ಆ್ಯಪ್ನಗರ

ಮಿಲಿಟರಿ ಅಧಿಕಾರಿಗಳೊಂದಿಗೆ ಸಂವಾದ ನಿಲ್ಲಿಸಿ: ಪಕ್ಷದ ನಾಯಕರಿಗೆ ನವಾಜ್ ಷರೀಫ್ ಆದೇಶ!

ಪಾಕಿಸ್ತಾನದ ಮಾಜಿ ಪ್ರಧಾನಿ ಮತ್ತು ಪಿಎಂಎಲ್-ಎನ್ ಮುಖ್ಯಸ್ಥ ನವಾಜ್ ಷರೀಫ್, ತಮ್ಮ ಪಕ್ಷದ ಸದಸ್ಯರಿಗೆ ಮಿಲಿಟರಿ ನಾಯಕತ್ವದೊಂದಿಗೆ ಖಾಸಗಿ ಸಭೆ ನಡೆಸದಂತೆ ಎಚ್ಚರಿಕೆ ನೀಡಿದ್ದಾರೆ. ಮಿಲಿಟರಿ ನಾಯಕತ್ವದೊಂದಿಗೆ ಖಾಸಗಿ ಸಭೆ ನಡೆಸಿದರೆ ಶಿಸ್ತು ಕ್ರಮ ಕೈಗೊಳ್ಳಲಾಗುವುದು ಎಂದು ನವಾಜ್ ಆದೇಶ ಹೊರಡಿಸಿದ್ದಾರೆ ಎನ್ನಲಾಗಿದೆ.

Vijaya Karnataka Web 25 Sep 2020, 8:04 pm
ಇಸ್ಲಾಮಾಬಾದ್: ಪಾಕಿಸ್ತಾನದಲ್ಲಿ ಮಿಲಿಟರಿ ನಾಯಕತ್ವದ ವಿರುದ್ಧ ವಿಪಕ್ಷಗಳು ಬಂಡೆದಿದ್ದು, ಆಡಳಿತದಲ್ಲಿ ಸೇನೆಯ ಹಸ್ತಕ್ಷೇಪದ ವಿರುದ್ಧ ಸಿಡಿದೆದ್ದಿವೆ.

ಈಗಾಗಲೇ ಪಾಕ್ ಪ್ರಧಾನಿ ಇಮ್ರಾನ್ ಖಾನ್ ಹಾಗೂ ಸೇನೆಯ ವಿರುದ್ಧ ಜನತಾ ಚಳವಳಿ ಆರಂಭಿಸಲು ಸಿದ್ಧವಾಗಿರುವ ವಿಪಕ್ಷಗಳ ಒಕ್ಕೂಟ, ಈ ನಿಟ್ಟಿನಲ್ಲಿ ಒಂದೊಂದೇ ಹೆಜ್ಜೆಗಳನ್ನು ಮುಂದಿಡುತ್ತಿದೆ.

ಇದಕ್ಕೆ ಪೂರಕವಾಗಿ ಪಾಕಿಸ್ತಾನದ ಮಾಜಿ ಪ್ರಧಾನಿ ಮತ್ತು ಪಿಎಂಎಲ್-ಎನ್ ಮುಖ್ಯಸ್ಥ ನವಾಜ್ ಷರೀಫ್, ತಮ್ಮ ಪಕ್ಷದ ಸದಸ್ಯರಿಗೆ ಮಿಲಿಟರಿ ನಾಯಕತ್ವದೊಂದಿಗೆ ಖಾಸಗಿ ಸಭೆ ನಡೆಸದಂತೆ ಎಚ್ಚರಿಕೆ ನೀಡಿದ್ದಾರೆ.

ಸೇನೆ ಮತ್ತು ಇಮ್ರಾನ್ ಖಾನ್ ವಿರುದ್ಧ ಒಗ್ಗೂಡಿದ ಪಾಕ್ ವಿಪಕ್ಷಗಳು: ಜನಾಂದೋಲನಕ್ಕೆ ಕರೆ!

ಹಿರಿಯ ಪಿಎಂಎಲ್-ಎನ್ ನಾಯಕ ಮೊಹಮ್ಮದ್ ಜುಬೈರ್, ಸೇನಾ ಮುಖ್ಯಸ್ಥ ಜನರಲ್ ಖಮರ್ ಜಾವೇದ್ ಬಜ್ವಾ ಅವರೊಂದಿಗೆ ಎರಡು ಖಾಸಗಿ ಸಭೆಗಳನ್ನು ನಡೆಸಿದ್ದರು.

ಇದರಿಂದ ಕುಪಿತಗೊಂಡಿರುವ ನವಾಜ್ ಷರೀಫ್, ಪಕ್ಷದ ಯಾವುದೇ ಸದಸ್ಯರು ಮಿಲಿಟರಿ ನಾಯಕತ್ವದೊಂದಿಗೆ ಖಾಸಗಿ ಸಭೆ ನಡೆಸಿದರೆ ಶಿಸ್ತು ಕ್ರಮ ಕೈಗೊಳ್ಳಲಾಗುವುದು ಎಂದು ಗಂಭೀರ ಎಚ್ಚರಿಕೆ ನೀಡಿದ್ದಾರೆ.

ಪಾಕ್ ಆಡಳಿತದಲ್ಲಿ ಸೇನೆಯ ಹಸ್ತಕ್ಷೇಪ ವಿರೋಧಿಸಿ ನವಾಜ್ ಷರೀಫ್ ಅವರ ಮಗಳು ಮರಿಯಮ್ ನವಾಜ್ ಧ್ವನಿ ಎತ್ತಿದ್ದಾರೆ. ಆದರೆ ಅವರದ್ದೇ ಪಕ್ಷದ ನಾಯಕರು ಮಿಲಿಟರಿ ಅಧಿಕಾರಿಗಳನ್ನು ಖಾಸಗಿಯಾಗಿ ಭೇಟಿಯಾಗುತ್ತಿದ್ದಾರೆ.

ಸೊರಗುತ್ತಿದೆ ಇಮ್ರಾನ್ ಖಾನ್ ಜನಪ್ರಿಯತೆ: ಪಾಕಿಸ್ತಾನದಲ್ಲಿ ಮತ್ತೆ ಪ್ರಬಲವಾಗುತ್ತಿದೆ ಸೇನೆ!

ಇದರಿಂದ ತೀವ್ರ ಮುಜುಗರಕ್ಕೊಳಗಾಗಿರುವ ನವಾಜ್ ಷರೀಫ್, ಪಕ್ಷದ ಪೂರ್ವಾನುಮತಿ ಇಲ್ಲದೇ ಯಾವುದೇ ನಾಯಕರು ಮಿಲಿಟರಿ ಅಧಿಕಾರೊಗಳೊಂದಿಗೆ ಸಭೆ ನಡೆಸಕೂಡದು ಎಂದು ಕಟ್ಟಪ್ಪಣೆ ಹೊರಡಿಸಿದ್ದಾರೆ.

ಇನ್ನು ನವಾಜ್ ಷರೀಫ್‌ರ ಆದೇಶ ಮಿಲಿಟರಿ ನಾಯಕರಿಗೆ ಇರುಸುಮುರುಸು ಉಂಟು ಮಾಡಿದ್ದು, ಷರೀಫ್‌ರ ನಿರ್ಧಾರ ಸೈನ್ಯಾಧಿಕಾರಿಗಳ ಕಣ್ಣು ಕೆಂಪು ಮಾಡಿದೆ ಎಂದು ಹೇಳಲಾಗುತ್ತಿದೆ.

ನವಾಜ್‌ ಷರೀಫ್‌, ಮರಿಯಮ್‌ ಜೈಲು ಶಿಕ್ಷೆ ರದ್ದು; ಬಿಡುಗಡೆಗೆ ಆದೇಶ ನೀಡಿದ ಪಾಕ್‌ ಕೋರ್ಟ್‌

ಮುಂಬರುವ ಜನವರಿಯಲ್ಲಿ ಪಾಕಿಸ್ತಾನದ ಪ್ರಧಾನಿ ಇಮ್ರಾನ್ ಖಾನ್ ಹಾಗೂ ಸೇನೆಯ ವಿರುದ್ಧ ದೇಶದಲ್ಲಿ 'ಪ್ರಜಾಸತ್ತಾತ್ಮಕ ಚಳವಳಿ' ಆರಂಭಿಸಲು ಅಲ್ಲಿನ ಆರು ಪ್ರಮುಖ ವಿಪಕ್ಷಗಳು ಸಜ್ಜಾಗಿರುವುದನ್ನು ಇಲ್ಲಿ ಗಮನಿಸಬಹುದು.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ