ಆ್ಯಪ್ನಗರ

'ಮಮ್ಮಿ'ಯಾಗುವುದು ಹೇಗೆ? ಸ್ವಾರಸ್ಯಕರ ಮಾಹಿತಿ ಇಲ್ಲಿದೆ

ಸಾವಿರ ವರ್ಷಗಳಷ್ಟು ಹಳೆಯದಾದ ಬೌದ್ಧ ಭಿಕ್ಷುವಿನ ಮಮ್ಮಿಯೊಂದು ಆಶ್ಚರ್ಯ ಮೂಡಿಸಿದೆ. ಪ್ರಯತ್ನಪಟ್ಟರೆ ಪ್ರತಿಯೊಬ್ಬರೂ ತಮಗೆ ತಾವೇ ಮಮ್ಮಿಯಾಗಬಹುದು. ಈ ಕುರಿತ ಸ್ವಾರಸ್ಯಕರ ಮಾಹಿತಿ ಇಲ್ಲಿದೆ.

Vijaya Karnataka Web 14 Sep 2019, 10:33 am
ಸಾಧು ಸಂತರು ಜೀವಂತ ಸಮಾಧಿಯಾಗಿರುವ ಕುರಿತು ಹಲವಾರು ಕಥೆಗಳಿವೆ. ಅಲ್ಲದೆ, ದೇವಮಾನವರು ಜೀವಂತವಿರುವಾಗಲೇ ವಿಗ್ರಹದ ರೂಪ ಕಡೆದ ಪುರಾಣ ಕಥೆಗಳನ್ನೂ ಕೇಳಿರುತ್ತೀರಿ. ಇವೆಲ್ಲ ಕಟ್ಟುಕಥೆಗಳಲ್ಲ ನಿಜವಾಗಿಯೂ ನಡೆದಂಥವು ಎಂಬುದಕ್ಕೆ ವೈಜ್ಞಾನಿಕ ಪುರಾವೆಯೊಂದು ಸಿಕ್ಕಿದೆ. ಚಿನಾದ ಬೌದ್ಧ ವಿಹಾರದಲ್ಲಿದ್ದ ಸುಮಾರು 1000 ವರ್ಷಗಳಷ್ಟು ಹಿಂದಿನ ಬೌದ್ಧ ಸನ್ಯಾಸಿಯ ವಿಗ್ರಹವನ್ನು ಎಕ್ಸ್‌ ರೇ ಮಾಡಿರುವ ವಿಜ್ಞಾನಿಗಳಿಗೆ ಆಶ್ಚರ್ಯ ಕಾದಿತ್ತು. ಆ ವಿಗ್ರಹದೊಳಗೆ ಪದ್ಮಾಸನದಲ್ಲಿ ಧ್ಯಾನಸ್ಥನಾಗಿ ಕುಳಿತ ಬೌದ್ಧ ಭಿಕ್ಷುವಿನ ಅಸ್ಥಪಂಜರವಿರುವುದು ಕಂಡುಬಂದಿತ್ತು. ಮಮ್ಮಿ (ರಕ್ಷಿತ ಶವ) ಮಾಡುವ ಕೌಶಲ ಈಜಿಪ್ಟ್‌ನಲ್ಲಷ್ಟೆ ಚಾಲ್ತಿಯಲ್ಲಿರಲಿಲ್ಲ, ಚೀನಿಯರಿಗೂ ಅದರ ಜ್ಞಾನವಿತ್ತು ಎಂಬುದು ಇದರಿಂದ ಸ್ಪಷ್ಟವಾಗಿತ್ತು. ಈ ವಿಗ್ರಹವನ್ನು ಚೀನಾ ಸಂಶೋಧಕರು ಹೆಚ್ಚಿನ ಅಧ್ಯಯನಕ್ಕೆ ಒಳಪಡಿಸಿದ್ದರು. ಇದು ಜಾಂಗ್‌ ಎಂಬ ಬೌದ್ಧ ಬಿಕ್ಕುವಿಗೆ ಸಂಬಂಧಿಸಿದ್ದೆಂದು ನಂಬಲಾಗಿದೆ. ಈ ಬಿಕ್ಷು ಚೀನಾ ಅಥವಾ ಟಿಬೆಟ್‌ನಲ್ಲಿ ಸುಮಾರು ಕ್ರಿ.ಶ 1100ರಲ್ಲೇ ಮೋಕ್ಷ ಪಡೆದಿದ್ದಾರೆ ಎನ್ನಲಾಗಿದೆ.
Vijaya Karnataka Web mummy


ಆದರೆ, ಈಜಿಪ್ಟ್‌ ಮಮ್ಮಿಗಳಿಗೂ, ಚೀನಾದ ಬೌದ್ಧ ಬಿಕ್ಕುಗಳ ಮಮ್ಮಿಗಳಿಗೂ ಭಿನ್ನತೆ ಇದೆ. ಈಜಿಪ್ಟ್‌ನಲ್ಲಿ ಸತ್ತ ನಂತರ ಶವಗಳನ್ನು ರಕ್ಷಿಸಲಾಗುತ್ತಿತ್ತು. ಆದರೆ, ಚೀನಾದ ಬೌದ್ಧ ಸನ್ಯಾಸಿಗಳು ಜೀವಂತವಿರುವಾಗಲೇ ಮಮ್ಮಿಗಳಾಗಿ ಪರಿವರ್ತನೆಯಾಗುತ್ತಿದ್ದರು.

ಜೀವಂತವಿರುವಾಗಲೇ ಮಮ್ಮಿಯಾಗುವುದು ಹೇಗೆ?
ಮೋಕ್ಷ ಪಡೆಯುವ ಸಲುವಾಗಿ ಬೌದ್ಧ ಲಸನ್ಯಾಸಿಗಳು ಜೀವಂತವಿರುವಾಗಲೇ ತಮಗೆ ತಾವೇ ಮಮ್ಮಿಗಳಾಗಿ ಪರಿವರ್ತನೆಯಾಗುತ್ತಿದ್ದರು. ಇದೊಂದು ಸುಧೀರ್ಘ ಪ್ರಕ್ರಿಯೆ. ಮಮ್ಮಿಯಾಗುವ ಸಂಕಲ್ಪ ಮಾಡಿದ ದಿನದಿಂದ ಆ1000 ದಿನಗಳವರೆಗೆ ಕಾಳುಗಳು, ಬೀಜಗಳು ಹಾಗೂ ಹಣ್ಣುಗಳನ್ನು ಹೊರತುಪಡಿಸಿ ಮತ್ತೇನನ್ನು ತಿನ್ನುವಂತಿಲ್ಲ. ಇದು ದೇಹದಲ್ಲಿರುವ ಕೊಬ್ಬಿನಂಶವನ್ನೆಲ್ಲ ತೆಗೆದುಹಾಕಲು ಸಹಕಾರಿ. ಇದಾದ ನಂತರ ಮತ್ತೂ 1000 ದಿನಗಳ ಕಾಲ ಉರುಶಿ ಎಂಬ ಜಾತಿಯ ಮರದ ತೊಗಟೆ ಮತ್ತು ಬೇರುಗಳನ್ನು ಮಾತ್ರ ತಿನ್ನಬೇಕು. ಇದರಿಂದ ದೇಹದಲ್ಲಿರುವ ನೀರಿನ ಅಂಶವೆಲ್ಲ ಹೊರಗೆ ಹೋಗುತ್ತದೆ. ಅಲ್ಲದೆ ಇದು ಪ್ರಿಸರ್ವೇಟೀವ್‌ ನಂತೆ ಕಾರ್ಯನಿರ್ವಹಿಸಿ, ದೇಹದಿಂದ ಪ್ರಾಣ ಹೋದ ನಂತರವೂ ದೇಹ ಕೊಳೆಯದಂತೆ ರಕ್ಷಿಸುತ್ತದೆ. ಇದಾದ ನಂತರ ಗಾಳಿಯಾಡಲು ಸಣ್ಣ ಕೊಳವೆ ಇರಿಸಿದ ಕಲ್ಲಿನ ಸಮಾಧಿ ಸೇರಿಬಿಡುತ್ತಾರೆ. ಹೀಗೆ ಬೌದ್ಧ ಬಿಕ್ಷುಗಳು ತಮಗೆ ತಾವೇ ಮಮ್ಮಿಯಾಗುತ್ತಾರೆ.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ