ಆ್ಯಪ್ನಗರ

ಉಗ್ರವಾದದ ವಿರುದ್ಧ ಸಮಷ್ಠಿ ಹೋರಾಟ ಪ್ರತಿಪಾದಿಸಿದ ಭಾರತ

ಕಜಕಿಸ್ಥಾನದ ರಾಜಧಾನಿ ಬಿಷ್ಕೆಕ್‌ನಲ್ಲಿ ನಡೆದ ಎರಡು ದಿನಗಳ ಸಮಾವೇಶದಲ್ಲಿ ಬುಧವಾರ ವಿದೇಶಾಂಗ ವ್ಯವಹಾರಗಳ ಸಚಿವೆ ಸುಷ್ಮಾ ಸ್ವರಾಜ್‌ ಅವರು, ಪುಲ್ವಾಮಾ ಉಗ್ರ ದಾಳಿ, ಈಸ್ಟರ್‌ ಭಾನುವಾರದ ಶ್ರೀಲಂಕಾ ದಾಳಿಯನ್ನು ಪ್ರಸ್ತಾಪಿಸಿ ಭಯೋತ್ಪಾದನೆ ವಿರುದ್ಧದ ಹೋರಾಟದಲ್ಲಿ ಪರಸ್ಪರ ಸಹಕಾರ ಅಗತ್ಯ ಎಂದು ಹೇಳಿದರು. ಈ ಎರಡೂ ದಾಳಿಗಳು ಭಾರತದ ಉಗ್ರ ದಮನ ಕಾರ್ಯಾಚರಣೆ ಶಕ್ತಿಯನ್ನು ದುಪ್ಪಟ್ಟುಗೊಳಿಸಿದೆ ಎಂದರು.

Vijaya Karnataka 23 May 2019, 5:00 am
ಬಿಷ್ಕೆಕ್‌: ಭಯೋತ್ಪಾದನೆಯ ವಿರುದ್ಧ ಸಮಷ್ಠಿ ಪ್ರಜ್ಞೆಯ ಹೋರಾಟ ಅಗತ್ಯವಿದೆ ಎಂದು ಶಾಂಘೈ ಸಹಕಾರ ಒಕ್ಕೂಟದ ಸದಸ್ಯ ರಾಷ್ಟ್ರಗಳ ವಿದೇಶಾಂಗ ಸಚಿವರುಗಳ ಸಮಾವೇಶದಲ್ಲಿ ಭಾರತ ಪ್ರತಿಪಾದಿಸಿದೆ. ಅಲ್ಲದೇ, ಪ್ರಾದೇಶಿಕ ವಲಯದಲ್ಲಿ ಸುಸ್ಥಿರ ಅಭಿವೃದ್ಧಿ ಸಾಧನೆ ಮತ್ತು ಶಾಂತಿ ಸ್ಥಾಪನೆಯಲ್ಲಿ ತನ್ನ ಬದ್ಧತೆಯನ್ನು ಸಾರಿದೆ.
Vijaya Karnataka Web lanka pulwama attacks made india more determined to resolutely fight terrorism swaraj tells sco
ಉಗ್ರವಾದದ ವಿರುದ್ಧ ಸಮಷ್ಠಿ ಹೋರಾಟ ಪ್ರತಿಪಾದಿಸಿದ ಭಾರತ


ಕಜಕಿಸ್ಥಾನದ ರಾಜಧಾನಿ ಬಿಷ್ಕೆಕ್‌ನಲ್ಲಿ ನಡೆದ ಎರಡು ದಿನಗಳ ಸಮಾವೇಶದಲ್ಲಿ ಬುಧವಾರ ವಿದೇಶಾಂಗ ವ್ಯವಹಾರಗಳ ಸಚಿವೆ ಸುಷ್ಮಾ ಸ್ವರಾಜ್‌ ಅವರು, ಪುಲ್ವಾಮಾ ಉಗ್ರ ದಾಳಿ, ಈಸ್ಟರ್‌ ಭಾನುವಾರದ ಶ್ರೀಲಂಕಾ ದಾಳಿಯನ್ನು ಪ್ರಸ್ತಾಪಿಸಿ ಭಯೋತ್ಪಾದನೆ ವಿರುದ್ಧದ ಹೋರಾಟದಲ್ಲಿ ಪರಸ್ಪರ ಸಹಕಾರ ಅಗತ್ಯ ಎಂದು ಹೇಳಿದರು. ಈ ಎರಡೂ ದಾಳಿಗಳು ಭಾರತದ ಉಗ್ರ ದಮನ ಕಾರ್ಯಾಚರಣೆ ಶಕ್ತಿಯನ್ನು ದುಪ್ಪಟ್ಟುಗೊಳಿಸಿದೆ ಎಂದರು.
''ಉಗ್ರವಾದ ಯಾವುದೇ ಒಂದು ಧರ್ಮಕ್ಕೆ ಸೀಮಿತವಾಗಿಲ್ಲ. ಭಾರತವೂ ಸೇರಿದಂತೆ ಅದರ ನೆರೆ ರಾಷ್ಟ್ರಗಳು ಭಯೋತ್ಪಾದನೆ ಪಿಡುಗು ಎದುರಿಸುತ್ತಿದೆ. ಇಡೀ ವಿಶ್ವವನ್ನೇ ಇದು ವ್ಯಾಪಿಸಿದೆ,'' ಎಂದ ಅವರು, ಭದ್ರತೆಯ ವಿಚಾರದಲ್ಲಿ ಪ್ರಾದೇಶಿಕ ಉಗ್ರ ನಿಗ್ರಹ ವ್ಯವಸ್ಥೆ (ಆರ್‌ಎಟಿಎಸ್‌) ರಚನೆಯಾಗಬೇಕಿದೆ. ಇದಕ್ಕೆ ರಾಜಕೀಯ ಇಚ್ಛಾಶಕ್ತಿ ಬೇಕು ಎಂದರು.
ಶಾಂಘೈ ಸಹಕಾರ ಒಕ್ಕೂಟದ ಸದಸ್ಯ ರಾಷ್ಟ್ರಗಳ ಜತೆಗೆ ಭಾರತವು ವ್ಯಾಪಾರ ವಹಿವಾಟು ಸಂಬಂಧವನ್ನು ಉತ್ತಮವಾಗಿರಿಸಿಕೊಂಡಿದ್ದು, ಇದನ್ನು ಹೊಸ ಎತ್ತರಕ್ಕೆ ಕೊಂಡೊಯ್ಯಲು ಸಿದ್ಧವಾಗಿದೆ. ಸುಸ್ಥಿರ ಅಭಿವೃದ್ಧಿಯೊಂದೇ ಆರ್ಥಿಕ ಪ್ರಗತಿಗೆ ರಹದಾರಿಯಾಗಿದೆ ಎಂದು ಹೇಳಿದರು.

-------
ಮಾತನಾಡದ ಸುಷ್ಮಾ, ಖುರೇಷಿ

ಸಮಾವೇಶದಲ್ಲಿ ವಿದೇಶಾಂಗ ವ್ಯವಹಾರಗಳ ಸಚಿವೆ ಸುಷ್ಮಾ ಸ್ವರಾಜ್‌ ಹತ್ತಿರವೇ ಪಾಕಿಸ್ತಾನದ ವಿದೇಶಾಂಗ ಸಚಿವ ಶಾ ಮೆಹಮೂದ್‌ ಖುರೇಷಿ ಆಸೀನರಾಗಿದ್ದರೂ ಇಬ್ಬರ ಮಧ್ಯೆ ಕುಶಲೋಪರಿಯ ಮಾತುಕತೆ ನಡೆಯಲಿಲ್ಲ ಎಂದು ಮೂಲಗಳು ಹೇಳಿವೆ. ಪುಲ್ವಾಮಾ ಉಗ್ರ ದಾಳಿಯ ಬಳಿಕ ಉಭಯ ದೇಶಗಳ ನಡುವಿನ ಸಂಬಂಧ ತೀವ್ರತರದಲ್ಲಿ ಹದಗೆಟ್ಟಿದೆ.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ