ಆ್ಯಪ್ನಗರ

ಮೂರು ವರ್ಷಗಳ ನಂತರ ನೇಪಾಳದ ಶ್ರೀಕೃಷ್ಣ ದೇಗುಲ ದರ್ಶನ ಭಕ್ತರಿಗೆ ಲಭ್ಯ

ಭೂಕಂಪದಿಂದಾಗಿ ಮೂರು ವರ್ಷಗಳಿಂದ ಮುಚ್ಚಿದ್ದ ನೇಪಾಳದ ಪ್ರಸಿದ್ಧ ಶ್ರೀಕೃಷ್ಣ ದೇಗುಲವನ್ನು ಶ್ರೀಕೃಷ್ಣ ಜನ್ಮಾಷ್ಟಮಿಯ ಪ್ರಯುಕ್ತ ಭಾನುವಾರ ಪುನಃ ತೆರೆಯಲಾಯಿತು.

Vijaya Karnataka 3 Sep 2018, 8:25 am
ಕಾಠ್ಮಂಡು: ಭೂಕಂಪದಿಂದಾಗಿ ಮೂರು ವರ್ಷಗಳಿಂದ ಮುಚ್ಚಿದ್ದ ನೇಪಾಳದ ಪ್ರಸಿದ್ಧ ಶ್ರೀಕೃಷ್ಣ ದೇಗುಲವನ್ನು ಶ್ರೀಕೃಷ್ಣ ಜನ್ಮಾಷ್ಟಮಿಯ ಪ್ರಯುಕ್ತ ಭಾನುವಾರ ಪುನಃ ತೆರೆಯಲಾಯಿತು.
Vijaya Karnataka Web Nepals Krishna Temple


ನಗರದ ಲಲಿತ್‌ಪುರ ಪ್ರದೇಶದ ಸಿದ್ದಿ ಸರ್ನಿಂಗ್‌ ಮಲ್ಲದಲ್ಲಿರುವ ಕೃಷ್ಣ ದೇಗುಲಕ್ಕೆ ಭಾನುವಾರ ಸಾವಿರಾರು ಭಕ್ತರು ಆಗಮಿಸಿ, ಶ್ರೀಕೃಷ್ಣನ ದರ್ಶನ ಪಡೆದರು. ಜನ್ಮಾಷ್ಠಮಿಯ ಪ್ರಯುಕ್ತ ದೇಗುಲವನ್ನು ಅದ್ಧೂರಿಯಾಗಿ ಶೃಂಗರಿಸಲಾಗಿತ್ತು. 17ನೇ ಶತಮಾನದಲ್ಲಿ ರಾಜ ಮಲ್ಲನಿಂದ ನಿರ್ಮಾಣವಾದ ಈ ಕಲ್ಲಿನ ದೇಗುಲದ ಕಂಬಗಳ ಮೇಲೆ ರಾಮಾಯಣ ಮತ್ತು ಮಹಾಭಾರತದ ಪ್ರಸಂಗಗಳನ್ನು ಸುಂದರವಾಗಿ ಕೆತ್ತಲಾಗಿದೆ. ಭೂಕಂಪದ ಸಮಯದಲ್ಲಿ ದೇಗುಲದ ಕೆಲವು ಭಾಗ ಸಹ ಹಾನಿಗೊಳಗಾಗಿದ್ದು, ದೇವಾಲಯವನ್ನು ಈಗ ನವೀಕರಣ ಮಾಡಲಾಗಿದೆ.
ಭಾರತೀಯ ಶಿಖರ್‌ ಶೈಲಿಯ ಈ ದೇಗುಲವನ್ನು 2015ರ ಏಪ್ರಿಲ್‌ 25ರಂದು ಸಂಭವಿಸಿದ ತೀವ್ರ ಭೂಕಂಪದ ನಂತರ ಮುಚ್ಚಲಾಗಿತ್ತು. ರಿಕ್ಟರ್‌ ಮಾಪಕದಲ್ಲಿ 7.8ರಷ್ಟು ತೀವ್ರತೆಯ ಭೂಕಂಪ 8,700ಕ್ಕೂ ಹೆಚ್ಚು ಜನರನ್ನು ಬಲಿ ಪಡೆದಿತ್ತು. ಅನೇಕ ಮನೆಗಳು, ಐತಿಹಾಸಿಕ ಸ್ಮಾರಕಗಳು ಹಾಗೂ ಪಟಾಣ್‌, ಕಾಠ್ಮಂಡು ಮತ್ತು ಭಕ್ತಪುರದಲ್ಲಿರುವ ರಾಜ ಕುಟುಂಬದ ಮೂರು ಅರಮನೆಗಳು ಹಾನಿಗೊಳಗಾಗಿದ್ದವು.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ