ಆ್ಯಪ್ನಗರ

ಕುವೈತ್ ದೊರೆ ನಿಧನ: ಪ್ರಧಾನಿ ಮೋದಿ ಸೇರಿ ಜಾಗತಿಕ ಗಣ್ಯರ ಸಂತಾಪ!

ತೈಲ ಸಮೃದ್ಧ ರಾಷ್ಟ್ರ ಕುವೈತ್‌ನ್ನು ಸುಮಾರು 14 ವರ್ಷಗಳ ಕಾಲ ಆಳಿದ ದೊರೆ ಸಬಾಹ್‌ ಅಲ್‌ ಅಹ್ಮದ್‌ ಅಲ್‌-ಜಬರ್‌ ಅಲ್‌ ಸಬಾಹ್‌ (91) ನಿಧನರಾಗಿದ್ದಾರೆ. ಕುವೈತ್ ದೊರೆಯ ನಿಧನಕ್ಕೆ ಪ್ರಧಾನಿ ಮೋದಿ ತೀವ್ರ ಸಂತಾಪ ಸೂಚಿಸಿದ್ದಾರೆ.

Vijaya Karnataka Web 29 Sep 2020, 11:16 pm
ಕುವೈತ್: ತೈಲ ಸಮೃದ್ಧ ರಾಷ್ಟ್ರ ಕುವೈತ್‌ನ್ನು ಸುಮಾರು 14 ವರ್ಷಗಳ ಕಾಲ ಆಳಿದ ದೊರೆ ಸಬಾಹ್‌ ಅಲ್‌ ಅಹ್ಮದ್‌ ಅಲ್‌-ಜಬರ್‌ ಅಲ್‌ ಸಬಾಹ್‌ (91) ನಿಧನರಾಗಿದ್ದಾರೆ.
Vijaya Karnataka Web Kuwait Ruler
ಸಂಗ್ರಹ ಚಿತ್ರ


ಕಳೆದ ಭಾನುವಾರವೇ ಅಲ್ ಅಹ್ಮದ್ ನಿಧನರಾಗಿದ್ದು, ಇಂದು(ಮಂಗಳವಾರ) ಕುವೈತ್‌ನ ಸರ್ಕಾರಿ ಸುದ್ದಿ ವಾಹಿನಿ ಅವರ ನಿಧನದ ವಾರ್ತೆಯನ್ನು ಅಧಿಕೃತವಾಗಿ ಘೋಷಿಸಿದೆ. ಈ ಮೊದಲೇ ನಿಗದಿಯಾದಂತೆ ಶೇಕ್‌ ಸಬಾಹ್‌ ಅವರ ಸಹೋದರ ನವಾಫ್‌ ಅಲ್‌ ಅಹ್ಮದ್‌ ಅಲ್‌ ಸಬಾಹ್‌ ಉತ್ತರಾಧಿಕಾರಿಯಾಗಿ ಅಧಿಕಾರ ವಹಿಸಿಕೊಳ್ಳಲಿದ್ದಾರೆ.

ದೊರೆಯ ಸಾವಿನ ಬೆನ್ನಲ್ಲೇ ಕುವೈತ್‌ ಸರಕಾರಿ ವಾಹಿನಿಯಲ್ಲಿ ದೈನಂದಿನ ಕಾರ್ಯಕ್ರಮಗಳ ಪ್ರಸಾರ ರದ್ದುಪಡಿಸಿ, ಶೋಕಾಚರಣೆ ಘೋಷಿಸಲಾಗಿದೆ.

ಕಳೆದ ಜೂನ್‌ನಲ್ಲಿ ದೊರೆಗೆ ಶಸ್ತ್ರಚಿಕಿತ್ಸೆ ನಡೆಸಲಾಗಿತ್ತು. ಆದರೆ ಯಾವ ಶಸ್ತ್ರಚಿಕಿತ್ಸೆ ಎಂಬ ಬಗ್ಗೆಸರ್ಕಾರ ಮಾಹಿತಿ ನೀಡಿರಲಿಲ್ಲ. ಬಳಿಕ ಅವರನ್ನು ಹೆಚ್ಚಿನ ಚಿಕಿತ್ಸೆಗಾಗಿ ಅಮೆರಿಕಕ್ಕೆ ಕರೆದೊಯ್ಯಲಾಗಿತ್ತು.

ಕಳೆದ ವರ್ಷವೂ ದೊರೆಗೆ ಆರೋಗ್ಯ ಹದಗೆಟ್ಟಿತ್ತು. ಬಳಿಕ ಅವರು ಚೇತರಿಸಿಕೊಂಡಿದ್ದರು. ಶೇಕ್‌ ಸಬಾಹ್‌ ಅವರು 2006ರಿಂದ ಕುವೈತ್‌ ಅನ್ನು ಆಳುತ್ತಿದ್ದರು. ಆದರೆ, ಸುಮಾರು ಅರ್ಧ ಶತಮಾನಕ್ಕೂ ಹೆಚ್ಚು ಕಾಲ ಅವರು ದೇಶದ ವಿದೇಶಾಂಗ ನೀತಿಯ ಸಾರಥ್ಯ ವಹಿಸಿದ್ದರು.

ಗಲ್ಫ್ ಪ್ರಾಂತ್ಯದಲ್ಲಿ ಕುವೈತ್‌ಗೆ ಅಮೆರಿಕದ ಪ್ರಮುಖ ಮಿತ್ರ ರಾಷ್ಟ್ರದ ಸ್ಥಾನಮಾನ ತಂದುಕೊಡುವಲ್ಲಿ ಸಬಾಹ್‌ ಅಲ್‌ ಅಹ್ಮದ್‌ ಅಲ್‌-ಜಬರ್‌ ಅಲ್‌ ಸಬಾಹ್ ಪಾತ್ರ ಅತ್ಯಂತ ಮಹತ್ವದ್ದು ಎನ್ನಲಾಗಿದೆ.

ಪ್ರಧಾನಿ ಮೋದಿ ಸಂತಾಪ:

ಇನ್ನು ಕವೈತ್ ದೊರೆ ನಿಧನಕ್ಕೆ ಸಂತಾಪ ಸೂಚಿಸಿರುವ ಪ್ರಧಾನಿ ನರೇಂದ್ರ ಮೋದಿ, ಭಾರತ ಇಂದು ಓರ್ವ ಉತ್ತಮ ಸ್ನೇಹಿತನನ್ನು ಕಳೆದುಕೊಂಡಿದೆ ಎಂದು ಕಂಬನಿ ಮಿಡಿದಿದ್ದಾರೆ.


ಕುವೈತ್ ಸೇರಿದಂತೆ ಸಂಪೂರ್ಣ ಅರಬ್ ಜಗತ್ತು ಓರ್ವ ದಾರ್ಶನಿಕ ಹಾಗೂ ದೂರದೃಷ್ಟಿಯ ನಾಯಕನನ್ನು ಕಳೆದುಕೊಂಡಿದ್ದು, ಭಾರತ ಕುವೈತ್ ದೊರೆಯ ನಿಧನಕ್ಕೆ ತನ್ನ ಸಂತಾಪ ಸೂಚಿಸುತ್ತದೆ ಎಂದು ಪ್ರಧಾನಿ ಮೋದಿ ಟ್ವೀಟ್ ಮಾಡಿದ್ದಾರೆ.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ