ಆ್ಯಪ್ನಗರ

ಎನ್‌ಸಿಪಿ ಸ್ಥಾಯಿ ಸಮಿತಿ ಸಭೆ ಮುಂದೂಡಿಕೆ: ನೇಪಾಳದಲ್ಲಿ ಒಲಿ ಆಡಳಿತಕ್ಕೆ 2 ದಿನ ಜೀವದಾನ

ನೇಪಾಳ ಪ್ರಧಾನಿ ಕೆ.ಪಿ. ಶರ್ಮಾ ಒಲಿ ಪದಚ್ಯುತಿ ನಿರ್ಧಾರ ಕೈಗೊಳ್ಳಲು ಶನಿವಾರ ಸೇರಬೇಕಿದ್ದ ಆಡಳಿತಾರೂಢ ನೇಪಾಳ ಕಮ್ಯುನಿಸ್ಟ್‌ ಪಕ್ಷದ ಮಹತ್ವದ ಸ್ಥಾಯಿ ಸಮಿತಿ ಸಭೆ ಸೋಮವಾರಕ್ಕೆ ಮುಂದೂಡಿಕೆಯಾಗಿದೆ. ಇದರೊಂದಿಗೆ ಒಲಿ ಸರಕಾರಕ್ಕೆ ಎರಡು ದಿನಗಳ ಜೀವದಾನ ಸಿಕ್ಕಂತಾಗಿದೆ.

Vijaya Karnataka Web 4 Jul 2020, 11:28 pm
ಕಾಠ್ಮಂಡು: ಭಾರತ ವಿರೋಧಿ ನಿಲುವು ತಳೆದಿರುವ ನೇಪಾಳ ಪ್ರಧಾನಿ ಕೆ.ಪಿ. ಶರ್ಮಾ ಒಲಿ ಪದಚ್ಯುತಿ ನಿರ್ಧಾರ ಕೈಗೊಳ್ಳಲು ಶನಿವಾರ ಸೇರಬೇಕಿದ್ದ ಆಡಳಿತಾರೂಢ ನೇಪಾಳ ಕಮ್ಯುನಿಸ್ಟ್‌ ಪಕ್ಷದ ಮಹತ್ವದ ಸ್ಥಾಯಿ ಸಮಿತಿ ಸಭೆ ಕೊನೆ ಘಳಿಗೆಯಲ್ಲಿ ಸೋಮವಾರಕ್ಕೆ ಮುಂದೂಡಿಕೆಯಾಗಿದೆ. ಇದರೊಂದಿಗೆ ಒಲಿ ಸರಕಾರಕ್ಕೆ ಎರಡು ದಿನಗಳ ಮಟ್ಟಿಗೆ ಜೀವದಾನ ಸಿಕ್ಕಂತಾಗಿದೆ.
Vijaya Karnataka Web KP Sharma Oli


''ಚೀನಾದ ಚಾಡಿ ಮಾತು ಕೇಳಿ ಭಾರತದ ವಿರುದ್ಧ ಸುಳ್ಳು ಆರೋಪಗಳನ್ನು ಮಾಡಿದ ಒಲಿ, ಒಂದು ಕ್ಷಣವೂ ಅಧಿಕಾರದಲ್ಲಿ ಮುಂದುವರಿಯಬಾರದು,'' ಎಂದು ಮಾಜಿ ಪ್ರಧಾನಿ ಪುಷ್ಪ ಕಮಲ್‌ ದೊಹಲ್‌ ಪ್ರಚಂಡ ನೇತೃತ್ವದ ಬಣ ಆಗ್ರಹಿಸಿದೆ.

ಪಕ್ಷದ ಪ್ರಭಾವಿ ಸ್ಥಾಯಿ ಸಮಿತಿಯ ಬಹುಪಾಲು ಸದಸ್ಯರು ಒಲಿ ಪದಚ್ಯುತಿಗೆ ಪಟ್ಟು ಹಿಡಿದಿದ್ದಾರೆ. ಇನ್ನೊಂದೆಡೆ ರಾಷ್ಟ್ರಾಧ್ಯಕ್ಷರಾದ ಬಿದ್ಯಾದೇವಿ ಭಂಡಾರಿ ಅವರ ಒಲವನ್ನು ಕೂಡ ಒಲಿ ಕಳೆದುಕೊಂಡಿದ್ದಾರೆ.

ಚೀನಾದಿಂದ ಡೇಟಾ ಗೂಢಚಾರಿಕೆ: ತಜ್ಞರು, ಉದ್ಯಮಿಗಳ ಆತಂಕ! ತಾಂತ್ರಿಕ ಸ್ವಾವಲಂಬನೆಗೆ ಸಲಹೆ!

ಹೀಗಾಗಿ ಪ್ರಧಾನಿ ಪದಚ್ಯುತಿ ಸಂಬಂಧ ಅಂತಿಮ ನಿರ್ಧಾರ ಕೈಗೊಳ್ಳುವುದಕ್ಕಾಗಿಯೇ ಶನಿವಾರ ಸ್ಥಾಯಿ ಸಮಿತಿ ಸಭೆ ಸೇರಲು ನಿರ್ಧರಿಸಿತ್ತು. ಬಂಡಾಯದ ಬಿಸಿ ಶುರುವಾದ ಬಳಿಕ ಈ ಮೊದಲು ನಡೆದ ಎರಡು ಸ್ಥಾಯಿ ಸಮಿತಿ ಸಭೆಗಳಿಂದ ಒಲಿ ತಪ್ಪಿಸಿಕೊಂಡಿದ್ದರು.

ಸಂಸತ್ತಿನಲ್ಲಿ ಅವಿಶ್ವಾಸ ಮತದ ತೂಗುಕತ್ತಿಯಿಂದ ಪಾರಾಗಲು ಬಜೆಟ್‌ ಅಧಿವೇಶನವನ್ನೇ ದಿಢೀರ್‌ ಬರ್ಖಾಸ್ತುಗೊಳಿಸಿದ್ದರು. ಈಗ ಸಂಕಷ್ಟದಿಂದ ಪಾರಾಗಲು ಅಳಿದುಳಿದ ದಾರಿಗಳಿಗಾಗಿ ಹುಡುಕಾಟ ನಡೆಸಿದ್ದಾರೆ.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ