಬೆಯಂತೆ ವರ್ತಿಸಿದ ವಿಶ್ವ ಆರೋಗ್ಯ ಸಂಸ್ಥೆ(WHO) ವಿರುದ್ಧವೂ ವಿಶ್ವಸಂಸ್ಥೆ ಕ್ರಮ ಕೈಗೊಳ್ಳಬೇಕೆಂದು ಈ ವೇಳೆ ಟ್ರಂಪ್ ಆಗ್ರಹಿಸಿದ್ದು ವಿಶೇಷವಾಗಿತ್ತು.
ವಿಶ್ವಸಂಸ್ಥೆ ಸಾಮಾನ್ಯ ಸಭೆ ಚರ್ಚೆಯಲ್ಲಿ ಚೀನಾ ವಿರುದ್ಧ ಹರಿಹಾಯ್ದ ಡೊನಾಲ್ಡ್ ಟ್ರಂಪ್!
ಅಲ್ಲದೇ ಕೊರೊನಾ ವೈರಸ್ ವಿರುದ್ಧ ಅಮರಿಕ ಕೈಗೊಂಡ ಕ್ರಮಗಳ ಕುರಿತು ಟ್ರಂಪ್ ವಿಸ್ತಾರವಾಗಿ ವಿವರಣೆ ನೀಡಿದರು.
ಚೀನಾಗೆ ವಿಸ್ತರಣಾವಾದದ ಮೇಲೆ ನಂಬಿಕೆ ಇಲ್ಲ ಎಂದ ಕ್ಸಿ ಜಿನ್ಪಿಂಗ್!
75ನೇ ವಿಶ್ವಸಂಸ್ಥೆ ಸಾಮಾನ್ಯ ಸಭೆ ಚರ್ಚೆಯಲ್ಲಿ ಮಾತನಾಡಿದ ಚೀನಾ ಅಧ್ಯಕ್ಷ ಕ್ಸಿ ಜಿನ್ಪಿಂಗ್, ಚೀನಾಗೆ ವಿಸ್ತರಣಾವಾದದಲ್ಲಿ ನಂಬಿಕೆ ಇಲ್ಲ ಎಂದು ಹೇಳಿದ್ದಾರೆ. ತಮ್ಮ ಭಾಷಣದಲ್ಲಿ ಲಡಾಖ್ ಗಡಿ ತಕರಾರನ್ನು ಪರೋಕ್ಷವಾಗಿ ಉಲ್ಲೇಖಿಸಿದ ಕ್ಸಿ ಜಿನ್ಪಿಂಗ್, ನಾವು ಯಾವುದೇ ರಾಷ್ಟ್ರದೊಂದಿಗೆ ನೇರ ಅಥವಾ ಶೀಥಲ ಸಮರದಲ್ಲಿ ಭಾಗಿಯಾಗಿಲ್ಲ ಎಂದು ಹೇಳಿದರು.
ವಿಶ್ವಸಂಸ್ಥೆ ಸಾಮಾನ್ಯ ಸಭೆ ಚರ್ಚೆಯಲ್ಲಿ ಪರೋಕ್ಷವಾಗಿ ಲಡಾಖ್ ವಿಷಯ ಪ್ರಸ್ತಾಪಿಸಿದ ಚೀನಾ ಅಧ್ಯಕ್ಷ!
ಶಾಂತಿಯುತ, ಮುಕ್ತ, ಸಹಕಾರಿ ಮತ್ತು ಸಾಮಾನ್ಯ ಅಭಿವೃದ್ಧಿಗೆ ಚೀನಾ ಬದ್ಧವಾಗಿದೆ ಎಂದು ಕ್ಸಿ ಜಿನ್ಪಿಂಗ್ ಹೇಳಿದ್ದು ವಿಶೇಷವಾಗಿತ್ತು.
ಕೊರೊನಾ ಕಾಲದ ಭಾರತದ ಸೇವೆ ಸ್ಮರಿಸಿದ ಪ್ರಧಾನಿ!
ಅದರಂತೆ 75ನೇ ವಿಶ್ವಸಂಸ್ಥೆ ಸಾಮಾನ್ಯ ಸಭೆ ಚರ್ಚೆ ಉದ್ದೇಶಿಸಿ ಮಾತನಾಡಿದ ಪ್ರಧಾನಿ ಮೋದಿ, ಕಳೆದ 8-9 ತಿಂಗಳಿನಲ್ಲಿ ಇಡೀ ವಿಶ್ವವೇ ಕೊರೊನಾ ಸಾಂಕ್ರಾಮಿಕ ದಾಳಿಗೆ ತತ್ತರಿಸಿದೆ. ಇದನ್ನು ಎದುರಿಸುವಲ್ಲಿ ವಿಶ್ವಸಂಸ್ಥೆಯ ಜಂಟಿ ನೆರವು ಎಲ್ಲಿದೆ ಎಂದು ಪ್ರಶ್ನಿಸಿದರು.
ಭಾರತದಿಂದಲೇ 150 ರಾಷ್ಟ್ರಗಳಿಗೆ ಅಗತ್ಯ ಔಷಧ ರವಾನೆ: ಮೋದಿ
ಭಾರತವೊಂದೇ ಕೊರೊನಾ ಆತಂಕದ ನಡುವೆಯೇ 150 ವಿದೇಶಿ ರಾಷ್ಟ್ರಗಳಿಗೆ ಅಗತ್ಯವಾದ ಔಷಧ ಮತ್ತು ಇತರ ಸಾಮಗ್ರಿಗಳನ್ನು ರವಾನಿಸಿದೆ. ವಿಶ್ವದಲ್ಲೇ ಅತಿದೊಡ್ಡ ಲಸಿಕೆ ಉತ್ಪಾದನಾ ವಲಯ ಹೊಂದಿರುವ ಭಾರತ, ಕೊರೊನಾ ಆಪತ್ತಿನಿಂದ ಶೀಘ್ರವೇ ಜಗತ್ತನ್ನು ಪಾರುಮಾಡುವ ಭರವಸೆ ನೀಡುತ್ತದೆ ಎಂದು ಪ್ರಧಾನಿ ಮೋದಿ ಹೇಳಿದರು,
ಇದೇ ವೇಳೆ ಭಾರತವನ್ನು ಇದುವರೆಗೆ ಪ್ರಮುಖ ನಿರ್ಧಾರಗಳಿಂದ ಹೊರಗಿಡುತ್ತಿರುವುದು ಏಕೆ ಎಂದು ಮೋದಿ ವಿಶ್ವಸಂಸ್ಥೆಯನ್ನು ಪ್ರಶ್ನಿಸಿದ್ದಾರೆ.
ಪಾಕ್ ಪ್ರಧಾನಿಯದ್ದು ಅದೇ ಹಳೆ ರಾಗ....!
ಇನ್ನು ಪಾಕ್ ಪ್ರಧಾನಿ ಇಮ್ರಾನ್ ಖಾನ್ ಕೂಡ 75ನೇ ವಿಶ್ವಸಂಸ್ಥೆ ಸಾಮಾನ್ಯ ಸಭೆ ಚರ್ಚೆ ಉದ್ದೇಶಿಸಿ ಮಾತನಾಡಿದ್ದು, 2019ರಲ್ಲಿ ಮಾಡಿದ್ದ ಭಾಷಣವನ್ನೇ ಇಮ್ರಾನ್ ಖಾನ್ ಮತ್ತೆ ಉಲ್ಲೇಖಿಸಿದಂತಿತ್ತು.
ತಮ್ಮ ಭಾಷಣದುದ್ದುಕ್ಕೂ ಜಮ್ಮು ಮತ್ತು ಕಾಶ್ಮೀರ ವಿಷಯ ಕುರಿತು ಪ್ರಸ್ತಾಪಿಸಿದ ಇಮ್ರಾನ್ ಖಾನ್, ಕಣಿವೆಯಲ್ಲಿ ಭಾರತ ಮಾನವ ಹಕ್ಕುಗಳ ಸ್ಪಷ್ಟ ಉಲ್ಲಂಘನೆ ಮಾಡುತ್ತಿದೆ ಎಂದು ಹರಿಹಾಯ್ದರು.
ಭಾರತ ಸರ್ಕಾರ ಜಮ್ಮು ಮತ್ತು ಕಾಶ್ಮೀರದ ಜನರ ಸ್ವಾತಂತ್ರ್ಯವನ್ನೇ ಕಸಿದಿದ್ದು, ಈ ನಿಟ್ಟಿನಲ್ಲಿ ವಿಶ್ವಸಂಸ್ಥೆ ಗಮನಹರಿಬೇಕು ಎಂದು ಇಮ್ರಾನ್ ಮನವಿ ಮಾಡಿದರು.
ವಿಶ್ವಸಂಸ್ಥೆಯಲ್ಲಿ ಭಾರತದ ಠಕ್ಕರ್: ಅಲ್ಪಸಂಖ್ಯಾತರ ಮತಾಂತರ, ಉಗ್ರರಿಗೆ ಪಿಂಚಣಿ ಇದು ಪಾಕಿಸ್ತಾನದ 70 ವರ್ಷದ ಸಾಧನೆ!
ಇನ್ನು ಪಾಕ್ ಪ್ರಧಾನಿ ಇಮ್ರಾನ್ ಖಾನ್ ಭಾಷಣ ಆರಂಭಿಸುತ್ತಿದ್ದಂತೇ, ವಿಶ್ವಸಂಸ್ಥೆಯಲ್ಲಿ ಭಾರತದ ಪರ್ಮನೆಂಟ್ ಮಿಷನ್ನ ಮೊದಲ ಕಾರ್ಯದರ್ಶಿ ಮಿಜಿಟೋ ವಿನಿಟೋ ಸಭೆಯಿಂದ ಹೊರ ನಡೆದಿದ್ದು ವಿಶೇಷವಾಗಿತ್ತು.
ಇನ್ನು 75ನೇ ವಿಶ್ವಸಂಸ್ಥೆ ಸಾಮಾನ್ಯ ಸಭೆ ಚರ್ಚೆಯನ್ನು ಉದ್ದೇಶಿಸಿ ರಷ್ಯಾ ಅಧ್ಯಕ್ಷ ವ್ಲಾಡಿಮಿರ್ ಪುಟಿನ್ ಸೇರಿದಂತೆ ಇತರ ಗಣ್ಯರೂ ಭಾಷಣ ಮಾಡಿದ್ದಾರೆ.