ಆ್ಯಪ್ನಗರ

ಎವರೆಸ್ಟ್ ಆರೋಹಿಗಳಿಗೆ ಜಿಪಿಎಸ್‌ ಚಿಪ್‌!

ವಿಶ್ವದ ಅತಿ ಎತ್ತರದ ಶಿಖರ ಎವರೆಸ್ಟ್ ಏರಿದ್ದೇವೆ ಎಂದು ಸುಳ್ಳು ದಾಖಲೆಗಳನ್ನು ಸೃಷ್ಟಿಸುವವರಿಗೆ ಕಡಿವಾಣ ಹಾಕಲು ನೇಪಾಳ ಸರಕಾರ ನೂತನ ಜಿಪಿಎಸ್‌ ತಂತ್ರಜ್ಞಾನವನ್ನು ಸಿದ್ಧಪಡಿಸಿದೆ.

ಟೈಮ್ಸ್ ಆಫ್ ಇಂಡಿಯಾ 20 Mar 2017, 5:18 pm
ಕಾಠ್ಮಂಡು: ವಿಶ್ವದ ಅತಿ ಎತ್ತರದ ಶಿಖರ ಎವರೆಸ್ಟ್ ಏರಿದ್ದೇವೆ ಎಂದು ಸುಳ್ಳು ದಾಖಲೆಗಳನ್ನು ಸೃಷ್ಟಿಸುವವರಿಗೆ ಕಡಿವಾಣ ಹಾಕಲು ನೇಪಾಳ ಸರಕಾರ ನೂತನ ಜಿಪಿಎಸ್‌ ತಂತ್ರಜ್ಞಾನವನ್ನು ಸಿದ್ಧಪಡಿಸಿದೆ.
Vijaya Karnataka Web nepal to strap everest climbers with gps device
ಎವರೆಸ್ಟ್ ಆರೋಹಿಗಳಿಗೆ ಜಿಪಿಎಸ್‌ ಚಿಪ್‌!


ಏಪ್ರಿಲ್‌ ಹಾಗೂ ಮೇ ತಿಂಗಳಲ್ಲಿ ಅತ್ಯಂತ ಹೆಚ್ಚು ಚಾರಣ ಪ್ರಿಯರು ಎವರೆಸ್ಟ್ ಏರಲು ಬರುತ್ತಾರೆ. ಹಲವು ಸಂದರ್ಭದಲ್ಲಿ, ಶಿಖರ ಏರುತ್ತಿದ್ದ ಪ್ರವಾಸಿಗರ ನಿರ್ದಿಷ್ಟ ಸ್ಥಳವನ್ನು ಪತ್ತೆ ಹಚ್ಚುವುದು ಸಾಧ್ಯವಾಗುತ್ತಿರಲಿಲ್ಲ. ಅಲ್ಲದೇ ಹಲವಾರು ಮಂದಿ ಸುಳ್ಳು ದಾಖಲೆಗಳನ್ನು ಸೃಷ್ಟಿಸಿ, ತಾವು ಎವರೆಸ್ಟ್ ಏರಿರುವುದಾಗಿ ಹೇಳಿಕೊಳ್ಳುತ್ತಿದ್ದರು. ಇವೆಲ್ಲದಕ್ಕೂ ಕಡಿವಾಣ ಹಾಕಲು ನೇಪಾಳ ಸರಕಾರ ನೂತನ ಜಿಪಿಎಸ್‌ ತಂತ್ರಜ್ಞಾನವನ್ನು ಸಿದ್ಧಪಡಿಸಿದೆ ಎಂದು ಮೂಲಗಳು ತಿಳಿಸಿವೆ.

'ಸುಮಾರು 300 ಡಾಲರ್‌ ಮೌಲ್ಯದ ಈ ಚಿಪ್‌ ಅನ್ನು ಎವರೆಸ್ಟ್ ಏರಬಯಸುವ ಎಲ್ಲಾ ಯಾತ್ರಿಕರು ಅಳವಡಿಸಿಕೊಳ್ಳಬೇಕು. ಈ ತಂತ್ರಜ್ಞಾನದಿಂದ ಶಿಖರ ಏರುತ್ತಿರುವ ವೇಳೆ ಏನಾದರೂ ಅವಘಡ ಸಂಭವಿಸಿದರೆ ಅವರನ್ನು ಟ್ರ್ಯಾಕ್‌ ಮಾಡಲು ಸುಲಭವಾಗುತ್ತದೆ' ಎಂದು ನೇಪಾಳ ಪ್ರವಾಸೋದ್ಯಮ ಇಲಾಖೆ, ದುರ್ಗಾ ದತ್ತಾ ಧಾಕಲ್‌ ಹೇಳಿದ್ದಾರೆ.

ಈ ತಂತ್ರಜ್ಞಾನದ ಕುರಿತು ಮಾಹಿತಿ ನೀಡಿರುವ ಧಾಕಲ್‌, ' ಈ ಡಿವೈಸ್‌ನಲ್ಲಿರುವ ನೂತನ ತಂತ್ರಜ್ಞಾನವು ಪರ್ವತಾರೋಹಿಗಳ ಸಂಪೂರ್ಣ ಮಾಹಿತಿಯನ್ನು ಒದಗಿಸುತ್ತದೆ. ಅವರು ಎವರೆಸ್ಟ್ ತುತ್ತ ತುದಿಗೆ ಏರಿದ್ದಾರೆಯೇ ಇಲ್ಲವೇ ಎಂಬುದು ಸ್ಪಷ್ಟವಾಗಿ ಈ ಜಿಪಿಎಸ್‌ ಚಿಪ್‌ ಡೇಟಾವನ್ನು ಒದಗಿಸುತ್ತದೆ. ಈ ಮೂಲಕ ನಾವು ಪರ್ವತಾರೋಹಿಗಳಿಗೆ ಸಾಧಕರ ಪತ್ರ ನೀಡುತ್ತೇವೆ' ಎಂದು ಹೇಳಿದ್ದಾರೆ.

ಕಳೆದ ಭಾರತೀಯ ಮೂಲದ ದಂಪತಿಗಳು ಎವರೆಸ್ಟ್ ತುತ್ತ ತುದಿ ತಲುಪಿರುವುದಾಗಿ ಹೇಳಿಕೊಂಡು, ಚಿತ್ರವನ್ನು ಸಾಮಾಜಿಕ ಜಾಲತಾಣದಲ್ಲಿ ಪೋಸ್ಟ್‌ ಮಾಡಿದ್ದರು. ಆದರೆ ಕೆಲ ಸಮಯದ ಬಳಿಕ ಇದೊಂದು ಫೋಟೋಶಾಪ್‌ ತಂತ್ರಜ್ಞಾನ ಬಳಸಿ ಮಾಡಿಸಿದ ನಕಲಿ ಚಿತ್ರ ಎಂಬುದು ಪತ್ತೆಯಾಗಿ ಸಾಕಷ್ಟು ಚರ್ಚೆಯಾಗಿತ್ತು. ಈ ಘಟನೆ ನೇಪಾಳ ಸರಕಾರಕ್ಕೆ ತೀವ್ರ ಮುಖಭಂಗವುಂಟು ಮಾಡಿತ್ತು.

ಅಲ್ಲದೇ 2015ರಲ್ಲಿ ಸಂಭವಿಸಿದ ಭೀಕರ ಹಿಮಪಾತದಲ್ಲಿ 15 ಮಂದಿ ಪರ್ವತಾರೋಹಿಗಳು ಹಿಮದಡಿ ಸಿಲುಕಿ ಮೃತಪಟ್ಟಿದ್ದರು. ಘಟನೆ ವೇಳೆ ಅವರ ಶವಗಳನ್ನು ಪತ್ತೆಹಚ್ಚುವುದೇ ದೊಡ್ಡ ತಲೆನೋವಾಗಿ ಪರಿಣಮಿಸಿತ್ತು.

ಈ ಎಲ್ಲಾ ಘಟನೆಗಳನ್ನು ಮನದಲ್ಲಿಟ್ಟುಕೊಂಡಿರುವ ನೇಪಾಳ ಸರಕಾರ, ಈ ಬಾರಿ ಜಿಪಿಎಸ್‌ ಚಿಪ್‌ ಸಿದ್ಧ ಪಡಿಸಿ ಪರ್ವತಾರೋಹಿಗಳಿಗೆ ನೀಡಲು ಚಿಂತನೆ ನಡೆಸಿದೆ.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ