ಆ್ಯಪ್ನಗರ

ಅಗತ್ಯವಿದ್ದರೆ ಪಾಕ್ ಜತೆ ನೇರವಾಗಿ ಮಾತಾಡ್ತೀವಿ, ನಿಮ್ಮ ಸಂಧಾನ ಅಗತ್ಯವಿಲ್ಲ: ಅಮೆರಿಕಕ್ಕೆ ಭಾರತ ತಾಕೀತು

ಕಾಶ್ಮೀರ ವಿಚಾರ ಭಾರತ-ಪಾಕ್ ನಡುವಣ ದ್ವಿಪಕ್ಷೀಯ ವಿಷಯವೇ ಹೊರತು ಮೂರನೆಯವರಿಗೆ ಮೂಗು ತೂರಿಸಲು ಇಲ್ಲಿ ಅವಕಾಶವಿಲ್ಲ; ಅಗತ್ಯವಿದ್ದರೆ ನಾವೇ ನೇರವಾಗಿ ಮಾತಾಡುತ್ತೇವೆ, ನಿಮ್ಮ ಸಂಧಾನ ಬೇಕಿಲ್ಲ ಎಂದು ವಿದೇಶಾಂಗ ಸಚಿವ ಎಸ್. ಜೈಶಂಕರ್ ಅಮೆರಿಕಕ್ಕೆ ಸ್ವಷ್ಟ ಮಾತುಗಳಲ್ಲಿ ತಾಕೀತು ಮಾಡಿದ್ದಾರೆ.

TIMESOFINDIA.COM 2 Aug 2019, 1:01 pm
ಬ್ಯಾಂಕಾಕ್: ಕಾಶ್ಮೀರದ ಕುರಿತು ಯಾವುದೇ ಮಾತುಕತೆ ಅಗತ್ಯವಿದ್ದರೂ ಪಾಕಿಸ್ತಾನದ ಜತೆಗೆ ಮಾತ್ರ ನಡೆಸಲಾಗುತ್ತದೆ ಎಂದು ವಿದೇಶಾಂಗ ಸಚಿವ ಎಸ್. ಜೈಶಂಕರ್ ಅಮೆರಿಕದ ವಿದೇಶಾಂಗ ಕಾರ್ಯದರ್ಶಿ ಮೈಕ್ ಪಾಂಪಿಯೊ ಅವರಿಗೆ ಸ್ಪಷ್ಟ ಮಾತುಗಳಲ್ಲಿ ತಿಳಿಸಿದ್ದಾರೆ.
Vijaya Karnataka Web S Jaishankar


ಕಾಶ್ಮೀರ ಕುರಿತು ಭಾರತ ಮತ್ತು ಪಾಕಿಸ್ತಾನದ ನಡುವೆ ಮಾತ್ರ ಮಾತುಕತೆ ನಡೆಯಬಹುದೇ ಹೊರತು, ಅಮೆರಿಕಕ್ಕೆ ಇದರಲ್ಲಿ ಯಾವುದೇ ಪಾತ್ರವಿಲ್ಲ ಎಂದು ಅವರು ಸ್ಪಷ್ಟವಾಗಿ ಸಾರಿದರು.

ಕಾಶ್ಮೀರ ವಿಚಾರದಲ್ಲಿ ಮಧ್ಯಸ್ಥಿಕೆ ವಹಿಸಲು ಅಮೆರಿಕ ಸಿದ್ಧ ಎಂಬ ಅಧ್ಯಕ್ಷ ಡೊನಾಲ್ಡ್ ಟ್ರಂಪ್‌ ಅವರ ಹೇಳಿಕೆಗೆ ಪ್ರತಿಯಾಗಿ ಸಚಿವರು ಈ ಸ್ಪಷ್ಟನೆ ನೀಡಿದ್ದಾರೆ.

ಏಷ್ಯನ್‌-ಇಂಡಿಯನ್ ಸಚಿವರ ಸಭೆ, ಪೂರ್ವ ಏಷ್ಯಾ ವಿದೇಶಾಂಗ ಸಚಿವರ 9ನೇ ಶೃಂಗಸಭೆ, 26ನೇ ಏಷ್ಯನ್‌ ಪ್ರಾದೇಶಿಕ ವೇದಿಕೆ ಹಾಗೂ 10ನೇ ಮೆಕಾಂಗ್ ಗಂಗಾ ಸಹಕಾರ ಸಚಿವರ ಸಭೆ ಸೇರಿದಂತೆ ಹಲವು ಸರಣಿ ಸಭೆಗಳಲ್ಲಿ ಭಾಗವಹಿಸಲು ಸಚಿವ ಎಸ್. ಜೈಶಂಕರ್ ಬ್ಯಾಂಕಾಕ್‌ಗೆ ಆಗಮಿಸಿದ್ದಾರೆ.

'ಪ್ರಾದೇಶಿಕ ವಿಷಯಗಳ ಬಗ್ಗೆ ಮೈಕ್ ಪಾಂಪಿಯೊ ಜತೆ ವಿಸ್ತಾರವಾಗಿ ಚರ್ಚಿಸಲಾಯಿತು' ಎಂದು ಜೈಶಂಕರ್ ಟ್ವೀಟ್ ಮಾಡಿದ್ದಾರೆ.

'ಕಾಶ್ಮೀರ ಕುರಿತ ಚರ್ಚೆ ಏನಿದ್ದರೂ ಅಗತ್ಯವಿದ್ದರೆ ಪಾಕ್‌ ಜತೆ ಮಾತ್ರ ನಡೆಯುತ್ತದೆ. ಇದು ದ್ವಿಪಕ್ಷೀಯ ವಿಚಾರವೇ ಹೊರತು ಮೂರನೆಯವರಿಗೆ ಮೂಗು ತೂರಿಸಲು ಇಲ್ಲಿ ಅವಕಾಶವಿಲ್ಲ ಎಂದು ಸ್ಪಷ್ಟವಾಗಿಯೇ ಅಮೆರಿಕಕ್ಕೆ ಮನವರಿಕೆ ಮಾಡಲಾಗಿದೆ' ಎಂದು ಜೈಶಂಕರ್ ಟ್ವೀಟ್ ಮಾಡಿದ್ದಾರೆ.

ಜೈಶಂಕರ್‌-ಪಾಂಪಿಯೊ ಸಭೆಗೆ ಕೆಲವೇ ಗಂಟೆಗಳ ಮೊದಲು ವಾಷಿಂಗ್ಟನ್‌ನಲ್ಲಿ ಟ್ರಂಪ್‌, ಭಾರತ-ಪಾಕ್ ನಡುವೆ ಮಧ್ಯಸ್ಥಿಕೆ ವಹಿಸಲು ಸಿದ್ಧ ಎಂದು ಪುನರುಚ್ಚರಿಸಿದ್ದರು.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ