ಆ್ಯಪ್ನಗರ

ಭಾರತದ ಜೈಲಲ್ಲಿ ಮಲ್ಯಗಿಲ್ಲ ತೊಂದರೆ: ಅಧಿಕಾರಿ

ಭಾರತದ ಜೈಲುಗಳ ಬಗ್ಗೆ ತಲೆಮರೆಯಿಸಿಕೊಂಡಿರುವ ಉದ್ಯಮಿ ವಿಜಯ್ ಮಲ್ಯ ಚಿಂತಿತರಾಗಿದ್ದು, ಆ ಕಾರಣಕ್ಕೆ ಗಡಿಪಾರು ಮಾಡದಂತೆ ವೆಸ್ಟ್‌ಮಿನಿಸ್ಟರ್ ಮ್ಯಾಜಿಸ್ಟ್ರೇಟ್ ಮುಂದೆ ಅಳಲು ತೋಡಿಕೊಂಡಿದ್ದಾರೆ.

Vijaya Karnataka Web 8 Dec 2017, 10:09 am
ಲಂಡನ್: ಭಾರತದ ಜೈಲುಗಳ ಬಗ್ಗೆ ತಲೆಮರೆಯಿಸಿಕೊಂಡಿರುವ ಉದ್ಯಮಿ ವಿಜಯ್ ಮಲ್ಯ ಚಿಂತಿತರಾಗಿದ್ದು, ಆ ಕಾರಣಕ್ಕೆ ಗಡಿಪಾರು ಮಾಡದಂತೆ ವೆಸ್ಟ್‌ಮಿನಿಸ್ಟರ್ ಮ್ಯಾಜಿಸ್ಟ್ರೇಟ್ ಮುಂದೆ ಅಳಲು ತೋಡಿಕೊಂಡಿದ್ದಾರೆ. ಇದಕ್ಕೆ ಪ್ರತಿಕ್ರಿಯೆ ನೀಡಿರುವ ಭಾರತೀಯ ಹಿರಿಯ ಅಧಿಕಾರಿಯೊಬ್ಬರು, 'ದೇಶದ ಜೈಲಿನಲ್ಲಿ ಮಲ್ಯ ಆರಾಮಾಗಿರುವಂತೆ ನೋಡಿಕೊಳ್ಳುತ್ತೇವೆ,' ಎಂದಿದ್ದಾರೆ.
Vijaya Karnataka Web mallya will have good times in jail official
ಭಾರತದ ಜೈಲಲ್ಲಿ ಮಲ್ಯಗಿಲ್ಲ ತೊಂದರೆ: ಅಧಿಕಾರಿ


ವೈಯಕ್ತಿಕ ಶೌಚಾಲಯ, ಟಿವಿ, ಮನೆ ಆಹಾರದೊಂದಿಗೆ ಮಲ್ಯ ಅವರಿಗೆ ಅಗತ್ಯ ಸೌಲಭ್ಯಗಳನ್ನು ಒದಗಿಸಲಾಗುತ್ತದೆ, ಎಂದು ಅಧಿಕಾರಿಗಳು ಹೇಳಿದ್ದಾರೆ.

'ಭಾರತೀಯ ಜೈಲಲ್ಲಿ ಜೂನ್ 23ರಂದು ಹತ್ಯೆಯಾದ ದೋಷಿ ಮಂಜುಲಾ ಶೇಟೆ ಅವರನ್ನು ಉಲ್ಲೇಖಿಸಿದ ಮಲ್ಯ, ಅಲ್ಲಿ ನನಗೆ ಜೀವ ಭಯವಿದ್ದು, ಗಡೀಪಾರು ಮಾಡುವುದು ಬೇಡ,' ಎಂದು ನ್ಯಾಯಾಧೀಶರ ಬಳಿ ಆಗ್ರಹಿಸಿದ್ದಾರೆ. ಮಲ್ಯ ಅವರನ್ನು ಭಾರತಕ್ಕೆ ಗಡೀಪಾರು ಮಾಡುವ ಸಂಬಂಧ ವ್ಯವಹರಿಸುತ್ತಿರುವ ಭಾರತೀಯ ಹಿರಿಯ ಅಧಿಕಾರಿಯೊಬ್ಬರು ಟೈಮ್ಸ್ ಆಫ್ ಇಂಡಿಯಾದೊಂದಿಗೆ ಮಾತನಾಡಿ, 'ಭಾರತೀಯ ಜೈಲಲ್ಲಿ ಅವರು ಆತಂಕ ಪಡುವ ಅಗತ್ಯವೇ ಇಲ್ಲ. ಅವರು ಯೋಚಿಸುವುದು ಅನಗತ್ಯ. ಜೈಲಲ್ಲಿ ನೀಡುವ ಆಹಾರವೂ ಉತ್ತಮ ಗುಣಮಟ್ಟದಲ್ಲಿರುತ್ತದೆ. ಅಲ್ಲದೇ ಜೈಲಿನ ಮೆನುವಂತೆ ಮನೆಯಿಂದ ಆಹಾರ ತರಿಸಿಕೊಳ್ಳಲು ಅನುಮತಿ ನೀಡಲಾಗುತ್ತದೆ,' ಎಂದಿದ್ದಾರೆ.

'ಭಾರತೀಯ ಜೈಲಿನ ಸ್ಥಿತಿಗತಿ ಬಗ್ಗೆ ವಿದೇಶಿ ಮಾದ್ಯಮದಲ್ಲಿ ಋಣಾತ್ಮಕ ಭಾವನೆಗಳಿದ್ದು, ಗಡೀಪಾರು ಮಾಡುವ ವಿಷಯ ಬಂದಾಗ ಇದನ್ನೇ ವೈಭವೀಕರಿಸಲಾಗುತ್ತಿದೆ. ಈ ಬಗ್ಗೆ ಅಲ್ಲಿಯವರು ಭಾವನೆಯನ್ನು ಬದಲಾಯಿಸಲು ಯತ್ನಿಸಲಾಗುತ್ತಿದೆ,' ಅವರು ಹೇಳಿದ್ದಾರೆ.

ಸಾಮಾನ್ಯವಾಗಿ ಗಡೀಪಾರಾದ ಆರೋಪಿಗಳಿಗೆ ಮುಂಬಯಿನ ಅರ್ಥರ್ ರಸ್ತೆಯಲ್ಲಿರುವ ಜೈಲಲ್ಲಿ ವ್ಯವಸ್ಥೆ ಕಲ್ಪಿಸಲಾಗುತ್ತದೆ. ಅಲ್ಲಿ ಇದುವರೆಗೆ ಇಬ್ಬರನ್ನೂ ಮಾತ್ರ ಇರಿಸಲಾಗಿದೆ. ಮಲ್ಯರನ್ನು ಗಡೀಪಾರು ಮಾಡುವಂತೆ ಇಂಗ್ಲೆಂಡ್ ಸರಕಾರವನ್ನು ಕೇಳಿಕೊಂಡಿದ್ದು, ಅಗತ್ಯ ದಾಖಲೆಗಳನ್ನು ನೀಡಲಾಗಿದೆ. ಈ ಪ್ರಕರಣದಲ್ಲಿ ಭಾರತ ಗೆಲ್ಲುವ ವಿಶ್ವಾಸವಿದೆ, ಎಂದು ಅಧಿಕಾರಿಗಳು ವಿಶ್ವಾಸ ವ್ಯಕ್ತಪಡಿಸಿದ್ದಾರೆ.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ