ಆ್ಯಪ್ನಗರ

ಅಮೆರಿಕದಲ್ಲಿ ಮೋದಿ 'ಅಭಿವೃದ್ಧಿ' ಆಲಾಪ, ಇಮ್ರಾನ್ ಖಾನ್ 'ಕಾಶ್ಮೀರ' ಪ್ರಲಾಪ!

ಅಮೆರಿಕದ ನ್ಯೂಯಾರ್ಕ್‌ನಲ್ಲಿರುವ ಭಾರತದ ಪ್ರಧಾನಿ ನರೇಂದ್ರ ಮೋದಿ ಅಭಿವೃದ್ಧಿ ವಿಚಾರಗಳ ಸಂಬಂಧ ಮೀಟಿಂಗ್ ಮೇಲೆ ಮೀಟಿಂಗ್ ಮಾಡಲಿದ್ದಾರೆ. ಆದ್ರೆ, ಪಾಕಿಸ್ತಾನ ಪ್ರಧಾನಿ ಇಮ್ರಾನ್ ಖಾನ್ ಮಾತ್ರ ಪದೇ ಪದೇ ಕಾಶ್ಮೀರ ಕ್ಯಾತೆ ತೆಗೆಯಲಿದ್ದಾರೆ. ಉಗ್ರವಾದ, ಅನುದಾನಕ್ಕೆ ಬೇಡಿಕೆ ಇಡುವುದೇ ಇಮ್ರಾನ್‌ ಖಾನ್ ಅವರ ಈ ವಾರದ ಅಜೆಂಡಾ!

TIMESOFINDIA.COM 23 Sep 2019, 1:40 pm
ನ್ಯೂಯಾರ್ಕ್‌ (ಅಮೆರಿಕ) : ಭಾರತ ಹಾಗೂ ಪಾಕಿಸ್ತಾನ ಎರಡೂ ದೇಶಗಳ ಪ್ರಧಾನಮಂತ್ರಿಗಳು ಈಗ ಅಮೆರಿಕದ ನ್ಯೂಯಾರ್ಕ್‌ನಲ್ಲಿದ್ದಾರೆ. ವಿಶ್ವಸಂಸ್ಥೆಯ ಮಹಾಧಿವೇಶನದಲ್ಲಿ ಎರಡೂ ರಾಷ್ಟ್ರಗಳ ಪ್ರಧಾನಿಗಳು ಭಾಷಣ ಮಾಡಲಿದ್ದಾರೆ. ಇದರ ಜೊತೆಯಲ್ಲೇ ಅಮೆರಿಕ ಸೇರಿದಂತೆ ವಿವಿಧ ದೇಶಗಳ ಮುಖಂಡರ ಜೊತೆಗೂ ಪ್ರಧಾನಿ ಮೋದಿ ಮಾತನಾಡಲಿದ್ದಾರೆ. ಪಾಕಿಸ್ತಾನದ ಪ್ರಧಾನಿ ಕೂಡಾ ಅಮೆರಿಕ ಸೇರಿದಂತೆ ವಿವಿಧ ದೇಶಗಳ ಮುಖಂಡರ ಜೊತೆ ಮಾತನಾಡಲಿದ್ದಾರೆ. ಆದರೆ, ಇಬ್ಬರ ಮಾತುಕತೆಯ ಅಜೆಂಡಾ ಮಾತ್ರ ಫುಲ್ ಡಿಫ್ರೆಂಟ್!
Vijaya Karnataka Web modi imran


ಹ್ಯೂಸ್ಟನ್‌ನಲ್ಲಿ ವೀಕೆಂಡ್ ಭಾಷಣ, ನ್ಯೂಯಾರ್ಕ್‌ನಲ್ಲಿ ಸರಣಿ ಸಭೆ: ಅಮೆರಿಕದಲ್ಲಿ ಮೋದಿ ಫುಲ್ ಬ್ಯುಸಿ

ಪ್ರಧಾನಿ ಮೋದಿ ಅಜೆಂಡಾ ಏನು?

ಪ್ರಧಾನಿ ಮೋದಿ ಅಮೆರಿಕದಲ್ಲಿ ಜಾಗತಿಕ ತಾಪಮಾನ ಏರಿಕೆ, ವಿವಿಧ ರಾಷ್ಟ್ರಗಳ ಜೊತೆಗಿನ ವ್ಯಾಪಾರ, ವಹಿವಾಟಿನ ಸಂಬಂಧ ದ್ವಿಪಕ್ಷೀಯ ಮಾತುಕತೆ ನಡೆಸಲಿದ್ದಾರೆ. ಭಾರತಕ್ಕೆ ಎನ್‌ಎನ್‌ಜಿ (ದ್ರವ ನೈಸರ್ಗಿಕ ಅನಿಲ) ಪೂರೈಕೆ ಸಂಬಂಧ ಅಮೆರಿಕದ ಪೆಟ್ರೋನೆಟ್‌ ಸಂಸ್ಥೆ ಜೊತೆ ಒಪ್ಪಂದ ಮಾಡಿಕೊಳ್ಳಲಿದ್ದಾರೆ. ಬಿಲ್ ಗೇಟ್ಸ್ ಪ್ರತಿಷ್ಠಾನದ ಜೊತೆಗೆ ಆರೋಗ್ಯ ಸೇವೆ ಕುರಿತಾದ ಒಪ್ಪಂದಕ್ಕೆ ಸಹಿ ಹಾಕಲಿದ್ದಾರೆ. ಅಮೆರಿಕ ಅಧ್ಯಕ್ಷ ಟ್ರಂಪ್‌ ಜೊತೆಗೆ ಭಯೋತ್ಪಾದನಾ ನಿಗ್ರಹ ಹೋರಾಟ ಸಂಬಂಧ ಮಾತುಕತೆ ನಡೆಸಲಿದ್ದಾರೆ. ವಿಶ್ವಸಂಸ್ಥೆಯ ಮಹಾಧಿವೇಶನದಲ್ಲಿ ಜಾಗತಿಕ ತಾಪಮಾನ ಏರಿಕೆ ವಿಚಾರದಲ್ಲಿ ಭಾರತ ಕೈಗೊಂಡ ಕ್ರಮಗಳ ಬಗ್ಗೆ ಮೋದಿ ಮಾತನಾಡಲಿದ್ದಾರೆ.

ಪಾಕಿಸ್ತಾನ ಪ್ರಧಾನಿ ಇಮ್ರಾನ್‌ ಖಾನ್ ಅಜೆಂಡಾ ಏನು?

ಪಾಕಿಸ್ತಾನ ಪ್ರಧಾನಿ ಇಮ್ರಾನ್ ಖಾನ್ ಅವರ ವಿಶ್ವಸಂಸ್ಥೆಯ ಭಾಷಣ ಕಾಶ್ಮೀರ ಕೇಂದ್ರಿತವಾಗಿಯೇ ಇರಲಿದೆ. ಇಮ್ರಾನ್ ಅವರ ಇಡೀ ಒಂದು ವಾರದ ವಿವಿಧ ಸಭೆಗಳ ಅಜೆಂಡಾ ಕೂಡಾ ಕಾಶ್ಮೀರ ಹಾಗೂ ಭಯೋತ್ಪಾದನೆ ಸುತ್ತಲೇ ಗಿರಕಿ ಹೊಡೆಯಲಿವೆ. ಅಮೆರಿಕ ಅಧ್ಯಕ್ಷ ಟ್ರಂಪ್‌ ಜೊತೆಗಿನ ಮಾತುಕತೆ ಸಂದರ್ಭದಲ್ಲೂ ಕಾಶ್ಮೀರಕ್ಕೆ ನೀಡಿದ್ದ ವಿಶೇಷ ಸ್ಥಾನಮಾನವನ್ನು ಭಾರತ ತೆಗೆದುಹಾಕಿರುವ ಬಗ್ಗೆಯೇ ಇಮ್ರಾನ್ ಪ್ರಸ್ತಾಪಿಸಲಿದ್ದಾರೆ ಎಂದು ತಿಳಿದುಬಂದಿದೆ. ಅಷ್ಟೇ ಅಲ್ಲ, ಆರ್ಥಿಕ ಸಂಕಷ್ಟದಲ್ಲಿರುವ ಪಾಕಿಸ್ತಾನಕ್ಕೆ ಹಣಕಾಸಿನ ನೆರವು ನೀಡುವಂತೆ ಮನವಿ ಮಾಡಲಿದ್ದಾರೆ. ಜಾಗತಿಕ ಆರ್ಥಿಕ ಕಾರ್ಯಪಡೆ ಪಾಕಿಸ್ತಾನವನ್ನು ಕಪ್ಪು ಪಟ್ಟಿಗೆ ಸೇರ್ಪಡೆ ಮಾಡುವ ಭೀತಿ ಇದೆ. ಈ ವಿಚಾರದ ಬಗ್ಗೆಯೂ ವಿವಿಧ ದೇಶಗಳ ಅಧಿಕಾರಿಗಳ ಜೊತೆ ಇಮ್ರಾನ್ ಮಾತುಕತೆ ನಡೆಸಲಿದ್ದಾರೆ. ಮುಂಬರುವ ಅಕ್ಟೋಬರ್‌ನಲ್ಲಿ ಸಿಗುವ ಹೊಸ ಸಾಲದ ಬಗ್ಗೆಯೂ ಲಾಬಿ ನಡೆಸಲಿದ್ದಾರೆ. ಅಷ್ಟೇ ಅಲ್ಲ, ಅಫ್ಘಾನಿಸ್ತಾನದಲ್ಲಿ ಶಾಂತಿ ನೆಲೆಸುವಂತೆ ಮಾಡಲು ಪಾಕಿಸ್ತಾನದ ಬದ್ಧತೆಯನ್ನೂ ಇಮ್ರಾನ್ ಪ್ರದರ್ಶನ ಮಾಡಲಿದ್ದಾರೆ!

ಒಟ್ಟಿನಲ್ಲಿ, ಸಾಂಪ್ರದಾಯಿಕ ಬದ್ಧವೈರಿಗಳಾದ ಉಭಯ ದೇಶಗಳ ನಾಯಕರು ಒಂದು ವಾರಗಳ ಕಾಲ ಅಮೆರಿಕದಲ್ಲಿ ನಡೆಸಲಿರುವ ಸಭೆಗಳ ಅಜೆಂಡಾವನ್ನು ಗಮನಿಸಿದರೆ, ಇಬ್ಬರೂ ನಾಯಕರ ನಿಲುವುಗಳು ಸ್ಪಷ್ಟವಾಗುತ್ತವೆ. ಭಾರತ ಅಭಿವೃದ್ಧಿ ನಿಟ್ಟಿನಲ್ಲಿ, ದೇಶದ ರಕ್ಷಣೆಯ ನಿಟ್ಟಿನಲ್ಲಿ ಹಲವು ಮಹತ್ವದ ಹೆಜ್ಜೆಗಳನ್ನು ಇಡಲು ಮುಂದಾಗುತ್ತಿದೆ. ಇದೇ ವೇಳೆ ಪಾಕಿಸ್ತಾನ ಇನ್ನಷ್ಟು ಸಾಲ ಪಡೆಯಲು, ಭಾರತದ ಮೇಲೆ ಚಾಡಿ ಹೇಳಲು ಅಮೆರಿಕದಲ್ಲಿ ನಡೆಯುತ್ತಿರುವ ವಿಶ್ವಸಂಸ್ಥೆ ಮಹಾಧಿವೇಶನದ ವೇದಿಕೆಯನ್ನು ಬಳಸಿಕೊಳ್ಳುತ್ತಿದೆ.

‘ವಿದೇಶಿ ನೆಲದಲ್ಲಿ ಭಾರತವನ್ನು ಪ್ರತಿನಿಧಿಸುವ ಪ್ರಧಾನಿಗೆ ಗೌರವ ಕೊಡಿ’: ತರೂರ್

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ