ಆ್ಯಪ್ನಗರ

ಶ್ರೀಲಂಕಾ ಸೇನಾ ಮುಖ್ಯಸ್ಥರ ಬಂಧನಕ್ಕೆ ಕೋರ್ಟ್‌ ಆದೇಶ

2008 ಮತ್ತು 2009ರ ನಡುವೆ 11 ಯುವಕರ ಕಣ್ಮರೆಯಲ್ಲಿ ಪ್ರಮುಖ ಪಾತ್ರ ವಹಿಸಿದ ಆರೋಪಿಯ ರಕ್ಷಣೆ ಮತ್ತು ಆತ ದೇಶದಿಂದ ತಪ್ಪಿಸಿಕೊಳ್ಳಲು ಸಹಾಯ ಮಾಡಿದ ಆರೋಪ ವಿಜೆಗುಣರತ್ನೆ ಅವರ ಮೇಲಿದೆ

Vijaya Karnataka 3 Nov 2018, 7:36 am
ಕೊಲಂಬೊ: ಎಲ್‌ಟಿಟಿಇಯೊಂದಿಗಿನ ಸಂಘರ್ಷದ ಸಮಯದಲ್ಲಿ ಅಲ್ಪಸಂಖ್ಯಾತ ತಮಿಳರು ಸೇರಿದಂತೆ 11 ಯುವಕರ ಅಪಹರಣ ಮತ್ತು ನಾಪತ್ತೆ ಪ್ರಕರಣದಲ್ಲಿ ಭಾಗಿಯಾಗಿರುವ ಆರೋಪ ಹೊತ್ತಿರುವ ಶ್ರೀಲಂಕಾ ಸೇನಾ ಮುಖ್ಯಸ್ಥ ಅಡ್ಮಿರಲ್‌ ರವಿ ವಿಜೆಗುಣರತ್ನೆ ಅವರನ್ನು ಬಂಧಿಸುವಂತೆ ಕೊಲೊಂಬೊ ಮ್ಯಾಜಿಸ್ಪ್ರೇಟ್‌ ನ್ಯಾಯಾಲಯ ಶುಕ್ರವಾರ ಆದೇಶಿಸಿದೆ.
Vijaya Karnataka Web Arrest


2008 ಮತ್ತು 2009ರ ನಡುವೆ 11 ಯುವಕರ ಕಣ್ಮರೆಯಲ್ಲಿ ಪ್ರಮುಖ ಪಾತ್ರ ವಹಿಸಿದ ಆರೋಪಿಯ ರಕ್ಷಣೆ ಮತ್ತು ಆತ ದೇಶದಿಂದ ತಪ್ಪಿಸಿಕೊಳ್ಳಲು ಸಹಾಯ ಮಾಡಿದ ಆರೋಪ ವಿಜೆಗುಣರತ್ನೆ ಅವರ ಮೇಲಿದೆ. ನಾಪತ್ತೆಯಾಗಿರುವ ಯುವಕರು ಹತ್ಯೆಯಾಗಿರಬಹುದು ಎಂದು ನಂಬಲಾಗಿದೆ. ''ನವೆಂಬರ್‌ 9ರೊಳಗೆ ವಿಜೆಗುಣರತ್ನೆ ಅವರನ್ನು ಬಂಧಿಸಬೇಕು. ಬಂಧಿಸಲು ವಿಫಲವಾದರೆ ಕ್ರಮ ಎದುರಿಸಲು ಸಿದ್ಧರಾಗಬೇಕು,'' ಎಂದು ನ್ಯಾಯಾಲಯ ಪೊಲೀಸರಿಗೆ ಎಚ್ಚರಿಸಿದೆ.

ತಮಿಳರ ನಾಪತ್ತೆಯ ಹಿಂದೆ ಶ್ರೀಲಂಕಾ ಸರಕಾರ ಅದರಲ್ಲೂ ಮುಖ್ಯವಾಗಿ ಭೂಸೇನೆ, ವಾಯು ಸೇನೆ ಮತ್ತು ಪೊಲೀಸರ ಕೈವಾಡವಿದೆ ಎಂದು ನಾಪತ್ತೆಯಾದವರ ಸಂಬಂಧಿಕರು ಆರೋಪಿಸಿದ್ದಾರೆ. ಈ ಪ್ರಕರಣಕ್ಕೆ ಸಂಬಂಧಿಸಿದಂತೆ ವಾಯು ಸೇನೆಯ ಅನೇಕ ಅಧಿಕಾರಿಗಳು ಜಾಮೀನು ಪಡೆದಿದ್ದಾರೆ.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ