ಆ್ಯಪ್ನಗರ

ಎನ್‌ಕೌಂಟರ್‌ನಲ್ಲಿ ಆರು ಉಗ್ರರ ಹತ್ಯೆ

ಪಾಕಿಸ್ತಾನದ ಗುಪ್ತಚರ ಸಂಸ್ಥೆ ಐಎಸ್‌ಐನ ಬ್ರಿಗೇಡಿಯರ್‌ ಹತ್ಯೆ ಸೇರಿದಂತೆ ಅನೇಕ ಬಾಂಬ್‌ ದಾಳಿಗಳಲ್ಲಿ ಭಾಗಿಯಾಗಿದ್ದ ಆರು ಉಗ್ರರನ್ನು ಪಾಕ್‌ನ ಪಂಜಾಬ್‌ ಪ್ರಾಂತ್ಯದಲ್ಲಿ ಭದ್ರತಾ ಪಡೆಗಳು ಎನ್‌ಕೌಂಟರ್‌ ನಡೆಸಿ ಭಾನುವಾರ ಹತ್ಯೆ ಮಾಡಿವೆ.

Vijaya Karnataka 28 May 2018, 9:49 am
ಲಾಹೋರ್‌: ಪಾಕಿಸ್ತಾನದ ಗುಪ್ತಚರ ಸಂಸ್ಥೆ ಐಎಸ್‌ಐನ ಬ್ರಿಗೇಡಿಯರ್‌ ಹತ್ಯೆ ಸೇರಿದಂತೆ ಅನೇಕ ಬಾಂಬ್‌ ದಾಳಿಗಳಲ್ಲಿ ಭಾಗಿಯಾಗಿದ್ದ ಆರು ಉಗ್ರರನ್ನು ಪಾಕ್‌ನ ಪಂಜಾಬ್‌ ಪ್ರಾಂತ್ಯದಲ್ಲಿ ಭದ್ರತಾ ಪಡೆಗಳು ಎನ್‌ಕೌಂಟರ್‌ ನಡೆಸಿ ಭಾನುವಾರ ಹತ್ಯೆ ಮಾಡಿವೆ.
Vijaya Karnataka Web Pak Police


ಭಯೋತ್ಪಾದನೆ ವಿರೋಧಿ ವಿಭಾಗ (ಸಿಟಿಡಿ) ನೀಡಿದ ಮಾಹಿತಿ ಪ್ರಕಾರ, ಮೃತ ಉಗ್ರರು ಕಳೆದ ವರ್ಷ ಪಂಜಾಬ್‌ ಪ್ರಾಂತ್ಯದ ಮುಖ್ಯಮಂತ್ರಿ ಶಹಬಾಜ್‌ ಶಾರಿ ಅವರ ನಿವಾಸ ಕಂ ಕಚೇರಿಯ ಮೇಲೆ ಬಾಂಬ್‌ ದಾಳಿ ನಡೆಸಿ, ಎಂಟು ಮಂದಿ ಪೊಲೀಸರು ಸೇರಿದಂತೆ 26 ಜನರನ್ನು ಹತ್ಯೆ ಮಾಡಿದ್ದರು. ಇದಕ್ಕೂ ಮೊದಲು 2004ರಲ್ಲಿ ಐಎಸ್‌ಐನ ಬ್ರಿಗೇಡಿಯರ್‌ ಜಹೂರ್‌ ಫಜಲ್‌ ಕದ್ರಿ ಮತ್ತು ಆತನ ಸಹೋದರನನ್ನು ಹತ್ಯೆ ಮಾಡಿದ್ದರು.

ಪಂಜಾಬ್‌ ಪ್ರಾಂತ್ಯದ ಗುಜರಾತ್‌ ಪ್ರದೇಶದಲ್ಲಿ ಈ ಉಗ್ರರ ಇರುವಿಕೆಯನ್ನು ಪತ್ತೆಯಚ್ಚಿದ ಸಿಟಿಡಿ ತಂಡ ಕಾರ್ಯಾಚರಣೆಗೆ ಇಳಿಯಿತು. ಒಂಬತ್ತು ಮಂದಿ ಇದ್ದ ಉಗ್ರರ ಗುಂಪು ಭದ್ರತಾ ಪಡೆಗಳ ಮೇಲೆ ಗುಂಡಿನ ದಾಳಿ ಆರಂಭಿಸಿತು. ಇದಕ್ಕೆ ಪ್ರತಿಯಾಗಿ ದಾಳಿ ನಡೆಸಿದ ಸಿಟಿಡಿ ತಂಡ, ವಾಂಟೆಡ್‌ ಉಗ್ರರಾದ ಅಬ್ದುಲ್‌ ಮಕೀಮ್‌, ಫೈಸಲ್‌, ಉಸ್ಮಾನ್‌, ಅಜೀಂ, ರೌಫ್‌ ಮತ್ತು ಸೊಹೇಬ್‌ ಅವರನ್ನು ಎನ್‌ಕೌಂಟರ್‌ ಮಾಡಿತು. ಕಾರ್ಯಾಚರಣೆ ಸಮಯದಲ್ಲಿ ಮೂವರು ಉಗ್ರರು ತಪ್ಪಿಸಿಕೊಂಡಿದ್ದಾರೆ. ಕಾರ್ಯಾಚರಣೆ ನಡೆದ ಸ್ಥಳದಲ್ಲಿ ಆತ್ಮಹತ್ಯೆ ಜಾಕೆಟ್‌ಗಳು, ವಿದ್ಯುನ್ಮಾನ ಸಾಧನಗಳು ಮತ್ತು ಗ್ರೆನೇಡ್‌ಗಳನ್ನು ವಶಪಡಿಸಿಕೊಳ್ಳಲಾಗಿದೆ ಎಂದು ಸಿಟಿಡಿ ವಕ್ತಾರರು ತಿಳಿಸಿದ್ದಾರೆ.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ