ಆ್ಯಪ್ನಗರ

ಭಾರತದ ವೈರಸ್ ಚೀನಾ ವೈರಸ್‌ಗಿಂತಲೂ ಮಾರಕ: ನೇಪಾಳ ಪ್ರಧಾನಿ ವಿವಾದಾತ್ಮಕ ಹೇಳಿಕೆ!

ನೇಪಾಳಕ್ಕೆ ಚೀನಾದ ವೈರಸ್‌ಗಿಂತಲೂ ಭಾರತದಿಂದ ಬರುವ ವೈರಸ್ ಭೀತಿಯೇ ಅಧಿಕ ಎಂದು ನೇಪಾಳ ಪ್ರಧಾನಿ ಹೇಳಿದ್ದಾರೆ. ಭಾರತದಿಂದ ಅಕ್ರಮವಾಗಿ ಗಡಿ ದಾಟಿ ಬರುತ್ತಿರುವ ಜನ, ತಮ್ಮೊಂದಿಗೆ ಮಾರಕ ಕೊರೊನಾ ವೈರಸ್‌ನ್ನೂ ಹೊತ್ತು ತರುತ್ತಿದ್ದಾರೆ ಎಂದು ಕೆಪಿ ಓಲಿ ಅಸಮಾಧಾನ ಹೊರಹಾಕಿದ್ದಾರೆ.

Vijaya Karnataka Web 20 May 2020, 11:08 pm
ಕಠ್ಮಂಡು: ಐತಿಹಾಸಿಕವಾಗಿ ಸದಾ ಸಹೋದರ ಸಂಬಂಧವನ್ನೇ ಕಾಪಾಡಿಕೊಂಡು ಬಂದಿರುವ ಭಾರತ-ನೇಪಾಳದ ನಡುವೆ ಹುಳಿ ಹಿಂಡಲು ಕಾಣದ ಕೈ(ಚೀನಾ) ಕೆಲಸ ಮಾಡುತ್ತಿರುವಂತೆ ತೋರುತ್ತಿದೆ.
Vijaya Karnataka Web Oli
ಸಂಗ್ರಹ ಚಿತ್ರ


ಭಾರತದ ಕುರಿತು ಸದಾ ಒಳ್ಳೆಯ ಮಾತುಗಳನ್ನೇ ಆಡುತ್ತಿದ್ದ ನೇಪಾಳ, ಇದೀಗ ಏಕಾಏಕಿ ಹಿರಿಯಣ್ಣನ ವಿರುದ್ಧ ತಿರುಗಿ ಬಿದ್ದಿದೆ. ಇಷ್ಟು ವರ್ಷಗಳ ಕಾಲ ಇಲ್ಲದ ಗಡಿ ಸಮಸ್ಯೆಯನ್ನು ಮುಂದು ಮಾಡಿ ನೇಪಾಳ ಭಾರತದೊಂದಿಗೆ ಕ್ಯಾತೆ ತೆಗೆಯುತ್ತಿದೆ.

ಹೌದು, ಭಾರತದ ಭೂಪ್ರದೇಶಗಳನ್ನೂ ಒಳಗೊಂಡಂತೆ ಹೊಸ ನಕ್ಷೆಯನ್ನು ಬಿಡುಗಡೆ ಮಾಡಿರುವ ನೇಪಾಳ, ಭಾರತದೊಂದಿಗೆ ಗಡಿ ಕ್ಯಾತೆ ತೆಗೆಯುವ ನಿರ್ಧಾರಕ್ಕೆ ಬಂದಂತಿದೆ.

ಅದರಲ್ಲೂ ನೇಪಾಳ ಪ್ರಧಾನಿ ಕೆಪಿ ಓಲಿ ಭಾರತದ ಕುರಿತು ನೀಡಿರುವ ಹೇಳಿಕೆ ಸಂಚಲಚನ್ನೇ ಸೃಷ್ಟಿಸಿದ್ದು, ನೇಪಾಳದ ಪ್ರಧಾನಿಯಿಂದ ಇಂತಹ ಕ್ಷುಲ್ಲಕ ಹೇಳಿಕೆಯನ್ನು ಭಾರತ ಖಂಡಿತ ನಿರೀಕ್ಷಿಸಿರಲಿಲ್ಲ.

ಭಾರತೀಯ ಭೂ ಪ್ರದೇಶ ತನ್ನದೆಂದು ಬಿಂಬಿಸುವ ನಕ್ಷೆಗೆ ಅನುಮೋದನೆ ನೀಡಿದ ನೇಪಾಳ

ನೇಪಾಳಕ್ಕೆ ಚೀನಾದ ವೈರಸ್‌ಗಿಂತಲೂ ಭಾರತದಿಂದ ಬರುವ ವೈರಸ್ ಭೀತಿಯೇ ಅಧಿಕ ಎಂದು ಕೆಪಿ ಓಲಿ ಹೇಳಿದ್ದಾರೆ. ಭಾರತದಿಂದ ಅಕ್ರಮವಾಗಿ ಗಡಿ ದಾಟಿ ಬರುತ್ತಿರುವ ಜನ, ತಮ್ಮೊಂದಿಗೆ ಮಾರಕ ಕೊರೊನಾ ವೈರಸ್‌ನ್ನೂ ಹೊತ್ತು ತರುತ್ತಿದ್ದಾರೆ ಎಂದು ಕೆಪಿ ಓಲಿ ಅಸಮಾಧಾನ ಹೊರಹಾಕಿದ್ದಾರೆ.

ಈ ಕುರಿತು ನೇಪಾಳದ ಸಂಸತ್ತನ್ನು ಉದ್ದೇಶಿಸಿ ಮಾತನಾಡಿರುವ ಕೆಪಿ ಓಲಿ, ಭಾರತದಿಂದ ಅಕ್ರಮವಾಗಿ ದೇಶದೊಳಗೆ ಬರುತ್ತಿರುವ ಜನರಿಂದಾಗಿ ನೇಪಾಳದಲ್ಲಿ ಕೊರೊನಾ ವೈರಸ್ ಹರಡುವಿಕೆಯನ್ನು ತಡೆಗಟ್ಟುವುದು ‌ಕಷ್ಟವಾಗುತ್ತಿದೆ ಎಂದು ಓಲಿ ಅಭಿಪ್ರಾಯಪಟ್ಟಿದ್ದಾರೆ.


ಚೀನಾದ ವೈರಸ್‌ಗಿಂತಲೂ. ಭಾರತದಿಂದ ಬರುತ್ತಿರುವ ವೈರಸ್‌ ನಮಗೆ ಹೆಚ್ಚಿನ ಸಂಕಷ್ಟವನ್ನು ತೊಂದೊಡ್ಡಿದೆ ಎಂದು ಕೆಪಿ ಓಲಿ ಹೇಳಿದ್ದಾರೆ. ಓಲಿ ಅವರ ಈ ಹೇಳಿಕೆಗೆ ಭಾರತದಲ್ಲಿ ತೀವ್ರ ಆಕ್ರೋಶ ವ್ಯಕ್ತವಾಗಿರುವುದು ಕೂಡ ಸಹಜವಾಗಿದೆ.

ಕೈಲಾಸ ಮಾನಸ ಸರೋವರ ಯಾತ್ರೆಯ ಅನುಕೂಲಕ್ಕಾಗಿ ಇತ್ತಿಚೀಗಷ್ಟೇ ನಿರ್ಮಾಣ ಮಾಡಲಾದ 80 ಕಿ.ಮೀ ಉದ್ದದ ರಸ್ತೆಗೆ ತಕರಾರು ತೆಗೆದಿರುವ ನೇಪಾಳ, ಈ ರಸ್ತೆ ತನ್ನ ಭೂಪ್ರದೇಶದಲ್ಲೂ ಹಾದು ಹೋಗಿದೆ ಎಂದು ಆರೋಪಿಸಿದೆ.

ಯಾರದೋ ಕುಮ್ಮಕ್ಕಿನಿಂದ ವಿರೋಧ ಬೇಡ: ನೇಪಾಳಕ್ಕೆ ಭೂಸೇನಾ ಮುಖ್ಯಸ್ಥರಿಂದ ಖಡಕ್ ಎಚ್ಚರಿಕೆ!

ಅಲ್ಲದೇ ತನ್ನ ಭೂಪ್ರದೇಶದ ಹೊಸ ನಕ್ಷೆಯನ್ನು ಬಿಡುಗಡೆ ಮಾಡಿರುವ ನೇಪಾಳ, ಭಾರತದ ಕೆಲವು ಭೂಭಾಗಗಳನ್ನು ತನ್ನದೆಂದು ಬಿಂಬಿಸಿರುವುದು ಹೊಸ ವಿವಾದಕ್ಕೆ ಕಾರಣವಾಗಿದೆ.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ