ಆ್ಯಪ್ನಗರ

ಮೌಂಟ್‌ ಎವರೆಸ್ಟ್‌ನಲ್ಲಿ ಟ್ರಾಫಿಕ್‌ ಜಾಮ್‌!

200ಕ್ಕೂ ಅಧಿಕ ಚಾರಣಿಗರು ಬೇಸ್‌ ಕ್ಯಾಂಪ್‌ನಿಂದ ಸಮ್ಮಿಟ್‌ ಪಾಯಿಂಟ್‌ ತಲುಪಲು ನಾ ಮುಂದು, ತಾ ಮುಂದು ಎಂದು ಹೊರಟಿದ್ದರಿಂದ ಕೆಲ ಕಾಲ ಟ್ರಾಫಿಕ್‌ ಜಾಮ್‌ನಂಥ ವಾತಾವರಣ ನಿರ್ಮಾಣವಾಗಿತ್ತು. ಕ್ಯಾಂಪ್‌ ನಾಲ್ಕರಲ್ಲಿ ವಿವಿಧ ದೇಶಗಳ ಚಾರಣಿಗರು ಮುಂಜಾನೆ ಜಮಾವಣೆಗೊಂಡು ದಟ್ಟಣೆ ಸಮಸ್ಯೆಯಿಂದಾಗಿ ಸುಮಾರು ಎರಡು ಗಂಟೆ ಶಿಖರ ಏರಲಾಗದೆ ಕಾದಿದ್ದಾರೆ ಎಂದು ಪ್ರವಾಸೋದ್ಯಮ ಇಲಾಖೆ ನಿಯೋಜಿತ ಅಧಿಕಾರಿ ಜ್ಞಾನೇಂದ್ರ ಶ್ರೇಷ್ಠ ಹೇಳಿದ್ದಾರೆ.

Vijaya Karnataka 23 May 2019, 5:00 am
ಕಾಠ್ಮಂಡು: ಮೆಟ್ರೋ ನಗರಗಳ ಪ್ರಮುಖ ರಸ್ತೆಗಳಲ್ಲಿ ದಿನನಿತ್ಯ ವಾಹನ ಸಂಚಾರ ದಟ್ಟಣೆ ಸಮಸ್ಯೆಗಳ ಬಗ್ಗೆ ಕೇಳಿರುತ್ತೀರಿ. ಆದರೆ ವಿಶ್ವದ ಅತಿ ಎತ್ತರದ ಶಿಖರ ಎಂಬ ಖ್ಯಾತಿಯ ಮೌಂಟ್‌ ಎವರೆಸ್ಟ್‌ (ಗೌರಿಶಂಕರ)ನಲ್ಲಿ ಚಾರಣಿಗರ ದಟ್ಟಣೆ ಉಂಟಾಗಿತ್ತು ಎಂದರೆ ಅದು ಆಶ್ಚರ್ಯವೇ ಸರಿ.
Vijaya Karnataka Web mt everest witnesses traffic jam like situation as over 200 trekkers attempt to reach summit point
ಮೌಂಟ್‌ ಎವರೆಸ್ಟ್‌ನಲ್ಲಿ ಟ್ರಾಫಿಕ್‌ ಜಾಮ್‌!


ಇಂಥ ಘಟನೆ ಬುಧವಾರ ನಡೆದಿದೆ. 200ಕ್ಕೂ ಅಧಿಕ ಚಾರಣಿಗರು ಬೇಸ್‌ ಕ್ಯಾಂಪ್‌ನಿಂದ ಸಮ್ಮಿಟ್‌ ಪಾಯಿಂಟ್‌ ತಲುಪಲು ನಾ ಮುಂದು, ತಾ ಮುಂದು ಎಂದು ಹೊರಟಿದ್ದರಿಂದ ಕೆಲ ಕಾಲ ಟ್ರಾಫಿಕ್‌ ಜಾಮ್‌ನಂಥ ವಾತಾವರಣ ನಿರ್ಮಾಣವಾಗಿತ್ತು. ಕ್ಯಾಂಪ್‌ ನಾಲ್ಕರಲ್ಲಿ ವಿವಿಧ ದೇಶಗಳ ಚಾರಣಿಗರು ಮುಂಜಾನೆ ಜಮಾವಣೆಗೊಂಡು ದಟ್ಟಣೆ ಸಮಸ್ಯೆಯಿಂದಾಗಿ ಸುಮಾರು ಎರಡು ಗಂಟೆ ಶಿಖರ ಏರಲಾಗದೆ ಕಾದಿದ್ದಾರೆ ಎಂದು ಪ್ರವಾಸೋದ್ಯಮ ಇಲಾಖೆ ನಿಯೋಜಿತ ಅಧಿಕಾರಿ ಜ್ಞಾನೇಂದ್ರ ಶ್ರೇಷ್ಠ ಹೇಳಿದ್ದಾರೆ.

ಸಮ್ಮಿಟ್‌ ಪಾಯಿಂಟ್‌ ಮುಟ್ಟುವ ತರಾತುರಿಯಲ್ಲಿ 200 ಚಾರಣಿಗರು ಹಾಗೂ ಅತಿ ಎತ್ತರದ ಚಾರಣದ ಮಾರ್ಗದರ್ಶಕರು ಬುಧವಾರ ಮುಂಜಾನೆ ತೆರಳಿದ್ದಾರೆ. ಈ ವೇಳೆ ದಟ್ಟಣೆ ಉಂಟಾಗಿದೆ. ಕೆಲವು ಚಾರಣಿಗರು ಶಿಖರದ ತುದಿ ಕೂಡ ತಲುಪಿ ಹಿಂದಿರುಗುತ್ತಿದ್ದರು ಎಂಬ ಮಾಹಿತಿ ಲಭ್ಯವಾಗಿದೆ ಎಂದು ಜ್ಞಾನೇಂದ್ರ ತಿಳಿಸಿದ್ದಾರೆ. ಈ ಋುತುವಿನಲ್ಲಿ ಸುಮಾರು 381 ಚಾರಣಿಗರ 44 ತಂಡಗಳಿಗೆ ಮೌಂಟ್‌ ಎವರೆಸ್ಟ್‌ ಏರಲು ಸರಕಾರ ಅನುಮತಿ ನೀಡಿದೆ.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ