ಆ್ಯಪ್ನಗರ

ನಕ್ಷೆ ವಿವಾದದಿಂದ ಹಿಂದೆ ಸರಿಯಿತಾ ನೇಪಾಳ? ಭಾರತದ ಗೆಳೆತನವೇ ಸಾಕು!

ಹೊಸ ಭೂಪಟಕ್ಕೆ ಸಂವಿಧಾನ ಮಾನ್ಯತೆ ನೀಡಲು ನೇಪಾಳ ಇಂದು ಸಂಸತ್ತಿನಲ್ಲಿ ನಿರ್ಣಯ ಮಂಡಿಸಲು ಮುಂದಾಗಿತ್ತು. ಆದ್ರೆ ಇದರಿಂದ ಹಿಂದೆ ಸರಿಯುವ ಮೂಲಕ ಭಾರತದೊಂದಿಗಿನ ಸ್ನೇಹ ಸಂಬಂಧ ಮುಂದುವರಿಸುವ ಸೂಚನೆ ನೀಡಿದೆ.

TIMESOFINDIA.COM 27 May 2020, 6:39 pm
ಕಠ್ಮಂಡು: ಭಾರತದ ಭೂ ಪ್ರದೇಶವನ್ನ ತನ್ನ ಪ್ರದೇಶ ಎಂದು ಬಿಂಬಿಸಿ ಹೊಸ ನಕ್ಷೆಯನ್ನ ರಿಲೀಸ್‌ ಮಾಡಿದ ನೇಪಾಳ, ನಕ್ಷೆ ವಿವಾದದಿಂದ ಹಿಂದೆ ಸರಿಯಿತಾ..? ಭಾರತದ ಗೆಳೆತನವೇ ಸಾಕು ಅವರೊಂದಿಗೆ ಕಿರಿಕ್‌ ಬೇಡ ಅಂತ ಸೈಲೆಂಟ್‌ ಆಯ್ತಾ? ಈ ರೀತಿಯ ಪ್ರಶ್ನೆಗಳು ಉದ್ಭವವಾಗಲು ಕಾರಣ ನೇಪಾಳ ತೆಗೆದುಕೊಂಡ ಆ ಒಂದು ನಿರ್ಧಾರ.
Vijaya Karnataka Web 75893995


ಹೌದು ನಕ್ಷೆ ತಯಾರಾದ ನಂತರ ಅದನ್ನ ಸಂವಿಧಾನಕ್ಕೆ ಸೇರ್ಪಡಿಸುವ ಕಾರ್ಯ ಎಲ್ಲಾ ದೇಶಗಳು ನಡೆಸುತ್ತೆ. ಇದಕ್ಕಾಗಿ ಇಂದು ನೇಪಾಳ ಕೂಡ ಸಂಸತ್ತಿನಲ್ಲಿ ನಕ್ಷೆಗೆ ಸಂಬಂಧಪಟ್ಟಂತೆ ಸಂವಿಧಾನದ ತಿದ್ದುಪಡಿಗೆ ಕಾರ್ಯಸೂಚಿಯಲ್ಲಿ ಸಮಯ ನಿಗದಿಪಡಿಸಿತ್ತು.

ಆದ್ರೆ ಏಕಾಏಕಿ ಆಡಳಿತರೂಢ ಸರ್ಕಾರ ನಕ್ಷೆ ತಿದ್ದುಪಡಿ ವಿಚಾರವನ್ನ ಸಂಸತ್‌ನ ಅಜೆಂಡಾದಿಂದ ತೆಗೆದು ಹಾಕಿದೆ. ಹೊಸ ನಕ್ಷೆಯನ್ನು ಸಂವಿಧಾನಕ್ಕೆ ಸೇರ್ಪಡಿಸುವ ಯಾವುದೇ ನಿರ್ಣಯ ಇಂದು ಮಂಡನೆ ಆಗಿಲ್ಲ. ನೇಪಾಳದ ಈ ನಡೆ ಹಲವಾರು ಸಂಶಯಗಳನ್ನ ಹುಟ್ಟು ಹಾಕಿದೆ. ಇನ್ನು ಮುಂದೆ ನಕ್ಷೆಯ ವಿಚಾರದಲ್ಲಿ ಚಕಾರ ಎತ್ತದಿರಲು ತೀರ್ಮಾನಿಸಿದ್ಯಾ ಅನ್ನುವ ಗುಮಾನಿ ವ್ಯಕ್ತವಾಗಿದೆ.

ಭಾರತ vs ಚೀನಾ ಗಡಿ ವಿವಾದ; ಮಧ್ಯಸ್ಥಿಕೆ ವಹಿಸಲು ಅಮೆರಿಕ ರೆಡಿಯಂತೆ!


ಭಾರತದೊಂದಿಗೆ ಜಗಳ ಬೇಡ ಎನ್ನುವುದೇ ಕಾರಣ..?
ಪ್ರಧಾನ ಮಂತ್ರಿ ಕೆಪಿ ಶರ್ಮಾ ಒಲಿ ನೇತೃತ್ವದ ಪಕ್ಷ ಮಾತ್ರವಲ್ಲದೇ ವಿಪಕ್ಷಗಳ ಒಪ್ಪಿಗೆಯಿಂದಲೇ ಸಂಸತ್ತಿನ ಅಜೆಂಡಾದಿಂದ ವಿವಾದಿತ ನಕ್ಷೆ ತಿದ್ದುಪಡಿ ನಿರ್ಣಾಯ ಮಂಡನೆಯನ್ನ ತೆಗೆಯಲಾಯ್ತು ಎಂದು ತಿಳಿದುಬಂದಿದೆ. ಸಂಸತ್ತಿನಲ್ಲಿ ಇಂತಹ ಮಸೂದೆ ಪಾಸ್‌ ಆಗಬೇಕಂದರೆ ವಿಪಕ್ಷಗಳ ಒಪ್ಪಿಗೆಯೂ ಬೇಕಾಗುತ್ತೆ.

ಈ ನಿಟ್ಟಿನಲ್ಲಿ ಪಿಕೆ ಒಲಿ ನಿನ್ನೆ ವಿಪಕ್ಷಗಳೊಂದಿಗೆ ಈ ಸಂಬಂಧ ಚರ್ಚಿಸಿದ್ದರು. ಆದ್ರೆ ವಿಪಕ್ಷಗಳು ಮಾತ್ರವಲ್ಲದೇ ಸ್ವಪಕ್ಷೀಯರು ಕೂಡ ಈ ರೀತಿಯ ನಿರ್ಧಾರ ಸರಿಯಲ್ಲ ಎಂದು ತಿಳುವಳಿಕೆ ಹೇಳಿದ್ದರಂತೆ. ಭಾರತದೊಂದಿಗೆ ಉತ್ತಮ ಸಂಬಂಧ ಇರುವುದು ಒಳ್ಳೆಯದು ಎಂದಿದ್ದರು ಎನ್ನಲಾಗಿದೆ. ಆದ್ರೆ ನೇಪಾಳದ ಆಡಳಿತ ಪಕ್ಷ ಹಾಗೂ ವಿಪಕ್ಷ ಸದ್ಯಕ್ಕೆ ಈ ನಿರ್ಣಯವನ್ನ ಕೆಲ ದಿನಗಳ ಮಟ್ಟಿಗೆ ಕಾಯ್ದಿರಿಸಿರುವುದಾಗಿ ತಿಳಿಸಿದೆ.

ಇತ್ತೀಚಿಗಷ್ಟೇ ಭಾರತದ ಪ್ರದೇಶಗಳಾದ ಲಿಪುಲೇಖ್ ಹಾಗೂ ಕಾಲಾಪಾನಿಯನ್ನ ನೇಪಾಳ ತನ್ನ ಹೊಸ ನಕ್ಷೆ ಬಿಡಿಸಿ ಅದರಲ್ಲಿ ಈ ಪ್ರದೇಶಗಳನ್ನ ತನ್ನದೆಂದು ಬಿಂಬಿಸಿತ್ತು. ಇದು ಉಭಯ ದೇಶಗಳ ನಡುವಿನ ಸಂಘರ್ಷಕ್ಕೆ ಕಾರಣವಾಗಿತ್ತು.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ