ಕೊಲಂಬೋ: ಇಸ್ಲಾಮಿಕ್ ಉಗ್ರರನ್ನು ಯುದ್ಧೋಪಾದಿಯಲ್ಲಿ ನಿರ್ನಾಮ ಮಾಡಬೇಕು ಎಂದು ಶ್ರೀಲಂಕಾದ ಕ್ಯಾಥೊಲಿಕ್ ಚರ್ಚ್ ಲಂಕಾ ಸರಕಾರವನ್ನು ಒತ್ತಾಯಿಸಿದೆ.
ಇನ್ನಷ್ಟು ಭಯೋತ್ಪಾದಕ ದಾಳಿಗಳು ನಡೆಯದಂತೆ ಸರಕಾರ ತಡೆಯಬೇಕು, ಒಂದೊಮ್ಮೆ ಜನತೆಯೇ ಕಾನೂನು ಕೈಗೆತ್ತಿಕೊಂಡು ಉಗ್ರರ ವಿರುದ್ಧ ಸಮರ ಸಾರಿದರೆ ತಾವೇನೂ ಮಾಡಲಾಗದು ಎಂದು ಕೊಲಂಬೋದ ಆರ್ಚ್ ಬಿಷಪ್ ಕಾರ್ಡಿನಲ್ ಮಾಲ್ಕೋಮ್ ರಂಜಿತ್ ಹೇಳಿದ್ದಾರೆ.
ಈಸ್ಟರ್ ಭಾನುವಾರದಂದು ಲಂಕಾದ ಚರ್ಚ್ಗಳು ಹಾಗೂ ಐಷಾರಾಮಿ ಹೋಟೆಲ್ಗಳಲ್ಲಿ ನಡೆದ ಸರಣಿ ಬಾಂಬ್ ಸ್ಫೋಟಗಳಲ್ಲಿ 250ಕ್ಕೂ ಅಧಿಕ ಮಂದಿ ಮೃತಪಟ್ಟು 500ಕ್ಕೂ ಹೆಚ್ಚು ಮಂದಿ ಗಾಯಗೊಂಡಿದ್ದರು.
ಲಂಕಾ ದಾಳಿ ಹೊಣೆಯನ್ನು ಐಸಿಸ್ ಉಗ್ರ ಸಂಘಟನೆ ಹೊತ್ತುಕೊಂಡಿತ್ತು. ಸ್ಥಳೀಯ ಮುಸ್ಲಿಮರಲ್ಲಿ ಮೂಲಭೂತವಾದ ಮತ್ತು ಉಗ್ರವಾದ ತುಂಬಿ ವಿಧ್ವಂಸಕ ಕೃತ್ಯಗಳನ್ನು ನಡೆಸಲಾಗುತ್ತಿದೆ ಎಂದು ಲಂಕಾ ಚರ್ಚ್ ದೂರಿದೆ.
ಶ್ರೀಲಂಕಾದಲ್ಲಿ ಬುರ್ಖಾ ನಿಷೇಧ
ಇದುವರೆಗೆ ಸರಕಾರ ನಡೆಸಿದ ತನಿಖೆ ಹಾಗೂ ಉಗ್ರರನ್ನು ಹತ್ತಿಕ್ಕುವ ಕ್ರಮಗಳು ಸಮಾಧಾನಕರವಾಗಿಲ್ಲ ಎಂದು ಕಾರ್ಡಿನಲ್ ಹೇಳಿದರು.
'ಎಲ್ಲ ಭದ್ರತಾ ಪಡೆಗಳೂ ಸಮರೋಪಾದಿಯಲ್ಲಿ ಕಾರ್ಯನಿರ್ವಹಿಸಿ ಉಗ್ರರನ್ನು ದಮನಿಸಬೇಕು. ಬಲಿಷ್ಠ ಭದ್ರತಾ ವ್ಯವಸ್ಥೆ ಇಲ್ಲದಿದ್ದರೆ ಜನತೆ ಕಾನೂನು ಕೈಗೆತ್ತಿಕೊಳ್ಳುವುದನ್ನು ತಡೆಯಲಾಗದು' ಎಂದು ಅವರು ಮಾಧ್ಯಮಗಳ ಜತೆ ಮಾತನಾಡುತ್ತ ತಿಳಿಸಿದರು.
ಇನ್ನಷ್ಟು ಭಯೋತ್ಪಾದಕ ದಾಳಿಗಳು ನಡೆಯದಂತೆ ಸರಕಾರ ತಡೆಯಬೇಕು, ಒಂದೊಮ್ಮೆ ಜನತೆಯೇ ಕಾನೂನು ಕೈಗೆತ್ತಿಕೊಂಡು ಉಗ್ರರ ವಿರುದ್ಧ ಸಮರ ಸಾರಿದರೆ ತಾವೇನೂ ಮಾಡಲಾಗದು ಎಂದು ಕೊಲಂಬೋದ ಆರ್ಚ್ ಬಿಷಪ್ ಕಾರ್ಡಿನಲ್ ಮಾಲ್ಕೋಮ್ ರಂಜಿತ್ ಹೇಳಿದ್ದಾರೆ.
ಈಸ್ಟರ್ ಭಾನುವಾರದಂದು ಲಂಕಾದ ಚರ್ಚ್ಗಳು ಹಾಗೂ ಐಷಾರಾಮಿ ಹೋಟೆಲ್ಗಳಲ್ಲಿ ನಡೆದ ಸರಣಿ ಬಾಂಬ್ ಸ್ಫೋಟಗಳಲ್ಲಿ 250ಕ್ಕೂ ಅಧಿಕ ಮಂದಿ ಮೃತಪಟ್ಟು 500ಕ್ಕೂ ಹೆಚ್ಚು ಮಂದಿ ಗಾಯಗೊಂಡಿದ್ದರು.
ಲಂಕಾ ದಾಳಿ ಹೊಣೆಯನ್ನು ಐಸಿಸ್ ಉಗ್ರ ಸಂಘಟನೆ ಹೊತ್ತುಕೊಂಡಿತ್ತು. ಸ್ಥಳೀಯ ಮುಸ್ಲಿಮರಲ್ಲಿ ಮೂಲಭೂತವಾದ ಮತ್ತು ಉಗ್ರವಾದ ತುಂಬಿ ವಿಧ್ವಂಸಕ ಕೃತ್ಯಗಳನ್ನು ನಡೆಸಲಾಗುತ್ತಿದೆ ಎಂದು ಲಂಕಾ ಚರ್ಚ್ ದೂರಿದೆ.
ಶ್ರೀಲಂಕಾದಲ್ಲಿ ಬುರ್ಖಾ ನಿಷೇಧ
ಇದುವರೆಗೆ ಸರಕಾರ ನಡೆಸಿದ ತನಿಖೆ ಹಾಗೂ ಉಗ್ರರನ್ನು ಹತ್ತಿಕ್ಕುವ ಕ್ರಮಗಳು ಸಮಾಧಾನಕರವಾಗಿಲ್ಲ ಎಂದು ಕಾರ್ಡಿನಲ್ ಹೇಳಿದರು.
'ಎಲ್ಲ ಭದ್ರತಾ ಪಡೆಗಳೂ ಸಮರೋಪಾದಿಯಲ್ಲಿ ಕಾರ್ಯನಿರ್ವಹಿಸಿ ಉಗ್ರರನ್ನು ದಮನಿಸಬೇಕು. ಬಲಿಷ್ಠ ಭದ್ರತಾ ವ್ಯವಸ್ಥೆ ಇಲ್ಲದಿದ್ದರೆ ಜನತೆ ಕಾನೂನು ಕೈಗೆತ್ತಿಕೊಳ್ಳುವುದನ್ನು ತಡೆಯಲಾಗದು' ಎಂದು ಅವರು ಮಾಧ್ಯಮಗಳ ಜತೆ ಮಾತನಾಡುತ್ತ ತಿಳಿಸಿದರು.