ಆ್ಯಪ್ನಗರ

ಶುಕ್ರಗ್ರಹದ ಅಧ್ಯಯನಕ್ಕೆ ಸಿದ್ಧವಾಗುತ್ತಿದೆ ನಾಸಾ: ಭೌಗೋಳಿಕ ಲಕ್ಷಣ ಅಧ್ಯಯನಕ್ಕೆ ತಯಾರಿ!

ಸೌರ ಮಂಡಲದಲ್ಲಿ ಭೂಮಿಯ ಹಾಟ್‌ ಸಿಸ್ಟರ್‌ ಎಂದೇ ಕರೆಯಲ್ಪಡುವ ಶುಕ್ರಗ್ರಹದ ಮೇಲ್ಮೈ ಗುಣ ಲಕ್ಷಣಗಳೇನು? ಅಲ್ಲಿ ಖನಿಜಗಳಿವೆಯೇ? ಗುರುತ್ವಾಕರ್ಷಣ ಶಕ್ತಿ ಹೇಗಿದೆ? ನೀರಿರುವ ಸಾಧ್ಯತೆಗಳಿವೆಯೇ? ಹೀಗೆ ಅನೇಕ ವಿಚಾರಗಳ ಅನ್ವೇಷಣೆಗೆ ನಾಸಾ ಮುಂದಾಗಿದೆ. ಇದಕ್ಕಾಗಿ ನಾಸಾ ಹೊಸ ಯೋಜನೆ ಸಿದ್ಧತೆ ನಡೆಸಿದೆ.

Agencies 14 Jul 2020, 7:23 pm
ಬಾಹ್ಯಾಕಾಶ ವಿಜ್ಞಾನದಲ್ಲಿ ಹೊಸ ವಿಚಾರಗಳ ಅನ್ವೇಷಣೆ, ಸಂಶೋಧನೆಗಳಿಗೆ ಕೊನೆ ಎಂಬುದಿಲ್ಲ. ಇತ್ತ ಭಾರತದ ಇಸ್ರೋ ಮಾನವ ಸಹಿತ ಬಾಹ್ಯಾಕಾಶ ಯಾನದ ತಯಾರಿಯಲ್ಲಿದೆ. ಅಂತೆಯೇ ಅಮೆರಿಕದ ನಾಸಾ, ಶುಕ್ರ ಗ್ರಹದ ಅಧ್ಯಯನಕ್ಕೆ ಹೊಸ ಯೋಜನೆಯ ತಯಾರಿಯಲ್ಲಿದೆ.
Vijaya Karnataka Web venus


ಶುಕ್ರಗ್ರಹಕ್ಕೆ ಉಪಗ್ರಹ ಕಳುಹಿಸಿ, ಗ್ರಹದ ಬಗ್ಗೆ ಅಧ್ಯಯನ ನಡೆಸಲು ನಾಸಾ ಸಿದ್ಧವಾಗಿದೆ. ಯೋಜನೆಗೆ ವೆರಿಟಾಸ್‌ ಎಂದು ಹೆಸರಿಡಲಾಗಿದೆ. ಶುಕ್ರಗ್ರಹದಲ್ಲಿನ ಭೌಗೋಳಿಕ ಅಧ್ಯಯನ, ನೀರಿನ ಕುರುಹು, ಗ್ರಹ ಹುಟ್ಟಿಕೊಂಡ ಬಗೆ, ಅಲ್ಲಿರುವ ಖನಿಜಾಂಶಗಳ ಬಗ್ಗೆ ತಿಳಿದುಕೊಳ್ಳಲು ಮುಂದಾಗಿದೆ. ಅಂತೆಯೇ ಭೂಮಿಯಿಂದ ಶುಕ್ರಗ್ರಹ ಹೇಗೆ ಭಿನ್ನ ಎಂಬ ಪ್ರಶ್ನೆಗೂ ಉತ್ತರ ಕಂಡುಕೊಳ್ಳುವ ತವಕದಲ್ಲಿ ನಾಸಾ ಯೋಜನೆ ರೂಪಿಸಿದೆ.

ಕೊರೊನಾ ವೈರಸ್ ಗದ್ದಲದಲ್ಲಿ ಮರೆತ ನಿಯೋವಿಸ್ ಧೂಮಕೇತುವಿನ ಆಗಮನ ನೆನಪಿಸಿದ ನಾಸಾ!
ಸೌರಮಂಡಲದ ರಹಸ್ಯಗಳನ್ನು ಬೇಧಿಸುವ ನಾಲ್ಕು ಯೋಜನೆಗಳ ಪೈಕಿ ವೆರಿಟಾಸ್‌ (ವೀನಸ್‌ ಎಮಿಸಿವಿಟಿ, ರೇಡಿಯೋ ಸೈನ್ಸ್‌, ಇನ್‌ಸಾರ್‌, ಟೋಪೋಗ್ರಫಿ ಹಾಗೂ ಸ್ಫೆಕ್ಟೋಗ್ರಫಿ) ಒಂದಾಗಿದೆ ಎಂದು ನಾಸಾ ತಿಳಿಸಿದೆ.

ಅರ್ಥ್‌ಸ್ಕೈ ವರದಿ ಪ್ರಕಾರ, ಕಾರ್ಬನ್‌ ಡೈ ಆಕ್ಸೈಡ್‌ನ ದಪ್ಪದಾದ ಪದರ ಶುಕ್ರಗ್ರಹದಲ್ಲಿ ಆವರಿಸಿಕೊಂಇದೆ. 500 ಡಿಗ್ರಿ ಸೆಲ್ಸಿಯಸ್‌ನಿಂದ ಕಡಿಮೆ ಉಷ್ಣಾಂಶ ಶುಕ್ರಗ್ರಹದಲ್ಲಿ ಇರುವುದಿಲ್ಲ. ಭೂಮಿಯ ಸಮುದ್ರ ತಳದಲ್ಲಿರುವ ಒತ್ತಡ, ಶುಕ್ರಗ್ರಹದಲ್ಲಿಯೂ ಇರುವ ಸಾಧ್ಯತೆ ಇದೆ ಎಂದು ಅಂದಾಜಿಸಲಾಗಿದೆ.

2026ರ ವೇಳೆಗೆ ವೆರಿಟಾಸ್‌ ಶುಕ್ರ ಗ್ರಹಕ್ಕೆ ನೆಗೆಯಲಿದೆ ಎನ್ನಲಾಗಿದೆ. ವೆರಿಟಾಸ್‌ನ ಮೂಲಕ ಶುಕ್ರಗ್ರಹದ ಭೌಗೋಳಿಕ ನಕ್ಷೆ ಪಡೆದುಕೊಳ್ಳಲಾಗುತ್ತದೆ. ಶಕ್ತಿಶಾಲಿ ರೇಡಾರ್‌ ವ್ಯವಸ್ಥೆಯ ಮೂಲಕ 3-ಡಿ ಮಾದರಿಯ ನಕ್ಷೆಯ ಸಹಾಯದಿಂದ ಅಧ್ಯಯನ ನಡೆಸಲಾಗುತ್ತದೆ. ಅಂತೆಯೇ ಶುಕ್ರಗ್ರಹದಲ್ಲಿನ ಗುರುತ್ವಾಕರ್ಷಣ ಬಲದ ಮೂಲಕ ಗ್ರಹದ ಅಂತರಾಳದಲ್ಲಿನ ಅಂಶಗಳನ್ನು ತಿಳಿಯಲಾಗುತ್ತದೆ. ಪ್ರಪಂಚದಲ್ಲೇ
ಇದೇ ಮೊದಲ ಬಾರಿಗೆ ಶುಕ್ರ ಗ್ರಹ ಅಧ್ಯಯನಕ್ಕೆ ನಾಸಾ ಮುಂದಾಗಿದ್ದು, ಬಾಹ್ಯಾಕಾಶ ಸಂಶೋಧನೆಯಲ್ಲಿ ಹೊಸ ಮೈಲುಗಲ್ಲು ಸಾಧಿಸಲಿದೆ.

ಸೂರ್ಯನ 10 ವರ್ಷ ಅವಧಿಯ ಕಾರ್ಯಚಟುವಟಿಕೆಯ ವಿಡಿಯೋ
ಸೌರ ಮಂಡಲದ ಅಧ್ಯಯನದಲ್ಲಿ ಭಾರತದ ಇಸ್ರೋ ಹಿಂದುಳಿದಿಲ್ಲ. ಮಂಗಳಯಾನದ ಮೂಲಕ ಬಾಹ್ಯಾಕಾಶ ಸಂಶೋಧನೆಯಲ್ಲಿ ಹೊಸ ಅಧ್ಯಾಯ ಸೃಷ್ಟಿಸಿದ್ದ ಇಸ್ರೋ ಕಳೆದ ವರ್ಷ ಚಂದಿರ ದಕ್ಷಿಣ ಧ್ರುವದಲ್ಲಿ ತನ್ನ ರೋವರ್‌ ಇಳಿಸಲು ಪ್ರಯತ್ನಿಸಿತ್ತು.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ