ಆ್ಯಪ್ನಗರ

ಅತ್ಯಾಚಾರದ ವರದಿ ತಿರುಚಿದ ಆರೋಪ, ಪತ್ರಕರ್ತನಿಗೆ 1 ಗಂಟೆ ಜೈಲು, 1 ರೂ. ದಂಡ!

ಬಾಲಕಿಯ ಮೇಲಿನ ಅತ್ಯಾಚಾರದ ವರದಿಯನ್ನು ವೈಭವೀಕರಿಸಿ, ಮೂಲ ವಿಚಾರವನ್ನು ತಿರುಚಿದ ಆರೋಪದ ಮೇರೆಗೆ ನೇಪಾಳದ ಜಿಲ್ಲಾ ಕೋರ್ಟ್‌ ಸ್ಥಳೀಯ ಪತ್ರಕರ್ತರೊಬ್ಬರಿಗೆ 1 ಗಂಟೆ ಜೈಲು ವಾಸದ ಶಿಕ್ಷೆ ವಿಧಿಸಿದ ಘಟನೆ ನಡೆದಿದೆ.

Vijaya Karnataka Web 20 Nov 2019, 6:44 am
ಕಠ್ಮಂಡು: ಬಾಲಕಿಯ ಮೇಲಿನ ಅತ್ಯಾಚಾರದ ವರದಿಯನ್ನು ವೈಭವೀಕರಿಸಿ, ಮೂಲ ವಿಚಾರವನ್ನು ತಿರುಚಿದ ಆರೋಪದ ಮೇರೆಗೆ ನೇಪಾಳದ ಜಿಲ್ಲಾಕೋರ್ಟ್‌ ಸ್ಥಳೀಯ ಪತ್ರಕರ್ತರೊಬ್ಬರಿಗೆ 1 ಗಂಟೆ ಜೈಲು ವಾಸದ ಸಾಂಕೇತಿಕ ಶಿಕ್ಷೆ ವಿಧಿಸಿದೆ. ಜತೆಗೆ ಅವರಿಗೆ 1 ರೂ. ದಂಡ ಪಾವತಿಸುವಂತೆಯೂ ಸೂಚಿಸಿದೆ.
Vijaya Karnataka Web Journalist Khem Bhandari


ಪತ್ರಕರ್ತ ಖೇಮ್‌ ಭಂಡಾರಿ ಶಿಕ್ಷೆಗೆ ಗುರಿಯಾದ ಪತ್ರಕರ್ತರಾಗಿದ್ದಾರೆ. ಕೋರ್ಟ್‌ ಆದೇಶ ಹೊರಬಿದ್ದ ಕೂಡಲೇ ಖೇಮ್‌ ಅವರನ್ನು ಬಂಧಿಸಿದ ಕಾಂಚನ್‌ಪುರ ಜಿಲ್ಲಾ ಪೊಲೀಸರು ಜೈಲಿನಲ್ಲಿಇರಿಸಿ ನಂತರ ಬಿಡುಗಡೆ ಮಾಡಿದ್ದಾರೆ.

ಕಳೆದ ವರ್ಷ 13 ವರ್ಷದ ಬಾಲಕಿಯ ಮೇಲೆ ದುಷ್ಕರ್ಮಿಗಳು ಅತ್ಯಾಚಾರ ಎಸಗಿ ನಂತರ ಕೊಲೆಗೈದಿದ್ದರು. ಈ ಸಂಬಂಧ ತಿರುಚಲಾದ ವರದಿಯನ್ನು ಪತ್ರಕರ್ತ ಖೇಮ್‌ ಪ್ರಕಟಿಸಿದ್ದರು. ಪ್ರಕರಣದ ತನಿಖೆ ನಡೆಯುತ್ತಿದ್ದು ಅತ್ಯಾಚಾರ ಎಸಗಿದ ಆರೋಪಿಗಳು ತಲೆಮರೆಸಿಕೊಂಡಿದ್ದಾರೆ. ನೇಪಾಳದಾದ್ಯಂತ ಆರೋಪಿಗಳ ಪತ್ತೆಗೆ ಪೊಲೀಸರು ಬಲೆ ಬೀಸಿದ್ದಾರೆ.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ