ವಿಶ್ವಸಂಸ್ಥೆ ಭದ್ರತಾ ಮಂಡಳಿ ಶೀಘ್ರ ಸುಧಾರಣೆಗೆ ಭಾರತ ಒತ್ತಾಯ
ಸುಧಾರಣಾ ಪ್ರಕ್ರಿಯೆ ಕುರಿತು ಚರ್ಚೆ ಮುಂದುವರಿಸಲು ಅಗತ್ಯ ಸಮಯವನ್ನು ಒದಗಿಸಬೇಕು ಹಾಗೂ ಸದಸ್ಯ ರಾಷ್ಟ್ರಗಳು ಇದಕ್ಕೆ ಯಾವುದೇ ಸಮಯದ ಮಿತಿಯನ್ನು ನಿಗದಿಪಡಿಸಬಾರದು ಎಂದು ಅಕ್ಬರುದ್ದೀನ್ ಒತ್ತಾಯಿಸಿದರು.
Vijaya Karnataka 31 Jan 2019, 5:00 am
ನ್ಯೂಯಾರ್ಕ್: ವಿಶ್ವಸಂಸ್ಥೆ ಭದ್ರತಾ ಮಂಡಳಿ ಸುಧಾರಣಾ ಪ್ರಕ್ರಿಯೆಯ ನಿಧಾನಗತಿ ಬಗ್ಗೆ ನಿರಾಶೆಗೊಂಡಿರುವ ಭಾರತ, ಈ ವಿಷಯದ ಬಗ್ಗೆ ವಿಶ್ವಾಸಾರ್ಹ ಪ್ರಗತಿ ಸಾಧಿಸಲು ಹೊಸ ಮಾರ್ಗಗಳತ್ತ ಗಮನ ಹರಿಸುವಂತೆ ಸದಸ್ಯ ರಾಷ್ಟ್ರಗಳಿಗೆ ಕರೆ ನೀಡಿದೆ.
ಭದ್ರತಾ ಮಂಡಳಿ ಸದಸ್ಯತ್ವ ಹೆಚ್ಚಿಸುವ ನಿಟ್ಟಿನಲ್ಲಿ ಸರಕಾರಗಳ ನಡುವಿನ ಮಾತುಕತೆ ಕುರಿತು ಮಂಗಳವಾರ ನಡೆದ ಅನೌಪಚಾರಿಕ ಸಭೆಯಲ್ಲಿ ವಿಶ್ವಸಂಸ್ಥೆಗೆ ಭಾರತದ ಕಾಯಂ ಪ್ರತಿನಿಧಿ ಸೈಯದ್ ಅಕ್ಬರುದ್ದೀನ್ ಮಾತನಾಡಿದರು.
ಇದನ್ನು ವಿಷಯಾಂತರ ಮಾಡದೆ, ಮಾತುಕತೆ ಮುಂದುವರಿಸುವ ಮೂಲಕ ಭದ್ರತಾ ಮಂಡಳಿಯ ಸುಧಾರಣಾ ಪ್ರಕ್ರಿಯೆಯಲ್ಲಿ ಪ್ರಗತಿ ಸಾಧಿಸುವಂತೆ ಸದಸ್ಯ ರಾಷ್ಟ್ರಗಳಿಗೆ ಮನವಿ ಮಾಡಿದರು.
ಸುಧಾರಣಾ ಪ್ರಕ್ರಿಯೆ ಕುರಿತು ಚರ್ಚೆ ಮುಂದುವರಿಸಲು ಅಗತ್ಯ ಸಮಯವನ್ನು ಒದಗಿಸಬೇಕು ಹಾಗೂ ಸದಸ್ಯ ರಾಷ್ಟ್ರಗಳು ಇದಕ್ಕೆ ಯಾವುದೇ ಸಮಯದ ಮಿತಿಯನ್ನು ನಿಗದಿಪಡಿಸಬಾರದು ಎಂದು ಅಕ್ಬರುದ್ದೀನ್ ಒತ್ತಾಯಿಸಿದರು.
ಭದ್ರತಾ ಮಂಡಳಿ ಸದಸ್ಯತ್ವ ಹೆಚ್ಚಿಸುವ ನಿಟ್ಟಿನಲ್ಲಿ ಸರಕಾರಗಳ ನಡುವಿನ ಮಾತುಕತೆ ಕುರಿತು ಮಂಗಳವಾರ ನಡೆದ ಅನೌಪಚಾರಿಕ ಸಭೆಯಲ್ಲಿ ವಿಶ್ವಸಂಸ್ಥೆಗೆ ಭಾರತದ ಕಾಯಂ ಪ್ರತಿನಿಧಿ ಸೈಯದ್ ಅಕ್ಬರುದ್ದೀನ್ ಮಾತನಾಡಿದರು.
ಇದನ್ನು ವಿಷಯಾಂತರ ಮಾಡದೆ, ಮಾತುಕತೆ ಮುಂದುವರಿಸುವ ಮೂಲಕ ಭದ್ರತಾ ಮಂಡಳಿಯ ಸುಧಾರಣಾ ಪ್ರಕ್ರಿಯೆಯಲ್ಲಿ ಪ್ರಗತಿ ಸಾಧಿಸುವಂತೆ ಸದಸ್ಯ ರಾಷ್ಟ್ರಗಳಿಗೆ ಮನವಿ ಮಾಡಿದರು.
ಸುಧಾರಣಾ ಪ್ರಕ್ರಿಯೆ ಕುರಿತು ಚರ್ಚೆ ಮುಂದುವರಿಸಲು ಅಗತ್ಯ ಸಮಯವನ್ನು ಒದಗಿಸಬೇಕು ಹಾಗೂ ಸದಸ್ಯ ರಾಷ್ಟ್ರಗಳು ಇದಕ್ಕೆ ಯಾವುದೇ ಸಮಯದ ಮಿತಿಯನ್ನು ನಿಗದಿಪಡಿಸಬಾರದು ಎಂದು ಅಕ್ಬರುದ್ದೀನ್ ಒತ್ತಾಯಿಸಿದರು.